Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಜೂ.24ಕ್ಕೆ ಕಾರ ಹುಣ್ಣಿಮೆ: ಸಾಂಸ್ಕೃತಿಕ ವೈಶಿಷ್ಟ್ಯ ಇರುವ ಈ ದಿನದ ವಿಶೇಷವೇನು?
ಉತ್ತರ ಕರ್ನಾಟಕದವರಿಗೆ ಕಾರ ಹುಣ್ಣಿಮೆ ಎಂದರೆ ತುಂಬಾನೇ ವಿಶೇಷ. ಈ ಹಬ್ಬದಂದು ಎತ್ತುಗಳಿಗೆ ಶೃಂಗರಿಸಿ ಅವುಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು. ರೈತರ ಸಡಗರ, ಸಂಭ್ರಮದ ಹಬ್ಬವಾದ ಕಾರ ಹುಣ್ಣಿಮೆ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದಾಗಿ ಅಷ್ಟೇನು ಸಡಗರದಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ.
ಕಾರ ಹುಣ್ಣಿಮೆ ಬಳಿಕವಷ್ಟೇ ಮುಂಗಾರು ಆರಂಭವಾಗುವುದು ಎಂದು ಹೇಳಲಾಗುವುದು. ಈ ವರ್ಷ ಜೂನ್ 24ರಂದು ಆಚರಿಸಲಾಗುತ್ತಿದೆ. ಇದಕ್ಕೆ ನಮ್ಮ ದ ರಾ ಬಂದ್ರೆಯವರು
" ಕಾರಹುಣ್ಣಿಮೆಯ ಮಾರನೆಯ ದಿನವೇ
ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ
ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ " ಎಂದು ಹೇಳಿರುವುದು.

ಕಾರ ಹುಣ್ಣಿಮೆ ಮಹತ್ವ
ಬೇಸಿಗೆ ತಾಪ ಹೋಗಿ ಮುಂಗಾರು ಮಳೆಯಿಂದ ಭೂಮಿ ತಂಪಾಗುವುದು. ಭೂಮಿ ತಂಪಾದಾಗ ಉತ್ತು- ಬಿತ್ತಲು ಎತ್ತುಗಳು ನೆರವಾಗುವುದು. ಆದ್ದರಿಂದ ಈ ದಿನದಂದು ಅವುಗಳನ್ನು ಅಲಂಕರಿಸಿ ಧನ್ಯವಾದ ಅರ್ಪಿಸಲಾಗುವುದು.

ಊರಿನವರ ಸಂಭ್ರಮ ಹೆಚ್ಚಿಸುವ ಹಬ್ಬ
ಈ ಹಬ್ಬ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿರುವ ಹಬ್ಬವಾಗಿದೆ. ಈ ದಿನ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಅವುಗಳ ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಕೊರಳಲ್ಲಿ ಘಂಟೆ, ಕೊರಳಿಗೆ ಚೆಂದದ ಫರಾರಿಯನ್ನು ಕಟ್ಟಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ಅವುಗಳನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಇಡೀ ಊರಿಗೇ ಊರೇ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು.

ಮಕ್ಕಳಿಗೆ ಸಡಗರವೋ ಸಡಗರ
ಈ ದಿನ ಮಕ್ಕಳಿಗಂತೂ ತುಂಬಾನೇ ಸಡಗರ. ಮನೆಯ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಅಡುಗೆಯಾದ ಹೋಳಿಗೆ, ತುಪ್ಪ ಸವಿಯಲಾಗುವುದು.
ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಲಾಗುವುದು
ಈ ದಿನ ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಿ ಪೂಜೆ ಮಾಡಲಾಗುವುದು.



Click it and Unblock the Notifications