Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಝೆನ್ ಕಥೆ: ಒಂದೇ ಹಸ್ತದ ಶಬ್ಧವನ್ನು ಆಲಿಸು

ಸುವೊ ಆ ವಿದ್ಯಾರ್ಥಿಗೆ " ಒಂದೇ ಹಸ್ತದ ಶಬ್ಧವನ್ನು ಆಲಿಸು " ಎಂಬ ಪಾಠವನ್ನು ಕಲಿಯಲು ಹೇಳಿದರು.
ಆ ವಿದ್ಯಾರ್ಥಿ ಮೂರು ವರ್ಷ ಪರಿಶ್ರಮ ಪಟ್ಟರೂ ಅದನ್ನು ಸಾಧಿಸಲಾಗಲಿಲ್ಲ.
ಕಣ್ಣಲ್ಲಿ ನೀರು ತುಂಬಿಕೊಂಡು ಆ ವಿದ್ಯಾರ್ಥಿ ಗುರುಗಳ ಬಳಿ ಬಂದು, "ಗುರುಗಳೇ, ನಾನೀಗ ಅತ್ಯಂತ ನಾಚಿಕೆ ಮತ್ತು ಮುಜುಗರದಿಂದ ನನ್ನ ಊರಿಗೆ ವಾಪಸಾಗಬೇಕಾಗಿದೆ. ನೀವು ಹೇಳಿಕೊಟ್ಟ ಪಾಠವನ್ನು ನನಗೆ ಕಲಿಯಲು ಸಾಧ್ಯವಾಗಲಿಲ್ಲ " ಎಂದನು.
ಗುರುಗಳು, "ಇನ್ನು ಒಂದು ವಾರದ ತನಕ ಧ್ಯಾನ ಮಾಡು" ಎಂದರು.
ಆದರೂ ಆ ವಿದ್ಯಾರ್ಥಿಗೆ ಅದು ಸಾಧ್ಯವಾಗಲಿಲ್ಲ.
ಆದರೂ ಗುರುಗಳು, " ಇನ್ನೂ ಒಂದು ವಾರದ ತನಕ ಧ್ಯಾನ ಮಾಡು " ಎಂದರು.
ಅದಾಗ್ಯೂ ಆ ವಿದ್ಯಾರ್ಥಿಗೆ ಜ್ಞಾನೋದಯವಾಗಲಿಲ್ಲ!
ಆ ವಿದ್ಯಾರ್ಥಿ ತನ್ನನ್ನು ಊರಿಗೆ ಕಳುಹಿಸುವಂತೆ ಗುರುಗಳಲ್ಲಿ ಬೇಡಿದ. ಉಹುಂ! ಗುರುಗಳು ಸುತರಾಂ ಒಪ್ಪಲಿಲ್ಲ. ಇನ್ನೂ ಐದು ದಿನ ಧ್ಯಾನಿಸುವಂತೆ ಹೇಳಿದರು. ಆದರೆ, ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ಆಗ ಗುರುಗಳು, " ಇನ್ನು ಕೇವಲ ಮೂರು ದಿನ ಧ್ಯಾನಿಸು. ಒಂದು ವೇಳೆ ಆವಾಗಲೂ ನಿನಗೆ ಜ್ಞಾನೋದಯ ಆಗದಿದ್ದರೆ ನಿನ್ನನ್ನು ನೀನೇ ಕೊಂದುಕೊಳ್ಳುವುದೇ ಒಳ್ಳೆಯದು " ಎಂದರು!
ಆ ವಿದ್ಯಾರ್ಥಿಗೆ ಎರಡನೇ ದಿನಕ್ಕೇ ....... ಜ್ಞಾನೋದಯವಾಯಿತು!!



Click it and Unblock the Notifications











