ಎಲ್ಲಾ ಮಾನವ ಗುಣಗಳನ್ನು ರಕ್ಷಿಸುವ ಸೈನಿಕರು

Kannada Zen story
ಝೆನ್ ಗುರು ಗಸನ್ ತನ್ನು ಅನುಯಾಯಿಗಳೊಂದಿಗೆ ದೇವಸ್ಥಾನದಲ್ಲಿ ವಾಸವಾಗಿದ್ದರು. ಒಮ್ಮೆ ಜಪಾನಿನ ಯೋಧರು ಗಸನ್‌ನ ದೇವಸ್ಥಾನವನ್ನು ಕೇಂದ್ರ ಕಚೇರಿಯನ್ನಾಗಿಸಲು ಆ ದೇವಸ್ಥಾನದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡರು. ನಂತರ ಯೋಧರು ಆ ದೇವಸ್ಥಾನದಲ್ಲಿ ಬಿಡಾರ ಹೂಡಿದರು.

ಅಡುಗೆಯವನು ಆಹಾರ ಮಾಡಲು ಸಿದ್ಧ ಮಾಡುತ್ತಿರುವಾಗ ಗಸನ್‌ ತನ್ನ ಅಡುಗೆಯವನಿಗೆ "ಅಧಿಕಾರಿಗಳೂ ಕೂಡಾ ನಾವು ಸೇವಿಸುವ ಸಾಧಾರಣ ಆಹಾರವನ್ನೇ ನೀಡಿ." ಎಂದು ಆದೇಶಿಸಿದ.

ಗಸನ್‌ ಅಡುಗೆಯವನಿಗೆ ಆ ರೀತಿ ಆದೇಶ ಮಾಡಿದ್ದನ್ನು ಕೇಳಿ ಯೋಧರು ಸಿಟ್ಟಾದರು. ಅದರಲ್ಲಿಒ ಒಬ್ಬ ಯೋಧ "ನಾವು ಯಾರು ಅಂತ ನೀವು ತಿಳಿದಿದ್ದೀರಿ? ನಾವು ಯೋಧರು. ದೇಶದ ಹಿತಕ್ಕಾಗಿ ನಾವು ನಮ್ಮ ಜೀವವನ್ನು ಪಣಕ್ಕಿಟ್ಟಿದ್ದೇವೆ. ನಮ್ಮನ್ನು ಇನ್ನೂ ಉತ್ತಮವಾಗಿ ನೋಡಿಕೊಳ್ಳಬಾರದೇ?" ಎಂದು ಕೇಳಿದನು.

ಅದನ್ನು ಕೇಳಿದ ಗಸನ್‌ ತಕ್ಷಣವೇ ಕಠಿಣವಾಗಿ "ನಾವು ಯಾರು ಎಂದು ತಿಳಿದಿದ್ದೀರಿ? ನಾವು ಕೂಡಾ ಯೋಧರು. ಎಲ್ಲಾ ಮಾನವ ಗುಣಗಳನ್ನು ರಕ್ಷಿಸುವ ಸಲುವಾಗಿ ಇರುವ ಯೋಧರು ನಾವು." ಎಂದು ಹೇಳಿದನು.

ಆಗ ಯೋಧರಿಗೆ ತಮ್ಮ ತಪ್ಪಿನ ಅರಿವಾಗಿ ಗಸನ್ ಬಳಿ ಕ್ಷಮೆ ಯಾಚಿಸಿದರು.

English summary

Kannada Zen story | Inspirational short stories | ಝೆನ್ ಕಥೆ : ನಾವು ಮಾನವೀಯತೆ ಕಾಪಾಡುವ ಸೈನಿಕರು

Once some Japanese soldiers who were engaged in a sham attack wanted to make Gasan's temple their headquarters.
X
Desktop Bottom Promotion