Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜು. 27ಕ್ಕೆ ಅಂಗಾರಕ ಸಂಕಷ್ಟ ಚತುರ್ಥಿ: ಇದರ ಮಹತ್ವವೇನು, ಪೂಜಾ ವಿಧಿಗಳು ಹೇಗಿರಬೇಕು?
ಪ್ರತೀ ತಿಂಗಳು ಬರುವ ಸಂಕಷ್ಟಿಯಂದು ಭಕ್ತರು ಉಪವಾಸವಿದ್ದು ವಿಘ್ನ ನಿವಾರಕನನ್ನು ಆರಾಧಿಸಲಾಗುವುದು. ಗಣಪನನ್ನು ಭಕ್ತಿಯಿಂದ ನಂಬಿ ಆರಾಧಿಸಿದರೆ ಅವನು ತನ್ನ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಅಚಲ ನಂಬಿಕೆ.
ಈ ತಿಂಗಳು ಬಂದಿರುವ ಸಂಕಷ್ಟಿ ವಿಶೇಷವಾಗಿದೆ. ಈ ತಿಂಗಳು ಜುಲೈ 27ಕ್ಕೆ ಅಂಗಾರಕ ಸಂಕಷ್ಟಿ ಬಂದಿದೆ. ಮಂಗಳವಾರದಂದು ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುವುದು.
ಈ ವರ್ಷ ಇನ್ನು ಅಂಗಾರಕ ಸಂಕಷ್ಟ ಚತುರ್ಥಿ ನವೆಂಬರ್ 23ಕ್ಕೆ ಇದೆ. ಒಟ್ಟಿನಲ್ಲಿ ಈ ವರ್ಷ 3 ಬಾರಿ ಅಂಗಾರಕ ಸಂಕಷ್ಟ ಚತುರ್ಥಿ ಬಂದಿದೆ. ಮಾರ್ಚ್ 2ರಂದು ಅಂಗಾರಕ ಚತುರ್ಥಿಯನ್ನು ಆಚರಿಸಲಾಗಿತ್ತು.
ಅಂಗಾರಕ ಸಂಕಷ್ಟ ಚತುರ್ಥಿಯ ಮಹತ್ವೇನು, ಪೂಜಾ ವಿಧಿಗಳೇನು ಎಂದು ತಿಳಿಯೋಣ ಬನ್ನಿ:

ಅಂಗಾರಕ ಸಂಕಷ್ಟ ಚತುರ್ಥಿಯ ವಿಶೇಷವೇನು?
'ಅಂಗಾರಕ' ಎಂಬುವುದು ಸಂಸ್ಕೃತ ಪದವಾಗಿದ್ದು ಬೆಂಕಿ ಕೆಂಡದಂಥ ಹೊಳಪು ಎಂಬುವುದು ಇದರ ಅರ್ಥವಾಗಿದೆ. ಈ ದಿನ ಉಪವಾಸವಿದ್ದು ವಿಘ್ನ ನಿವಾರಕನನ್ನು ಪೂಜಿಸಿದರೆ ಆತನ ಎಲ್ಲಾ ಆಸೆಯೂ ಈಡೇರುವುದು. ಈ ದಿನ ಗಣೇಶನು ಮಂಗಳನಿಗೆ ವಿಮೋಚನೆ ನೀಡಿದ ದಿನ ಎಂಬ ಪೌರಾಣಿಕ ಕತೆಯಿದೆ. ಹಾಗಾಗಿ ಈ ದಿನದಂದು ಪೂಜೆ ಮಾಡುವುದರಿಂದ ಮಂಗಳ ಕೃಪೆ ಕೂಡ ನಿಮ್ಮ ಮೇಲಿರುವುದು. ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಈ ದಿನ ಪೂಜೆ ಸಲ್ಲಿಸುತ್ತಾರೋ ಅವರಿಗೆ ಜೀವನದಲ್ಲಿ ಕಷ್ಟಗಳು ಇರಲ್ಲ, ವಿಘ್ನೇಶ ಅವರ ಜೀವನದಲ್ಲಿ ಬರುವ ಎಲ್ಲಾ ವಿಘ್ನಗಳನ್ನು ನಿವಾರಿಸುತ್ತಾನೆ.

