Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿ ಈ ಅನಾಹುತಗಳಾದರೆ ಧನ ನಷ್ಟ ಗ್ಯಾರಂಟಿ!
ಅನೇಕ ಬಾರಿ ನಮ್ಮ ಜೀವನದಲ್ಲಿ ಕಾಕತಾಳಿಯವೆಂಬಂತೆ ಕೆಲವೊಂದು ಘಟನೆಗಳು ನಡೆದು ಹೋಗುತ್ತೆ. ಹೆಚ್ಚಿನ ಸಂದರ್ಭದಲ್ಲಿ ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ಆದರೆ ನಿಮಗೊತ್ತಾ ಇದು ನೇರವಾಗಿ ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಈ ರೀತಿಯ ಕಾಕತಾಳಿಯ ಘಟನೆಗಳು ಅನೇಕ ಬಾರಿ ನಮ್ಮನ್ನು ಎಚ್ಚರಿಸುತ್ತದೆ. ಏನಾದರೂ ಕೆಟ್ಟ ಘಟನೆ ನಮ್ಮ ಬದುಕಿನಲ್ಲಿ ಆಗುತ್ತೆ ಅನ್ನೋದ್ರ ಸೂಚನೆಯನ್ನು ನೀಡುತ್ವೆ. ಅಷ್ಟಕ್ಕೂ ಕಾಕತಾಳಿಯ ಘಟನೆಗಳನ್ನು ನಾವು ಯಾಕೆ ನಿರ್ಲಕ್ಷಿಸಬಾರದು. ಇದು ನಮಗೆ ಎಂತಹ ಸೂಚನೆಯನ್ನು ನೀಡುತ್ವೆ ಅನ್ನೋದನ್ನು ತಿಳಿಯೋಣ.
ಕೈಯಲ್ಲಿರೋ ಕಪ್ ಜಾರಿ ಬಿದ್ದು ಒಡೆಯುವುದು!
ಅನೇಕ ಬಾರಿ ನಮ್ಮ ಕೈಯಲ್ಲಿರುವ ಕಪ್ ಅಥವಾ ಗ್ಲಾಸ್ ಜಾರಿ ಬಿದ್ದು ಒಡೆದು ಹೋಗುತ್ತದೆ. ಇದರ ಜೊತೆಗೆ ಅದ್ರಲ್ಲಿರೋ ನೀರು ಕೂಡ ಕೆಳಗೆ ಬೀಳುತ್ತದೆ. ಇದನ್ನು ಯಾವತ್ತಿಗೂ ಶುಭ ಸೂಚನೆಯೆಂದು ಪರಿಗಣಿಸೋದಿಲ್ಲ.
ಇದರರ್ಥ ಮುಂದಿನ ದಿನಗಳಲ್ಲಿ ನಿಮ್ಮ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಬಹುದು. ಮತ್ತು ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ಎಂಬುವುದನ್ನು ಸೂಚಿಸುತ್ತದೆ. ಈ ವಿಪತ್ತನ್ನು ತಪ್ಪಿಸಲು ನೀವು ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಿ. ಮತ್ತು ನಿಮ್ಮ ನೆಚ್ಚಿನ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ.
ಹಾಲು ಅಥವಾ ಚಹಾ ಹೊರಚೆಲ್ಲುವುದು!
ಹಾಲು ಅಥವಾ ಚಹಾ ಕುದಿಯುತ್ತಿರುವ ಸಂದರ್ಭದಲ್ಲಿ ಅದೇನಾದ್ರೂ ಹೊರ ಚೆಲ್ಲಿದರೆ ಅದನ್ನು ಕೆಟ್ಟ ಅಥವಾ ಅಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಹಾಲು ಮತ್ತು ಚಹಾ ಕುದಿಯುತ್ತಿರುವ ಸಂದರ್ಭದಲ್ಲಿ ಹೊರ ಚೆಲ್ಲಿದರೆ ಮನೆಯ ಸಂತೋಷ ಮತ್ತು ಶಾಂತಿ ಹಾಳಾಗುತ್ತಂತೆ.
ಇದರ ಜೊತೆಗೆ ಕುಟುಂಬ ಸದಸ್ಯರ ನಡುವೆ ಜಗಳಗಳು ಪ್ರಾರಂಭವಾಗುತ್ತವೆ. ಹಾಲು ಚಂದ್ರನನ್ನು ಪ್ರತಿನಿಧಿಸುತ್ತದೆ. ಮತ್ತು ಚಂದ್ರನು ಮನಸ್ಸಿಗೆ ಕಾರಣವಾದ ಗ್ರಹವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಸೋರಿಕೆಯಿಂದಾಗಿ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಮತ್ತು ಅವನ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ಆಲೋಚನೆಗಳು ಬರುತ್ತಂತೆ.
ಗಾಜು ಒಡೆದರೆ ಏನರ್ಥ!
ಒಂದು ವೇಳೆ ಗಾಜು ಅಥವಾ ಕನ್ನಡಿ ಇದ್ದಕ್ಕಿದ್ದಂತೆ ಒಡೆದರೆ ಅಥವಾ ಮನೆಯ ಕಿಟಕಿಯ ಗಾಜು ಒಡೆದರೆ ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಯಾವುದೇ ಗಾಜು ಒಡೆದರೆ ಬರಲಿರುವ ಬಿಕ್ಕಟ್ಟು ನಿವಾರಣೆಯಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇದಕ್ಕಾಗಿ ದೇವರಿಗೆ ಧನ್ಯವಾದ ಹೇಳಿ ಪೂಜೆಯ ಕೋಣೆಯಲ್ಲಿ ದೀಪ ಹಚ್ಚಿ ಅನ್ನವನ್ನು ಅರ್ಪಿಸಿ.
ಪೂಜೆಯ ತಟ್ಟೆ ಕೆಳಗೆ ಬೀಳುವುದು!
ಕೈಯಿಂದ ಪೂಜೆಯ ವಸ್ತು ಅಥವಾ ಪೂಜೆಯ ತಟ್ಟೆ ಕೆಳಗೆ ಬಿದ್ದರೆ ಅದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಕುಟುಂಬವು ಭವಿಷ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಷ್ಟೇ ಅಲ್ಲದೇ, ಪೂಜೆಯ ದೀಪವು ಇದ್ದಕ್ಕಿದ್ದಂತೆ ಆರಿಹೋದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಹೀಗಾಗಿ ದೇವರಲ್ಲಿ ಪ್ರಾರ್ಥಿಸಿ ಮತ್ತು ಕ್ಷಮೆಯನ್ನು ಕೇಳಿ. ದೇವರ ಆಶೀರ್ವಾದ ನಿಮ್ಮ ಮೇಲಿದ್ದರೆ ನೀವು ಎಲ್ಲಾ ರೀತಿಯ ಸಮಸ್ಯೆಗಳಿಂದ ಹೊರ ಬರೋದಕ್ಕೆ ಸಾಧ್ಯವಾಗುತ್ತದೆ.



Click it and Unblock the Notifications