Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಝೆನ್ ಕಥೆ: ಒಂದೇ ಹಸ್ತದ ಶಬ್ಧವನ್ನು ಆಲಿಸು

ಸುವೊ ಆ ವಿದ್ಯಾರ್ಥಿಗೆ " ಒಂದೇ ಹಸ್ತದ ಶಬ್ಧವನ್ನು ಆಲಿಸು " ಎಂಬ ಪಾಠವನ್ನು ಕಲಿಯಲು ಹೇಳಿದರು.
ಆ ವಿದ್ಯಾರ್ಥಿ ಮೂರು ವರ್ಷ ಪರಿಶ್ರಮ ಪಟ್ಟರೂ ಅದನ್ನು ಸಾಧಿಸಲಾಗಲಿಲ್ಲ.
ಕಣ್ಣಲ್ಲಿ ನೀರು ತುಂಬಿಕೊಂಡು ಆ ವಿದ್ಯಾರ್ಥಿ ಗುರುಗಳ ಬಳಿ ಬಂದು, "ಗುರುಗಳೇ, ನಾನೀಗ ಅತ್ಯಂತ ನಾಚಿಕೆ ಮತ್ತು ಮುಜುಗರದಿಂದ ನನ್ನ ಊರಿಗೆ ವಾಪಸಾಗಬೇಕಾಗಿದೆ. ನೀವು ಹೇಳಿಕೊಟ್ಟ ಪಾಠವನ್ನು ನನಗೆ ಕಲಿಯಲು ಸಾಧ್ಯವಾಗಲಿಲ್ಲ " ಎಂದನು.
ಗುರುಗಳು, "ಇನ್ನು ಒಂದು ವಾರದ ತನಕ ಧ್ಯಾನ ಮಾಡು" ಎಂದರು.
ಆದರೂ ಆ ವಿದ್ಯಾರ್ಥಿಗೆ ಅದು ಸಾಧ್ಯವಾಗಲಿಲ್ಲ.
ಆದರೂ ಗುರುಗಳು, " ಇನ್ನೂ ಒಂದು ವಾರದ ತನಕ ಧ್ಯಾನ ಮಾಡು " ಎಂದರು.
ಅದಾಗ್ಯೂ ಆ ವಿದ್ಯಾರ್ಥಿಗೆ ಜ್ಞಾನೋದಯವಾಗಲಿಲ್ಲ!
ಆ ವಿದ್ಯಾರ್ಥಿ ತನ್ನನ್ನು ಊರಿಗೆ ಕಳುಹಿಸುವಂತೆ ಗುರುಗಳಲ್ಲಿ ಬೇಡಿದ. ಉಹುಂ! ಗುರುಗಳು ಸುತರಾಂ ಒಪ್ಪಲಿಲ್ಲ. ಇನ್ನೂ ಐದು ದಿನ ಧ್ಯಾನಿಸುವಂತೆ ಹೇಳಿದರು. ಆದರೆ, ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ಆಗ ಗುರುಗಳು, " ಇನ್ನು ಕೇವಲ ಮೂರು ದಿನ ಧ್ಯಾನಿಸು. ಒಂದು ವೇಳೆ ಆವಾಗಲೂ ನಿನಗೆ ಜ್ಞಾನೋದಯ ಆಗದಿದ್ದರೆ ನಿನ್ನನ್ನು ನೀನೇ ಕೊಂದುಕೊಳ್ಳುವುದೇ ಒಳ್ಳೆಯದು " ಎಂದರು!
ಆ ವಿದ್ಯಾರ್ಥಿಗೆ ಎರಡನೇ ದಿನಕ್ಕೇ ....... ಜ್ಞಾನೋದಯವಾಯಿತು!!



Click it and Unblock the Notifications