Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಅಮ್ಮ ತೋರಿಸುತ್ತಿದ್ದ ಚಂದ ಮಾಮ ಈಗ ಭಾರತದ ಕೈಯಲ್ಲಿದೆ, ಮುಗಿಲು ಮುಟ್ಟಿದ ಭಾರತೀಯರ ಸಂಭ್ರಮ
'India Is On the Moon'ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಹೇಳುವುದನ್ನು ಕೇಳಿದಾಗ ಪ್ರತಿಯೊಬ್ಬ ಭಾರತೀಯನಿಗೆ ರೋಮಾಂಚನ ಉಂಟಾಗುವುದು.. ಈ ಕ್ಷಣಕ್ಕಾಗಿ, ಈ ಸುಂದರ, ಹೆಮ್ಮೆಯ ಕ್ಷಣಕ್ಕಾಗಿ ಇಡಿ ದೇಶವೇ ಎದುರು ನೋಡುತ್ತಿತ್ತು. ಚಂದ್ರಯಾನ 3 ತ್ರಿವಿಕ್ರಮ ಜುಲೈ 14, 2:35ಕ್ಕೆ ಭೂ ಕಕ್ಷೆಯನ್ನು ಬಿಟ್ಟು ಹೊರಟ ಕ್ಷಣದಿಂದ ಇದುವರೆಗೆ ದೇವರೇ... ಪ್ರಗ್ಯಾನ್ ಅನ್ನು ಚಂದ್ರನಲ್ಲಿ ಯಶಸ್ವಿಯಾಗಿ ಇಳಿಯುವಂತೆ ಮಾಡು ಎಂದು ಪ್ರಾರ್ಥಿಸಿದೆವು.

ಇಸ್ರೋ ವಿಜ್ಞಾನಿಗಳ ಶ್ರಮದ ಜೊತೆಗೆ ಲಕ್ಷಾಂತರ ಭಾರತೀಯರ ಪ್ರಾರ್ಥನೆಗೆ ಫಲ ಸಿಕ್ಕಿದೆ, ಇಡೀ ದೇಶದಲ್ಲಿ ಇಂದು ಸಂಭ್ರಮದ ವಾತಾವರಣ. ಶಾಲಾ ಮಕ್ಕಳು ಈ ಕ್ಷಣದಿಂದ ತಾವು ಕೂಡ ವಿಜ್ಞಾನಿಗಳಾಗುವ ಕನಸು ಕಾಣುವಂತೆ ಮಾಡಿರುವ ಈ ಯಶಸ್ವಿ ವಿಕ್ರಮ್ 3 ಯೋಜನೆ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದೆ. ಇಡೀ ವಿಶ್ವವೇ ಭಾರತದ ಸಾಧನೆಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ನಮ್ಮ ಇಸ್ರೋ ವಿಜ್ಞಾನಿಗಳಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಅಲ್ವಾ?
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಸೌತ್ ಆಫ್ರಿಕಕ್ಕೆ ಹೋಗಿರುವ ಪ್ರಧಾನಿ ಮೀದಿಯವರು ವರ್ಚ್ಯೂಯಲ್ ಮೂಲಕ ಈ ದೃಶ್ಯವನ್ನು ವೀಕ್ಷಿಸಿದ ಪ್ರಧಾನಿ ಮೋದಿ ಭಾರತದ ಬಾವುಟ ತೋರಿಸಿ ಸಂಭ್ರಮಿಸಿದರು. ನಮ್ಮ ವಿಜ್ಞಾನಿಗಳು ಹಲವು ವರ್ಷಗಳಿಂದ ಇದಕ್ಕಾಗಿ ಶ್ರಮಿಸಿದ್ದಾರೆ ,ಸಮಸ್ತ ಭಾರತೀಯರ ಪರವಾಗಿ ಕೋಟಿ ಕೋಟಿ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಮಕ್ಕಳು ಚಿಕ್ಕವಿರುವಾಗ ಚಂದ ಮಾಮನ ತೋರಿಸಿ ಅಮ್ಮ ಆಹಾರ ತಿನ್ನಿಸುತ್ತಿದ್ದಳು, ಆದರೆ ಇದೀಗ ಅದೇ ಚಂದಮಾಮನ ಮೇಲೆ ನಾವಿದ್ದೇವೆ, ಇದು ಖುಷಿಯ ವಿಚಾರವಾಗಿದೆ.
ಸೋಲೇ ಗೆಲುವಿನ ಸೋಪಾನ
ಒಮ್ಮೆ ಸೋತ ಮಾತ್ರ ಎಲ್ಲವೂ ಕಳೆದುಕೊಂಡಿವೆ ಎಂಬ ಅರ್ಥವಲ್ಲ, ಸೋತರೆ ಅದರಿಂದ ಗೆಲ್ಲುವ ಮಾರ್ಗವನ್ನು ಕಂಡುಕೊಳ್ಳಬೇಕು. ನಮ್ಮ ವಿಜ್ಞಾನಿಗಳು ಸೋಲಿನಿಂದ ಪಾಠ ಕಲಿತು ಇದೀಗ ಯಶಸ್ವಿನ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಚಂದ್ರಯಾನ 2 ವಿಫಲರಾದಾಗ ಆವಾಗ ಇಸ್ರೋ ಅಧ್ಯಕ್ಷರಾಗಿದ್ದ ಕೆ. ಶಿವನ್ ಚಿಕ್ಕ ಮಗುವಿನಂತೆ ಬಿಕ್ಕಿ- ಬಿಕ್ಕಿ ಅತ್ತಾಗ ಅವರ ಕಣ್ಣೀರು ಭಾರತೋಯರ ಕಣ್ಣಂಚಿನಲ್ಲಿ ನೀರು ತಂದಿತ್ತು. ಆ ಸೋಲಿನಿಂದ ಕಲಿತ ಪಾಠಗಳಿಂದಲೇ ಇಂದು ನಮ್ಮ ವಿಜ್ಞಾನಿಗಳು ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲು ಸಾಧ್ಯವಾಯಿತು.
ಸೂರ್ಯ-ಶುಕ್ರನ ಅಧ್ಯಯನವನ್ನು ಮಾಡಲಿದೆ ಇಸ್ರೋ
ಇಸ್ರೋ ತನ್ನ ಅನ್ವೇಷಣೆಯನ್ನು ಚಂದ್ರನಲ್ಲಿ ಮಾತ್ರವಲ್ಲ ಮುಂಬರುವ ವರ್ಷಗಳಲ್ಲಿ ಸೂರ್ಯ ಹಾಗೂ ಶುಕ್ರ ಗ್ರಹಗಳಲ್ಲಿ ಮಾಡುವ ಇಚ್ಛೆಯನ್ನು ಹೊಂದಿದ್ದು ಇಸ್ರೋದ ಮುಂದಿನ ಎಲ್ಲಾ ಪ್ರಯೋಗಗಳು ಯಶಸ್ವಿಯಾಗಲಿ, ಭಾರತ ವಿಶ್ವದಲ್ಲಿಯೇ ಬಿಲಿಷ್ಠ ರಾಷ್ಟ್ರವಾಗಿ ಬೆಳೆಯುವಂತಾಗಲಿ ಎಂಬುವುದೇ ಪ್ರತಿಯೊಬ್ಬ ಭಾರತೀಯರ ಪ್ರಾರ್ಥನೆ, ಆಶಯವಾಗಿದೆ... ಜೈ ಹಿಂದ್..



Click it and Unblock the Notifications