Latest Updates
-
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ!
ಶಿವ ಪೂಜೆಯಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಿ
ಭಕ್ತಿ ಎಂಬುದು ಮನದಾಳದಿಂದ ಬರಬೇಕೇ ವಿನಃ ಬಲವಂತದಿಂದಲ್ಲ. ಪ್ರತಿಯೊಬ್ಬರ ಪ್ರಾರ್ಥನೆ ಅವರವರ ಧರ್ಮಕ್ಕೆ ಅನುಗುಣವಾಗಿ ಬೇರೆಬೇರೆಯಾಗಿರುತ್ತದೆ. ಕೆಲವರು ಭಕ್ತಿಯ ಪರಾಕಾಷ್ಠೆಯಲ್ಲಿ ಕೆಲವೊಂದು ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡುವುದು ಸಹಾ ಕಂಡುಬರುತ್ತದೆ.
ಪ್ರತಿ ಸೋಮವಾರದಂದು ಹಮ್ಮಿಕೊಳ್ಳಲಾಗುವ ಶಿವಪೂಜೆಯಲ್ಲಿಯೂ ಇಂತಹ ಚಿಕ್ಕಪುಟ್ಟ ತಪ್ಪುಗಳಾಗುವುದನ್ನು ಕಾಣಬಹುದು. ತನ್ನ ಭಕ್ತರ ಭಕ್ತಿಗೆ ಮೆಚ್ಚುವ ಶಿವ ಅವರ ಚಿಕ್ಕಪುಟ್ಟ ತಪ್ಪುಗಳನ್ನು ಖಂಡಿತಾ ಮನ್ನಿಸುತ್ತಾನೆ ಹಾಗೂ ಭಕ್ತರ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಆದರೂ ಸೋಮವಾರದ ಪೂಜೆ ಅತ್ಯಂತ ಮುಖ್ಯವಾದುದರಿಂದ ಅದರಲ್ಲಿ ಲೋಪಗಳಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯವಾಗಿದೆ.
ಶಿವಪೂಜೆ ಮಾಡುವಾಗ ನಮಗೆ ಗೊತ್ತಿಲ್ಲದೆ ಮಾಡುವ ತಪ್ಪುಗಳಿಂದಾಗಿ ಆ ಪೂಜೆಯ ಫಲ ಸಿಗುವುದಿಲ್ಲ. ಶಿವಪೂಜೆಯಲ್ಲಿ ಭಕ್ತರು ಮಾಡುವ ಸಾಮಾನ್ಯ ತಪ್ಪುಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ. ಈ ತಪ್ಪುಗಳನ್ನು ಎಸಗದಂತೆ ಎಚ್ಚರಿಕೆ ವಹಿಸುವ ಮೂಲಕ ಆ ಶಿವನ ಅನುಗ್ರಹಕ್ಕೆ ಪಾತ್ರರಾಗಲು ನೆರವಾಗುತ್ತದೆ.

ಬಿಲ್ವಪತ್ರೆಯನ್ನು ತರಲು ಮರೆಯುವುದು
ಶಿವಪೂಜೆಯಲ್ಲಿ ಬಿಲ್ವಪತ್ರೆಯ ಪಾತ್ರ ಅತಿ ಮಹತ್ತರವಾಗಿದೆ. ಇದನ್ನು ಅರ್ಪಿಸುವ ಮೂಲಕ ಭಕ್ತರ ಪಾಪವನ್ನು ತೊಳೆದು ಜೀವನದಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸಲು ನೆರವಾಗುತ್ತದೆ. ಆದ್ದರಿಂದ ಸೋಮವಾರದ ಶಿವಪೂಜೆಯಲ್ಲಿ ಯಾವುದೇ ಕಾರಣಕ್ಕೂ ಬಿಲ್ವಪತ್ರೆಯನ್ನು ತರಲು ಮರೆಯಬಾರದು.. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಾಸ್ತ್ರಗಳ ಪ್ರಕಾರ
ಶಾಸ್ತ್ರಗಳ ಪ್ರಕಾರ ಶಿವಪೂಜೆಗೂ ಬಿಲ್ವಪತ್ರೆಗೂ ನಿಕಟವಾದ ನಂಟಿದೆ. ಅಲ್ಲದೇ ಹಿಂದೂ ಪಂಚಾಂಗದ ಪ್ರಕಾರ ಶಿವಪೂಜೆ ಮತ್ತು ಗಣಪತಿಪೂಜೆಗೆ ವಿಶೇಷ ದಿನಗಳಿವೆ. ಈ ದಿನಗಳಲ್ಲಿ ಬಿಲ್ವಪತ್ರೆಯನ್ನು ಮರೆಯುವುದು ಅಥವಾ ಇದ್ದ ಎಲೆಗಳನ್ನು ಮುರಿಯುವುದು ಶಿವ ಮತ್ತು ಶಿವನ ಪುತ್ರನಾದ ಗಣಪತಿಯ ಪೂಜೆಗೆ ಭಂಗತರುತ್ತದೆ. ಇದು ಶಿವಪೂಜೆಯ ದೋಷಕ್ಕೂ ಕಾರಣವಾಗಬಲ್ಲುದು.

