Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ದೇವಸ್ಥಾನದಲ್ಲಿಟ್ಟಿದ್ದ ಚಪ್ಪಲಿ ಕಳುವಾದ್ರೆ ಶುಭ ಸೂಚನೆಯೇ?
ಕಳ್ಳತನ ಅನ್ನೋದು ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಅಂದರೆ ದೇವಾಸ್ಥಾನದಲ್ಲಿಟ್ಟ ಚಪ್ಪಲಿಯನ್ನು ಕೂಡ ಕಳ್ಳರು ಬಿಡೋದಿಲ್ಲ. ಹೀಗಾಗಿ ದೇವಾಲಯದ ಹೊರಗಡೆ ಪ್ರತ್ಯೇಕ ಚಪ್ಪಲಿ ಸ್ಟ್ಯಾಂಡ್ಗಳನ್ನು ನಾವು ಕಾಣಬಹುದು. ಇಲ್ಲಿ ನಾವು ಹಣ ಪಾವತಿಸಿದರೆ ಸಾಕು ಅವರೇ ನಮ್ಮ ಪಾದರಕ್ಷೆಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ.
ಅನೇಕ ಬಾರಿ ನಾವು ದೇವಸ್ಥಾನದ ಹೊರಗಿಟ್ಟಿದ್ದ ಚಪ್ಪಲಿ ಅಲ್ಲಿಂದ ಹೊರ ಬರುವಷ್ಟು ಹೊತ್ತಿಗೆ ಮಂಗ ಮಾಯವಾಗಿರುತ್ತದೆ. ಆ ಕ್ಷಣ ನಾವು ಎಷ್ಟು ನೊಂದುಕೊಳ್ಳುತ್ತೇವೆ ಎಂದರೆ ಭಹುಶಃ ಚಿನ್ನ ಕಳೆದುಕೊಂಡರೂ ಕೂಡ ಅಷ್ಟು ವ್ಯಥೆ ಪಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ನೂರು ರೂಪಾಯಿ ಕೊಟ್ಟ ಚಪ್ಪಲಿ ಕಳೆದುಕೊಂಡಾಗ ಆಗುವ ನೋವು ಇದ್ಯಲ್ಲ ಅದನ್ನು ಹೇಳಲು ಅಸಾಧ್ಯ.

ಆದ್ರೆ ಇನ್ನು ಮುಂದೆ ನೀವು ನಿಮ್ಮ ಚಪ್ಪಲಿ ದೇವಸ್ಥಾನದಲ್ಲಿ ಕಳವಾದ್ರೆ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ ದೇವಸ್ಥಾನದಲ್ಲಿ ಚಪ್ಪಲಿ ಕಳುವಾದ್ರೆ ತುಂಬಾನೇ ಒಳ್ಳೆಯದಂತೆ. ಹಾಗಾದ್ರೆ ದೇವಸ್ಥಾನದಲ್ಲಿ ಚಪ್ಪಲಿ ಕಳುವಾಗೋದು ಒಳ್ಳೆಯದಾ? ಜ್ಯೋತಿಷ್ಯ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತವೆ ಅನ್ನೋದನ್ನ ತಿಳಿದುಕೊಳ್ಳೋಣ.
ದೇವಸ್ಥಾನದಲ್ಲಿ ಚಪ್ಪಲಿ ಕಳುವಾದ್ರೆ ಶುಭ ಸೂಚನೆ !
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಾಸ್ಥಾನದಲ್ಲಿಟ್ಟಿದ್ದ ಚಪ್ಪಲಿ ಕಳುವಾದ್ರೆ ಶುಭ ಸೂಚನೆಯಂತೆ. ಅದ್ರಲ್ಲೂ ಶನಿವಾರದ ದಿನ ಚಪ್ಪಲಿ ಕಳುವಾದ್ರೆ ತುಂಬಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ. ಇದರ ಜೊತೆಗೆ ನಿಮ್ಮ ಕಷ್ಟಗಳು ಎಲ್ಲಾ ಪರಿಹಾರವಾಗಲಿದೆ. ಜೊತೆಗೆ ನೀವು ಬಡತನದಿಂದ ಮುಕ್ತಿ ಹೊಂದುತ್ತೀರಿ. ಹೀಗಾಗಿ ದೇವಸ್ಥಾನದಲ್ಲಿಟ್ಟಿದ್ದ ಚಪ್ಪಲಿ ಕಳೆದು ಹೋದ್ರೆ ಬೇಸರ ಪಟ್ಟುಕೊಳ್ಳುವ ಬದಲಾಗಿ ಖುಷಿ ಪಡಿ.
