Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು
ಗೌರಿ-ಗಣೇಶ ಹಬ್ಬ 2025: ಸ್ನೇಹಿತರು, ಬಂಧುಬಾಂಧವರಿಗೆ ಶುಭ ಕೋರಲು ಇಲ್ಲಿವೆ ಭಕ್ತಿಪೂರ್ವಕ ಸಂದೇಶಗಳು
ಜೀವನದಲ್ಲಿ ಎದುರಾಗಲು ಸಂಕಷ್ಟಗಳನ್ನು ದೂರ ಮಾಡುವ, ಸಿದ್ಧಿ-ಬುದ್ಧಿ ಎಂದರೆ ಜ್ಞಾನದಿಂದ ಆಶೀರ್ವದಿಸಲ್ಪಟ್ಟ ಮತ್ತು ಜ್ಞಾನವನ್ನು ವಿಶ್ಲೇಷಿಸುವ ವಿನಾಯಕ ಚತುರ್ಥಿಗೆ ಇನ್ನೇನು ದಿನಗಣನೆ ಆರಂಭವಾಗಿದೆ. 2025ನೇ ಸಾಲಿನಲ್ಲಿ ಆಗಸ್ಟ್ 26 & 27 ರಂದು ಗೌರಿ-ಗಣೇಶ ಹಬ್ಬ ಆಚರಿಸಲಾಗುತ್ತಿದೆ.
ಭಾದ್ರಪದ ಮಾಸ, ಶುಕ್ಲ ಪಕ್ಷ, ಚತುರ್ಥಿಯಂದು ಆಗಸ್ಟ್ 27 ಶುಕ್ರವಾರ ವಿನಾಯಕ ಎಲ್ಲರ ಮನೆಗೆ ಬರಲಿದ್ದಾರೆ. ಈ ದಿನ ನಿಮ್ಮ ಬಂಧು ಬಾಂಧವರಿಗೆ, ಸ್ನೇಹಿತರಿಗೆ ಶುಭ ಕೋರಲು ಆಕರ್ಷಕ ಸಂದೇಶಗಳನ್ನು ನಾವಿಲ್ಲಿ ನೀಡಲಿದ್ದೇವೆ. ಫೇಸ್ಬುಕ್, ವಾಟ್ಸಾಪ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು, ಗಣೇಶನ ಶ್ಲೋಕ ಸಹಿತ ಆತನ ಆಶೀರ್ವಾದದ ಸಂದೇಶಗಳನ್ನು ಮುಂದೆ ನೋಡಿ:

ಸಿದ್ಧಿ ಬುದ್ಧಿದಾತ ಗಣೇಶ ನಿಮ್ಮ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿಯನ್ನು ಕರುಣಿಸಲಿ
ವಿಘ್ನ ನಿವಾರಕ ಗಣೇಶ ಹಬ್ಬದ ಶುಭಾಶಯಗಳು

"ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ"
ಲಂಬೋದರನ ಕೃಪೆ ನಿಮ್ಮ ಕುಟುಂಬದ ಮೇಲಿರಲಿ
ವಿನಾಯಕ ಚತುರ್ಥಿಯ ಶುಭಾಶಯಗಳು

"ಓಂ ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್"
ಸರ್ವ ಮಂಗಳಕಾರಿ ಮಂಗಳಮೂರ್ತಿ ನಿಮ್ಮ ಜೀವನದ ಸಂಕಷ್ಟಗಳನ್ನು ನಿವಾರಿಸಲಿ
ಗಣೇಶ ಚತುರ್ಥಿಯ ಶುಭಾಶಯಗಳು

"ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕತ್ರೇಯ
ಸರ್ವ ವಿಘ್ನ ಪ್ರಶಮ್ನಯ್ ಸರ್ವರ್ಜಯ ವಶ್ಯಾಕರ್ಣಾಯ
ಸರ್ವಜನ್ ಸರ್ವಸ್ತ್ರೀ ಪುರುಷ ಆಕಾಶಾಯ ಶ್ರೀಂಗ್"
ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುವ ಗಣಪ ನಿಮ್ಮ ಬಾಳಿನಲ್ಲಿ ಶುಭವನ್ನು ತರಲಿ
ವಿನಾಯಕ ಚತುರ್ಥಿಯ ಶುಭಾಶಯಗಳು

