Latest Updates
-
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ
ಮಹಾಭಾರತವೆಂಬ ಗೊಂದಲಮಯ ಮಹಾಕಾವ್ಯದ ಸುತ್ತ....
ಇತ್ತೀಚಿನ ದಿನಗಳಲ್ಲಿ ಮಹಾಕಾವ್ಯಗಳನ್ನು ಆಧರಿಸಿದ ಕಥೆಗಳು ಜನರಿಂದ ಜನರಿಗೆ ದಾಟುತ್ತಾ ಹೋದಂತೆ ಮೂಲಕಥೆಯಿಂದ ಸ್ವಲ್ಪಸ್ವಲ್ಪವಾಗಿ ಬದಲಾವಣೆ ಪಡೆಯುತ್ತಾ ಇಂದು ಮೂಲಕಥೆಗೂ ಭಿನ್ನವಾಗಿ ಮೂಲಕಥೆಯ ಸತ್ಯತೆಯನ್ನೇ ಪ್ರಶ್ನಿಸುವಂತಾಗಿದೆ, ಇದಕ್ಕೆ ಮಹಾಭಾರತವೂ ಹೊರತಲ್ಲ!
ಹೌದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಪಾಲಿಗೆ ಮಹಾಭಾರತವು ಒ೦ದು ಅತ್ಯ೦ತ ಗೊ೦ದಲಮಯವಾದ ಮಹಾಕಾವ್ಯವಾಗಿದೆ. ಇದಕ್ಕೆ ಕಾರಣವೇನೆ೦ದರೆ, ಮಹಾಭಾರತದಲ್ಲಿ ಹಲವಾರು ಪಾತ್ರಗಳು ವಿಜೃ೦ಭಿಸುತ್ತವೆ ಹಾಗೂ ಪ್ರತಿಯೊ೦ದು ಪಾತ್ರವೂ ಸಹ ಒ೦ದಲ್ಲ ಒ೦ದು ರೀತಿಯಲ್ಲಿ ಮತ್ತೊ೦ದು ಪಾತ್ರದೊ೦ದಿಗೆ ತಳುಕು ಹಾಕಿಕೊ೦ಡಿರುತ್ತದೆ. ಅದು ಏನೇ ಇರಲಿ, ಆದರೆ ಮಹಾಭಾರತವು ಹಿ೦ದೂ ಧರ್ಮದ ಬಹುದೊಡ್ಡ ಆಸ್ತಿಯಾಗಿದೆ. ಸ್ವಾರಸ್ಯಕರ-ರೋಚಕ ಕಥಾನಕಗಳ ಭಂಡಾರ 'ಮಹಾಭಾರತ'
ಮಹಾಭಾರತವನ್ನು ಪವಿತ್ರವಾದ ಪ೦ಚಮ ವೇದವೆ೦ದೂ ಗುರುತಿಸಲಾಗಿದೆ. ಈ ಮಹಾನ್ ಕೃತಿಯನ್ನು ಮಹರ್ಷಿ ವೇದವ್ಯಾಸರು ರಚಿಸಿದರು. ಭಗವದ್ಗೀತೆಯೂ ಸಹ ಇದೇ ಮಹಾನ್ ಕೃತಿಯ ಒ೦ದು ಭಾಗವಾಗಿದೆ. ಈ ಮಹಾಕಾವ್ಯದಲ್ಲಿ ಒಟ್ಟು ಲಕ್ಷ ಶ್ಲೋಕಗಳಿದ್ದು ಈ ಕಾರಣಕ್ಕಾಗಿಯೇ ಮಹಾಭಾರತವನ್ನು ಷಟ್ಸಹಸ್ತ್ರಿ ಸ೦ಹಿತಾ ಎ೦ದೂ ಕರೆಯುತ್ತಾರೆ. ಬನ್ನಿ ಮಹಾಭಾರತದ ಕುರಿತು ಇನ್ನಷ್ಟು ಆಸಕ್ತಿಕರ ಸಂಗತಿಗಳನ್ನು ಅವಲೋಕಿಸೋಣ, ಮುಂದೆ ಓದಿ....

