Latest Updates
-
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಷಯ ತೃತೀಯದ ದಿನ ಸಂಪತ್ತು ವೃದ್ಧಿಗಾಗಿ ಸಂಕಷ್ಟಹರ ವಿಷ್ಣುವಿನ ಮಂತ್ರ ಪಠಿಸಿ
ಅಕ್ಷಯ ತೃತೀಯದ ಶುಭ ಗಳಿಗೆಯಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಅಷ್ಟೈಶ್ವರ್ಯ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಇದೆ. ಅದರ ಜೊತೆಗೆ ವಿಷ್ಣು ಸಂಕಷ್ಟಹರ ಮಂತ್ರವನ್ನು ಪಠಿಸಿದರೆ ಸಂಪತ್ತು ವೃದ್ಧಿಯಾಗುತ್ತಂತೆ. ಹಾಗಾದ್ರೆ ಸಂಕಷ್ಟಹರ ವಿಷ್ಣುವನ್ನು ನೆನೆಯೋದಕ್ಕೆ ಯಾವ ಮಂತ್ರಗಳನ್ನು ಹೇಳಬೇಕು ಅನ್ನೋದನ್ನು ತಿಳಿಸಿ ಕೊಡ್ತೀವಿ.

ಅಷ್ಟೈಶ್ವರ್ಯ ಸಿದ್ಧಿಯನ್ನು ಪಡೆದುಕೊಳ್ಳುವ ಅಕ್ಷಯ ತೃತೀಯ ಸಮೀಪದಲ್ಲಿದೆ. ಐಶ್ವರ್ಯ ದೇವತೆಗಳನ್ನು ಈ ದಿನ ನೆನೆದಲ್ಲಿ ನೀವು ಬಯಸಿದ್ದೆಲ್ಲವೂ ಕೈಗೂಡುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ ಯಾವುದೇ ಶುಭ ಕಾರ್ಯಗಳನ್ನು ನೀವು ಇಂದು ಹಮ್ಮಿಕೊಂಡಲ್ಲಿ ಅದು ಕೈಗೂಡುವುದು ಖಂಡಿತವಾಗಿದೆ.
ಅದಕ್ಕಾಗಿ ನೀವು ಆ ದೇವತೆಗಳನ್ನು ತೃಪ್ತಿಪಡಿಸಬೇಕಾಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ಸಕಲ ಇಷ್ಟಾರ್ಥಗಳನ್ನು ಪೂರೈಸುವ ದೇವತೆಗಳ ಮಂತ್ರವನ್ನು ನೀಡುತ್ತಿದ್ದು ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣವಾಗುವುದು ಖಚಿತ.
ಗಣೇಶನನ್ನು ನೆನೆಯುವುದು
ಎಲ್ಲಾ ಸಂಕಷ್ಟಗಳನ್ನು ತೊಡೆಯುವ ವಿನಾಯಕನನ್ನು ಅಕ್ಷಯ ತೃತೀಯದಂದು ಪೂಜಿಸಲಾಗುತ್ತದೆ.ಪೂಜೆಯ ಮೊದಲು ಅವರನ್ನು ನೆನೆಯುವುದರಿಂದ ಎಲ್ಲಾ ಕಾರ್ಯವೂ ಶುಭವಾಗುತ್ತದೆ. ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?
ಲಕ್ಷ್ಮೀ ದೇವರು
ಧನಕನಕ ಸಂಪತ್ತಿನ ಅದಿಧೇವತೆ ಎಂದೆನಿಸಿರುವ ಲಕ್ಷ್ಮೀ ಮಾತೆಯನ್ನು ಅಕ್ಷಯ ತೃತೀಯದಂದು ಪೂಜಿಸಲಾಗುತ್ತದೆ. ಮನೆಯಲ್ಲಿ ಧನ ಸಂಪತ್ತು ದೊರೆಯುತ್ತದೆ ಎಂಬ ಪ್ರತೀತಿ ಕೂಡ ಇದೆ. ಲಕ್ಷ್ಮೀಯನ್ನು ಪತಿ ಮಹಾವಿಷ್ಣುವಿನೊಂದಿಗೆ ಪೂಜಿಸಲಾಗುತ್ತದೆ. ಅಕ್ಷಯ ತೃತೀಯದಂದು ತಪ್ಪದೇ ಪಠಿಸಿ 'ಮಹಾಲಕ್ಷ್ಮೀ' ಸ್ತೋತ್ರ
ಕುಬೇರನನ್ನು ನೆನೆಯುವುದು
ದೇವತೆಗಳಿಗೆ ಸಾಲ ನೀಡುವ ಶ್ರೀಮಂತ ಎಂದೆನಿಸಿರುವ ಕುಬೇರ ಕೂಡ ಸಂಪತ್ತಿನ ದೇವತೆ ಎಂದೆನಿಸಿದ್ದಾರೆ. ಸಂಪತ್ತನ್ನು ಪಡೆದುಕೊಳ್ಳಲು ಈ ದೇವರನ್ನು ಈ ದಿನ ಭಕ್ತಿಯಿಂದ ಪೂಜಿಸಬೇಕು. ಐಶ್ವರ್ಯದ ಅಧಿಪತಿ ಕುಬೇರನನ್ನು ಒಲಿಸಿಕೊಳ್ಳುವ ಪರಿ ಹೇಗೆ?
