ಝೆನ್ ಕಥೆ: ನಿಮ್ಮ ಲೋಟಕ್ಕೂ ಸಾಯುವ ಸಮಯ ಬಂದಿದೆ

Kannada Zen story
ಇಕ್ಯು ಎಂಬ ಝೆನ್ ಗುರು ಬಾಲ್ಯದಿಂದಲೂ ತುಂಬಾ ಬುದ್ದಿವಂತರಾಗಿದ್ದರು. ಒಂದು ದಿನ ತನ್ನ ಗುರುಗಳು ಪ್ರೀತಿಯಿಂದ ಜೋಪಾನ ಮಾಡಿದ್ದ ಚಹಾದ ಲೋಟವನ್ನು ಇಕ್ಯು ಮುರಿದು ಹಾಕಿದನು. ಅದೊಂದು ಅತ್ಯಮೂಲ್ಯವಾದ ಲೋಟವಾಗಿತ್ತು.. ಅವರ ಗುರುಗಳು ಬರುತ್ತಿರುವ ಹೆಜ್ಜೆಯ ಶಬ್ದವನ್ನು ಕೇಳಿಸಿಕೊಂಡ ಇಕ್ಯು ಆ ಅಮೂಲ್ಯವಾದ ಲೋಟದ ಮುರಿದ ತುಣುಕುಗಳನ್ನು, ತನ್ನ ಕೈಯಲ್ಲಿ ತೆಗೆದುಕೊಂಡು, ನಂತರ ತನ್ನ ಕೈಯನ್ನು ಹಿಂದೆ ಮಾಡಿ ನಿಂತುಕೊಂಡನು.

ಗುರುಗಳು ಬಂದ ತಕ್ಷಣ ಇಕ್ಯು "ಗುರುಗಳೇ ಜನರು ಯಾಕೆ ಒಂದಲ್ಲಾ ಒಂದು ದಿನ ಸಾಯುತ್ತಾರೆ? ಎಂದು ಕೇಳಿದನು.

ಆಗ ಗುರುಗಳು "ಅದು ಪ್ರಕೃತಿಯ ಸಹಜ ನಿಯಮ. ಈಗ ಅಸ್ತಿತ್ವದಲ್ಲಿರುವ ಎಲ್ಲಾ ಜೀವ ಜಂತುಗಳು, ಮರಗಳು, ವಸ್ತುಗಳು ಕಾಲ ಬಂದಾಗ ಒಂದಲ್ಲ ಒಂದು ದಿನ ನಾಶವಾಗಲೇಬೇಕು. ಸಾಯಲೇಬೇಕು ಎಂದು ಹೇಳಿದರು.

ಹೀಗೆ ಹೇಳಿದ ತಕ್ಷಣ ಇಕ್ಯು ಆ ಮುರಿದು ಹೋದ ಲೋಟದ ತುಣುಕುಗಳನ್ನು ಗುರುಗಳಿಗೆ ತೋರಿಸಿ "ಗುರುಗಳೇ ನಿಮ್ಮ ಈ ಅಮೂಲ್ಯವಾದ ಲೋಟಕ್ಕೂ ಸಾಯುವ ಸಮಯ ಬಂದಿದೆ ಅದಕ್ಕೆ ಹೀಗಾಗಿದೆ" ಎಂದು ಹೇಳಿದನು.

English summary

Kannada Zen story | Inspirational short stories | ಝೆನ್ ಕಥೆ : ನಿಮ್ಮ ಲೋಟಕ್ಕೂ ಸಾಯುವ ಸಮಯ ಬಂದಿದೆ

The Zen master Ikkyu was clever even as a boy. One day he happened to break a tea cup that his teacher had cherished it. It was a precious cup.
X
Desktop Bottom Promotion