Just In
- 1 hr ago ದೇಶದ 7 ಪ್ರಬಲ ರಾಜಕೀಯ ಕುಟುಂಬಗಳಿವು..! ಎಲ್ಲಾ ಸರ್ಕಾರದಲ್ಲೂ ಇವರದ್ದೇ ಮೇಲುಗೈ..!
- 11 hrs ago ದಿನ ಭವಿಷ್ಯ ಮಾರ್ಚ್ 26: ಮಂಗಳವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 12 hrs ago ಗರಿಗರಿಯಾದ ಚಕ್ಲಿ ಮನೆಯಲ್ಲೇ ಮಾಡಬಹುದು..! ಇಲ್ಲಿದೆ ಸಿಂಪಲ್ ರೆಸಿಪಿ
- 13 hrs ago ಕೂದಲು ಬಿಳಿಯಾಗುವ ಚಿಂತೆ ಇದ್ದರೆ ಮರೆತು ಬಿಡಿ..! ಈ ಜ್ಯೂಸ್ಗಳ ಕುಡಿದರೆ ಸಾಕು..!
Don't Miss
- News SSLC: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವಾಗ ಅಸ್ವಸ್ಥಗೊಂಡು ವಿದ್ಯಾರ್ಥಿ ಸಾವು
- Sports Virat Kohli: ಜಾನಿ ಬೈರ್ಸ್ಟೋವ್ ಕ್ಯಾಚ್ ಪಡೆದ ಕೊಹ್ಲಿ; RCB ಫ್ಯಾನ್ಸ್ ಘರ್ಜನೆಗೆ ಡೆಸಿಬಲ್ ಮೀಟರ್ ಚೆಲ್ಲಾಪಿಲ್ಲಿ
- Automobiles ಭಾರತೀಯ ರಸ್ತೆಗಳಿಗೆ ADAS ಬೇಕೆ?: ಇದರ ಅನುಕೂಲಗಳು, ಅನಾನುಕೂಲಗಳೇನು?
- Movies "ರಜನಿಕಾಂತ್, ಕಮಲ್ ಹಾಸನ್ ಇಬ್ಬರೂ ಕರ್ನಾಟಕಕ್ಕೆ ಬರಬೇಡಿ" : ವಾಟಾಳ್ ನಾಗರಾಜ್ ಕಿಡಿ
- Finance ಮಂಗಳೂರು ವಿಜಯಪುರ ರೈಲು ಸಮಯ ಬದಲಾವಣೆ, ವಿವರ
- Technology ಹೊಸ ಫೋನ್ ಖರೀದಿಸುತ್ತಿದ್ದೀರಾ? ಸ್ವಲ್ಪ ಇರಿ, ಮುಂದಿನ ತಿಂಗಳು ಬೊಂಬಾಟ್ ಫೋನ್ಗಳು ಬರಲಿವೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜು. 27ಕ್ಕೆ ಅಂಗಾರಕ ಸಂಕಷ್ಟ ಚತುರ್ಥಿ: ಇದರ ಮಹತ್ವವೇನು, ಪೂಜಾ ವಿಧಿಗಳು ಹೇಗಿರಬೇಕು?
ಪ್ರತೀ ತಿಂಗಳು ಬರುವ ಸಂಕಷ್ಟಿಯಂದು ಭಕ್ತರು ಉಪವಾಸವಿದ್ದು ವಿಘ್ನ ನಿವಾರಕನನ್ನು ಆರಾಧಿಸಲಾಗುವುದು. ಗಣಪನನ್ನು ಭಕ್ತಿಯಿಂದ ನಂಬಿ ಆರಾಧಿಸಿದರೆ ಅವನು ತನ್ನ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಅಚಲ ನಂಬಿಕೆ.