ಶಾಸ್ತ್ರಗಳ ಪ್ರಕಾರ
ಶಾಸ್ತ್ರಗಳ ಪ್ರಕಾರ ಈ ಕೆಳಗಿನ ದಿನಗಳು ಪವಿತ್ರವಾಗಿದ್ದು ಈ ದಿನಗಳಲ್ಲಿ ಬಿಲ್ವಪತ್ರೆಯನ್ನು ಮುರಿಯಲೇಬಾರದು:
*ಚತುರ್ಥಿ
*ಅಷ್ಟಮಿ
*ನವಮಿ
*ಚತುರ್ಧಶಿ
*ಅಮಾವಾಸ್ಯೆ
*ಸಂಕ್ರಾಂತಿ
*ಸೋಮವಾರ

ಸಾಮಾನ್ಯವಾಗಿ ಮರೆಯುವ ಶಿವಪೂಜೆಗೆ ಅಗತ್ಯವಾದ ಪರಿಕರಗಳು
ಹಾಲು - ಇದನ್ನು ಅರ್ಪಿಸುವುದರಿಂದ ಪಾವಿತ್ರ್ಯತೆ ಮತ್ತು ಧರ್ಮಶ್ರದ್ಧೆ ಮೂಡುತ್ತದೆ
ಮೊಸರು - ಇದನ್ನು ಅರ್ಪಿಸುವುದರಿಂದ ಉತ್ತಮ ಸಂತಾನ ಮತ್ತು ಸಮೃದ್ಧಿ ದೊರಕುತ್ತದೆ.
ಜೇನು - ಇದನ್ನು ಅರ್ಪಿಸುವುದರಿಂದ ನಿಮ್ಮ ಸ್ವರ ಅತ್ಯಂತ ಮಧುರವಾಗುತ್ತದೆ
ಸಕ್ಕರೆ - ಇದನ್ನು ಅರ್ಪಿಸುವುದರಿಂದ ಸಂತೋಷ ಲಭಿಸುತ್ತದೆ ಹಾಗೂ ಕಷ್ಟ ಕಾರ್ಪಣ್ಯ ನಾಶವಾಗುತ್ತದೆ.

ಸಾಮಾನ್ಯವಾಗಿ ಮರೆಯುವ ಶಿವಪೂಜೆಗೆ ಅಗತ್ಯವಾದ ಪರಿಕರಗಳು
ನೀರು -ಇದನ್ನು ಅರ್ಪಿಸುವುದರಿಂದ ಮನಃಶಾಂತಿ ದೊರಕುತ್ತದೆ.
ಶ್ರೀಗಂಧ - ಇದರ ಲೇಪನವನ್ನು ಅರ್ಪಿಸುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ಪಡೆಯಬಹುದು.
ವಿಭೂತಿ - ಇದನ್ನು ಅರ್ಪಿಸುವುದರಿಂದ ಶಿವನ ಅನುಗ್ರಹ ಪಡೆಯಬಹುದು.



Click it and Unblock the Notifications