Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಧರ್ನುಮಾಸದ ಪೂಜೆಗೆ ತುಂಬಾ ವಿಶೇಷ ದಿನಗಳಿವು
ವಿಷ್ಣು ಭಕ್ತರಿಗೆ ಧರ್ನುಮಾಸ ತುಂಬಾ ವಿಶೇಷವಾದ ತಿಂಗಳಾಗಿದೆ. ಧ್ಯಾನ ಮಾಡಲು ಅಥವಾ ಸಾಧನೆ ಈ ತಿಂಗಳು ತುಂಬಾ ಶುಭವಾಗಿದೆ. ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಧರ್ನುಮಾಸ ಪ್ರಾರಂಭವಾಗುವುದು. ಇದು ಪ್ರತೀವರ್ಷ ಡಿಸೆಂಬರ್ ಮಧ್ಯದಲ್ಲಿ ಪ್ರಾರಂಭವಾಗಿ ಸಂಕ್ರಾಂತಿಗೆ ಮುಕ್ತಾಯವಾಗುತ್ತದೆ.
ಈ ತಿಂಗಳಿನಲ್ಲಿ ವಿಷ್ಣು ಭಕ್ತರು ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುವುದು. ಧಾರ್ಮಿಕ ನಂಬಿಕೆಯ ಪ್ರಕಾರ ಶ್ರೀ ವಿಷ್ಣು ಧರ್ಮನುಮಾಸದಲ್ಲಿ ಎದ್ದೇಳುತ್ತಾನೆ ಎಂದು ಹೇಳಲಾಗುವುದು. ಆದ್ದರಿಂದ ಶ್ರೀ ಮಹಾ ವಿಷ್ಣುವಿಗೆ ಬ್ರಹ್ಮ ಮುಹೂರ್ತದಲ್ಲಿ ಅಂದರೆ ಸೂರ್ಯ ಉದಯಿಸುವ ಒಂದು ಗಂಟೆಯ ಮೊದಲು ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಶ್ರೀ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಲಾಗುವುದು.
ಧರ್ನುಮಾಸದಲ್ಲಿ ಶ್ರೀ ವಿಷ್ಣುವಿನ ಪೂಜಿಸಿದರೆ ಅಶ್ವಮೇಧ ಯಾಗ ಮಾಡಿದಷ್ಟು ಫಲ ಸಿಗುವುದು. ಧರ್ನುಮಾಸದಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಕಾತ್ಯಾಯನಿ ವ್ರತವನ್ನು ಆಚರಿಸಲಾಗುವುದು. ಧರ್ನುಮಾಸದಲ್ಲಿ ವೈಕುಂಠ ಏಕಾದಶಿ, ವೈಕುಂಠ ದ್ವಾದಶಿ ಹಬ್ಬವನ್ನು ಆಚರಣೆ ಮಾಡಲಾಗುವುದು.

ಧರ್ನುಮಾಸ 2021-22ರಲ್ಲಿ ಈ ದಿನಗಳು ತುಂಬಾನೇ ವಿಶೇಷವಾಗಿದೆ:
ಧನು ಸಂಕ್ರಾಂತಿ: ಡಿಸೆಂಬರ್ 16, 2021
ದತ್ತಾತ್ರೇಯ ಜಯಂತಿ: ಡಿಸೆಂಬರ್ 18
ಮಾರ್ಗಶೀರ್ಷ ಪೂರ್ಣಿಮೆ: ಡಿಸೆಂಬರ್ 19
ಸಫಲ ಏಕಾದಶಿ: ಡಿಸೆಂಬರ್ 30
ಪೌಷ ಪುತ್ರದ ಏಕಾದಶಿ: ಜನವರಿ 13
ಮಕರ ಸಂಕ್ರಾಂತಿ: ಜನವರಿ 14

ಧರ್ನುಮಾಸದಲ್ಲಿ ವಿಷ್ಣು ಸಹಸ್ರನಾಮ ಪಠಿಸಿ
ಧರ್ನುಮಾಸದಲ್ಲಿ ವಿಷ್ಣು ಸಹಸ್ರನಾಮ ಪಠಿಸಿದರೆ ತುಂಬಾನೇ ಒಳ್ಳೆಯದು. ಬೆಳಗ್ಗೆ ಎದ್ದು ವಿಷ್ಣುವಿಗೆ ಪೂಜೆ ಮಾಡಿ, ವಿಷ್ಣು ಸಹಸ್ರನಾಮ ಪಠಿಸಿ. ವೈಕುಂಠ ಏಕಾಶಿ, ದ್ವಾದಶಿಯಂದು ಉಪವಾಸವಿದ್ದು ವಿಷ್ಣುವಿಗೆ ಪೂಜೆ ಮಾಡಿದರೆ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು, ನಿಮ್ಮ ಇಷ್ಟಾರ್ಥಗಳು ನೆರವೇರುವುದು.

ಹುಗ್ಗಿಯನ್ನು ನೈವೇದ್ಯವಾಗಿ ಅರ್ಪಿಸಿ
ಶ್ರೀ ವಿಷ್ಣುವಿಗೆ ಪೂಜೆ ಮಾಡುವಾಗ ಹುಗ್ಗಿಯನ್ನು ತಯಾರಿ ಮಾಡಿ ನೈವೇದ್ಯ ಮಾಡಿ ಇಡಲಾಗುವುದು. ಇದನ್ನು ಮುದ್ಗಾನ್ನ ಎಂದು ಕರೆಯಲಾಗುವುದು. ಹುಗ್ಗಿ ಅಕ್ಕಿಯ ಎರಡರಷ್ಟು ಪ್ರಮಾಣದ ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ , ಪತ್ರೆ, ಡಾಲ್ಷಿನ್ನಿ, ಜಾಯಿಕಾಯಿ, ಕೊಬ್ಬರಿ, ಲವಂಗ, ತುಪ್ಪ, ಉಪ್ಪು ಹಾಕಿ ಇದನ್ನು ತಯಾರಿಸಲಾಗುವುದು.
ಧರ್ನುಮಾಸದಲ್ಲಿ ಹುಗ್ಗಿ ಅನ್ನ ಸೇವನೆ ವೈಜ್ಞಾನಿಕ ದೃಷ್ಟಿಯಿಂದಲೂ ಒಳ್ಳೆಯದು. ಧರ್ನುಮಾಸದಲ್ಲಿ ಚಳಿ ಹೆಚ್ಚು, ಈ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನಂಶ ಕಡಿಮೆಯಾಗುವುದರಿಂದ ಈ ಹುಗ್ಗಿ ಅನ್ನ ಸೇವಿಸಿದರೆ ಶಾರೀರಿಕ ಸಮತೋಲನ ಕಾಪಾಡಿಕೊಳ್ಳಬಹುದು.



Click it and Unblock the Notifications