ಈ ತಿಂಗಳು ಬಂದಿರುವ ಸಂಕಷ್ಟಿ ವಿಶೇಷವಾಗಿದೆ. ಈ ತಿಂಗಳು ಜುಲೈ 27ಕ್ಕೆ ಅಂಗಾರಕ ಸಂಕಷ್ಟಿ ಬಂದಿದೆ. ಮಂಗಳವಾರದಂದು ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುವುದು.
ಈ ವರ್ಷ ಇನ್ನು ಅಂಗಾರಕ ಸಂಕಷ್ಟ ಚತುರ್ಥಿ ನವೆಂಬರ್ 23ಕ್ಕೆ ಇದೆ. ಒಟ್ಟಿನಲ್ಲಿ ಈ ವರ್ಷ 3 ಬಾರಿ ಅಂಗಾರಕ ಸಂಕಷ್ಟ ಚತುರ್ಥಿ ಬಂದಿದೆ. ಮಾರ್ಚ್ 2ರಂದು ಅಂಗಾರಕ ಚತುರ್ಥಿಯನ್ನು ಆಚರಿಸಲಾಗಿತ್ತು.
ಅಂಗಾರಕ ಸಂಕಷ್ಟ ಚತುರ್ಥಿಯ ಮಹತ್ವೇನು, ಪೂಜಾ ವಿಧಿಗಳೇನು ಎಂದು ತಿಳಿಯೋಣ ಬನ್ನಿ:
ಅಂಗಾರಕ ಸಂಕಷ್ಟ ಚತುರ್ಥಿಯ ವಿಶೇಷವೇನು?
'ಅಂಗಾರಕ' ಎಂಬುವುದು ಸಂಸ್ಕೃತ ಪದವಾಗಿದ್ದು ಬೆಂಕಿ ಕೆಂಡದಂಥ ಹೊಳಪು ಎಂಬುವುದು ಇದರ ಅರ್ಥವಾಗಿದೆ. ಈ ದಿನ ಉಪವಾಸವಿದ್ದು ವಿಘ್ನ ನಿವಾರಕನನ್ನು ಪೂಜಿಸಿದರೆ ಆತನ ಎಲ್ಲಾ ಆಸೆಯೂ ಈಡೇರುವುದು. ಈ ದಿನ ಗಣೇಶನು ಮಂಗಳನಿಗೆ ವಿಮೋಚನೆ ನೀಡಿದ ದಿನ ಎಂಬ ಪೌರಾಣಿಕ ಕತೆಯಿದೆ. ಹಾಗಾಗಿ ಈ ದಿನದಂದು ಪೂಜೆ ಮಾಡುವುದರಿಂದ ಮಂಗಳ ಕೃಪೆ ಕೂಡ ನಿಮ್ಮ ಮೇಲಿರುವುದು. ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಈ ದಿನ ಪೂಜೆ ಸಲ್ಲಿಸುತ್ತಾರೋ ಅವರಿಗೆ ಜೀವನದಲ್ಲಿ ಕಷ್ಟಗಳು ಇರಲ್ಲ, ವಿಘ್ನೇಶ ಅವರ ಜೀವನದಲ್ಲಿ ಬರುವ ಎಲ್ಲಾ ವಿಘ್ನಗಳನ್ನು ನಿವಾರಿಸುತ್ತಾನೆ.
ಅಂಗಾರಕ ಚತುರ್ಥಿ ಶುಭ ಮುಹೂರ್ತ
ಚತುರ್ಥಿ ತಿಥಿ ಪ್ರಾರಂಭ ಜುಲೈ 26 ರಾತ್ರಿ 2:54ಕ್ಕೆ
ಚತುರ್ಥಿ ತಿಥಿ ಮುಕ್ತಾಯ ಜುಲೈ 28 ಮಧ್ಯಾಹ್ನ 2:28ಕ್ಕೆ
ಅಂಗಾರಕ ಚತುರ್ಥಿ ಪೂಜಾ ವಿಧಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ತೊಟ್ಟು ಗಣೇಶನಿಗೆ ಗರಿಕೆ, ಮೋದಕವನ್ನು ಅರ್ಪಿಸಬೇಕು. ಈ ಪ್ರಸಾದವನ್ನು ಆರತಿ ಬಳಿಕ ಹಂಚಬಹುದು.