ಶನಿ ದೋಷ ಪರಿಹಾರವಾಗುತ್ತಾ?
ದೇವಸ್ಥಾನದಲ್ಲಿ ನಮ್ಮ ಚಪ್ಪಲಿ ಕಳೆದು ಹೋದ್ರೆ ಒಳ್ಳೆಯದೇ ಯಾಕಂದ್ರೆ ಅದು ನಮ್ಮ ಶನಿ ದೋಷವನ್ನು ಪರಿಹರಿಸುತ್ತಂತೆ. ನಂಬಲು ಅಸಾಧ್ಯವಾದ್ರು ಕೂಡ ಇದು ನಿಜ. ನಮಗೆ ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ಬರುತ್ತಿದ್ದರೆ ಆಗ ಶನಿದೋಷ ಇರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಶನಿಯು ನಮ್ಮ ಪಾದದಲ್ಲಿ ವಾಸವಾಗಿರುತ್ತಾನೆ ಎಂದು ನಂಬಲಾಗಿದೆ. ಹಾಗೂ ಶನಿಯನ್ನು ಪಾದರಕ್ಷೆಯ ಅಂಶ ಎಂದು ಹೇಳಲಾಗುತ್ತದೆ.
ಚಪ್ಪಲಿ ದಾನ ಮಾಡೋದ್ರಿಂದ ಶನಿಯ ಆಶೀರ್ವಾದ ಪ್ರಾಪ್ತಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೋಡಿ ಚಪ್ಪಲಿಗಳನ್ನು ದಾನ ಮಾಡೋದ್ರಿಂದ ಶನಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಶನಿಗ್ರಹದಲ್ಲಿ ಅಶುಭ ಸಂಕೇತವಾದ ದಶ ಇರೋದ್ರಿಂದ ನಾವು ಏನೇ ಕೆಲಸ ಮಾಡಿದರೂ ಕೂಡ ಅದು ಯಶಸ್ವಿಯಾಗೋದಿಲ್ಲ. ಇಂತಹ ಸಮಯದಲ್ಲಿ ದೇವಾಸ್ಥಾನದಲ್ಲಿ ನಮ್ಮ ಚಪ್ಪಲಿ ಅಥವಾ ಶೂ ಕಳುವಾದ್ರೆ ಶುಭ ಸೂಚನೆ ಅಂತ ಹೇಳಲಾಗುತ್ತದೆ. ಆಗ ನಮ್ಮ ನಕ್ಷತ್ರದಲ್ಲಿದ್ದ ದೋಷ ಪರಿಹಾರವಾಗುತ್ತಂತೆ.
ನಮ್ಮ ದೇಹದ ಚರ್ಮ ಹಾಗೂ ಅದರ ಬಣ್ಣ ಶನಿಗೆ ಸಂಬಂಧಿಸಿದ್ದಾಗಿದೆ. ಇಂತಹ ಸಮಯದಲ್ಲಿ ಶನಿವಾರದ ದಿನ ಯಾರಾದರೂ ಚಪ್ಪಲಿ ಅಥವಾ ಶೂ ವನ್ನು ದೇವಸ್ಥಾನದ ಮುಂಭಾಗ ಬಿಟ್ಟು ಬಂದರೆ ಶನಿಯು ನಮ್ಮ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಿದೆ.
ಇನ್ನು ಮುಂದೆ ದೇವಸ್ಥಾನದಲ್ಲಿ ನಿಮ್ಮ ಚಪ್ಪಲಿ ಕಳುವಾದರೆ ಬೇಸರ ಪಟ್ಟುಕೊಳ್ಳುವುದರ ಬದಲು ಖುಷಿ ಪಡಿ. ಯಾಕಂದ್ರೆ ಚಪ್ಪಲಿಯ ಜೊತೆಗೆ ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತದೆ.



Click it and Unblock the Notifications


