Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಅಮ್ಮ ತೋರಿಸುತ್ತಿದ್ದ ಚಂದ ಮಾಮ ಈಗ ಭಾರತದ ಕೈಯಲ್ಲಿದೆ, ಮುಗಿಲು ಮುಟ್ಟಿದ ಭಾರತೀಯರ ಸಂಭ್ರಮ
'India Is On the Moon'ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಹೇಳುವುದನ್ನು ಕೇಳಿದಾಗ ಪ್ರತಿಯೊಬ್ಬ ಭಾರತೀಯನಿಗೆ ರೋಮಾಂಚನ ಉಂಟಾಗುವುದು.. ಈ ಕ್ಷಣಕ್ಕಾಗಿ, ಈ ಸುಂದರ, ಹೆಮ್ಮೆಯ ಕ್ಷಣಕ್ಕಾಗಿ ಇಡಿ ದೇಶವೇ ಎದುರು ನೋಡುತ್ತಿತ್ತು. ಚಂದ್ರಯಾನ 3 ತ್ರಿವಿಕ್ರಮ ಜುಲೈ 14, 2:35ಕ್ಕೆ ಭೂ ಕಕ್ಷೆಯನ್ನು ಬಿಟ್ಟು ಹೊರಟ ಕ್ಷಣದಿಂದ ಇದುವರೆಗೆ ದೇವರೇ... ಪ್ರಗ್ಯಾನ್ ಅನ್ನು ಚಂದ್ರನಲ್ಲಿ ಯಶಸ್ವಿಯಾಗಿ ಇಳಿಯುವಂತೆ ಮಾಡು ಎಂದು ಪ್ರಾರ್ಥಿಸಿದೆವು.

ಇಸ್ರೋ ವಿಜ್ಞಾನಿಗಳ ಶ್ರಮದ ಜೊತೆಗೆ ಲಕ್ಷಾಂತರ ಭಾರತೀಯರ ಪ್ರಾರ್ಥನೆಗೆ ಫಲ ಸಿಕ್ಕಿದೆ, ಇಡೀ ದೇಶದಲ್ಲಿ ಇಂದು ಸಂಭ್ರಮದ ವಾತಾವರಣ. ಶಾಲಾ ಮಕ್ಕಳು ಈ ಕ್ಷಣದಿಂದ ತಾವು ಕೂಡ ವಿಜ್ಞಾನಿಗಳಾಗುವ ಕನಸು ಕಾಣುವಂತೆ ಮಾಡಿರುವ ಈ ಯಶಸ್ವಿ ವಿಕ್ರಮ್ 3 ಯೋಜನೆ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದೆ. ಇಡೀ ವಿಶ್ವವೇ ಭಾರತದ ಸಾಧನೆಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ನಮ್ಮ ಇಸ್ರೋ ವಿಜ್ಞಾನಿಗಳಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಅಲ್ವಾ?
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಸೌತ್ ಆಫ್ರಿಕಕ್ಕೆ ಹೋಗಿರುವ ಪ್ರಧಾನಿ ಮೀದಿಯವರು ವರ್ಚ್ಯೂಯಲ್ ಮೂಲಕ ಈ ದೃಶ್ಯವನ್ನು ವೀಕ್ಷಿಸಿದ ಪ್ರಧಾನಿ ಮೋದಿ ಭಾರತದ ಬಾವುಟ ತೋರಿಸಿ ಸಂಭ್ರಮಿಸಿದರು. ನಮ್ಮ ವಿಜ್ಞಾನಿಗಳು ಹಲವು ವರ್ಷಗಳಿಂದ ಇದಕ್ಕಾಗಿ ಶ್ರಮಿಸಿದ್ದಾರೆ ,ಸಮಸ್ತ ಭಾರತೀಯರ ಪರವಾಗಿ ಕೋಟಿ ಕೋಟಿ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಮಕ್ಕಳು ಚಿಕ್ಕವಿರುವಾಗ ಚಂದ ಮಾಮನ ತೋರಿಸಿ ಅಮ್ಮ ಆಹಾರ ತಿನ್ನಿಸುತ್ತಿದ್ದಳು, ಆದರೆ ಇದೀಗ ಅದೇ ಚಂದಮಾಮನ ಮೇಲೆ ನಾವಿದ್ದೇವೆ, ಇದು ಖುಷಿಯ ವಿಚಾರವಾಗಿದೆ.
ಸೋಲೇ ಗೆಲುವಿನ ಸೋಪಾನ
ಒಮ್ಮೆ ಸೋತ ಮಾತ್ರ ಎಲ್ಲವೂ ಕಳೆದುಕೊಂಡಿವೆ ಎಂಬ ಅರ್ಥವಲ್ಲ, ಸೋತರೆ ಅದರಿಂದ ಗೆಲ್ಲುವ ಮಾರ್ಗವನ್ನು ಕಂಡುಕೊಳ್ಳಬೇಕು. ನಮ್ಮ ವಿಜ್ಞಾನಿಗಳು ಸೋಲಿನಿಂದ ಪಾಠ ಕಲಿತು ಇದೀಗ ಯಶಸ್ವಿನ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಚಂದ್ರಯಾನ 2 ವಿಫಲರಾದಾಗ ಆವಾಗ ಇಸ್ರೋ ಅಧ್ಯಕ್ಷರಾಗಿದ್ದ ಕೆ. ಶಿವನ್ ಚಿಕ್ಕ ಮಗುವಿನಂತೆ ಬಿಕ್ಕಿ- ಬಿಕ್ಕಿ ಅತ್ತಾಗ ಅವರ ಕಣ್ಣೀರು ಭಾರತೋಯರ ಕಣ್ಣಂಚಿನಲ್ಲಿ ನೀರು ತಂದಿತ್ತು. ಆ ಸೋಲಿನಿಂದ ಕಲಿತ ಪಾಠಗಳಿಂದಲೇ ಇಂದು ನಮ್ಮ ವಿಜ್ಞಾನಿಗಳು ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲು ಸಾಧ್ಯವಾಯಿತು.
ಸೂರ್ಯ-ಶುಕ್ರನ ಅಧ್ಯಯನವನ್ನು ಮಾಡಲಿದೆ ಇಸ್ರೋ
ಇಸ್ರೋ ತನ್ನ ಅನ್ವೇಷಣೆಯನ್ನು ಚಂದ್ರನಲ್ಲಿ ಮಾತ್ರವಲ್ಲ ಮುಂಬರುವ ವರ್ಷಗಳಲ್ಲಿ ಸೂರ್ಯ ಹಾಗೂ ಶುಕ್ರ ಗ್ರಹಗಳಲ್ಲಿ ಮಾಡುವ ಇಚ್ಛೆಯನ್ನು ಹೊಂದಿದ್ದು ಇಸ್ರೋದ ಮುಂದಿನ ಎಲ್ಲಾ ಪ್ರಯೋಗಗಳು ಯಶಸ್ವಿಯಾಗಲಿ, ಭಾರತ ವಿಶ್ವದಲ್ಲಿಯೇ ಬಿಲಿಷ್ಠ ರಾಷ್ಟ್ರವಾಗಿ ಬೆಳೆಯುವಂತಾಗಲಿ ಎಂಬುವುದೇ ಪ್ರತಿಯೊಬ್ಬ ಭಾರತೀಯರ ಪ್ರಾರ್ಥನೆ, ಆಶಯವಾಗಿದೆ... ಜೈ ಹಿಂದ್..



Click it and Unblock the Notifications