Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Krishna Janmashtami 2022: ಜನ್ಮಾಷ್ಟಮಿಯಂದು ಕೃಷ್ಣನ ನೆಚ್ಚಿನ ಈ ತಿಂಡಿಗಳನ್ನು ಅರ್ಪಿಸಿ
ಕೃಷ್ಣ ಪಕ್ಷದ ರೋಹಿಣಿ ನಕ್ಷತ್ರದ ಅಷ್ಟಮಿ ತಿಥಿಯಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನ ಮಹಿಳೆಯರು ಇಡೀ ದಿನ ಉಪವಾಸ ಮಾಡುತ್ತಾ ಕೃಷ್ಣನನ್ನು ಆರಾಧಿಸುತ್ತಾರೆ. 2022ನೇ ಸಾಲಿನಲ್ಲಿ ಆಗಸ್ಟ್ 19ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ.

ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನಿಗೆ ವಿವಿಧ ರೀತಿಯ ಹಣ್ಣುಗಳು ಮತ್ತು ಭಕ್ಷ್ಯಗಳನ್ನು ಅರ್ಪಿಸುತ್ತಾರೆ. ಅದರಲ್ಲೂ ತಿಂಡಿಪ್ರಿಯ ಕೃಷ್ಣನಿಗೆ ಇಷ್ಟವಾದ ಖಾದ್ಯಗಳನ್ನು ಅರ್ಪಿಸುವುದರಿಂದ, ಅವುಗಳ ಮೂಲಕ ಕೃಷ್ಣನನ್ನು ಸಂಪತೃಪ್ತಿಗೊಳಿಸಬಹುದು ಎಂಬ ನಂಬಿಕೆ ಇದೆ.
ಕೃಷ್ಣಷ್ಟಾಮಿಯಂದು ಉಪವಾಸ ಪ್ರಮುಖ ಆಚರಣೆಯಾಗಿರುವುದರಿಂದ ಅನ್ನವನ್ನು ಬಳಸಿ ಯಾವುದೇ ಖಾದ್ಯಗಳನ್ನು ತಯಾರಿಸುವುದಿಲ್ಲ.
ಕೃಷ್ಣನು ಇಷ್ಟಪಡುವ ನೆಚ್ಚಿನ ಪಾಕವಿಧಾನಗಳಲ್ಲಿ ಹಾಲು, ಮೊಸರು, ಅವಲಕ್ಕಿ, ಕರಿದ ಪದಾರ್ಥಗಳು, ಸಿಹಿತಿಂಡಿಗಳು ಇತ್ಯಾದಿ. ಹಾಗಾದರೆ ಶ್ರೀ ಕೃಷ್ಣನ ನೆಚ್ಚಿನ ಭಕ್ಷ್ಯಗಳು ಯಾವುವು ನೋಡೋಣ.

ಮುರುಕು
ಮುರುಕು ಒಂದು ಕರಿದ ತಿಂಡಿಯಾಗಿದ್ದು, ಇದನ್ನು ಕೃಷ್ಣ ಜನ್ಮಾಷ್ಟಮಿಗಾಗಿ ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಮುರುಕುವನ್ನು ಕಡ್ಡಾಯವಾಗಿ ಕೃಷ್ಣನಿಗೆ ಅರ್ಪಿಸಲಾಗುತ್ತದೆ ಏಕೆಂದರೆ ಇದು ಅವನ ನೆಚ್ಚಿನ ಭಕ್ಷ್ಯಗಳಲ್ಲಿ ಒಂದಾಗಿದೆ.

ಬೇಸನ್ ಲಡ್ಡು
ಬಹುತೇಕ ಎಲ್ಲಾ ಹಬ್ಬಗಳಲ್ಲಿ ಸಹ ಲಡ್ಡು ಇಡುವುದು ವಾಡಿಕೆ. ಹಬ್ಬಕ್ಕಾಗಿ ವಿವಿಧ ರೀತಿಯ ಲಾಡೂಗಳನ್ನು ತಯಾರಿಸಲಾಗುತ್ತದೆ; ಆದರೆ ಕೃಷ್ಣ ಜನ್ಮಾಷ್ಟಮಿಯಂದು ಮಾತ್ರ ಬೇಸನ್ ಲಾಡೂ ಇಡಲೇಬೇಕಾದ ಸಿಹಿಂಖಾದ್ಯವಾಗಿದೆ. ತುಂಬಾ ಸುಲಭವಾಗಿ ಮಾಡಬಹುದಾದ, ಬಹಳ ರುಚಿ ಇರುವ ಬೇಸನ್ ಲಾಡೂ ಶ್ರೀಕೃಷ್ಣನ ನೆಚ್ಚಿನ ಸಿಹಿಯಾಗಿದೆ.

