Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮ ಕಾಲು-ಕೈಗಳಲ್ಲಿ ತುರಿಕೆ ಉಂಟಾದರೆ ಶುಭನಾ? ಅಶುಭನಾ?
ದೇಹದ ಯಾವುದೇ ಭಾಗದಲ್ಲಿ ತುರಿಕೆ ಆಗುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದರೂ ಕೂಡ ಕೆಲವೊಂದು ಸಾರಿ ಯಾವುದೇ ಕಾರಣವಿಲ್ಲದೇ ತುರಿಕೆ ಆರಂಭವಾಗುತ್ತದೆ. ಒಂದು ವೇಳೆ ನಿಮಗೆ ಯಾವುದೇ ಚರ್ಮ ರೋಗವಿಲ್ಲದಿದ್ದರೆ ಮತ್ತು ನಿಮಗೆ ಇದ್ದಕ್ಕಿದ್ದಂತೆ ಎಲ್ಲೋ ತುರಿಸಲು ಆರಂಭವಾದರೆ ಅದರ ಹಿಂದೆ ಒಂದು ಕಾರಣವಿದೆ ಎಂದರ್ಥ.

ಸಮುದ್ರ ಶಾಸ್ತ್ರದಲ್ಲಿ ಅದಕ್ಕೆ ವಿಶೇಷ ಮಹತ್ವವಿದೆ. ಇದರ ಪ್ರಕಾರ ಹಠಾತ್ ತುರಿಕೆ ನಿಮ್ಮ ಭವಿಷ್ಯದ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ಸೂಚನೆ ನೀಡುತ್ತದೆ. ಪಾದದ ಅಡಿಭಾಗದಲ್ಲಿ ಇದ್ದಕ್ಕಿದ್ದಂತೆ ತುರಿಕೆ ಪ್ರಾರಂಭವಾದರೆ ಏನರ್ಥ? ಸಮುದ್ರ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.
ಬಲಗಾಲಿನಲ್ಲಿ ಹಠಾತ್ ತುರಿಕೆ ಉಂಟಾಗುವುದು!
ನಿಮ್ಮ ಬಲ ಕಾಲು ಅಥವಾ ಪಾದದ ಅಡಿಭಾಗವು ಇದ್ದಕ್ಕಿದ್ದಂತೆ ತುರಿಸಲು ಶುರುವಾದರೆ ಅದು ಒಳ್ಳೆಯ ಸಂಕೇತವಾಗಿದೆ. ನೇರ ಕಾಲಿನ ತುರಿಕೆ ಉತ್ತಮ ಸಂಕೇತವೆಂದು ಪರಿಗಣಿಸಲಾಗಿದೆ. ಇದರರ್ಥ ನೀವು ಶೀಘ್ರದಲ್ಲೇ ಮಂಗಳಕರ ಪ್ರಯಾಣಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. ಈ ಪ್ರಯಾಣದಲ್ಲಿ ನಿಮ್ಮ ಯೋಜನೆಗಳು ಈಡೇರುತ್ತವೆ. ಮತ್ತು ನಿಮ್ಮ ಕೆಲಸ ಯಶಸ್ವಿಯಾಗುತ್ತದೆ. ಈ ಪ್ರಯಾಣದಿಂದ ನೀವು ಆರ್ಥಿಕ ಲಾಭವನ್ನೂ ಪಡೆಯಬಹುದು ಎಂಬ ಸೂಚನೆಯಾಗಿದೆ.
ಎಡ ಪಾದದಲ್ಲಿ ತುರಿಕೆ ಉಂಟಾಗುವುದು!
ನಿಮ್ಮ ಎಡ ಪಾದದಲ್ಲಿ ಇದ್ದಕ್ಕಿದ್ದಂತೆ ತುರಿಕೆ ಉಂಟಾದರೆ ನೀವು ಎಚ್ಚರಿಕೆಯಿಂದಿರಬೇಕು. ಇದು ನಿಮ್ಮನ್ನು ಯಾವುದೇ ಪ್ರಯಾಣಕ್ಕೆ ಹೋಗದಂತೆ ತಡೆಯುತ್ತದೆ. ಇದರರ್ಥ ನೀವು ಭವಿಷ್ಯದಲ್ಲಿ ದೊಡ್ಡ ನಷ್ಟವನ್ನು ಅನುಭವಿಸಬಹುದು. ಎಡ ಪಾದದ ಅಡಿಭಾಗದಲ್ಲಿರುವ ತುರಿಕೆ ಉಂಟಾಗುವುದು ಪ್ರಯಾಣ ಮಾಡಬಾರದು ಎಂಬುವುದನ್ನು ಸೂಚಿಸುತ್ತದೆ. ಈ ಪ್ರಯಾಣದಲ್ಲಿ ನೀವು ಅಹಿತಕರ ಪರಿಣಾಮಗಳನ್ನು ಎದುರಿಸಬೇಕಾಗಬಹುದು.
ಬಲ ಮತ್ತು ಎಡಗೈಯಲ್ಲಿ ತುರಿಕೆ!
ಕೈಯಲ್ಲಿ ಅಥವಾ ಅಂಗೈಗಳಲ್ಲಿ ತುರಿಕೆ ಆರ್ಥಿಕ ಲಾಭ ಅಥವಾ ನಷ್ಟದೊಂದಿಗೆ ಸಂಬಂಧಿಸಿದೆ. ಒಬ್ಬ ವ್ಯಕ್ತಿಗೆ ತನ್ನ ಬಲಗೈಯಲ್ಲಿ ತುರಿಕೆ ಉಂಟಾದರೆ ಅವನು ಎಲ್ಲಿಂದಲಾದರೂ ಹಣವನ್ನು ಪಡೆಯುತ್ತಾನೆ ಎಂಬ ನಿರೀಕ್ಷೇಯಿದೆ. ಆದರೆ ಎಡಗೈಯಲ್ಲಿ ತುರಿಕೆ ಉಂಟಾದರೆ ನಿಮ್ಮ ಕೈಯಿಂದ ಹಣ ಖರ್ಚಾಗುತ್ತದೆ ಎಂದರ್ಥ. ಇಲ್ಲವಾದರೆ ನೀವು ಕೆಲವು ಕೆಲಸದಲ್ಲಿ ಹಣದ ನಷ್ಟವನ್ನು ಅನುಭವಿಸಬಹುದು. ಇದಲ್ಲದೇ ಎಡಗೈಯಲ್ಲಿ ತುರಿಕೆ ಬರುವುದು ರೋಗದ ಲಕ್ಷಣ ಎಂದೂ ಕೆಲವರು ನಂಬುತ್ತಾರೆ. ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ತೀವ್ರ ಅನಾರೋಗ್ಯಕ್ಕೆ ಒಳಗಾಗಬಹುದು.



Click it and Unblock the Notifications
