Latest Updates
-
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ!
ಧರ್ನುಮಾಸದ ಪೂಜೆಗೆ ತುಂಬಾ ವಿಶೇಷ ದಿನಗಳಿವು
ವಿಷ್ಣು ಭಕ್ತರಿಗೆ ಧರ್ನುಮಾಸ ತುಂಬಾ ವಿಶೇಷವಾದ ತಿಂಗಳಾಗಿದೆ. ಧ್ಯಾನ ಮಾಡಲು ಅಥವಾ ಸಾಧನೆ ಈ ತಿಂಗಳು ತುಂಬಾ ಶುಭವಾಗಿದೆ. ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಧರ್ನುಮಾಸ ಪ್ರಾರಂಭವಾಗುವುದು. ಇದು ಪ್ರತೀವರ್ಷ ಡಿಸೆಂಬರ್ ಮಧ್ಯದಲ್ಲಿ ಪ್ರಾರಂಭವಾಗಿ ಸಂಕ್ರಾಂತಿಗೆ ಮುಕ್ತಾಯವಾಗುತ್ತದೆ.
ಈ ತಿಂಗಳಿನಲ್ಲಿ ವಿಷ್ಣು ಭಕ್ತರು ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುವುದು. ಧಾರ್ಮಿಕ ನಂಬಿಕೆಯ ಪ್ರಕಾರ ಶ್ರೀ ವಿಷ್ಣು ಧರ್ಮನುಮಾಸದಲ್ಲಿ ಎದ್ದೇಳುತ್ತಾನೆ ಎಂದು ಹೇಳಲಾಗುವುದು. ಆದ್ದರಿಂದ ಶ್ರೀ ಮಹಾ ವಿಷ್ಣುವಿಗೆ ಬ್ರಹ್ಮ ಮುಹೂರ್ತದಲ್ಲಿ ಅಂದರೆ ಸೂರ್ಯ ಉದಯಿಸುವ ಒಂದು ಗಂಟೆಯ ಮೊದಲು ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಶ್ರೀ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಲಾಗುವುದು.
ಧರ್ನುಮಾಸದಲ್ಲಿ ಶ್ರೀ ವಿಷ್ಣುವಿನ ಪೂಜಿಸಿದರೆ ಅಶ್ವಮೇಧ ಯಾಗ ಮಾಡಿದಷ್ಟು ಫಲ ಸಿಗುವುದು. ಧರ್ನುಮಾಸದಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಕಾತ್ಯಾಯನಿ ವ್ರತವನ್ನು ಆಚರಿಸಲಾಗುವುದು. ಧರ್ನುಮಾಸದಲ್ಲಿ ವೈಕುಂಠ ಏಕಾದಶಿ, ವೈಕುಂಠ ದ್ವಾದಶಿ ಹಬ್ಬವನ್ನು ಆಚರಣೆ ಮಾಡಲಾಗುವುದು.

ಧರ್ನುಮಾಸ 2021-22ರಲ್ಲಿ ಈ ದಿನಗಳು ತುಂಬಾನೇ ವಿಶೇಷವಾಗಿದೆ:
ಧನು ಸಂಕ್ರಾಂತಿ: ಡಿಸೆಂಬರ್ 16, 2021
ದತ್ತಾತ್ರೇಯ ಜಯಂತಿ: ಡಿಸೆಂಬರ್ 18
ಮಾರ್ಗಶೀರ್ಷ ಪೂರ್ಣಿಮೆ: ಡಿಸೆಂಬರ್ 19
ಸಫಲ ಏಕಾದಶಿ: ಡಿಸೆಂಬರ್ 30
ಪೌಷ ಪುತ್ರದ ಏಕಾದಶಿ: ಜನವರಿ 13
ಮಕರ ಸಂಕ್ರಾಂತಿ: ಜನವರಿ 14

ಧರ್ನುಮಾಸದಲ್ಲಿ ವಿಷ್ಣು ಸಹಸ್ರನಾಮ ಪಠಿಸಿ
ಧರ್ನುಮಾಸದಲ್ಲಿ ವಿಷ್ಣು ಸಹಸ್ರನಾಮ ಪಠಿಸಿದರೆ ತುಂಬಾನೇ ಒಳ್ಳೆಯದು. ಬೆಳಗ್ಗೆ ಎದ್ದು ವಿಷ್ಣುವಿಗೆ ಪೂಜೆ ಮಾಡಿ, ವಿಷ್ಣು ಸಹಸ್ರನಾಮ ಪಠಿಸಿ. ವೈಕುಂಠ ಏಕಾಶಿ, ದ್ವಾದಶಿಯಂದು ಉಪವಾಸವಿದ್ದು ವಿಷ್ಣುವಿಗೆ ಪೂಜೆ ಮಾಡಿದರೆ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು, ನಿಮ್ಮ ಇಷ್ಟಾರ್ಥಗಳು ನೆರವೇರುವುದು.

ಹುಗ್ಗಿಯನ್ನು ನೈವೇದ್ಯವಾಗಿ ಅರ್ಪಿಸಿ
ಶ್ರೀ ವಿಷ್ಣುವಿಗೆ ಪೂಜೆ ಮಾಡುವಾಗ ಹುಗ್ಗಿಯನ್ನು ತಯಾರಿ ಮಾಡಿ ನೈವೇದ್ಯ ಮಾಡಿ ಇಡಲಾಗುವುದು. ಇದನ್ನು ಮುದ್ಗಾನ್ನ ಎಂದು ಕರೆಯಲಾಗುವುದು. ಹುಗ್ಗಿ ಅಕ್ಕಿಯ ಎರಡರಷ್ಟು ಪ್ರಮಾಣದ ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ , ಪತ್ರೆ, ಡಾಲ್ಷಿನ್ನಿ, ಜಾಯಿಕಾಯಿ, ಕೊಬ್ಬರಿ, ಲವಂಗ, ತುಪ್ಪ, ಉಪ್ಪು ಹಾಕಿ ಇದನ್ನು ತಯಾರಿಸಲಾಗುವುದು.
ಧರ್ನುಮಾಸದಲ್ಲಿ ಹುಗ್ಗಿ ಅನ್ನ ಸೇವನೆ ವೈಜ್ಞಾನಿಕ ದೃಷ್ಟಿಯಿಂದಲೂ ಒಳ್ಳೆಯದು. ಧರ್ನುಮಾಸದಲ್ಲಿ ಚಳಿ ಹೆಚ್ಚು, ಈ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನಂಶ ಕಡಿಮೆಯಾಗುವುದರಿಂದ ಈ ಹುಗ್ಗಿ ಅನ್ನ ಸೇವಿಸಿದರೆ ಶಾರೀರಿಕ ಸಮತೋಲನ ಕಾಪಾಡಿಕೊಳ್ಳಬಹುದು.



Click it and Unblock the Notifications