Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಈ ಮೂಢನಂಬಿಕೆಗಳನ್ನು ನಂಬಬಹುದಾ?
ನಮ್ಮ ಸಮಾಜದಲ್ಲಿ ಅನೇಕ ನಂಬಿಕೆಗಳಿವೆ. ಅವುಗಳಲ್ಲಿ ಕೆಲವು ನಂಬಿಕೆಗಳು ಅರ್ಥವಿಲ್ಲದ ನಂಬಿಕೆಗಳಾಗಿವೆ. ಅಂತಹ ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ಕೆಲವರು ಹೇಳಿದರೆ ಹೇಳಿದರೆ ಮತ್ತೆ ಕೆಲವರು ಅಂತಹ ಅರ್ಥವಿಲ್ಲದ ನಂಬಿಕೆಗಳನ್ನು ಬಿಡಲು ಸಿದ್ಧವಿರುವುದಿಲ್ಲ.
ಕೆಲವೊಮ್ಮೆ ನಡೆಯುವ ಘಟನೆಗಳು ಅಂತಹ ಮೂಢಂಬಿಕೆಗೆ ಮತ್ತಷ್ಟು ಪುಷ್ಠಿ ನೀಡುತ್ತದೆ. ಉದಾಹರಣೆಗೆ ರಸ್ತೆ ದಾಡುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ನಂಬಿಕೆ ಹೆಚ್ಚಿನವರಲ್ಲಿದೆ. ಈ ಮೂಢ ನಂಬಿಕೆ ನಂಬಿದವರಿಗೆ ಅಯ್ಯೋ ಏನಾಗಬಹುದೋ ಎಂಬ ಭಯವಿರುತ್ತದೆ. ಸ್ವಲ್ಪ ಮುಂದೆ ನಡೆಯುವಾಗ ಗಾಡಿ ಕೈ ಕೊಡುವುದಾ ಅಥವಾ ನಡೆಯುವಾಗ ಸ್ವಲ್ಪ ಎಡವಿದರೆ ಅದನ್ನು ಆಕಸ್ಮಿಕವೆಂದು ತಿಳಿದುಕೊಳ್ಳದೆ ಆ ಮೂಢನಂಬಿಕೆಯನ್ನು ಬಲವಾಗಿ ನಂಬಿ ಬಿಡುತ್ತಾರೆ.

ಅದರಲ್ಲೂ ಈ ಕೆಳಗಿನ ಮೂಢನಂಬಿಕೆಗಳು ಹೆಚ್ಚಾಗಿ ಕಂಡು ಬರುತ್ತಿವೆ:
* ಮೇಲೆ ಹೇಳಿದಂತೆ ಎಲ್ಲಿಗಾದರೂ ಹೋಗುವಾಗ ಬೆಕ್ಕು ಅಡ್ಡ ಓಡುವುದು ಸರಿಯಲ್ಲ.
* ಮೂರು ಜನರು ಸೇರಿ ಶುಭ ಕಾರ್ಯಗಳಿಗೆ ಹೋಗಬಾರದು. ಈ ರೀತಿ ಮೂರು ಜನರು ಇದ್ದರೆ ಚಿಕ್ಕ ಮಗುವನ್ನು ಆದರೂ ಜೊತೆಗೆ ಕರೆದುಕೊಂಡು ಹೋಗುತ್ತಾರೆ.
* 13ನೇ ತಾರೀಕು ಶುಕ್ರವಾರದಂದು ಬಂದರೆ ಆ ದಿನದಂದು ಏನಾದರೂ ಅಪಶಕುನವಾಗುತ್ತದೆ ಎಂದು ಜನರು ಭಯಪಡುತ್ತಾರೆ.
* ದಾರಿಯಲ್ಲಿ ನೋಟ್ ಅಥವಾ ಚಿಲ್ಲರೆ ಬಿದ್ದಿರುವುದು ಕಂಡರೆ ಅದನ್ನು ಎತ್ತಿಕೊಳ್ಳಬೇಕು, ಇದರಿಂದ ನಿಮಗೆ ಅದೃಷ್ಟ ಲಕ್ಷ್ಮಿ ಒಲಿದು ಬರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.
* ಯಾವುದಾದರೂ ಒಂದು ಕಣ್ರೆಪ್ಪೆ ಉದುರಿ ಮುಖದ ಮೇಲೆ ಬಿದ್ದಿದ್ದರೆ ಕೆಲವರು ಅದನ್ನು ಜೋಪಾನವಾಗಿ ತೆಗೆದು ಕೈಯಲ್ಲಿ ಹಿಡಿದುಕೊಂಡು ನಂತರ ನಮಗೆ ಒಳ್ಳೆಯದಾಗಲಿ ಎಂದು ಬಯಸಿ ಊದುತ್ತಾರೆ. ಅದು ಹಾರಿದರೆ ಒಳ್ಳೆಯದಾಗುತ್ತದೆ ಎಂದು ಅರ್ಥ. ಊದಿದರೆ ಅಷ್ಟು ಚಿಕ್ಕ ರೆಪ್ಪೆ ಹಾರದೆ ಇರುತ್ತದೆಯೇ?
* ಕಣ್ರೆಪ್ಪೆ ಬಡೆಯುತ್ತಿದ್ದರೆ ಏನೋ ಅನಾಹುತ ಉಂಟಾಗಬಹುದೆಂಬ ಮೂಢ ನಂಬಿಕೆ ಜನರಲ್ಲಿದೆ. ಅದರಲ್ಲಿ ಬಲ ರೆಪ್ಪೆ ಬಡೆದರೆ ಹೆಣ್ಣು ಮಕ್ಕಳಿಗೆ ಒಳ್ಳೆಯದಲ್ಲ, ಎಡ ಕಣ್ಣಿನ ರೆಪ್ಪೆ ಬರೆದರೆ ಹೆಣ್ಣು ಮಕ್ಕಳಿಗೆ ಒಳ್ಳೆಯದು. ಈ ರೀತಿಯ ಅನೇಕ ಅರ್ಥವಿಲ್ಲದ ನಂಬಿಕೆಗಳು ನಮ್ಮ ಸಮಾಜದಲ್ಲಿವೆ.



Click it and Unblock the Notifications