ಮಹಾವಿಷ್ಣುವಿನ ಸ್ತುತಿ
ಅದೃಷ್ಟ, ಸಮಾಧಾನ ಮತ್ತು ಶಾಂತಿ ನೆಲೆಗೊಳ್ಳಲು ಮಹಾವಿಷ್ಣುವನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಮಹಾವಿಷ್ಣುವಿಗೆ ತ್ರಿಮೂರ್ತಿಗಳಲ್ಲಿ ಒಬ್ಬರು ಎಂಬ ಬಿರುದಿದೆ. ಸೃಷ್ಟಿಯ ಸಂರಕ್ಷಕ ಎಂಬ ಹೆಸರು ವಿಷ್ಣುವಿಗಿದೆ.
ದೇವತೆಗಳಲ್ಲಿ ಹೆಚ್ಚು ಶಾಂತಪ್ರಿಯರು ಮಹಾವಿಷ್ಣು ಎಂದಾಗಿದೆ. ಭಕ್ತರ ಸಕಲ ಪಾಪಗಳನ್ನು ಮನ್ನಿಸುವ ಮಹಾವಿಷ್ಣುವು ಭಕ್ತರ ಮೊರೆಯನ್ನು ಬೇಗನೇ ಆಲಿಸುವವರಾಗಿದ್ದಾರೆ. ಅಂತೆಯೇ ಹೆಚ್ಚು ಪರಿಣಾಮಕಾರಿ ದೇವರು ಎಂಬುದೂ ಕೂಡ ಹೌದು. ಮಹಾವಿಷ್ಣುವನ್ನು ಸಂಪ್ರೀತಿ ಪಡಿಸುವ ಮಂತ್ರಗಳು ಮತ್ತು ಸ್ತೋತ್ರಗಳು ಹೆಚ್ಚು ಫಲಪ್ರದ ಎಂದೆನಿಸಿದೆ. ದೇವರನ್ನು ಶ್ರದ್ಧೆ ಭಕ್ತಿಯಿಂದ ನೆನೆಯುವುದರಿಂದ ಸಕಲ ಕಾಮನೆಗಳೂ ಪೂರ್ಣಗೊಳ್ಳಲಿದೆ. ವಿಷ್ಣು 'ಶೇಷನಾಗನ' ಮೇಲೆಯೇ ವಿಶ್ರಮಿಸುತ್ತಾನೆ, ಯಾಕೆ ಅಂತೀರಾ?
ವಿಷ್ಣು ಮೂಲ ಮಂತ್ರ
ಓಂ ನಮೋ ನಾರಾಯಣಾಯ
ನಾನು ನಿನಗೆ ನಮಸ್ಕರಿಸುತ್ತೇನೆ ಓ ನಾರಾಯಣ ದೇವರೇ ಮಹಾವಿಷ್ಣುವಿಗೆ ಸಮರ್ಪಿಸಲಾದ ಮಂತ್ರ ಇದಾಗಿದೆ. ಇದು ಹೆಚ್ಚು ಶಕ್ತಿಯುತವಾದ ಮಂತ್ರವಾಗಿದೆ.
