Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
Narasimha Jayanti 2021: ಉಪವಾಸ ಸಮಯ, ಪೂಜಾ ವಿಧಿ, ಮಹತ್ವ
ವಿಷ್ಣುವಿನ ವಿವಿಧ ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ವೈಶಾಖ ಶುಕ್ಲ ಚತುರ್ದಶಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುವುದು. ನರಸಿಂಹ ದೇವರೆಂದರೆ ನಮ್ಮ ಕಣ್ಮುಂದೆ ಬರುವುದು ಮನುಷ್ಯ ದೇಹದ ಸಿಂಹ ಮುಖದ ರೂಪವಾಗಿದೆ.

ಭಕ್ತ ಪ್ರಹ್ಲಾದ ದುಷ್ಟ ಹಿರಣ್ಯ ಕಶ್ಯಪುವಿನಲ್ಲಿ ನನ್ನ ದೇವ ಈ ಕಂಬದಲ್ಲಿಯೂ ಇದ್ದಾನೆ ಎಂದಾಗ ಆತನ ಮಾತನ್ನು ಸತ್ಯವಾಗಿಸಿ ನರಸಿಂಹ ಕಂಬ ಸೀಳಿ ದುಷ್ಟ ರಾಕ್ಷಸ ಹಿರಣ್ಯ ಕಶ್ಯಪುವಿನ ವಧೆ ಮಾಡುತ್ತಾನೆ. ತನ್ನ ನಂಬಿದ ಭಕ್ತರನ್ನು ಎಲ್ಲಾ ಸಂದರ್ಭದಲ್ಲೂ ನರಸಿಂಹ ಕಾಪಾಡುತ್ತಾನೆ ಎಂಬುವುದೇ ಅವನ ನಂಬಿದವರ ಅಚಲ ನಂಬಿಕೆ.
2021ರಲ್ಲಿ ಮೇ 25ಕ್ಕೆ ನರಸಿಂಹ ಜಯಂತಿ ಆಚರಿಸಲಾಗುವುದು. ಈ ಆಚರಣೆಯ ಪೂಜಾ ವಿಧಾನ, ಉಪವಾಸ ಸಮಯ, ಇದರ ಮಹತ್ವ ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ನರಸಿಂಹ ಜಯಂತಿ ಯಾವಾಗ ಆಚರಿಸಲಾಗುವುದು?
ವೈಶಾಖ ಶುಕ್ಲ ಚತುರ್ದಶಿ ಆರಂಭ ಮೇ 24 ರಾತ್ರಿ 12:11ಕ್ಕೆ
ವೈಶಾಖ ಶುಕ್ಲ ಚತುರ್ದಶಿ ಆರಂಭ ಮೇ 25 ರಾತ್ರಿ 08:29ಕ್ಕೆ

ನರಸಿಂಹ ಜಯಂತಿ ಉಪವಾಸ ಸಮಯ, ಪೂಜೆ ಸಮಯ
ಮೇ 24 ರಾತ್ರಿ 12:11ರಿಂದ ಮೇ 25 ರಾತ್ರಿ 8:29ರವರೆಗೆ ಉಪವಾಸವಿದ್ದು ನರಸಿಂಹ ಜಯಂತಿ ಆಚರಿಸಬೇಕು.
ಪೂಜೆ ಸಮಯ: ಸಂಜೆ 04:32ಕ್ಕೆ
ಪಾರಣ ಕಾಲ (ಉಪವಾಸ ಮುರಿಯುವ ವಿಧಾನ: ಮೇ 26, ಬೆಳಗ್ಗೆ 06:01ಕ್ಕೆ

ಪೂಜಾ ವಿಧಿ
ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

ನರಸಿಂಹ ಜಯಂತಿಯ ಮಹತ್ವ
ನರಸಿಂಹನನ್ನು ಆರಾಧಿಸುವುದರಿಂದ ಆ ದೇವ ತನ್ನ ಭಕ್ತ ಜೊತೆಗೆ ಸದಾ ಇದ್ದು ಅವರನ್ನು ಎಲ್ಲಾ ಕಷ್ಟದಿಂದ ಪಾರು ಮಾಡುತ್ತಾನೆ.
ನರಸಿಂಹನನ್ನು ಆರಾಧಿಸುವುದರಿಂದ ದೊರೆಯುವ ಪ್ರಯೋಜನಗಳು
* ಸಂಬಂಧದಲ್ಲಿ ಸಮಸ್ಯೆ, ಸಾಲ, ಆರ್ಥಿಕ ಸಂಕಷ್ಟ ಇವುಗಳಿಗೆ ಪರಿಹಾರ ಸಿಗುವುದು
* ಐಶ್ವರ್ಯ ಲಭಿಸುವುದು
* ಕಾಯಿಲೆ ವಿರುದ್ಧ ರಕ್ಷಣೆ ನೀಡುವುದು
* ಕೋರ್ಟ್, ಕೇಸ್ಗಳಿದ್ದರೆ ಜಯ ಲಭಿಸುವುದು.

ಪೌರಾಣಿಕ ಕತೆ
ವಿಷ್ಣು ನರಸಿಂಹನ ಅವತಾರವೆತ್ತಲು ಕಾರಣವೇನು ಎಂಬುವುದಕ್ಕೆ ಕಾರಣವಿದೆ. ಅರಣ್ಯ ಕಶ್ಯಪು ತನ್ನನ್ನು ಮನುಷ್ಯ, ಪ್ರಾಣಿಗಾಗಲಿ ಅಥವಾ ಯಾವುದೇ ಆಯುಧದಿಮದ ಕೊಲ್ಲಲು ಸಾಧ್ಯವಾಗಬಾರದು ಎಂದು ವರ ಪಡೆದಿದ್ದ. ಆತನ ಕ್ರೌರ್ಯ, ಅಟ್ಟಹಾಸ ಮಿತಿ ಮೀರಿದಾಗ ವಿಷ್ಣು ಅರ್ಧ ಮನುಷ್ಯ, ಅರ್ಧ ಸಿಂಹದ ಅವತಾರ ತಾಳಿ ಹಿರಣ್ಯ ಕಶ್ಯಪು ವಧೆ ಮಾಡುತ್ತಾನೆ. ದುಷ್ಟರನ್ನು ಸಂರಕ್ಷಿಸಿ, ಭಕ್ತರನ್ನು ಪೊರೆಯುವ ನರಸಿಂಹನ ಆರಾಧನೆಯಿಂದ ಭಕ್ತರ ಬದುಕಿನಲ್ಲಿ ಒಳಿತಾಗುವುದು.



Click it and Unblock the Notifications
