Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಶಿವರಾತ್ರಿ ವಿಶೇಷ-ಕನ್ಯೆಯರಿಗೂ ಕಾದಿದೆ, ಸಿಹಿ ಸುದ್ದಿ!
ಶಿವರಾತ್ರಿ ಅಥವಾ ಮಹಾಶಿವರಾತ್ರಿ ಭಾರತದ ಒಂದು ಪ್ರಮುಖ ಹಬ್ಬವಾಗಿದ್ದು ಮಹಿಳೆಯರಿಗೂ ವಿಶೇಷ ಮಹತ್ವದ್ದಾಗಿದೆ. ಈ ರಾತ್ರಿಯನ್ನು ಶಿವನ ರಾತ್ರಿ ಎಂದು ನಂಬಲಾಗಿದ್ದು ಈ ರಾತ್ರಿಯಲ್ಲಿಯೇ ತ್ರಿದೇವರ ಪೈಕಿ ಓರ್ವ ದೇವರು ಪಾರ್ವತಿ ದೇವತೆಯೊಂದಿಗೆ ವಿವಾಹವಾದರು ಎಂದು ಹೇಳಲಾಗುತ್ತದೆ.
ಪ್ರತಿ ವರ್ಷದ ಫಾಲ್ಗುಣ ಮಾಸದ ಕೃಷ್ಣಪಕ್ಷದ ಹದಿಮೂರನೇ ರಾತ್ರಿ ಮತ್ತು ಹದಿನಾಲ್ಕನೆಯ ದಿನದ ಹಗಲಿನಲ್ಲಿ ಬರುವ ಅವಧಿಯಲ್ಲಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ವಿಶೇಷ ರಾತ್ರಿಯನ್ನು ಭಕ್ತರು ಇಡಿಯ ರಾತ್ರಿ ಜಾಗರಣೆ, ವಿಶೇಷ ಪೂಜೆ, ಧ್ಯಾನದ ಮೂಲಕ ಆಚರಿಸಿ ದೇವನ ಅನುಗ್ರಹ ಪಡೆಯುತ್ತಾರೆ. ಮಹಾ ಶಿವರಾತ್ರಿ: ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ!
ಈ ರಾತ್ರಿಯ ಮುನ್ನಾದಿನದ ಮುಂಜಾನೆಯ ಸಮಯದಲ್ಲಿ ಗಂಗಾನದಿಯಲ್ಲಿ ಮಿಂದು ಇಡಿಯ ದಿನ ಉಪವಾಸವಿರುವುದು ಈ ಹಬ್ಬದ ಒಂದು ವಿಧಿಯಾಗಿದೆ. ಗಂಗಾನದಿಯ ಸಮೀಪವಿರುವ ಜನರು ಈ ಅವಧಿಯನ್ನು ಸರ್ವಥಾ ಕಳೆದುಕೊಳ್ಳಲು ಸಿದ್ಧರಿಲ್ಲ. ಈ ವಿಶೇಷ ಹಬ್ಬ ಮಹಿಳೆಯರಿಗೂ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ.
ಈ ದಿನದಂದು ಕನ್ಯೆಯರು ಶಿವನಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಆತನಂತಹ ಉತ್ತಮ ಗುಣವುಳ್ಳ ಪತಿ ಸಿಗುತ್ತಾನೆಂಬ ಪ್ರಪೀತಿಯಿದೆ. ವಿವಾಹಿಯ ಮಹಿಳೆಯರು ಈ ದಿನ ಭಕ್ತಿಯಿಂದ ಪ್ರಾರ್ಥಿಸಿದರೆ ಪತಿ, ಪುತ್ರ, ಸಹೋದರರ ಆರೋಗ್ಯ, ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಮುಂದೆ ಓದಿ...