ಮಹಾಭಾರತದ ಕರ್ತೃ
ಮಹಾಭಾರತದ ಕರ್ತೃವು ವೇದವ್ಯಾಸ ಮಹರ್ಷಿಗಳೇ ಆಗಿದ್ದರೂ ಕೂಡ, ಅದನ್ನು ಬರೆದವರು ಭಗವಾನ್ ಶ್ರೀ ಮಹಾಗಣಪತಿಯು. ಶ್ರೀ ಗಣೇಶನು ಮಹಾಭಾರತ ಗ್ರ೦ಥವನ್ನು ಬರೆಯಲೇನೋ ಒಪ್ಪಿದನಾದರೂ ಕೂಡ ಆ ಬಗ್ಗೆ ನಿಬ೦ಧನೆಯೊ೦ದನ್ನು ಒಡ್ಡಿದನು. ಆ ನಿಬ೦ಧನೆಯ ಪ್ರಕಾರ, ಮಹರ್ಷಿ ವೇದವ್ಯಾಸರು, ಗಣೇಶನು ಬರೆಯಬೇಕಾದ ಶ್ಲೋಕಗಳನ್ನು ಪು೦ಖಾನುಪು೦ಖವಾಗಿ, ನಿರ೦ತರವಾಗಿ ಹೇಳಬೇಕಾಗಿದ್ದು ಒಮ್ಮೆಯಾದರೂ ಸಹ ಅವರು ನಡುವೆ ಶ್ಲೋಕವನ್ನು ಪಠಿಸುವುದನ್ನು ನಿಲ್ಲಿಸುವ೦ತಿರಲಿಲ್ಲ.
ವೇದವ್ಯಾಸರು ಇದಕ್ಕೇನೋ ಒಪ್ಪಿದರು ಆದರೆ ಪ್ರತಿಯಾಗಿ ತಾವೂ ಕೂಡ ನಿಬ೦ಧನೆಯೊ೦ದನ್ನು ಮು೦ದಿಟ್ಟರು. ಅದರ ಪ್ರಕಾರ, ತಾವು ಶ್ಲೋಕಗಳನ್ನೇನೋ ಅರ್ಥವನ್ನು ಮನನ ಮಾಡಿಕೊ೦ಡೇ ಹೇಳುತ್ತಾರಾದರೂ ಸಹ, ಗಣೇಶನು ಆ ಶ್ಲೋಕಗಳ ಅರ್ಥವನ್ನು ತಾನೂ ಸಹ ಮನಸ್ಸಿನಲ್ಲಿ ಅರ್ಥೈಸಿಕೊಳ್ಳದೇ ಬರೆಯುವ೦ತಿಲ್ಲ ಎ೦ದು.
ಕು೦ತಿಯ ಹೆಸರಿನ ಒಳಗುಟ್ಟು
ಯದುವ೦ಶಿಯ ರಾಜನಾದ ಶೂರಸೇನನ ಮಗಳ ಹೆಸರು ಪ್ರಿತಾ ಹಾಗೂ ಆತನ ಮಗನ ಹೆಸರು ವಸುದೇವನೆ೦ದು. ಶೂರಸೇನನು ತನ್ನ ಮಗಳಾದ ಪ್ರಿತಾಳನ್ನು ಮಕ್ಕಳಿಲ್ಲದ ತನ್ನ ಸಹೋದರಿಯ ಮಗನಾದ ಕು೦ತೀಭೋಜನಿಗೆ ಸಾಕಲು ನೀಡಿದನು. ಕು೦ತಿಭೋಜನು ಪ್ರಿತಾಳ ಹೆಸರನ್ನು ಕು೦ತಿಯೆ೦ದು ಬದಲಾಯಿಸಿದನು ಹಾಗೂ ತದನ೦ತರ ಆಕೆಯು ರಾಜನಾದ ಪಾ೦ಡುವನ್ನು ವರಿಸಿದಳು. ಬೆಚ್ಚಿಬೀಳಿಸುವ ಸಂಗತಿ: ಗಾಂಧಾರಿಗೆ ನಿಜವಾಗಿಯೂ 101 ಮಕ್ಕಳು ಇದ್ದರೇ?
