Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮನೆಯಲ್ಲಿ ಹೀಗಿದ್ದರೆ ಪಿತೃದೋಷವಿದೆ: ಜುಲೈ 17, ಆಷಾಢ ಅಮವಾಸ್ಯೆಯಂದು ಈ ಪರಿಹಾರ ಮಾಡಿ
ಆಷಾಢ ಅಮವಾಸ್ಯೆ ಹಲವಾರು ಕಾರಣಗಳಿಂದ ತುಂಬಾ ಮಹತ್ವವನ್ನು ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು ಹಾಗೂ ಈ ದಿನ ಪಿತೃ ತರ್ಪಣ ಕೂಡ ಮಾಡಲಾಗುವುದು. ಈ ದಿನ ಪಿತೃ ತರ್ಪಣ ಮಾಡುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ವರ್ಷ ಆಷಾಢ ಅಮವಾಸ್ಯೆಯನ್ನು ಜುಲೈ 17ರಂದು ಆಚರಿಸಲಾಗುವುದು.
ಆಷಾಢ ಅಮವಾಸ್ಯೆಗೆ ಪಿತೃತರ್ಪಣ ಮಾಡುವುದರ ಹಿಂದಿನ ಉದ್ದೇಶವೇನು? ಪಿತೃದೋಷವಿದ್ದರೆ ಏನೆಲ್ಲಾ ತೊಂದರೆಗಳಾಗುವುದು? ಈ ತೊಂದರೆಗಳ ನಿವಾರಣೆಗೆ ಆಷಾಢ ಅಮವಾಸ್ಯೆಯಂದು ಏನು ಪರಿಹಾರ ಮಾಡಬೇಕು ಎಂದು ನೋಡೋಣ ಬನ್ನಿ:

ಆಷಾಢ ಅಮವಾಸ್ಯೆ
ಆಷಾಢ ಅಮವಾಸ್ಯೆ ಪಿತೃತರ್ಪಣಕ್ಕೆ ತುಂಬಾ ಶ್ರೇಷ್ಠವಾದ ದಿನವೆಂದು ನಂಬಲಾಗಿದೆ. ಆಷಾಢ ಅಮವಾಸ್ಯೆಯಂದು ಶ್ರಾದ್ಧಕಾರ್ಯ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುತ್ತದೆ ಅಷ್ಟು ಮಾತ್ರವಲ್ಲ ಅವರ ಆಶೀರ್ವಾದದಿಂದ ಒಳಿತಾಗುವುದು ಎಂದು ನಂಬಲಾಗಿದೆ.
ಪಿತೃದೋಷವಿದ್ದರೆ ಕುಟುಂಬಕ್ಕೆ ಒಳಿತಾಗಲ್ಲ ಎಂದು ಹೇಳಲಾಗುವುದು, ಈ ಬಗೆಯ ಲಕ್ಷಣಗಳು ಕಂಡು ಬಂದರೆ ಪಿತೃದೋಷವಿದೆ ಎಂದು ಹೇಳಲಾಗುವುದು:
* ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳಿಂದ ಪ್ರಗತಿಗೆ ತೊಂದರೆಯಾಗುವುದು
* ವೈವಾಜಿಕ ಜೀವನ ಸರಿಯಿಲ್ಲದಿರುವುದು
* ಸಂತಾಭಾಗ್ಯ ಇಲ್ಲದಿರುವುದು
* ಆಗಾಗ ಗರ್ಭಪಾತ
* ಮನೆಯಲ್ಲಿ ಸದಾ ಜಗಳ, ನೆಮ್ಮದಿಯೇ ಇಲ್ಲದಿರುವುದು
* ಮನೆಯಲ್ಲಿ ಅಸ್ವಾಭಾವಿಕ ಸಾವು
* ಕಳ್ಳತನ, ಅಪಘಾತ, ದರೋಡೆ ಇವೆಲ್ಲಾ ಪದೇ ಪದೇ ಆಗುವುದು
* ಸದಾ ಆರೋಗ್ಯ ಸಮಸ್ಯೆ
* ಆರ್ಥಿಕ ಸಮಸ್ಯೆ
* ಕನಸಿನಲ್ಲಿ ಹಾವು ಬರುವುದು
* ಕನಸಿನಲ್ಲಿ ಪೂರ್ವಜರು ಬಂದು ಆಹಾರ, ವಸ್ತ್ರ ಕೇಳುವುದು
* ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದಿರುವುದು
* ಸಮಾಜದಲ್ಲಿ ಕೆಟ್ಟ ಹೆಸರು ಬರುವುದು
ಪಿತೃದೋಷ ಯಾವಾಗ ಉಂಟಾಗುವುದು
* ಸತ್ತ ವ್ಯಕ್ತಿಯ ಶ್ರಾದ್ಧ, ಪಿಂಡ ದಾನ ಅಥವಾ ಅವರ ಕರ್ಮಗಳನ್ನು ಮಾಡದೇ ಇದ್ದಾಗ ಅವರಿಗೆ ಮೋಕ್ಷ ಸಿಗದೆ ಪಿತೃದೊಷ ಉಂಟಾಗುವುದು
* ಬೇರೆಯವರ ಶಾಪದಿಂದ ಕೂಡ ಪಿತೃದೋಷ ಉಂಟಾಗುವುದು
* ಮನೆಯಲ್ಲಿ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕೂಡ ಪಿತೃ ದೋಷ ಉಂಟಾಗುವುದು.
ಪಿತೃದೋಷಕ್ಕೆ ಆಷಾಢ ಅಮವಾಸ್ಯೆಯಂದು ಪರಿಹಾರ ಮಾಡಿ
* ಈ ದಿನ ಪಿತೃ ತರ್ಪಣ ಮಾಡಿ
* ನಿರ್ಗತಿಕರಿಗೆ ದಾನ ಮಾಡಿ
ಈ ರೀತಿ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುವುದು, ನೀವು ಪಿತೃದೋಷದಿಂದ ಮುಕ್ತರಾಗುತ್ತೀರಿ.
ಈ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಶಂ ಹನ ಹನ ಸುಖ ಶಾಂತಿಂ ಫಟ್ ಸ್ವಾಹಾ |
" ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಶಂ ಹನ್ ಹನ್ ಸುಖ ಶಾಂತಿಂ ದೇಹಿ ಫಟ್ ಸ್ವಾಹಾ"



Click it and Unblock the Notifications
