Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಜೂ.24ಕ್ಕೆ ಕಾರ ಹುಣ್ಣಿಮೆ: ಸಾಂಸ್ಕೃತಿಕ ವೈಶಿಷ್ಟ್ಯ ಇರುವ ಈ ದಿನದ ವಿಶೇಷವೇನು?
ಉತ್ತರ ಕರ್ನಾಟಕದವರಿಗೆ ಕಾರ ಹುಣ್ಣಿಮೆ ಎಂದರೆ ತುಂಬಾನೇ ವಿಶೇಷ. ಈ ಹಬ್ಬದಂದು ಎತ್ತುಗಳಿಗೆ ಶೃಂಗರಿಸಿ ಅವುಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು. ರೈತರ ಸಡಗರ, ಸಂಭ್ರಮದ ಹಬ್ಬವಾದ ಕಾರ ಹುಣ್ಣಿಮೆ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದಾಗಿ ಅಷ್ಟೇನು ಸಡಗರದಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ.
ಕಾರ ಹುಣ್ಣಿಮೆ ಬಳಿಕವಷ್ಟೇ ಮುಂಗಾರು ಆರಂಭವಾಗುವುದು ಎಂದು ಹೇಳಲಾಗುವುದು. ಈ ವರ್ಷ ಜೂನ್ 24ರಂದು ಆಚರಿಸಲಾಗುತ್ತಿದೆ. ಇದಕ್ಕೆ ನಮ್ಮ ದ ರಾ ಬಂದ್ರೆಯವರು
" ಕಾರಹುಣ್ಣಿಮೆಯ ಮಾರನೆಯ ದಿನವೇ
ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ
ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ " ಎಂದು ಹೇಳಿರುವುದು.

ಕಾರ ಹುಣ್ಣಿಮೆ ಮಹತ್ವ
ಬೇಸಿಗೆ ತಾಪ ಹೋಗಿ ಮುಂಗಾರು ಮಳೆಯಿಂದ ಭೂಮಿ ತಂಪಾಗುವುದು. ಭೂಮಿ ತಂಪಾದಾಗ ಉತ್ತು- ಬಿತ್ತಲು ಎತ್ತುಗಳು ನೆರವಾಗುವುದು. ಆದ್ದರಿಂದ ಈ ದಿನದಂದು ಅವುಗಳನ್ನು ಅಲಂಕರಿಸಿ ಧನ್ಯವಾದ ಅರ್ಪಿಸಲಾಗುವುದು.

ಊರಿನವರ ಸಂಭ್ರಮ ಹೆಚ್ಚಿಸುವ ಹಬ್ಬ
ಈ ಹಬ್ಬ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿರುವ ಹಬ್ಬವಾಗಿದೆ. ಈ ದಿನ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಅವುಗಳ ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಕೊರಳಲ್ಲಿ ಘಂಟೆ, ಕೊರಳಿಗೆ ಚೆಂದದ ಫರಾರಿಯನ್ನು ಕಟ್ಟಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ಅವುಗಳನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಇಡೀ ಊರಿಗೇ ಊರೇ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು.

ಮಕ್ಕಳಿಗೆ ಸಡಗರವೋ ಸಡಗರ
ಈ ದಿನ ಮಕ್ಕಳಿಗಂತೂ ತುಂಬಾನೇ ಸಡಗರ. ಮನೆಯ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಅಡುಗೆಯಾದ ಹೋಳಿಗೆ, ತುಪ್ಪ ಸವಿಯಲಾಗುವುದು.
ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಲಾಗುವುದು
ಈ ದಿನ ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಿ ಪೂಜೆ ಮಾಡಲಾಗುವುದು.



Click it and Unblock the Notifications
