Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕೃಷ್ಣ ಜನ್ಮಾಷ್ಟಮಿಯಂದು ಪೂಜೆ ಸಲ್ಲಿಸುವಾಗ ಈ ತಪ್ಪುಗಳು ಆಗದಿರಲಿ!
ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯ ದಿನದಂದು ದೇಶಾದ್ಯಂತ ಜನರು ಉಪವಾಸವನ್ನು ಕೈಗೊಳ್ಳುತ್ತಾರೆ. ಈ ದಿನದಂದು ಶ್ರೀಕೃಷ್ಣನನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ.

ಈ ಬಾರಿಯ ಜನ್ಮಾಷ್ಟಮಿಯ ವ್ರತವನ್ನು ಸೆ.6ರಂದು ಆಚರಿಸಲಾಗುತ್ತದೆ. ಆದರೆ ಶ್ರೀಕೃಷ್ಣನನ್ನು ಪೂಜಿಸುವಾಗ ಕೆಲವೊಂದು ತಪ್ಪುಗಳಾಗದಂತೆ ನೋಡಿಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕೂ ಜನ್ಮಾಷ್ಟಮಿ ಪೂಜೆಯ ಸಮಯದಲ್ಲಿ ಯಾವೆಲ್ಲಾ ವಿಚಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳೋಣ.
ಜನ್ಮಾಷ್ಟಮಿಯಂದು ಶುಭ್ರವಾದ ಬಟ್ಟೆಗಳನ್ನು ಧರಿಸಿ!
ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ವಿಶೇಷವಾದ ಹಬ್ಬ ಆಗಿರೋದ್ರಿಂದ ಕೆಲವೊಂದು ಪದ್ಧತಿಗಳನ್ನು ತಪ್ಪದೇ ಪಾಲಿಸುವುದು ತುಂಬಾನೇ ಮುಖ್ಯವಾಗುತ್ತದೆ. ಜನ್ಮಾಷ್ಟಮಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಇದಾದ ಬಳಿಕ ನಿಮ್ಮ ದೇವರ ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ. ಮತ್ತು ಹೂವಿನ ಮಾಲೆಗಳಿಂದ ಅಲಂಕರಿಸಿ.
ಶ್ರೀಕೃಷ್ಣನನ್ನು ಹೂವಿನಿಂದ ಅಲಂಕರಿಸಿ!
ತುಳಸಿ ಎಂದರೆ ವಿಷ್ಣುವಿಗೆ ಬಹಳ ಇಷ್ಟ. ಆದ್ದರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಅನ್ನವನ್ನು ಅರ್ಪಿಸುವಾಗ ಅದರಲ್ಲಿ ತುಳಸಿ ಎಲೆಗಳನ್ನು ಖಂಡಿತವಾಗಿ ಸೇರಿಸುವುದನ್ನು ಮರೆಯದಿರಿ.
ಪಂಚಾಮೃತದೊಂದಿಗೆ ಶ್ರೀಕೃಷ್ಣನ ಅಭಿಷೇಕ ಮಾಡಿ!
ಶ್ರೀಕೃಷ್ಣನಿಗೆ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ಸೇರಿಸಿ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಶ್ರೀಕೃಷ್ಣನ ಅಭಿಷೇಕಕ್ಕೆ ಹಸುವಿನ ತುಪ್ಪವನ್ನು ಬಳಸುವುದು ತುಂಬಾನೇ ಮುಖ್ಯ. ಶ್ರೀ ಕೃಷ್ಣ ಗೋಪಾಲಕನಾಗಿರೋದ್ರಿಂದ ಅಗತ್ಯವಾಗಿ ಗೋವಿನ ತುಪ್ಪವನ್ನೇ ಬಳಸಿರಿ.
ಶ್ರೀಕೃಷ್ಣನಿಗೆ ಹಳದಿ ವಸ್ತ್ರವನ್ನು ಧರಿಸಿರಿ!
ಪೀತಾಂಬರಿ ಎಂಬುದು ಶ್ರೀಕೃಷ್ಣನ ಹೆಸರಾಗಿದೆ. ಆದ್ದರಿಂದ ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಮತ್ತು ಹಳದಿ ಬಣ್ಣದ ಹೂವಿನಿಂದ ಅಲಂಕರಿಸಬೇಕು. ಅಷ್ಟೇ ಅಲ್ಲದೇ ಶ್ರೀ ಕೃಷ್ಣನ ತಲೆಯ ಮೇಲೆ ನವಿಲಿನ ಕಿರೀಟವನ್ನು ಹಾಕೋದನ್ನು ಮರೆಯಬೇಡಿ.
ಮನೆಯಲ್ಲಿ ತಯಾರಿಸಿದ ಪ್ರಸಾದವನ್ನು ಮಾತ್ರ ನೀಡಿ!
ಶ್ರೀಕೃಷ್ಣನಿಗೆ ಮನೆಯಲ್ಲಿ ಮಾಡಿದ ಪ್ರಸಾದವನ್ನು ಮಾತ್ರ ಅರ್ಪಿಸಿ. ಮಾರುಕಟ್ಟೆಯಿಂದ, ಹೊರಗಿನಿಂದ ತಂದ ಸಿಹಿತಿಂಡಿಗಳನ್ನು ತಂದು ಅರ್ಪಿಸಬೇಡಿ. ಒಂದು ವೇಳೆ ಹೊರಗಿನಿಂದ ತಿಂಡಿ ತಂದರೂ ಕೂಡ ನೈವೇದ್ಯ ಮಾತ್ರ ನೀವು ಕೈಯಾರೆ ತಯಾರಿಸಿದರೆ ಮಾತ್ರ ಉತ್ತಮ.
ಶ್ರೀಕೃಷ್ಣನ ಮಂತ್ರವನ್ನು ಪಠಿಸಿ
ಭಗವಾನ್ ಶ್ರೀ ಕೃಷ್ಣನನ್ನು ಪೂಜಿಸುವಾಗ ನೀವು ಶ್ರೀ ಕೃಷ್ಣನ ಮಂತ್ರವಾದ 'ಕ್ರಿಂ ಕೃಷ್ಣಾಯ ನಮಃ' ವನ್ನು ಜಪಿಸುತ್ತಿರಬೇಕು ಮತ್ತು ನೀವು ರಾಧಾ ನಾಮವನ್ನು ಕೂಡ ಜಪಿಸಬಹುದು.



Click it and Unblock the Notifications