ಶಿವಲಿಂಗಕ್ಕೆ ಅಭಿಷೇಕ
ಈ ದಿನದಂದು ಮಹಿಳೆಯರು ಶಿವನನ್ನು ಪ್ರಾರ್ಥಿಸಿ ಆತನ ಮತ್ತು ಪಾರ್ವತಿಯ ಅನುಗ್ರಹ ಪಡೆಯಲು ಯತ್ನಿಸುತ್ತಾರೆ. ಮುಂಜಾನೆಯೇ ಮಿಂದು ಶಿವಲಿಂಗವನ್ನು ಹಾಲು, ನೀರು ಮತ್ತು ಜೇನಿನಿಂದ ಅಭಿಶೇಕ ಮಾಡುತ್ತಾರೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ, ಖೀರು, ಹಣ್ಣುಗಳು, ದತ್ತೂರಿ, ಅಖಂಡಪುಷ್ಪ ಮೊದಲಾದವುಗಳನ್ನು ಅರ್ಪಿಸುತ್ತಾರೆ. ಇಡಿಯ ದಿನ ಮಹಿಳೆಯರು ಉಪವಾಸವಿದ್ದು ಭಕ್ತಿಗೀತೆಗಳನ್ನು ಹಾಡುತ್ತಾ ಭಜನೆ ಮತ್ತು ಧ್ಯಾನದಲ್ಲಿ ದಿನ ಕಳೆಯುತ್ತಾರೆ. ಈ ದಿನ ಪೂರ್ಣ ಭಕ್ತಿಭಾವದಿಂದ ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ಸಿದ್ಧಿಸುವುದು ಎಂದು ನಂಬಲಾಗುತ್ತದೆ. ಅಲ್ಲದೇ ಜನ್ಮಜನ್ಮಾಂತರದ ಆವರ್ತದಿಂದ ಮುಕ್ತಿ ಪಡೆಯಲು ಸಾಧ್ಯ ಎಂದೂ ಹೇಳಲಾಗುತ್ತದೆ.
ಶಿವನಂತಹ ಪತಿಗಾಗಿ ಪ್ರಾರ್ಥನೆ
ಈ ದಿನದಂದು ಕನ್ಯೆಯರು ಶಿವನಲ್ಲಿ ವಿಶೇಷವಾಗಿ ಪ್ರಾರ್ಥಿಸುವ ಮೂಲ ಶಿವನ ಗುಣವುಳ್ಳ ಪತಿಯೇ ದೊರಕುತ್ತಾನೆ ಎಂಬ ನಂಬಿಕೆಯಿದೆ. ಕನ್ಯೆಯರೂ ವಿವಾಹಿತ ಮಹಿಳೆಯರೂ ಇಡಿಯ ದಿನ ಉಪವಾಸವನ್ನು ಆಚರಿಸುತ್ತಾರೆ. ವಿವಾಹಿತೆಯರ ಪ್ರಾರ್ಥನೆಯಿಂದ ಶಿವ ಮತ್ತು ಪಾರ್ವತಿಯರ ಅನುಗ್ರಹ ಪಡೆಯುವ ಮೂಲಕ ವೈವಾಹಿಕ ಜೀವನ ಸುಮಧುರವಾಗಿರಲು ಮತ್ತು ಆರೋಗ್ಯಕರವಾಗಿರಲು ಸಾಧ್ಯ ಎಂದು ನಂಬಲಾಗಿದೆ.
ಅಷ್ಟೇ ಅಲ್ಲ, ಸೂಕ್ತ ಜೀವನ ಸಂಗಾತಿಯನ್ನು ಪಡೆಯಲು ಅಸಮರ್ಥರಾದ ಕನ್ಯೆಯರಿಗೆ ಬೇಗನೇ ಸೂಕ್ತ ಜೀವನಸಂಗಾತಿ ಸಿಗಲೂ ಈ ದಿನ ಭಕ್ತಿಯಿಂದ ಮಾಡುವ ಪಾರ್ಥನೆ ಫಲ ನೀಡುತ್ತದೆ ಎಂದು ಹಿರಿಯರು ಹೇಳುತ್ತಾರೆ. ಶಿವರಾತ್ರಿಯ ಈ ಶುಭಸಂದರ್ಭದಲ್ಲಿ ಶಿವನ ಮತ್ತು ಪಾರ್ವತಿಯ ಅನುಗ್ರಹ ಪಡೆಯುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮಹಿಳೆಯರು ಮತ್ತು ಕನ್ಯೆಯರು ಹೆಚ್ಚು ಉತ್ಸುಕರಾಗಿರುತ್ತಾರೆ.



Click it and Unblock the Notifications