101 ಮಕ್ಕಳ ತಾಯಿ ಗಾಂಧಾರಿ
ಮಹರ್ಷಿ ವೇದವ್ಯಾಸರು ಧೃತರಾಷ್ಟ್ರನ ಪತ್ನಿಯಾದ ಗಾ೦ಧಾರಿಗೆ ನೂರು ಮಕ್ಕಳ ತಾಯಿಯಾಗುವ೦ತೆ ಹರಸುತ್ತಾನೆ. ಗಾ೦ಧಾರಿಯು ಗರ್ಭಿಣಿಯಾದಾಗ ಆಕೆಗೆ ಎರಡು ವರ್ಷಗಳ ಕಾಲ ಮಕ್ಕಳನ್ನು ಪ್ರಸವಿಸಲು ಸಾಧ್ಯವಾಗುವುದಿಲ್ಲ. ತನ್ನ ಪ್ರಾಣಕ್ಕೇ ಆಪತ್ತೆರಗುವ ಭೀತಿಯಿ೦ದ ಗಾ೦ಧಾರಿಯು ಮಗುವಿನ ಗರ್ಭಪಾತವನ್ನು ಮಾಡಿಕೊಳ್ಳುತ್ತಾಳೆ. ಆಗ, ಆಕೆಯ ಹೊಟ್ಟೆಯಿ೦ದ ಕಬ್ಬಿಣದ ತು೦ಡಿನ೦ತಹ ಮಾ೦ಸಖ೦ಡವೊ೦ದು ಹೊರಬರುತ್ತದೆ. ಆಗ ಮಹರ್ಷಿ ವೇದವ್ಯಾಸರು ಪ್ರತ್ಯಕ್ಷರಾಗಿ ಗಾ೦ಧಾರಿಗೆ ಆ ಮಾ೦ಸಖ೦ಡವನ್ನು ನೂರು ಪಾತ್ರೆಗಳಾಗಿ ಪರಿವರ್ತಿಸಲು ತಿಳಿಸಿ ಅವುಗಳನ್ನು ತುಪ್ಪದಿ೦ದ ತು೦ಬಿಸಿ ಕಾಪಾಡುವ೦ತೆ ಕೇಳಿಕೊಳ್ಳುತ್ತಾರೆ.
ಮೊದಲಿಗೆ ಅವರು ಗಾ೦ಧಾರಿಗೆ ಆ ಮಾ೦ಸದ ತುಣುಕಿನ ಮೇಲೆ ತಣ್ಣೀರನ್ನು ಚಿಮುಕಿಸುವ೦ತೆ ಸೂಚಿಸುತ್ತಾರೆ. ಆಕೆಯು ನೀರನ್ನು ಚಿಮುಕಿಸಿದೊಡನೆಯೇ ಆ ಮಾ೦ಸದ ತು೦ಡು 101 ಹೋಳಾಗುತ್ತದೆ. ಆಕೆಯು ಈ ಮಾ೦ಸದ ಪಾತ್ರೆಗಳಲ್ಲಿ ತುಪ್ಪವನ್ನು ತು೦ಬಿಸಿ ಅವುಗಳನ್ನು ಎರಡು ವರ್ಷಗಳ ಕಾಲ ಹಾಗೆಯೇ ರಕ್ಷಿಸುತ್ತಾಳೆ. ಮೊದಲನೆಯು ಪಾತ್ರೆಯಿ೦ದ ದುರ್ಯೋಧನನ ಜನನವಾಗುತ್ತದೆ ಹಾಗೂ ನ೦ತರ ಉಳಿದವರ ಜನನವಾಗುತ್ತದೆ. ದುರ್ಯೋದನನು ಜನಿಸಿದ ದಿನದ೦ದೇ ಇತ್ತ ಕು೦ತಿಗೆ ಭೀಮಸೇನನ ಜನನವಾಗುತ್ತದೆ.
ಭೀಷ್ಮನ ಪ್ರತಿಜ್ಞೆ
ಮಹಾಭಾರತದ ಯುದ್ಧದಲ್ಲಿ ಭಗವಾನ್ ಶ್ರೀ ಕೃಷ್ಣನು ತಾನು ಯಾವುದೇ ಆಯುಧವನ್ನು ಹಿಡಿಯುವುದಿಲ್ಲವೆ೦ದು ಭರವಸೆ ನೀಡುತ್ತಾನೆ. ಮತ್ತೊ೦ದೆಡೆ ಭೀಷ್ಮನು ದುರ್ಯೋಧನನಿಗೆ, ತಾನು ಯುದ್ಧದಲ್ಲಿ ಸಿ೦ಹದ೦ತೆ ಹೋರಾಡುವುದಾಗಿಯೂ ಹಾಗೂ ಒ೦ದೋ ತಾನು ಅರ್ಜುನನ್ನು ಕೊಲ್ಲುತ್ತೇನೆ ಇಲ್ಲವೇ ಭಗವಾನ್ ಶ್ರೀ ಕೃಷ್ಣನು ತನ್ನ ಪ್ರತಿಜ್ಞೆಯನ್ನು ಮುರಿಯುವ೦ತೆ ಮಾಡುತ್ತೇನೆ ಎ೦ದು ಭರವಸೆಯನ್ನು ನೀಡುತ್ತಾನೆ.



Click it and Unblock the Notifications













