Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಮನೆಯಲ್ಲಿ ಹೀಗಿದ್ದರೆ ಪಿತೃದೋಷವಿದೆ: ಜುಲೈ 17, ಆಷಾಢ ಅಮವಾಸ್ಯೆಯಂದು ಈ ಪರಿಹಾರ ಮಾಡಿ
ಆಷಾಢ ಅಮವಾಸ್ಯೆ ಹಲವಾರು ಕಾರಣಗಳಿಂದ ತುಂಬಾ ಮಹತ್ವವನ್ನು ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು ಹಾಗೂ ಈ ದಿನ ಪಿತೃ ತರ್ಪಣ ಕೂಡ ಮಾಡಲಾಗುವುದು. ಈ ದಿನ ಪಿತೃ ತರ್ಪಣ ಮಾಡುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ವರ್ಷ ಆಷಾಢ ಅಮವಾಸ್ಯೆಯನ್ನು ಜುಲೈ 17ರಂದು ಆಚರಿಸಲಾಗುವುದು.
ಆಷಾಢ ಅಮವಾಸ್ಯೆಗೆ ಪಿತೃತರ್ಪಣ ಮಾಡುವುದರ ಹಿಂದಿನ ಉದ್ದೇಶವೇನು? ಪಿತೃದೋಷವಿದ್ದರೆ ಏನೆಲ್ಲಾ ತೊಂದರೆಗಳಾಗುವುದು? ಈ ತೊಂದರೆಗಳ ನಿವಾರಣೆಗೆ ಆಷಾಢ ಅಮವಾಸ್ಯೆಯಂದು ಏನು ಪರಿಹಾರ ಮಾಡಬೇಕು ಎಂದು ನೋಡೋಣ ಬನ್ನಿ:

ಆಷಾಢ ಅಮವಾಸ್ಯೆ
ಆಷಾಢ ಅಮವಾಸ್ಯೆ ಪಿತೃತರ್ಪಣಕ್ಕೆ ತುಂಬಾ ಶ್ರೇಷ್ಠವಾದ ದಿನವೆಂದು ನಂಬಲಾಗಿದೆ. ಆಷಾಢ ಅಮವಾಸ್ಯೆಯಂದು ಶ್ರಾದ್ಧಕಾರ್ಯ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುತ್ತದೆ ಅಷ್ಟು ಮಾತ್ರವಲ್ಲ ಅವರ ಆಶೀರ್ವಾದದಿಂದ ಒಳಿತಾಗುವುದು ಎಂದು ನಂಬಲಾಗಿದೆ.
ಪಿತೃದೋಷವಿದ್ದರೆ ಕುಟುಂಬಕ್ಕೆ ಒಳಿತಾಗಲ್ಲ ಎಂದು ಹೇಳಲಾಗುವುದು, ಈ ಬಗೆಯ ಲಕ್ಷಣಗಳು ಕಂಡು ಬಂದರೆ ಪಿತೃದೋಷವಿದೆ ಎಂದು ಹೇಳಲಾಗುವುದು:
* ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳಿಂದ ಪ್ರಗತಿಗೆ ತೊಂದರೆಯಾಗುವುದು
* ವೈವಾಜಿಕ ಜೀವನ ಸರಿಯಿಲ್ಲದಿರುವುದು
* ಸಂತಾಭಾಗ್ಯ ಇಲ್ಲದಿರುವುದು
* ಆಗಾಗ ಗರ್ಭಪಾತ
* ಮನೆಯಲ್ಲಿ ಸದಾ ಜಗಳ, ನೆಮ್ಮದಿಯೇ ಇಲ್ಲದಿರುವುದು
* ಮನೆಯಲ್ಲಿ ಅಸ್ವಾಭಾವಿಕ ಸಾವು
* ಕಳ್ಳತನ, ಅಪಘಾತ, ದರೋಡೆ ಇವೆಲ್ಲಾ ಪದೇ ಪದೇ ಆಗುವುದು
* ಸದಾ ಆರೋಗ್ಯ ಸಮಸ್ಯೆ
* ಆರ್ಥಿಕ ಸಮಸ್ಯೆ
* ಕನಸಿನಲ್ಲಿ ಹಾವು ಬರುವುದು
* ಕನಸಿನಲ್ಲಿ ಪೂರ್ವಜರು ಬಂದು ಆಹಾರ, ವಸ್ತ್ರ ಕೇಳುವುದು
* ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದಿರುವುದು
* ಸಮಾಜದಲ್ಲಿ ಕೆಟ್ಟ ಹೆಸರು ಬರುವುದು
ಪಿತೃದೋಷ ಯಾವಾಗ ಉಂಟಾಗುವುದು
* ಸತ್ತ ವ್ಯಕ್ತಿಯ ಶ್ರಾದ್ಧ, ಪಿಂಡ ದಾನ ಅಥವಾ ಅವರ ಕರ್ಮಗಳನ್ನು ಮಾಡದೇ ಇದ್ದಾಗ ಅವರಿಗೆ ಮೋಕ್ಷ ಸಿಗದೆ ಪಿತೃದೊಷ ಉಂಟಾಗುವುದು
* ಬೇರೆಯವರ ಶಾಪದಿಂದ ಕೂಡ ಪಿತೃದೋಷ ಉಂಟಾಗುವುದು
* ಮನೆಯಲ್ಲಿ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕೂಡ ಪಿತೃ ದೋಷ ಉಂಟಾಗುವುದು.
ಪಿತೃದೋಷಕ್ಕೆ ಆಷಾಢ ಅಮವಾಸ್ಯೆಯಂದು ಪರಿಹಾರ ಮಾಡಿ
* ಈ ದಿನ ಪಿತೃ ತರ್ಪಣ ಮಾಡಿ
* ನಿರ್ಗತಿಕರಿಗೆ ದಾನ ಮಾಡಿ
ಈ ರೀತಿ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುವುದು, ನೀವು ಪಿತೃದೋಷದಿಂದ ಮುಕ್ತರಾಗುತ್ತೀರಿ.
ಈ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಶಂ ಹನ ಹನ ಸುಖ ಶಾಂತಿಂ ಫಟ್ ಸ್ವಾಹಾ |
" ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಶಂ ಹನ್ ಹನ್ ಸುಖ ಶಾಂತಿಂ ದೇಹಿ ಫಟ್ ಸ್ವಾಹಾ"



Click it and Unblock the Notifications