ಕೋಡುಬಳೆ
ಕೋಡುಬಳೆ ಒಂದು ವಿಶಿಷ್ಟವಾದ ದಕ್ಷಿಣ ಭಾರತದ ಪಾಕವಿಧಾನವಾಗಿದೆ ಮತ್ತು ಜನ್ಮಾಷ್ಟಮಿಗೆ ಇದ್ದನ್ನು ತಪ್ಪದೇ ತಯಾರಿಸಲಾಗುತ್ತದೆ. ಇದು ಕೃಷ್ಣ ಜನ್ಮಾಷ್ಟಮಿಗಾಗಿ ತಯಾರಿಸಲಾದ ಗರಿಗರಿಯಾದ ಮಸಾಲೆಯುಕ್ತ ತಿಂಡಿಯಾಗಿದೆ.

ಸೋರೆಕಾಯಿ ತುಪ್ಪದ ಹಲ್ವಾ
ಭಗವಾನ್ ಕೃಷ್ಣನ ಅಚ್ಚುಮೆಚ್ಚಿನ ಭಕ್ಷ್ಯಗಳಲ್ಲಿ ಒಂದು ಸೋರೆಕಾಯಿ ತುಪ್ಪದ ಹಲ್ವಾ. ನೀವು ಸೋರೆಕಾಯಿ ತುಪ್ಪದ ಹಲ್ವಾವನ್ನು ಜನ್ಮಾಷ್ಟಮಿಗೆ ಎಂದಿಗೂ ತಪ್ಪಿಸಬಾರದು. ಜನ್ಮಾಷ್ಟಮಿಗೆ ನೀವು ತಯಾರಿಸಬೇಕಾದ ಅತ್ಯಂತ ರುಚಿಕರವಾದ ಪಾಕವಿಧಾನ ಇದು. ಈ ಪಾಕವಿಧಾನದ ಮುಖ್ಯ ಘಟಕಾಂಶವೆಂದರೆ ಸೋರೆಕಾಯಿ ಜೊತೆಗೆ ತುಪ್ಪ ಮತ್ತು ಒಣ ಹಣ್ಣುಗಳು.

ಆಲೂ ಪೋಹಾ
ಯಾರೇ ಅದರೂ ನಮಗೆ ಪೋಹ/ಅವಲಕ್ಕಿಯನ್ನು ನೀಡಿದಾಗ ನಾವು ಅದನ್ನು ನಿರಾಕರಿಸಬಾರದು ಎಂದು ನಂಬಲಾಗಿದೆ. ಕೃಷ್ಣನಿಗೆ ಅವಲಕ್ಕಿ ಎಂದರೆ ಅತ್ಯಂತ ಇಷ್ಟದ ತಿಂಡಿ ಆಗುವುದರಿಂದ ಅದನ್ನು ಭಗವಂತನಿಗೆ ಅರ್ಪಿಸಿ ನಂತರ ಸೇವಿಸುವುದು ಶುಭ.

ತೆಂಗಿನಕಾಯಿ ಬರ್ಫಿ
ತೆಂಗಿನಕಾಯಿ ಬರ್ಫಿ ಕೂಡ ಶ್ರೀಕೃಷ್ಣನ ನೆಚ್ಚಿನ ಭಕ್ಷ್ಯವಾಗಿದೆ. ಸಿಹಿ ಪಾಕವಿಧಾನಗಳಲ್ಲಿ, ನೀವು ತಯಾರಿಸಬಹುದಾದ ಸುಲಭವಾದ ಪಾಕವಿಧಾನವಾಗಿದೆ. ಸಕ್ಕರೆಯ ಮಾಧುರ್ಯ, ತುಪ್ಪ ಮತ್ತು ತೆಂಗಿನಕಾಯಿಯ ರುಚಿ ಅದ್ಭುತವನ್ನು ಮಾಡುತ್ತದೆ. ತೆಂಗಿನಕಾಯಿ ಬರ್ಫಿಯನ್ನು ನೈವೇದ್ಯವಾಗಿ ಬಡಿಸಿ ನಂತರ ಪ್ರಸಾದವಾಗಿ ವಿತರಿಸಬಹುದು.

ತಂಬಿಟ್ಟು
ತಂಬಿಟ್ಟು ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ ಮತ್ತು ಜನ್ಮಾಷ್ಟಮಿಗೆ ತಯಾರಿಸಬೇಕಾದ ಭಕ್ಷ್ಯವಾಗಿದೆ. ತಂಬಿಟ್ಟು ತಯಾರಿಸಲು, ಅಕ್ಕಿ ಹಿಟ್ಟು ಅಥವಾ ಗೋಧಿ ಹಿಟ್ಟನ್ನು ಬೆಲ್ಲ ಮತ್ತು ತುಪ್ಪದೊಂದಿಗೆ ಸೇರಿಸಲಾಗುತ್ತದೆ. ಇದು ಸಹ ಕೃಷ್ಣನ ನೆಚ್ಚಿನ ತಿಂಡಿಯಾಗಿದೆ.

ಸಾಬುದಾನ ಖೀರ್
ಸಾಬುದಾನ ಖೀರ್ ಒಂದು ಸವಿಯಾದ ಸಿಹಿಯಾಗಿದ್ದು ಇದನ್ನು ಸಾಮಾನ್ಯವಾಗಿ ಯಾವುದೇ ಉಪವಾಸದ ಹಬ್ಬದಲ್ಲಿ ತಯಾರಿಸಲಾಗುತ್ತದೆ.



Click it and Unblock the Notifications