* ಈ ದಿನ ಉಪವಾಸವಿದ್ದು ರಾತ್ರಿ ಚಂದ್ರನ ನೋಡಿದ ಬಳಿಕವಷ್ಟೇ ಉಪವಾಸ ಆಹಾರ ಸೇವಿಸಬೇಕು.
* ಸಂಪೂರ್ಣ ಉಪವಾಸ ಇರಲು ಸಾಧ್ಯವಾಗದವರು ಹಣ್ಣುಗಳನ್ನಷ್ಟೇ ಈ ದಿನ ತೆಗೆದುಕೊಳ್ಳುತ್ತಾರೆ.
* ಈ ದಿನ ತುಂಬಾ ನೀರು ಕುಡಿಯುವಂತಿಲ್ಲ, ಎಲೆ ಅಡಿಕೆ, ತಂಬಾಕು ಸೇವಿಸುವಂತಿಲ್ಲ
* ಚಂದ್ರನ ನೋಡಿದ ಬಳಿ ಗಣೇಶನಿಗೆ ಪೂಜೆ ಸಲ್ಲಿಸಿ ಉಪವಾಸವನ್ನು ಮುರಿಯಲಾಗುವುದು.
* ಈ ದಿನ ಪೂಜೆಯ ವೇಳೆ ಗಣೇಶನ ಮಂತ್ರಗಳನ್ನು ಪಠಿಸಿ.
ಅಂಗಾರಕ ಚತುರ್ಥಿಯ ಮಹತ್ವ
ಅಂಗಾರಕ ಚತುರ್ಥಿಯನ್ನು ಆಚರಿಸಿದರೆ 21 ವ್ರತಗಳನ್ನು ಪಾಲಿಸಿದ್ದಕ್ಕೆ ಸಮ. ಈ ದಿನ ಉಪವಾಸವಿದ್ದು ಏನಾದರೂ ಸಂಕಲ್ಪ ಕೈಗೊಂಡರೆ ಅದು ನೆರವೇರುವುದು.
ಈ ಸ್ತೋತ್ರ ಪಠಿಸಿ
ಸಂಕಟ ಹರ ಗಣೇಶ ಸ್ತೋತ್ರ:
|| ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ
ಲಂಬೋಧರಂ ಪಂಚಮಂ ಚ ಷಷ್ಠಂ ವಿಕಟಮೇವಚ ಸಪ್ತಮಂ ವಿಘ್ನ ರಾಜಂಚ ಧೂಮ್ರವರ್ಣಂ ತಥಾಷ್ಠಕಂ
ನವಮಂ ಫಲ ಚಂದ್ರಂಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ
ದ್ವಾದಶೈತಾನಿ ನಾಮಾನಿ ತ್ರಿ ಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ
ವಿದ್ಯಾರ್ಥಿ ಲಭತೆ ವಿದ್ಯಂ ವಿದ್ಯಾಂ ಧನಾರ್ಥಿ ಲಭತೆ ಧನಂ ಪುತ್ರಾರ್ಥಿ ಲಭತೆ ಪುತ್ರಂ ಮೋಕ್ಷಾರ್ಥಿ ಲಭತೆ ಗತಿಂ ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈ ಫಲಂ ಲಭೇತ್, ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಮಸ್ಯಾಃ ಅಷ್ಟಾಭ್ಯೋ ಬ್ರಹ್ಮಣೇಭ್ಯಾಷ ಚ ಲಿಖಿತ್ವ ಯಃ ಸಮರ್ಪಯೇತ್ ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ
ಇತಿ ಶ್ರೀ ನಾರದ ಪುರಾಣೆ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ ||