For Quick Alerts
ALLOW NOTIFICATIONS  
For Daily Alerts

ಜು. 27ಕ್ಕೆ ಅಂಗಾರಕ ಸಂಕಷ್ಟ ಚತುರ್ಥಿ: ಇದರ ಮಹತ್ವವೇನು, ಪೂಜಾ ವಿಧಿಗಳು ಹೇಗಿರಬೇಕು?

|

ಪ್ರತೀ ತಿಂಗಳು ಬರುವ ಸಂಕಷ್ಟಿಯಂದು ಭಕ್ತರು ಉಪವಾಸವಿದ್ದು ವಿಘ್ನ ನಿವಾರಕನನ್ನು ಆರಾಧಿಸಲಾಗುವುದು. ಗಣಪನನ್ನು ಭಕ್ತಿಯಿಂದ ನಂಬಿ ಆರಾಧಿಸಿದರೆ ಅವನು ತನ್ನ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಅಚಲ ನಂಬಿಕೆ.

ಈ ತಿಂಗಳು ಬಂದಿರುವ ಸಂಕಷ್ಟಿ ವಿಶೇಷವಾಗಿದೆ. ಈ ತಿಂಗಳು ಜುಲೈ 27ಕ್ಕೆ ಅಂಗಾರಕ ಸಂಕಷ್ಟಿ ಬಂದಿದೆ. ಮಂಗಳವಾರದಂದು ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುವುದು.

ಈ ವರ್ಷ ಇನ್ನು ಅಂಗಾರಕ ಸಂಕಷ್ಟ ಚತುರ್ಥಿ ನವೆಂಬರ್‌ 23ಕ್ಕೆ ಇದೆ. ಒಟ್ಟಿನಲ್ಲಿ ಈ ವರ್ಷ 3 ಬಾರಿ ಅಂಗಾರಕ ಸಂಕಷ್ಟ ಚತುರ್ಥಿ ಬಂದಿದೆ. ಮಾರ್ಚ್‌ 2ರಂದು ಅಂಗಾರಕ ಚತುರ್ಥಿಯನ್ನು ಆಚರಿಸಲಾಗಿತ್ತು.

ಅಂಗಾರಕ ಸಂಕಷ್ಟ ಚತುರ್ಥಿಯ ಮಹತ್ವೇನು, ಪೂಜಾ ವಿಧಿಗಳೇನು ಎಂದು ತಿಳಿಯೋಣ ಬನ್ನಿ:

ಅಂಗಾರಕ ಸಂಕಷ್ಟ ಚತುರ್ಥಿಯ ವಿಶೇಷವೇನು?

ಅಂಗಾರಕ ಸಂಕಷ್ಟ ಚತುರ್ಥಿಯ ವಿಶೇಷವೇನು?

'ಅಂಗಾರಕ' ಎಂಬುವುದು ಸಂಸ್ಕೃತ ಪದವಾಗಿದ್ದು ಬೆಂಕಿ ಕೆಂಡದಂಥ ಹೊಳಪು ಎಂಬುವುದು ಇದರ ಅರ್ಥವಾಗಿದೆ. ಈ ದಿನ ಉಪವಾಸವಿದ್ದು ವಿಘ್ನ ನಿವಾರಕನನ್ನು ಪೂಜಿಸಿದರೆ ಆತನ ಎಲ್ಲಾ ಆಸೆಯೂ ಈಡೇರುವುದು. ಈ ದಿನ ಗಣೇಶನು ಮಂಗಳನಿಗೆ ವಿಮೋಚನೆ ನೀಡಿದ ದಿನ ಎಂಬ ಪೌರಾಣಿಕ ಕತೆಯಿದೆ. ಹಾಗಾಗಿ ಈ ದಿನದಂದು ಪೂಜೆ ಮಾಡುವುದರಿಂದ ಮಂಗಳ ಕೃಪೆ ಕೂಡ ನಿಮ್ಮ ಮೇಲಿರುವುದು. ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಈ ದಿನ ಪೂಜೆ ಸಲ್ಲಿಸುತ್ತಾರೋ ಅವರಿಗೆ ಜೀವನದಲ್ಲಿ ಕಷ್ಟಗಳು ಇರಲ್ಲ, ವಿಘ್ನೇಶ ಅವರ ಜೀವನದಲ್ಲಿ ಬರುವ ಎಲ್ಲಾ ವಿಘ್ನಗಳನ್ನು ನಿವಾರಿಸುತ್ತಾನೆ.

ಅಂಗಾರಕ ಚತುರ್ಥಿ ಶುಭ ಮುಹೂರ್ತ

ಅಂಗಾರಕ ಚತುರ್ಥಿ ಶುಭ ಮುಹೂರ್ತ

ಚತುರ್ಥಿ ತಿಥಿ ಪ್ರಾರಂಭ ಜುಲೈ 26 ರಾತ್ರಿ 2:54ಕ್ಕೆ

ಚತುರ್ಥಿ ತಿಥಿ ಮುಕ್ತಾಯ ಜುಲೈ 28 ಮಧ್ಯಾಹ್ನ 2:28ಕ್ಕೆ

ಅಂಗಾರಕ ಚತುರ್ಥಿ ಪೂಜಾ ವಿಧಿ

ಅಂಗಾರಕ ಚತುರ್ಥಿ ಪೂಜಾ ವಿಧಿ

* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ತೊಟ್ಟು ಗಣೇಶನಿಗೆ ಗರಿಕೆ, ಮೋದಕವನ್ನು ಅರ್ಪಿಸಬೇಕು. ಈ ಪ್ರಸಾದವನ್ನು ಆರತಿ ಬಳಿಕ ಹಂಚಬಹುದು.

* ಈ ದಿನ ಉಪವಾಸವಿದ್ದು ರಾತ್ರಿ ಚಂದ್ರನ ನೋಡಿದ ಬಳಿಕವಷ್ಟೇ ಉಪವಾಸ ಆಹಾರ ಸೇವಿಸಬೇಕು.

* ಸಂಪೂರ್ಣ ಉಪವಾಸ ಇರಲು ಸಾಧ್ಯವಾಗದವರು ಹಣ್ಣುಗಳನ್ನಷ್ಟೇ ಈ ದಿನ ತೆಗೆದುಕೊಳ್ಳುತ್ತಾರೆ.

* ಈ ದಿನ ತುಂಬಾ ನೀರು ಕುಡಿಯುವಂತಿಲ್ಲ, ಎಲೆ ಅಡಿಕೆ, ತಂಬಾಕು ಸೇವಿಸುವಂತಿಲ್ಲ

* ಚಂದ್ರನ ನೋಡಿದ ಬಳಿ ಗಣೇಶನಿಗೆ ಪೂಜೆ ಸಲ್ಲಿಸಿ ಉಪವಾಸವನ್ನು ಮುರಿಯಲಾಗುವುದು.

* ಈ ದಿನ ಪೂಜೆಯ ವೇಳೆ ಗಣೇಶನ ಮಂತ್ರಗಳನ್ನು ಪಠಿಸಿ.

ಅಂಗಾರಕ ಚತುರ್ಥಿಯ ಮಹತ್ವ

ಅಂಗಾರಕ ಚತುರ್ಥಿಯ ಮಹತ್ವ

ಅಂಗಾರಕ ಚತುರ್ಥಿಯನ್ನು ಆಚರಿಸಿದರೆ 21 ವ್ರತಗಳನ್ನು ಪಾಲಿಸಿದ್ದಕ್ಕೆ ಸಮ. ಈ ದಿನ ಉಪವಾಸವಿದ್ದು ಏನಾದರೂ ಸಂಕಲ್ಪ ಕೈಗೊಂಡರೆ ಅದು ನೆರವೇರುವುದು.

ಈ ಸ್ತೋತ್ರ ಪಠಿಸಿ

ಈ ಸ್ತೋತ್ರ ಪಠಿಸಿ

ಸಂಕಟ ಹರ ಗಣೇಶ ಸ್ತೋತ್ರ:

|| ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ

ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ

ಲಂಬೋಧರಂ ಪಂಚಮಂ ಚ ಷಷ್ಠಂ ವಿಕಟಮೇವಚ ಸಪ್ತಮಂ ವಿಘ್ನ ರಾಜಂಚ ಧೂಮ್ರವರ್ಣಂ ತಥಾಷ್ಠಕಂ

ನವಮಂ ಫಲ ಚಂದ್ರಂಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ

ದ್ವಾದಶೈತಾನಿ ನಾಮಾನಿ ತ್ರಿ ಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ

ವಿದ್ಯಾರ್ಥಿ ಲಭತೆ ವಿದ್ಯಂ ವಿದ್ಯಾಂ ಧನಾರ್ಥಿ ಲಭತೆ ಧನಂ ಪುತ್ರಾರ್ಥಿ ಲಭತೆ ಪುತ್ರಂ ಮೋಕ್ಷಾರ್ಥಿ ಲಭತೆ ಗತಿಂ ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈ ಫಲಂ ಲಭೇತ್, ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಮಸ್ಯಾಃ ಅಷ್ಟಾಭ್ಯೋ ಬ್ರಹ್ಮಣೇಭ್ಯಾಷ ಚ ಲಿಖಿತ್ವ ಯಃ ಸಮರ್ಪಯೇತ್ ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ

ಇತಿ ಶ್ರೀ ನಾರದ ಪುರಾಣೆ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ ||

English summary

Angarki Sankashti Chaturthi July 2021 Date, Importance, Timing, Shubh Sayog And Vrat Puja Vidhi Of Chaturthi Tithi in kannada

Angarki sankashti chaturthi july 2021 Date, importance, Ttiming, shubh sayog and vrat puja vidhi Of chaturthi Tithi in kannada, Read on...
X
Desktop Bottom Promotion