Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಮನೆಯಲ್ಲಿ ಹೀಗಿದ್ದರೆ ಪಿತೃದೋಷವಿದೆ: ಜುಲೈ 17, ಆಷಾಢ ಅಮವಾಸ್ಯೆಯಂದು ಈ ಪರಿಹಾರ ಮಾಡಿ
ಆಷಾಢ ಅಮವಾಸ್ಯೆ ಹಲವಾರು ಕಾರಣಗಳಿಂದ ತುಂಬಾ ಮಹತ್ವವನ್ನು ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು ಹಾಗೂ ಈ ದಿನ ಪಿತೃ ತರ್ಪಣ ಕೂಡ ಮಾಡಲಾಗುವುದು. ಈ ದಿನ ಪಿತೃ ತರ್ಪಣ ಮಾಡುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ವರ್ಷ ಆಷಾಢ ಅಮವಾಸ್ಯೆಯನ್ನು ಜುಲೈ 17ರಂದು ಆಚರಿಸಲಾಗುವುದು.
ಆಷಾಢ ಅಮವಾಸ್ಯೆಗೆ ಪಿತೃತರ್ಪಣ ಮಾಡುವುದರ ಹಿಂದಿನ ಉದ್ದೇಶವೇನು? ಪಿತೃದೋಷವಿದ್ದರೆ ಏನೆಲ್ಲಾ ತೊಂದರೆಗಳಾಗುವುದು? ಈ ತೊಂದರೆಗಳ ನಿವಾರಣೆಗೆ ಆಷಾಢ ಅಮವಾಸ್ಯೆಯಂದು ಏನು ಪರಿಹಾರ ಮಾಡಬೇಕು ಎಂದು ನೋಡೋಣ ಬನ್ನಿ:

ಆಷಾಢ ಅಮವಾಸ್ಯೆ
ಆಷಾಢ ಅಮವಾಸ್ಯೆ ಪಿತೃತರ್ಪಣಕ್ಕೆ ತುಂಬಾ ಶ್ರೇಷ್ಠವಾದ ದಿನವೆಂದು ನಂಬಲಾಗಿದೆ. ಆಷಾಢ ಅಮವಾಸ್ಯೆಯಂದು ಶ್ರಾದ್ಧಕಾರ್ಯ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುತ್ತದೆ ಅಷ್ಟು ಮಾತ್ರವಲ್ಲ ಅವರ ಆಶೀರ್ವಾದದಿಂದ ಒಳಿತಾಗುವುದು ಎಂದು ನಂಬಲಾಗಿದೆ.
ಪಿತೃದೋಷವಿದ್ದರೆ ಕುಟುಂಬಕ್ಕೆ ಒಳಿತಾಗಲ್ಲ ಎಂದು ಹೇಳಲಾಗುವುದು, ಈ ಬಗೆಯ ಲಕ್ಷಣಗಳು ಕಂಡು ಬಂದರೆ ಪಿತೃದೋಷವಿದೆ ಎಂದು ಹೇಳಲಾಗುವುದು:
* ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳಿಂದ ಪ್ರಗತಿಗೆ ತೊಂದರೆಯಾಗುವುದು
* ವೈವಾಜಿಕ ಜೀವನ ಸರಿಯಿಲ್ಲದಿರುವುದು
* ಸಂತಾಭಾಗ್ಯ ಇಲ್ಲದಿರುವುದು
* ಆಗಾಗ ಗರ್ಭಪಾತ
* ಮನೆಯಲ್ಲಿ ಸದಾ ಜಗಳ, ನೆಮ್ಮದಿಯೇ ಇಲ್ಲದಿರುವುದು
* ಮನೆಯಲ್ಲಿ ಅಸ್ವಾಭಾವಿಕ ಸಾವು
* ಕಳ್ಳತನ, ಅಪಘಾತ, ದರೋಡೆ ಇವೆಲ್ಲಾ ಪದೇ ಪದೇ ಆಗುವುದು
* ಸದಾ ಆರೋಗ್ಯ ಸಮಸ್ಯೆ
* ಆರ್ಥಿಕ ಸಮಸ್ಯೆ
* ಕನಸಿನಲ್ಲಿ ಹಾವು ಬರುವುದು
* ಕನಸಿನಲ್ಲಿ ಪೂರ್ವಜರು ಬಂದು ಆಹಾರ, ವಸ್ತ್ರ ಕೇಳುವುದು
* ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದಿರುವುದು
* ಸಮಾಜದಲ್ಲಿ ಕೆಟ್ಟ ಹೆಸರು ಬರುವುದು
ಪಿತೃದೋಷ ಯಾವಾಗ ಉಂಟಾಗುವುದು
* ಸತ್ತ ವ್ಯಕ್ತಿಯ ಶ್ರಾದ್ಧ, ಪಿಂಡ ದಾನ ಅಥವಾ ಅವರ ಕರ್ಮಗಳನ್ನು ಮಾಡದೇ ಇದ್ದಾಗ ಅವರಿಗೆ ಮೋಕ್ಷ ಸಿಗದೆ ಪಿತೃದೊಷ ಉಂಟಾಗುವುದು
* ಬೇರೆಯವರ ಶಾಪದಿಂದ ಕೂಡ ಪಿತೃದೋಷ ಉಂಟಾಗುವುದು
* ಮನೆಯಲ್ಲಿ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕೂಡ ಪಿತೃ ದೋಷ ಉಂಟಾಗುವುದು.
ಪಿತೃದೋಷಕ್ಕೆ ಆಷಾಢ ಅಮವಾಸ್ಯೆಯಂದು ಪರಿಹಾರ ಮಾಡಿ
* ಈ ದಿನ ಪಿತೃ ತರ್ಪಣ ಮಾಡಿ
* ನಿರ್ಗತಿಕರಿಗೆ ದಾನ ಮಾಡಿ
ಈ ರೀತಿ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುವುದು, ನೀವು ಪಿತೃದೋಷದಿಂದ ಮುಕ್ತರಾಗುತ್ತೀರಿ.
ಈ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಶಂ ಹನ ಹನ ಸುಖ ಶಾಂತಿಂ ಫಟ್ ಸ್ವಾಹಾ |
" ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಶಂ ಹನ್ ಹನ್ ಸುಖ ಶಾಂತಿಂ ದೇಹಿ ಫಟ್ ಸ್ವಾಹಾ"



Click it and Unblock the Notifications
