Latest Updates
-
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ
ಮನುಷ್ಯನಲ್ಲಿ ಇರುವಂತಹ ನಾಲ್ಕು ಗುಣಗಳಿಂದ ಆತ ಸ್ವರ್ಗದಿಂದ ಬಂದಿರುವವನು ಎಂದು ಹೇಳಬಹುದಂತೆ!
ಮನುಷ್ಯನ ಜೀವನವು ತುಂಬಾ ಅಮೂಲ್ಯವಾದದ್ದು, ಅದು ನಮ್ಮ ಕೊನೆಯ ಜನ್ಮ ಎಂದು ಹೇಳಲಾಗುತ್ತದೆ. ಇದರಿಂದ ಮನುಷ್ಯನಾಗಿ ಹುಟ್ಟಿದ ಮೇಲೆ ಒಳ್ಳೆಯ ಕೆಲಸಗಳನ್ನು ಮಾಡುತ್ತಲಿರಬೇಕು. ಇದರಿಂದ ಸ್ವರ್ಗ ಪ್ರಾಪ್ತಿಯಾಗುವುದು. ಪಾಪಗಳನ್ನು ಮಾಡಿದರೆ ಅದರಿಂದ ನರಕ ಸಿಗುವುದು ಎಂದು ಹೇಳಲಾಗುತ್ತದೆ. ಹೆಚ್ಚಿನ ಎಲ್ಲಾ ಧರ್ಮಗಳಲ್ಲೂ ಇದನ್ನೇ ಹೇಳುವರು. ಭೂಮಿ ಮೇಲೆ ಮಾಡಿರುವಂತಹ ಪಾಪ ಹಾಗೂ ಪುಣ್ಯ ಕರ್ಮಗಳಿಂದ ಮನುಷ್ಯನಿಗೆ ಸ್ವರ್ಗ ಅಥವಾ ನರಕವು ಸಿಗುವುದು ಎಂದು ಪುರಾಣಗಳು, ತತ್ವಜ್ಞಾನಿಗಳು ಹೇಳುವರು.
ಹಿಂದಿನ ಜನ್ಮದಲ್ಲಿ ನಾವು ಏನು ಆಗಿದ್ದೆವು ಮತ್ತು ಮುಂದೆ ಒಂದು ಜನ್ಮ ಸಿಕ್ಕಿದರೆ ನಾವು ಏನು ಆಗಲಿದ್ದೇವೆ ಎಂದು ತಿಳಿದು ಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಯು ಖಂಡಿತವಾಗಿಯೂ ಮೂಡುವುದು. ನಾವು ಇನ್ನೊಂದು ಜನ್ಮವನ್ನು ಸ್ವರ್ಗ ಅಥವಾ ನರಕದಲ್ಲಿ ಕಳೆಯಲಿದ್ದೇವೆಯಾ ಎನ್ನುವುದಕ್ಕೆ ಚಾಣಕ್ಯ ನೀತಿಯು ಉತ್ತರವನ್ನು ಹೇಳುತ್ತದೆ. ಮನುಷ್ಯನಲ್ಲಿ ಇರುವಂತಹ ನಾಲ್ಕು ಗುಣಗಳಿಂದ ಆತ ಸ್ವರ್ಗದಿಂದ ಬಂದಿರುವವನು ಎಂದು ಹೇಳಬಹುದು. ಈ ನಾಲ್ಕು ಗುಣಗಳನ್ನು ನಿಮ್ಮ ಮುಂದೆ ಇಡಲಾಗಿದೆ. ಈ ಶ್ಲೋಕವು ಅದನ್ನು ವಿವರಿಸುತ್ತದೆ...

ಶ್ಲೋಕ
ಸ್ವರ್ಗವಾಸಿ ಜನ್ ಕೆ ಸಾದಾ, ಚಾರ್
ಚಿನ್ಹಾ ಲೇಖಿ ಯಹಿ
ದೇವ ವಿಪ್ರ ಪೂಜಾ ಮಧುರ್, ವಕ ದಾನ
ಕರಿ ದೇಹಿ

ಸಮಾಜಕ್ಕಾಗಿ ದಾನ ಮಾಡುವಾತ
ಮುಗ್ದ ಹೃದಯವನ್ನು ಹೊಂದಿರುವಂತಹ ವ್ಯಕ್ತಿ ಇತರ ಜನರ ನೋವನ್ನು ತಿಳಿಯಬಲ್ಲ. ಇಂತಹ ವ್ಯಕ್ತಿಗಳು ಜನರು ತೊಂದರೆಗೀಡಾಗುವುದನ್ನು ನೋಡಲಾರರು. ಇಂತಹ ವ್ಯಕ್ತಿಗಳು ಬಡವರಿಗೆ, ದುರ್ಬಲರಿಗೆ ಮತ್ತು ಅಗತ್ಯವಿರುವವರಿಗೆ ನೆರವು ನೀಡುವರು. ಪ್ರತಿಯೊಬ್ಬರಿಗೂ ತಮ್ಮ ಲಾಭವನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲು ಆಗದು. ಅಗತ್ಯವಿರುವವರಿಗೆ ದಾನ ಮಾಡುವಂತಹ ಮಹತ್ವ ತಿಳಿದುಕೊಂಡಿರುವವರಿಗೆ ಮಾತ್ರ ಇದು ಸಾಧ್ಯವಿರುವುದು. ಇಂತಹವರು ಸ್ವರ್ಗದಿಂದ ಬಂದಿರುವವರು.

