Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈರುಳ್ಳಿಯಲ್ಲಿ ಕಪ್ಪು ಕಲೆಗಳು ಮೂಡುವುದು ಏಕೆ..? ಇದು ಸೇವನೆಗೆ ಯೋಗ್ಯವೇ..?
ನಾವು ಎಷ್ಟೇ ಜಾಗರುಕತೆಯಿಂದ ತರಕಾರಿ ತಂದರೂ ಒಂದೆರಡು ಬೇಗ ಹಾಳಾಗುತ್ತವೆ. ಇಲ್ಲದೆ ಒಳಗೆ ಕೊಳೆತಿರುತ್ತವೆ. ಆದ್ರೆ ನಾವು ಕೊಳೆತಿರುವ ತರಕಾರಿಯನ್ನು ಅರ್ಧ ಕತ್ತರಿಸಿಯೋ ಇಲ್ಲವೆ ಚೆನ್ನಾಗಿ ತೊಳೆದು ಬಳಸುವ ಪ್ರಯತ್ನ ಮಾಡಿರುತ್ತೇವೆ. ಆದ್ರರೆ ಈ ರೀತಿ ತರಕಾರಿಗಳ ಬಳಸುವುದು ಉತ್ತಮ ಅಭ್ಯಾಸವಂತೂ ಅಲ್ಲ.
ಇನ್ನು ತರಕಾರಿಗಳಲ್ಲಿ ತುಂಬ ದಿನ ಹಾಳಾಗದೆ ಇರುವುದು ಅಂದ್ರೆ ಅದು ಈರುಳ್ಳಿ. ಆದ್ರೆ ನೀವು ಎಂದಾದರು ಗಮನಿಸಿದ್ದೀರಾ? ನೀವು ಅಡುಗೆ ಮನೆಯಲ್ಲಿಟ್ಟ ಈರುಳ್ಳಿ ಕಪ್ಪಾಗಿರುತ್ತದೆ. ಅಂದ್ರೆ ಅದೇನು ಕೊಳೆತಿರುವುದಿಲ್ಲ. ಆದ್ರೆ ಕಪ್ಪಾದ ಮಸಿ ಈರುಳ್ಳಿ ಮೇಲೆ ಬಂದಿರುತ್ತದೆ.

ಹಾಗಾದರೆ ಈ ರೀತಿ ಕಪ್ಪಾಗಿರುವ ಈರುಳ್ಳಿ ಸೇವಿಸಲು ಯೋಗ್ಯವೇ? ಕಪ್ಪಾದ ಈರುಳ್ಳಿ ಸೇವಿಸುವುದರಿಂದ ಏನಾಗಲಿದೆ? ಇದರಿಂದ ಏನಾದರು ಸಮಸ್ಯೆ ಏದುರಾಗುತ್ತಾ? ಕೆಲವು ಈರುಳ್ಳಿ ಸಿಪ್ಪೆ ತೆಗೆಯುವಾಗ ಅದರ ಮೇಲೆ ಕಪ್ಪು ಮಸಿ ರೀತಿಯ ವಸ್ತು ಹಿಡಿದಿರುತ್ತದೆ. ಎಷ್ಟೋ ಜನಕ್ಕೆ ಈ ರೀತಿ ಇರುವ ಈರುಳ್ಳಿ ತಿನ್ನಬಹುದೇ..? ಆ ಕಪ್ಪು ಅಚ್ಚು ದೇಹಕ್ಕೆ ಹಾನಿ ಮಾಡಬಹುದೇ ಎಂಬ ಗೊಂದಲವಿದೆ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಅಡುಗೆಯಲ್ಲಿ ಈರುಳ್ಳಿ ಬಹುಮುಖ್ಯ ವಸ್ತು. ಅದರಲ್ಲೂ ರುಚಿಕರ ಅಡುಗೆಗೆ ಈರುಳ್ಳಿ ಮುಖ್ಯ. ಬಾಣಲೆಯಲ್ಲಿ ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ ಎಲ್ಲಾ ಪದಾರ್ಥಗಳಿಗೂ ಈರುಳ್ಳಿ ಸೇರಿಸುತ್ತಾರೆ. ಅದರಲ್ಲೂ ಬಿರಿಯಾನಿಗೆ ಹೆಚ್ಚು ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದರೆ ಅದರ ರುಚಿ ಹೆಚ್ಚು.
ರುಚಿ ಅಡುಗೆಯ ಒಂದು ಅಂಶವಾಗಿದ್ದರೆ, ಅದರ ಪ್ರಯೋಜನಗಳು ಹಲವಾರು. ಈರುಳ್ಳಿ ಜೀರ್ಣಕಾರಿ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯಕ್ಕೂ ಇದು ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ನಮ್ಮ ದೇಹದಲ್ಲಿನ ಕೆಲವು ಅಲರ್ಜಿ ಸಮಸ್ಯೆಗಳು, ಕಣ್ಣಿನ ತುರಿಕೆ, ಗಂಟಲು ಕಿರಿಕಿರಿ ಮತ್ತು ನೆಗಡಿ ಮುಂತಾದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಈರುಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಕಪ್ಪು ಮಸಿಯನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ರೀತಿಯ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಈ ಕಪ್ಪು ಅಚ್ಚು ಮ್ಯೂಕೋರ್ಮೈಕೋಸಿಸ್ ಅಲ್ಲ. ಆದರೆ ಈ ಕಪ್ಪು ಅಚ್ಚು ಒಂದು ರೀತಿಯ ವಿಷವನ್ನು ಹೊರಸೂಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಆಸ್ಪರ್ಜಿಲಸ್ ನೈಗರ್ ಅಪಾಯಕಾರಿಯೇ?
ಈ ಕಪ್ಪು ಬಣ್ಣದ ಮಸಿಯು ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ಇದು ಅಲರ್ಜಿಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಈಗಾಗಲೇ ಅಲರ್ಜಿ ಇರುವವರು ಈ ಕಪ್ಪು ಬಣ್ಣದ ಮಸಿ ಹೊಂದಿರುವ ಈರುಳ್ಳಿಯನ್ನು ಸೇವಿಸದಿರುವುದೇ ಉತ್ತಮ ಎಂದು ಹೇಳುತ್ತಾರೆ. ಅಸ್ತಮಾ ಇರುವವರು ಅದನ್ನು ಸೇವಿಸಿದಾಗ ಪರಿಣಾಮ ಬೀರಬಹುದು ಎಂದೂ ಹೇಳಲಾಗುತ್ತದೆ.
ತೊಳೆದು ಸೇವಿಸಬಹುದು?
ಈ ರೀತಿ ಕಪ್ಪು ಕಲೆ ಅಥವಾ ಮಸಿ ರೀತಿ ಇರುವ ಈರುಳ್ಳಿಯನ್ನು ಸಿಪ್ಪೆ ಸುಲಿದ ಬಳಿಕ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಚೆನ್ನಾಗಿ ಕಪ್ಪು ಕಲೆಗಳು ಹೋಗುವವರೆಗೂ ತೊಳೆದು ಸೇವಿಸಬಹುದು, ಇಲ್ಲವೆ ಅಡುಗೆಗೆ ಬಳಸಬಹುದು. ಆದರೆ ಕಪ್ಪ ಮಸಿಯಾದ ಈರುಳ್ಳಿಯ ಸಿಪ್ಪೆ ತೆಗೆದು ಫ್ರಿಡ್ಜ್ನಲ್ಲಿಟ್ಟು ಅಡುಗೆಗೆ ಬಳಸುವುದು ಉತ್ತಮವಲ್ಲ.



Click it and Unblock the Notifications











