Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಝೆನ್ ಕಥೆ: ಒಂದೇ ಹಸ್ತದ ಶಬ್ಧವನ್ನು ಆಲಿಸು

ಸುವೊ ಆ ವಿದ್ಯಾರ್ಥಿಗೆ " ಒಂದೇ ಹಸ್ತದ ಶಬ್ಧವನ್ನು ಆಲಿಸು " ಎಂಬ ಪಾಠವನ್ನು ಕಲಿಯಲು ಹೇಳಿದರು.
ಆ ವಿದ್ಯಾರ್ಥಿ ಮೂರು ವರ್ಷ ಪರಿಶ್ರಮ ಪಟ್ಟರೂ ಅದನ್ನು ಸಾಧಿಸಲಾಗಲಿಲ್ಲ.
ಕಣ್ಣಲ್ಲಿ ನೀರು ತುಂಬಿಕೊಂಡು ಆ ವಿದ್ಯಾರ್ಥಿ ಗುರುಗಳ ಬಳಿ ಬಂದು, "ಗುರುಗಳೇ, ನಾನೀಗ ಅತ್ಯಂತ ನಾಚಿಕೆ ಮತ್ತು ಮುಜುಗರದಿಂದ ನನ್ನ ಊರಿಗೆ ವಾಪಸಾಗಬೇಕಾಗಿದೆ. ನೀವು ಹೇಳಿಕೊಟ್ಟ ಪಾಠವನ್ನು ನನಗೆ ಕಲಿಯಲು ಸಾಧ್ಯವಾಗಲಿಲ್ಲ " ಎಂದನು.
ಗುರುಗಳು, "ಇನ್ನು ಒಂದು ವಾರದ ತನಕ ಧ್ಯಾನ ಮಾಡು" ಎಂದರು.
ಆದರೂ ಆ ವಿದ್ಯಾರ್ಥಿಗೆ ಅದು ಸಾಧ್ಯವಾಗಲಿಲ್ಲ.
ಆದರೂ ಗುರುಗಳು, " ಇನ್ನೂ ಒಂದು ವಾರದ ತನಕ ಧ್ಯಾನ ಮಾಡು " ಎಂದರು.
ಅದಾಗ್ಯೂ ಆ ವಿದ್ಯಾರ್ಥಿಗೆ ಜ್ಞಾನೋದಯವಾಗಲಿಲ್ಲ!
ಆ ವಿದ್ಯಾರ್ಥಿ ತನ್ನನ್ನು ಊರಿಗೆ ಕಳುಹಿಸುವಂತೆ ಗುರುಗಳಲ್ಲಿ ಬೇಡಿದ. ಉಹುಂ! ಗುರುಗಳು ಸುತರಾಂ ಒಪ್ಪಲಿಲ್ಲ. ಇನ್ನೂ ಐದು ದಿನ ಧ್ಯಾನಿಸುವಂತೆ ಹೇಳಿದರು. ಆದರೆ, ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ಆಗ ಗುರುಗಳು, " ಇನ್ನು ಕೇವಲ ಮೂರು ದಿನ ಧ್ಯಾನಿಸು. ಒಂದು ವೇಳೆ ಆವಾಗಲೂ ನಿನಗೆ ಜ್ಞಾನೋದಯ ಆಗದಿದ್ದರೆ ನಿನ್ನನ್ನು ನೀನೇ ಕೊಂದುಕೊಳ್ಳುವುದೇ ಒಳ್ಳೆಯದು " ಎಂದರು!
ಆ ವಿದ್ಯಾರ್ಥಿಗೆ ಎರಡನೇ ದಿನಕ್ಕೇ ....... ಜ್ಞಾನೋದಯವಾಯಿತು!!



Click it and Unblock the Notifications