ತುಂಬಾ ವಿನಯಶೀಲ ಮತ್ತು ಸಹೃದಯಿ
ಕೆಲವು ಜನರು ತುಂಬಾ ಶಾಂತ ಹಾಗೂ ಸಂಯಮದಿಂದ ಇರುವರು. ಇವರಿಗೆ ಯಾವುದೇ ರೀತಿಯ ಏರಿಳಿತದಿಂದ ಪರಿಣಾಮವಾಗದು. ಕೃಷ್ಣ ದೇವರು ಕೂಡ ಹೀಗೆ ಹೇಳುತ್ತಾರೆ... ಯಾರೂ ಅತಿಯಾಗಿ ಸಂತೋಷದಿಂದ ಇರಬಾರದು ಮತ್ತು ಅತೀ ದುಃಖಿತರಾಗಬಾರದು ಎಂದು. ಮಾತನಾಡುವ ವಿಧಾನದಿಂದಾಗಿ ಅವರು ತುಂಬಾ ಶಾಂತವಾಗಿರುವರು ಎಂದು ತಿಳಿಯುವುದು. ಇವರು ತಮ್ಮ ನಡತೆಯಲ್ಲಿ ತುಂಬಾ ಮೃಧು ಹಾಗೂ ಮಧುರವಾಗಿರುವರು. ಈ ಜನರು ತಮ್ಮ ಹಿಂದಿನ ಜನ್ಮದಲ್ಲಿ ಸ್ವರ್ಗದಲ್ಲಿದ್ದರು ಎಂದು ಹೇಳಲಾಗುತ್ತದೆ.

ಆಧ್ಯಾತ್ಮದೆಡೆಗೆ ಹೆಚ್ಚು ವಾಲಿರುವಂತವರು
ಯಾವುದೇ ರೀತಿಯ ಪೂಜೆ ಮಾಡುವುದಿದ್ದರೂ ಆಗ ಮನೆ ದೇವರಿಗೆ ಪೂಜೆ ಮೊದಲು ಮಾಡಬೇಕು ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕವಾಗಿ ನಂಬಿಕೆ ಉಳ್ಳವರು ಮತ್ತು ಧಾರ್ಮಿಕ ಆಚರಣೆಗಳ ಮೇಲೆ ನಂಬಿಕೆ ಇರುವಂತಹ ವ್ಯಕ್ತಿಗಳು ಹಿಂದಿನ ಜನ್ಮದಲ್ಲಿ ಸ್ವರ್ಗದಲ್ಲಿ ಇದ್ದವರು ಎಂದು ಚಾಣಕ್ಯನ ನೀತಿ ಹೇಳುತ್ತದೆ.

ಹಸಿದವರಿಗೆ ಆಹಾರ ನೀಡುವವರು
ಭೂಮಿ ಮೇಲೆ ಪ್ರತಿಯೊಬ್ಬರು ಬದುಕಬೇಕು ಎನ್ನುವುದು ಮೊದಲ ತತ್ವವಾಗಿದೆ. ಆದರೆ ಪಕ್ಷಿಗಳು, ಪ್ರಾಣಿಗಳು ಅಥವಾ ಮನುಷ್ಯನಿಗೆ ಹಸಿದಿರುವಾಗ ಆಹಾರ ನೀಡುವುದು ತುಂಬಾ ಪುಣ್ಯದ ಕೆಲಸ ಎಂದು ಹೇಳಲಾಗುತ್ತದೆ. ಇದರಿಂದ ಅವರ ಆತ್ಮವು ಸ್ವರ್ಗದಲ್ಲಿ ನೆಲೆಸುವುದು ಮತ್ತು ಅವರು ಸ್ವರ್ಗದಿಂದ ಬಂದವರು ಎಂದು ಹೇಳಬಹುದು. ಸ್ವಾರ್ಥಿಗಳು ಮಾತ್ರ ತಮ್ಮ ಹೊಟ್ಟೆಯನ್ನು ಮಾತ್ರ ತುಂಬಿಸುವಲ್ಲಿ ತಲ್ಲೀನರಾಗಿರುವರು. ಬೇರೆಯವರ ಹಸಿವು ತಿಳಿದವರು ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಎಂದು ಚಾಣಕ್ಯ ನೀತಿಯು ಹೇಳುತ್ತದೆ. ಇಂತಹ ಜನರು ಸ್ವರ್ಗದಿಂದ ಬಂದವರು ಎಂದು ಹೇಳಲಾಗುತ್ತದೆ.



Click it and Unblock the Notifications