Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮನೆಯೊಳಗೆ ಯಾವ ಪಕ್ಷಿ, ಪ್ರಾಣಿ ಬಂದರೆ ಅಪಶಕುನ..! ಇಲ್ಲಿದೆ ಮಾಹಿತಿ
ಮನೆಯಲ್ಲಿ ಹುಳು, ಕೀಟ, ಹಲ್ಲಿ, ಹಾವು ಬರುವುದು ