Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ರಾಮಕೃಷ್ಣ ಜಯಂತಿ: ಪರಮಹಂಸರ ಕುರಿತಾದ ಆಶ್ಚರ್ಯಕರ ಸಂಗತಿಗಳು ಇಲ್ಲಿವೆ
Short Story
oi-Shreeraksha
By Shreeraksha
ಧಾರ್ಮಿಕ ಗುರುಗಳಾದ ರಾಮಕೃಷ್ಣ ಪರಮಹಂಸರು ಫೆಬ್ರವರಿ 18, 1836ರಂದು ಜನಿಸಿದರು. ಹಿಂದೂ ಕ್ಯಾಲೆಂಡರ್ ಪ್ರಕಾರ ರಾಮಕೃಷ್ಣ ಜಯಂತಿಯನ್ನು ಮಾರ್ಚ್4ರಂದು ಆಚರಿಸಲಾಗುತ್ತಿದೆ.
ಇವರ ಜಯಂತಿಯಂದು 19 ನೇ ಶತಮಾನದ ಈ ಅತೀಂದ್ರಿಯ ಮತ್ತು ಯೋಗಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

- ರಾಮಕೃಷ್ಣ ಜನಿಸಿದ್ದು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕಾಮರ್ಪುಕೂರ್ ಗ್ರಾಮದಲ್ಲಿ.
- ಅವರು 12 ವರ್ಷ ವಯಸ್ಸಿನವರೆಗೆ ಶಾಲೆಗೆ ಹೋಗಿದ್ದರು. ನಂತರ ಅವರಿಗೆ ಔಪಚಾರಿಕ ಶಿಕ್ಷಣದಲ್ಲಿ ಆಸಕ್ತಿ ಹೊಂದಿಲ್ಲದ ಕಾರಣ ಅದನ್ನು ನಿಲ್ಲಿಸಿದರು.
- ರಾಮಕೃಷ್ಣರು ಕಾಳಿ ದೇವತೆ, ತಂತ್ರ ಮತ್ತು ವೈಷ್ಣವ ಭಕ್ತಿ ಮತ್ತು ಅದ್ವೈತ ವೇದಾಂತದ ಮೇಲಿನ ಭಕ್ತಿ ಸೇರಿದಂತೆ ಹಲವಾರು ಧಾರ್ಮಿಕ ಸಂಪ್ರದಾಯಗಳಿಂದ ಪ್ರಭಾವಿತನಾಗಿದ್ದರು.
- ಅವರು ಪುರಾಣಗಳು, ರಾಮಾಯಣ, ಮಹಾಭಾರತ ಮತ್ತು ಭಾಗವತ ಪುರಾಣವನ್ನು ಚೆನ್ನಾಗಿ ತಿಳಿದಿದ್ದರು.
- ಐದು ವರ್ಷದ ಶಾರದಮಣಿ ಮುಖೋಪಾಧ್ಯಾಯ ಅವರನ್ನು ಮದುವೆಯಾದಾಗ ರಾಮಕೃಷ್ಣ ಅವರಿಗೆ 23 ವರ್ಷ, ನಂತರ ಇವರನ್ನು ಶಾರದಾ ದೇವಿ ಎಂದು ಕರೆಯಲಾಗುತ್ತಿತ್ತು.
- ರಾಮಕೃಷ್ಣ ಅವರು ಶಾರದಾ ಅವರ ಜೀವನದಲ್ಲಿ ಬಹಳ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು ಮತ್ತು ಅವರು ಅವರ ಬೋಧನೆಗಳ ಬಲವಾದ ಅನುಯಾಯಿಯಾದರು.
- ಮದುವೆಯ ನಂತರ, ಶಾರದಾ ಜಯರಾಂಬತಿಯಲ್ಲಿ ಉಳಿದು 18 ನೇ ವಯಸ್ಸಿನಲ್ಲಿ ದಕ್ಷಿಣೇಶ್ವರದಲ್ಲಿ ರಾಮಕೃಷ್ಣರನ್ನು ಸೇರಿಕೊಂಡರು
- ಅವರ ವಧು ಅವರೊಂದಿಗೆ ಸೇರುವ ಹೊತ್ತಿಗೆ, ರಾಮಕೃಷ್ಣರು ಸನ್ಯಾಸಿ ಜೀವನವನ್ನು ಆಗಲೇ ಸ್ವೀಕರಿಸಿದ್ದರು.
- ಅವರ ಮುಖ್ಯ ಶಿಷ್ಯ ಸ್ವಾಮಿ ವಿವೇಕಾನಂದ. ವಿವೇಕಾನಂದರು ರಾಮಕೃಷ್ಣ ಆಶ್ರಮವನ್ನು ಸ್ಥಾಪಿಸಿದರು, ಅದು ತನ್ನ ಮಿಷನ್ ಹುದ್ದೆಗಳನ್ನು ಪ್ರಪಂಚದಾದ್ಯಂತ ಹರಡಿತು.
- ಲಭ್ಯವಿರುವ ದಾಖಲೆಗಳ ಪ್ರಕಾರ, ರಾಮಕೃಷ್ಣ ಅವರು ವಿವೇಕಾನಂದರನ್ನು ಶಿಷ್ಯರ ಕಲ್ಯಾಣವನ್ನು ನೋಡಿಕೊಳ್ಳುವಂತೆ ಹೇಳಿದರು. ತನ್ನ ಮರಣದ ನಂತರ "ನನ್ನ ಹುಡುಗರನ್ನು ಒಟ್ಟಿಗೆ ಇರಿಸಿ ಅವರಿಗೆ ಕಲಿಸಲು" ಹೇಳಿದರು.
- ರಾಮಕೃಷ್ಣರ ಶಿಷ್ಯರು ಅವರನ್ನು ವಿಷ್ಣುವಿನ ಅವತಾರ ಅಥವಾ ಅವತಾರವೆಂದು ನಂಬಿದ್ದರು.
- ಶ್ರೀ ರಾಮಕೃಷ್ಣ ಪರಮಹಂಸರು ಗಂಟಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಆಗಸ್ಟ್ 16, 1886 ರಂದು ಕೊನೆಯುಸಿರೆಳೆದರು.
Comments
English summary



Click it and Unblock the Notifications

