Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಝೆನ್ ಕಥೆ: ಒಂದೇ ಹಸ್ತದ ಶಬ್ಧವನ್ನು ಆಲಿಸು

ಸುವೊ ಆ ವಿದ್ಯಾರ್ಥಿಗೆ " ಒಂದೇ ಹಸ್ತದ ಶಬ್ಧವನ್ನು ಆಲಿಸು " ಎಂಬ ಪಾಠವನ್ನು ಕಲಿಯಲು ಹೇಳಿದರು.
ಆ ವಿದ್ಯಾರ್ಥಿ ಮೂರು ವರ್ಷ ಪರಿಶ್ರಮ ಪಟ್ಟರೂ ಅದನ್ನು ಸಾಧಿಸಲಾಗಲಿಲ್ಲ.
ಕಣ್ಣಲ್ಲಿ ನೀರು ತುಂಬಿಕೊಂಡು ಆ ವಿದ್ಯಾರ್ಥಿ ಗುರುಗಳ ಬಳಿ ಬಂದು, "ಗುರುಗಳೇ, ನಾನೀಗ ಅತ್ಯಂತ ನಾಚಿಕೆ ಮತ್ತು ಮುಜುಗರದಿಂದ ನನ್ನ ಊರಿಗೆ ವಾಪಸಾಗಬೇಕಾಗಿದೆ. ನೀವು ಹೇಳಿಕೊಟ್ಟ ಪಾಠವನ್ನು ನನಗೆ ಕಲಿಯಲು ಸಾಧ್ಯವಾಗಲಿಲ್ಲ " ಎಂದನು.
ಗುರುಗಳು, "ಇನ್ನು ಒಂದು ವಾರದ ತನಕ ಧ್ಯಾನ ಮಾಡು" ಎಂದರು.
ಆದರೂ ಆ ವಿದ್ಯಾರ್ಥಿಗೆ ಅದು ಸಾಧ್ಯವಾಗಲಿಲ್ಲ.
ಆದರೂ ಗುರುಗಳು, " ಇನ್ನೂ ಒಂದು ವಾರದ ತನಕ ಧ್ಯಾನ ಮಾಡು " ಎಂದರು.
ಅದಾಗ್ಯೂ ಆ ವಿದ್ಯಾರ್ಥಿಗೆ ಜ್ಞಾನೋದಯವಾಗಲಿಲ್ಲ!
ಆ ವಿದ್ಯಾರ್ಥಿ ತನ್ನನ್ನು ಊರಿಗೆ ಕಳುಹಿಸುವಂತೆ ಗುರುಗಳಲ್ಲಿ ಬೇಡಿದ. ಉಹುಂ! ಗುರುಗಳು ಸುತರಾಂ ಒಪ್ಪಲಿಲ್ಲ. ಇನ್ನೂ ಐದು ದಿನ ಧ್ಯಾನಿಸುವಂತೆ ಹೇಳಿದರು. ಆದರೆ, ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ಆಗ ಗುರುಗಳು, " ಇನ್ನು ಕೇವಲ ಮೂರು ದಿನ ಧ್ಯಾನಿಸು. ಒಂದು ವೇಳೆ ಆವಾಗಲೂ ನಿನಗೆ ಜ್ಞಾನೋದಯ ಆಗದಿದ್ದರೆ ನಿನ್ನನ್ನು ನೀನೇ ಕೊಂದುಕೊಳ್ಳುವುದೇ ಒಳ್ಳೆಯದು " ಎಂದರು!
ಆ ವಿದ್ಯಾರ್ಥಿಗೆ ಎರಡನೇ ದಿನಕ್ಕೇ ....... ಜ್ಞಾನೋದಯವಾಯಿತು!!



Click it and Unblock the Notifications