ವಿಷ್ಣು ಭಗವತೇ ವಾಸುದೇವ ಮಂತ್ರ
ಓಂ ನಮೋ ಭಗವತೇ ವಾಸುದೇವಾಯ
ವಿಶ್ವವನ್ನು ಕಾಪಾಡುವ ಭಗವಂತನೇ ನಾನು ನಿನಗೆ ವಂದಿಸುತ್ತೇನೆ.
ವಿಷ್ಣು ಗಾಯತ್ರಿ ಮಂತ್ರ
ಓಂ ಶ್ರೀ ವೈಷ್ಣವೇ ಚ
ವಿದಾಮಹೇ ವಾಸುದೇವಾಯ ಧೀಮಹಿ
ತನ್ನೊ ವಿಷ್ಣು ಪ್ರಚೋದಯಾತ್
ವಿಷ್ಣು ಸಂಕಷ್ಟಹರ ಮಂತ್ರ
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭೃದ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ
ವಿಷ್ಣು ಸಂಕಷ್ಟಹರ ಮಂತ್ರ
"ಓ ದೇವರೇ ನೀನು ಎಂದಿಗೂ ಶಾಂತನಾಗಿರುತ್ತೀಯೆ, ಹಾವು ಅನಂತನ ಮೇಲೆ ಮಲಗಿರುವವರೇ, ತಮ್ಮ ನಾಭಿಯಿಂದ ಕಮಲವನ್ನು ಉದಿಸುವವರೇ (ಅವರ ನಾಭಿಯಿಂದ ಕಮಲದ ಹೂವು ಉದಯಿಸುತ್ತದೆ ಎಂಬುದಾಗಿದೆ) ವಿಶ್ವಕ್ಕೂ ಒಡೆಯನಾಗಿರುವ ತಂದೆಯೇ ನಾನು ನಿಮಗೆ ವಂದಿಸುವೆ. ವಿಶ್ವದ ಅಸ್ತಿತ್ವ ನೀನೇ ಆಗಿರುವೆ. ನೀವು ಆಗಸದಷ್ಟೇ ವಿಸ್ತರಿಸಿರುವೆ ನಿಮ್ಮ ಬಣ್ಣ ಮೇಘದ್ದಾಗಿದೆ ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಪವಿತ್ರವಾದುದಾಗಿದೆ. ನೀವು ಲಕ್ಷ್ಮೀ ದೇವಿಯ ಪ್ರೀತಿಪಾತ್ರರು, ಸಂಗಾತಿಯಾಗಿರುವಿರಿ. ಕಮಲದಂತಹ ನಯನವನ್ನು ಹೊಂದಿರುವವರೇ, ಯೋಗಿಗಗಳ ಮನದಲ್ಲಿ ನೆಲೆಸಿರುವ ದೇವರೇ ನಾನು ನಿಮಗೆ ವಂದಿಸುತ್ತೇನೆ. ವಿಶ್ವವನ್ನು ಕಾಪಾಡುವ ರಕ್ಷಕನೇ ನಿನಗಿದೋ ವಂದನೆ."
ಮಂಗಳಂ ಭಗವಾನ್ ವಿಷ್ಣು ಮಂತ್ರ
ಮಂಗಳಂ ಭಗವಾನ್ ವಿಷ್ಣು ಮಂಗಳಂ ಗರುಡಾಧ್ವಜಾ ಮಂಗಳಂ ಪುಂಡರೀಕಾಕ್ಷಾ ಮಂಗಳಂ ತನ್ನೋಂ ಹರಿಹೀ
ತಮ್ಮ ಧ್ವಜದಲ್ಲಿ ಗರುಡನ್ನು ಹೊಂದಿರುವವರೇ ನೀವು ಪವಿತ್ರರು ಮತ್ತು ಸಾತ್ವಿಕ ಸ್ವಭಾದವರೂ ಆಗಿರುವಿರಿ. ಕಮಲದಷ್ಟು ನವಿರಾದ ಕಣ್ಣುಗಳನ್ನು ಹೊಂದಿರುವವರು ನೀವಾಗಿರುವಿರಿ. ನನ್ನೆಲ್ಲಾ ಭಕ್ತಿ ನಿಮ್ಮದಾಗಿದೆ. ಓ ಮಹಾ ವಿಷ್ಣುವೇ, ನಿಮ್ಮನ್ನು ಹರಿ ಎಂಬುದಾಗಿ ಕೂಡ ಕರೆಯುತ್ತಾರೆ.



Click it and Unblock the Notifications