"ಓಂ ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್"
ಗಣೇಶ ಸದಾ ನಿಮ್ಮ ಮಾರ್ಗದರ್ಶಕ, ರಕ್ಷಕನಾಗಿರಲಿ ಮತ್ತು ನಿಮ್ಮ ಜೀವನದಿಂದ ಅಡೆತಡೆಗಳನ್ನು ನಿವಾರಿಸಲಿ
ಗಣೇಶ ಚತುರ್ಥಿಯ ಶುಭಾಶಯಗಳು

ಪ್ರಣಾಮ್ಯ ಶಿರಸಾ ದೇವಂ ಗೌರಿಪುತ್ರಂ ವಿನಾಯಕಂ
ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
ವಿನಾಯಕನ ಅನುಗ್ರಹವು ನಿಮ್ಮ ಜೀವನವನ್ನು ಪ್ರಬುದ್ಧಗೊಳಿಸಲಿ ಮತ್ತು ನಿಮ್ಮನ್ನು ಆಶೀರ್ವದಿಸಲಿ
ಗಣೇಶ ಚತುರ್ಥಿಯ ಶುಭಾಶಯಗಳು

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಲಂಬೋದರ ನಿಮ್ಮ ಎಲ್ಲಾ ಚಿಂತೆ, ದುಃಖ ಮತ್ತು ನೋವನ್ನು ದೂರಮಾಡಿ ಪ್ರೀತಿ, ಸಂತೋಷವನ್ನು ಕರುಣಿಸಲಿ
ಗಣೇಶ ಚತುರ್ಥಿಯ ಶುಭಾಶಯಗಳು

ಮೂಷಿಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ ವಿಘ್ನ ವಿನಾಯಕ ಪಾದ ನಮಸ್ತೆ
ವಿದ್ಯೆ, ಬುದ್ಧಿ, ಜ್ಞಾನದಾತ ಸರ್ವಕಾರಕ ಗಣಪ ನಿಮಗೂ ಸಕಲವನ್ನು ಕರುಣಿಸಲಿ
ವಿನಾಯಕ ಚತುರ್ಥಿಯ ಶುಭಾಶಯಗಳು

ಏಕದಂತಂ ಮಹಾಕಾಯಂ ಲಂಬೋದರಂ
ಗಜಾನನಂ ವಿಘ್ನನಾಶಕರಂ ದೇವಂ ಹೇರಂಬ ಪ್ರಣಮಾಮ್ಯಹಂ
ಕರ್ತವ್ಯನಿಷ್ಠೆ, ಕ್ಷಮಾಗುಣದಾತ ಹೇರಂಭ ನಿಮ್ಮ ಜೀವನದಲ್ಲಿ ಸುಖ, ಶಾಂತಿ ಕರುಣಿಸಲಿ
ಗಣೇಶ ಚತುರ್ಥಿಯ ಶುಭಾಶಯಗಳು

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೇ
ಸರ್ವ ಗಣಗಳ ದೇವರು ವಿನಾಯಕ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಸಂತೋಷ, ನೆಮ್ಮದಿ ನೀಡಲಿ
ಗಣೇಶ ಹಬ್ಬದ ಶುಭಾಶಯಗಳು

ಗಜಾನನಂ ಭೂತ ಗಣಾಧಿ ಸೇವಿತಂ ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ ಪಾದ ಪಂಕಜಂ
ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ ಗಣಪತಿ ನಿಮ್ಮ ಬಾಳಲ್ಲಿ ಸದಾ ಏಳ್ಗೆಯ ರಕ್ಷೆ, ಆಶೀರ್ವಾದ ನೀಡಲಿ
ಗಣೇಶ ಚತುರ್ಥಿಯ ಶುಭಾಶಯಗಳು



Click it and Unblock the Notifications











