Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಕೃಷ್ಣ ಜನ್ಮಾಷ್ಟಮಿಯಂದು ಪೂಜೆ ಸಲ್ಲಿಸುವಾಗ ಈ ತಪ್ಪುಗಳು ಆಗದಿರಲಿ!
ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯ ದಿನದಂದು ದೇಶಾದ್ಯಂತ ಜನರು ಉಪವಾಸವನ್ನು ಕೈಗೊಳ್ಳುತ್ತಾರೆ. ಈ ದಿನದಂದು ಶ್ರೀಕೃಷ್ಣನನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ.

ಈ ಬಾರಿಯ ಜನ್ಮಾಷ್ಟಮಿಯ ವ್ರತವನ್ನು ಸೆ.6ರಂದು ಆಚರಿಸಲಾಗುತ್ತದೆ. ಆದರೆ ಶ್ರೀಕೃಷ್ಣನನ್ನು ಪೂಜಿಸುವಾಗ ಕೆಲವೊಂದು ತಪ್ಪುಗಳಾಗದಂತೆ ನೋಡಿಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕೂ ಜನ್ಮಾಷ್ಟಮಿ ಪೂಜೆಯ ಸಮಯದಲ್ಲಿ ಯಾವೆಲ್ಲಾ ವಿಚಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳೋಣ.
ಜನ್ಮಾಷ್ಟಮಿಯಂದು ಶುಭ್ರವಾದ ಬಟ್ಟೆಗಳನ್ನು ಧರಿಸಿ!
ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ವಿಶೇಷವಾದ ಹಬ್ಬ ಆಗಿರೋದ್ರಿಂದ ಕೆಲವೊಂದು ಪದ್ಧತಿಗಳನ್ನು ತಪ್ಪದೇ ಪಾಲಿಸುವುದು ತುಂಬಾನೇ ಮುಖ್ಯವಾಗುತ್ತದೆ. ಜನ್ಮಾಷ್ಟಮಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಇದಾದ ಬಳಿಕ ನಿಮ್ಮ ದೇವರ ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ. ಮತ್ತು ಹೂವಿನ ಮಾಲೆಗಳಿಂದ ಅಲಂಕರಿಸಿ.
ಶ್ರೀಕೃಷ್ಣನನ್ನು ಹೂವಿನಿಂದ ಅಲಂಕರಿಸಿ!
ತುಳಸಿ ಎಂದರೆ ವಿಷ್ಣುವಿಗೆ ಬಹಳ ಇಷ್ಟ. ಆದ್ದರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಅನ್ನವನ್ನು ಅರ್ಪಿಸುವಾಗ ಅದರಲ್ಲಿ ತುಳಸಿ ಎಲೆಗಳನ್ನು ಖಂಡಿತವಾಗಿ ಸೇರಿಸುವುದನ್ನು ಮರೆಯದಿರಿ.
ಪಂಚಾಮೃತದೊಂದಿಗೆ ಶ್ರೀಕೃಷ್ಣನ ಅಭಿಷೇಕ ಮಾಡಿ!
ಶ್ರೀಕೃಷ್ಣನಿಗೆ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ಸೇರಿಸಿ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಶ್ರೀಕೃಷ್ಣನ ಅಭಿಷೇಕಕ್ಕೆ ಹಸುವಿನ ತುಪ್ಪವನ್ನು ಬಳಸುವುದು ತುಂಬಾನೇ ಮುಖ್ಯ. ಶ್ರೀ ಕೃಷ್ಣ ಗೋಪಾಲಕನಾಗಿರೋದ್ರಿಂದ ಅಗತ್ಯವಾಗಿ ಗೋವಿನ ತುಪ್ಪವನ್ನೇ ಬಳಸಿರಿ.
ಶ್ರೀಕೃಷ್ಣನಿಗೆ ಹಳದಿ ವಸ್ತ್ರವನ್ನು ಧರಿಸಿರಿ!
ಪೀತಾಂಬರಿ ಎಂಬುದು ಶ್ರೀಕೃಷ್ಣನ ಹೆಸರಾಗಿದೆ. ಆದ್ದರಿಂದ ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಮತ್ತು ಹಳದಿ ಬಣ್ಣದ ಹೂವಿನಿಂದ ಅಲಂಕರಿಸಬೇಕು. ಅಷ್ಟೇ ಅಲ್ಲದೇ ಶ್ರೀ ಕೃಷ್ಣನ ತಲೆಯ ಮೇಲೆ ನವಿಲಿನ ಕಿರೀಟವನ್ನು ಹಾಕೋದನ್ನು ಮರೆಯಬೇಡಿ.
ಮನೆಯಲ್ಲಿ ತಯಾರಿಸಿದ ಪ್ರಸಾದವನ್ನು ಮಾತ್ರ ನೀಡಿ!
ಶ್ರೀಕೃಷ್ಣನಿಗೆ ಮನೆಯಲ್ಲಿ ಮಾಡಿದ ಪ್ರಸಾದವನ್ನು ಮಾತ್ರ ಅರ್ಪಿಸಿ. ಮಾರುಕಟ್ಟೆಯಿಂದ, ಹೊರಗಿನಿಂದ ತಂದ ಸಿಹಿತಿಂಡಿಗಳನ್ನು ತಂದು ಅರ್ಪಿಸಬೇಡಿ. ಒಂದು ವೇಳೆ ಹೊರಗಿನಿಂದ ತಿಂಡಿ ತಂದರೂ ಕೂಡ ನೈವೇದ್ಯ ಮಾತ್ರ ನೀವು ಕೈಯಾರೆ ತಯಾರಿಸಿದರೆ ಮಾತ್ರ ಉತ್ತಮ.
ಶ್ರೀಕೃಷ್ಣನ ಮಂತ್ರವನ್ನು ಪಠಿಸಿ
ಭಗವಾನ್ ಶ್ರೀ ಕೃಷ್ಣನನ್ನು ಪೂಜಿಸುವಾಗ ನೀವು ಶ್ರೀ ಕೃಷ್ಣನ ಮಂತ್ರವಾದ 'ಕ್ರಿಂ ಕೃಷ್ಣಾಯ ನಮಃ' ವನ್ನು ಜಪಿಸುತ್ತಿರಬೇಕು ಮತ್ತು ನೀವು ರಾಧಾ ನಾಮವನ್ನು ಕೂಡ ಜಪಿಸಬಹುದು.



Click it and Unblock the Notifications