ಅಂಗಾರಕ ಚತುರ್ಥಿ ಶುಭ ಮುಹೂರ್ತ
ಚತುರ್ಥಿ ತಿಥಿ ಪ್ರಾರಂಭ ಜುಲೈ 26 ರಾತ್ರಿ 2:54ಕ್ಕೆ
ಚತುರ್ಥಿ ತಿಥಿ ಮುಕ್ತಾಯ ಜುಲೈ 28 ಮಧ್ಯಾಹ್ನ 2:28ಕ್ಕೆ

ಅಂಗಾರಕ ಚತುರ್ಥಿ ಪೂಜಾ ವಿಧಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ತೊಟ್ಟು ಗಣೇಶನಿಗೆ ಗರಿಕೆ, ಮೋದಕವನ್ನು ಅರ್ಪಿಸಬೇಕು. ಈ ಪ್ರಸಾದವನ್ನು ಆರತಿ ಬಳಿಕ ಹಂಚಬಹುದು.
* ಈ ದಿನ ಉಪವಾಸವಿದ್ದು ರಾತ್ರಿ ಚಂದ್ರನ ನೋಡಿದ ಬಳಿಕವಷ್ಟೇ ಉಪವಾಸ ಆಹಾರ ಸೇವಿಸಬೇಕು.
* ಸಂಪೂರ್ಣ ಉಪವಾಸ ಇರಲು ಸಾಧ್ಯವಾಗದವರು ಹಣ್ಣುಗಳನ್ನಷ್ಟೇ ಈ ದಿನ ತೆಗೆದುಕೊಳ್ಳುತ್ತಾರೆ.
* ಈ ದಿನ ತುಂಬಾ ನೀರು ಕುಡಿಯುವಂತಿಲ್ಲ, ಎಲೆ ಅಡಿಕೆ, ತಂಬಾಕು ಸೇವಿಸುವಂತಿಲ್ಲ
* ಚಂದ್ರನ ನೋಡಿದ ಬಳಿ ಗಣೇಶನಿಗೆ ಪೂಜೆ ಸಲ್ಲಿಸಿ ಉಪವಾಸವನ್ನು ಮುರಿಯಲಾಗುವುದು.
* ಈ ದಿನ ಪೂಜೆಯ ವೇಳೆ ಗಣೇಶನ ಮಂತ್ರಗಳನ್ನು ಪಠಿಸಿ.

ಅಂಗಾರಕ ಚತುರ್ಥಿಯ ಮಹತ್ವ
ಅಂಗಾರಕ ಚತುರ್ಥಿಯನ್ನು ಆಚರಿಸಿದರೆ 21 ವ್ರತಗಳನ್ನು ಪಾಲಿಸಿದ್ದಕ್ಕೆ ಸಮ. ಈ ದಿನ ಉಪವಾಸವಿದ್ದು ಏನಾದರೂ ಸಂಕಲ್ಪ ಕೈಗೊಂಡರೆ ಅದು ನೆರವೇರುವುದು.

ಈ ಸ್ತೋತ್ರ ಪಠಿಸಿ
ಸಂಕಟ ಹರ ಗಣೇಶ ಸ್ತೋತ್ರ:
|| ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ
ಲಂಬೋಧರಂ ಪಂಚಮಂ ಚ ಷಷ್ಠಂ ವಿಕಟಮೇವಚ ಸಪ್ತಮಂ ವಿಘ್ನ ರಾಜಂಚ ಧೂಮ್ರವರ್ಣಂ ತಥಾಷ್ಠಕಂ
ನವಮಂ ಫಲ ಚಂದ್ರಂಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ
ದ್ವಾದಶೈತಾನಿ ನಾಮಾನಿ ತ್ರಿ ಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ
ವಿದ್ಯಾರ್ಥಿ ಲಭತೆ ವಿದ್ಯಂ ವಿದ್ಯಾಂ ಧನಾರ್ಥಿ ಲಭತೆ ಧನಂ ಪುತ್ರಾರ್ಥಿ ಲಭತೆ ಪುತ್ರಂ ಮೋಕ್ಷಾರ್ಥಿ ಲಭತೆ ಗತಿಂ ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈ ಫಲಂ ಲಭೇತ್, ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಮಸ್ಯಾಃ ಅಷ್ಟಾಭ್ಯೋ ಬ್ರಹ್ಮಣೇಭ್ಯಾಷ ಚ ಲಿಖಿತ್ವ ಯಃ ಸಮರ್ಪಯೇತ್ ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ
ಇತಿ ಶ್ರೀ ನಾರದ ಪುರಾಣೆ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ ||



Click it and Unblock the Notifications