Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಶಿವರಾತ್ರಿ ವಿಶೇಷ-ಕನ್ಯೆಯರಿಗೂ ಕಾದಿದೆ, ಸಿಹಿ ಸುದ್ದಿ!
ಶಿವರಾತ್ರಿ ಅಥವಾ ಮಹಾಶಿವರಾತ್ರಿ ಭಾರತದ ಒಂದು ಪ್ರಮುಖ ಹಬ್ಬವಾಗಿದ್ದು ಮಹಿಳೆಯರಿಗೂ ವಿಶೇಷ ಮಹತ್ವದ್ದಾಗಿದೆ. ಈ ರಾತ್ರಿಯನ್ನು ಶಿವನ ರಾತ್ರಿ ಎಂದು ನಂಬಲಾಗಿದ್ದು ಈ ರಾತ್ರಿಯಲ್ಲಿಯೇ ತ್ರಿದೇವರ ಪೈಕಿ ಓರ್ವ ದೇವರು ಪಾರ್ವತಿ ದೇವತೆಯೊಂದಿಗೆ ವಿವಾಹವಾದರು ಎಂದು ಹೇಳಲಾಗುತ್ತದೆ.
ಪ್ರತಿ ವರ್ಷದ ಫಾಲ್ಗುಣ ಮಾಸದ ಕೃಷ್ಣಪಕ್ಷದ ಹದಿಮೂರನೇ ರಾತ್ರಿ ಮತ್ತು ಹದಿನಾಲ್ಕನೆಯ ದಿನದ ಹಗಲಿನಲ್ಲಿ ಬರುವ ಅವಧಿಯಲ್ಲಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ವಿಶೇಷ ರಾತ್ರಿಯನ್ನು ಭಕ್ತರು ಇಡಿಯ ರಾತ್ರಿ ಜಾಗರಣೆ, ವಿಶೇಷ ಪೂಜೆ, ಧ್ಯಾನದ ಮೂಲಕ ಆಚರಿಸಿ ದೇವನ ಅನುಗ್ರಹ ಪಡೆಯುತ್ತಾರೆ. ಮಹಾ ಶಿವರಾತ್ರಿ: ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ!
ಈ ರಾತ್ರಿಯ ಮುನ್ನಾದಿನದ ಮುಂಜಾನೆಯ ಸಮಯದಲ್ಲಿ ಗಂಗಾನದಿಯಲ್ಲಿ ಮಿಂದು ಇಡಿಯ ದಿನ ಉಪವಾಸವಿರುವುದು ಈ ಹಬ್ಬದ ಒಂದು ವಿಧಿಯಾಗಿದೆ. ಗಂಗಾನದಿಯ ಸಮೀಪವಿರುವ ಜನರು ಈ ಅವಧಿಯನ್ನು ಸರ್ವಥಾ ಕಳೆದುಕೊಳ್ಳಲು ಸಿದ್ಧರಿಲ್ಲ. ಈ ವಿಶೇಷ ಹಬ್ಬ ಮಹಿಳೆಯರಿಗೂ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ.
ಈ ದಿನದಂದು ಕನ್ಯೆಯರು ಶಿವನಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಆತನಂತಹ ಉತ್ತಮ ಗುಣವುಳ್ಳ ಪತಿ ಸಿಗುತ್ತಾನೆಂಬ ಪ್ರಪೀತಿಯಿದೆ. ವಿವಾಹಿಯ ಮಹಿಳೆಯರು ಈ ದಿನ ಭಕ್ತಿಯಿಂದ ಪ್ರಾರ್ಥಿಸಿದರೆ ಪತಿ, ಪುತ್ರ, ಸಹೋದರರ ಆರೋಗ್ಯ, ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಮುಂದೆ ಓದಿ...

