ನದಿಯನ್ನು ಹೇಗೆ ದಾಟಬೇಕು!

Inspirational short stories,
ಅವಿಶ್ರಾಂತ ಚಟುವಟಿಕೆಗಳ ನಡುವೆಯೂ, ಕ್ಷೋಭೆಗೊಳ್ಳದಿರುವುದೇ ನಿಜವಾದ ಬುದ್ಧಿವಂತಿಕೆ . ಝೆನ್ ಗುರುಗಳ ಒಂದು ಸಣ್ಣ ಕಥೆ ಈ ಸತ್ಯವನ್ನು ವಿವರಿಸುತ್ತದೆ.

ಒಬ್ಬ ಝೆನ್ ಗುರುಗಳು ತಮ್ಮ ಅನುಯಾಯಿಗಳೊಂದಿಗೆ ಒಂದು ಸಣ್ಣ ನದಿಯನ್ನು ದಾಟುತ್ತಿದ್ದರು . ಗುರುಗಳೇ, ನದಿಯನ್ನು ಹೇಗೆ ದಾಟಬೇಕು?" ಎಂದು ಶಿಷ್ಯರು ಗುರುಗಳನ್ನು ಕೇಳಲಾಗಿ, "ನಿಮ್ಮ ಪಾದವನ್ನು ನೀರಿನಲ್ಲಿ ತೊಯಿಸದಂತೆ ನದಿಯನ್ನು ದಾಟಿರಿ" ಎಂದು ಗುರುಗಳು ಪ್ರತಿಕ್ರಿಯಿಸಿದರು . ಗುರುಗಳ ಮಾತನ್ನು ಕೇಳಿ ಆಶ್ಚರ್ಯಗೊಂಡು, ಗುರುಗಳು ತಮ್ಮ ಪಾದವನ್ನು ನೀರು ತಾಗಿಸದೆ ಹೇಗೆ ದಾಟಿದರು ಎಂಬ ಸಂಶಯದಿಂದ ಗುರುಗಳ ಪಾದವನ್ನು ನೋಡಿದರು. ಆದರೆ ಗುರುಗಳ ಪಾದದಲ್ಲಿ ತೇವ ಕಂಡು ಶಿಷ್ಯರು " ಆದರೆ ಗುರುಗಳೇ , ನಿಮ್ಮ ಪಾದಗಳು ಒದ್ದೆಯಾಗಿವೆಯಲ್ಲಾ" ಎಂದು ಶಿಷ್ಯ ಮೊದಲಿಸಿದನು.

"ನಾನು ಒದ್ದೆಯಾಗಿಲ್ಲ . ಈ ತೇವ ಕೇವಲ ಬಾಹ್ಯ ಸ್ವರೂಪದ್ದಾಗಿದ್ದು , ಆಂತರಿಕವಾಗಿ ನಾನು ತೇವರಹಿತನಾಗಿರುವೆ. ನೀರು ನನನ್ನು ಸ್ಪರ್ಷಿಸಿಯೇ ಇಲ್ಲ!" ಎಂದು ಗುರುಗಳು ಪ್ರತಿಕ್ರಿಯಿಸಿದರು .

ಎಲ್ಲರೂ ಎಲ್ಲಾ ರೀತಿಯ ಅನುಭವಗಳಿಗೂ ತೆರೆದುಕೊಂಡಿರ ಬೇಕು, ಆದರೆ ಆಂತರಿಕವಾಗಿ ಅವನು ಯಾವುದಕ್ಕೂ ಪ್ರಭಾವಿತನಾಗಬಾರದು !

English summary

Kannada Zen story | Searching For God | Inspirational short stories | ಝೆನ್ ಕಥೆ : ನದಿಯನ್ನು ಹೇಗೆ ದಾಟಬೇಕು!

A Zen master was crossing a small river with his disciple. The disciple asked, “Master what is the way to cross the river?" The master replied, “Cross it without the waters touching your feet!"
Story first published: Saturday, June 30, 2012, 10:29 [IST]
X
Desktop Bottom Promotion