Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಈ ಮೂಢನಂಬಿಕೆಗಳನ್ನು ನಂಬಬಹುದಾ?
ನಮ್ಮ ಸಮಾಜದಲ್ಲಿ ಅನೇಕ ನಂಬಿಕೆಗಳಿವೆ. ಅವುಗಳಲ್ಲಿ ಕೆಲವು ನಂಬಿಕೆಗಳು ಅರ್ಥವಿಲ್ಲದ ನಂಬಿಕೆಗಳಾಗಿವೆ. ಅಂತಹ ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ಕೆಲವರು ಹೇಳಿದರೆ ಹೇಳಿದರೆ ಮತ್ತೆ ಕೆಲವರು ಅಂತಹ ಅರ್ಥವಿಲ್ಲದ ನಂಬಿಕೆಗಳನ್ನು ಬಿಡಲು ಸಿದ್ಧವಿರುವುದಿಲ್ಲ.
ಕೆಲವೊಮ್ಮೆ ನಡೆಯುವ ಘಟನೆಗಳು ಅಂತಹ ಮೂಢಂಬಿಕೆಗೆ ಮತ್ತಷ್ಟು ಪುಷ್ಠಿ ನೀಡುತ್ತದೆ. ಉದಾಹರಣೆಗೆ ರಸ್ತೆ ದಾಡುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ನಂಬಿಕೆ ಹೆಚ್ಚಿನವರಲ್ಲಿದೆ. ಈ ಮೂಢ ನಂಬಿಕೆ ನಂಬಿದವರಿಗೆ ಅಯ್ಯೋ ಏನಾಗಬಹುದೋ ಎಂಬ ಭಯವಿರುತ್ತದೆ. ಸ್ವಲ್ಪ ಮುಂದೆ ನಡೆಯುವಾಗ ಗಾಡಿ ಕೈ ಕೊಡುವುದಾ ಅಥವಾ ನಡೆಯುವಾಗ ಸ್ವಲ್ಪ ಎಡವಿದರೆ ಅದನ್ನು ಆಕಸ್ಮಿಕವೆಂದು ತಿಳಿದುಕೊಳ್ಳದೆ ಆ ಮೂಢನಂಬಿಕೆಯನ್ನು ಬಲವಾಗಿ ನಂಬಿ ಬಿಡುತ್ತಾರೆ.

ಅದರಲ್ಲೂ ಈ ಕೆಳಗಿನ ಮೂಢನಂಬಿಕೆಗಳು ಹೆಚ್ಚಾಗಿ ಕಂಡು ಬರುತ್ತಿವೆ:
* ಮೇಲೆ ಹೇಳಿದಂತೆ ಎಲ್ಲಿಗಾದರೂ ಹೋಗುವಾಗ ಬೆಕ್ಕು ಅಡ್ಡ ಓಡುವುದು ಸರಿಯಲ್ಲ.
* ಮೂರು ಜನರು ಸೇರಿ ಶುಭ ಕಾರ್ಯಗಳಿಗೆ ಹೋಗಬಾರದು. ಈ ರೀತಿ ಮೂರು ಜನರು ಇದ್ದರೆ ಚಿಕ್ಕ ಮಗುವನ್ನು ಆದರೂ ಜೊತೆಗೆ ಕರೆದುಕೊಂಡು ಹೋಗುತ್ತಾರೆ.
* 13ನೇ ತಾರೀಕು ಶುಕ್ರವಾರದಂದು ಬಂದರೆ ಆ ದಿನದಂದು ಏನಾದರೂ ಅಪಶಕುನವಾಗುತ್ತದೆ ಎಂದು ಜನರು ಭಯಪಡುತ್ತಾರೆ.
* ದಾರಿಯಲ್ಲಿ ನೋಟ್ ಅಥವಾ ಚಿಲ್ಲರೆ ಬಿದ್ದಿರುವುದು ಕಂಡರೆ ಅದನ್ನು ಎತ್ತಿಕೊಳ್ಳಬೇಕು, ಇದರಿಂದ ನಿಮಗೆ ಅದೃಷ್ಟ ಲಕ್ಷ್ಮಿ ಒಲಿದು ಬರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.
* ಯಾವುದಾದರೂ ಒಂದು ಕಣ್ರೆಪ್ಪೆ ಉದುರಿ ಮುಖದ ಮೇಲೆ ಬಿದ್ದಿದ್ದರೆ ಕೆಲವರು ಅದನ್ನು ಜೋಪಾನವಾಗಿ ತೆಗೆದು ಕೈಯಲ್ಲಿ ಹಿಡಿದುಕೊಂಡು ನಂತರ ನಮಗೆ ಒಳ್ಳೆಯದಾಗಲಿ ಎಂದು ಬಯಸಿ ಊದುತ್ತಾರೆ. ಅದು ಹಾರಿದರೆ ಒಳ್ಳೆಯದಾಗುತ್ತದೆ ಎಂದು ಅರ್ಥ. ಊದಿದರೆ ಅಷ್ಟು ಚಿಕ್ಕ ರೆಪ್ಪೆ ಹಾರದೆ ಇರುತ್ತದೆಯೇ?
* ಕಣ್ರೆಪ್ಪೆ ಬಡೆಯುತ್ತಿದ್ದರೆ ಏನೋ ಅನಾಹುತ ಉಂಟಾಗಬಹುದೆಂಬ ಮೂಢ ನಂಬಿಕೆ ಜನರಲ್ಲಿದೆ. ಅದರಲ್ಲಿ ಬಲ ರೆಪ್ಪೆ ಬಡೆದರೆ ಹೆಣ್ಣು ಮಕ್ಕಳಿಗೆ ಒಳ್ಳೆಯದಲ್ಲ, ಎಡ ಕಣ್ಣಿನ ರೆಪ್ಪೆ ಬರೆದರೆ ಹೆಣ್ಣು ಮಕ್ಕಳಿಗೆ ಒಳ್ಳೆಯದು. ಈ ರೀತಿಯ ಅನೇಕ ಅರ್ಥವಿಲ್ಲದ ನಂಬಿಕೆಗಳು ನಮ್ಮ ಸಮಾಜದಲ್ಲಿವೆ.



Click it and Unblock the Notifications