ಶಿವಲಿಂಗಕ್ಕೆ ಅಭಿಷೇಕ
ಈ ದಿನದಂದು ಮಹಿಳೆಯರು ಶಿವನನ್ನು ಪ್ರಾರ್ಥಿಸಿ ಆತನ ಮತ್ತು ಪಾರ್ವತಿಯ ಅನುಗ್ರಹ ಪಡೆಯಲು ಯತ್ನಿಸುತ್ತಾರೆ. ಮುಂಜಾನೆಯೇ ಮಿಂದು ಶಿವಲಿಂಗವನ್ನು ಹಾಲು, ನೀರು ಮತ್ತು ಜೇನಿನಿಂದ ಅಭಿಶೇಕ ಮಾಡುತ್ತಾರೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಖೀರು, ಹಣ್ಣುಗಳು, ದತ್ತೂರಿ, ಅಖಂಡಪುಷ್ಪ ಮೊದಲಾದವುಗಳನ್ನು ಅರ್ಪಿಸುತ್ತಾರೆ. ಇಡಿಯ ದಿನ ಮಹಿಳೆಯರು ಉಪವಾಸವಿದ್ದು ಭಕ್ತಿಗೀತೆಗಳನ್ನು ಹಾಡುತ್ತಾ ಭಜನೆ ಮತ್ತು ಧ್ಯಾನದಲ್ಲಿ ದಿನ ಕಳೆಯುತ್ತಾರೆ. ಈ ದಿನ ಪೂರ್ಣ ಭಕ್ತಿಭಾವದಿಂದ ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುವುದು ಎಂದು ನಂಬಲಾಗುತ್ತದೆ. ಅಲ್ಲದೇ ಜನ್ಮಜನ್ಮಾಂತರದ ಆವರ್ತದಿಂದ ಮುಕ್ತಿ ಪಡೆಯಲು ಸಾಧ್ಯ ಎಂದೂ ಹೇಳಲಾಗುತ್ತದೆ.
ಶಿವನಂತಹ ಪತಿಗಾಗಿ ಪ್ರಾರ್ಥನೆ
ಈ ದಿನದಂದು ಕನ್ಯೆಯರು ಶಿವನಲ್ಲಿ ವಿಶೇಷವಾಗಿ ಪ್ರಾರ್ಥಿಸುವ ಮೂಲ ಶಿವನ ಗುಣವುಳ್ಳ ಪತಿಯೇ ದೊರಕುತ್ತಾನೆ ಎಂಬ ನಂಬಿಕೆಯಿದೆ. ಕನ್ಯೆಯರೂ ವಿವಾಹಿತ ಮಹಿಳೆಯರೂ ಇಡಿಯ ದಿನ ಉಪವಾಸವನ್ನು ಆಚರಿಸುತ್ತಾರೆ. ವಿವಾಹಿತೆಯರ ಪ್ರಾರ್ಥನೆಯಿಂದ ಶಿವ ಮತ್ತು ಪಾರ್ವತಿಯರ ಅನುಗ್ರಹ ಪಡೆಯುವ ಮೂಲಕ ವೈವಾಹಿಕ ಜೀವನ ಸುಮಧುರವಾಗಿರಲು ಮತ್ತು ಆರೋಗ್ಯಕರವಾಗಿರಲು ಸಾಧ್ಯ ಎಂದು ನಂಬಲಾಗಿದೆ.
ಅಷ್ಟೇ ಅಲ್ಲ, ಸೂಕ್ತ ಜೀವನ ಸಂಗಾತಿಯನ್ನು ಪಡೆಯಲು ಅಸಮರ್ಥರಾದ ಕನ್ಯೆಯರಿಗೆ ಬೇಗನೇ ಸೂಕ್ತ ಜೀವನಸಂಗಾತಿ ಸಿಗಲೂ ಈ ದಿನ ಭಕ್ತಿಯಿಂದ ಮಾಡುವ ಪಾರ್ಥನೆ ಫಲ ನೀಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಶಿವರಾತ್ರಿಯ ಈ ಶುಭಸಂದರ್ಭದಲ್ಲಿ ಶಿವನ ಮತ್ತು ಪಾರ್ವತಿಯ ಅನುಗ್ರಹ ಪಡೆಯುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮಹಿಳೆಯರು ಮತ್ತು ಕನ್ಯೆಯರು ಹೆಚ್ಚು ಉತ್ಸುಕರಾಗಿರುತ್ತಾರೆ.



Click it and Unblock the Notifications
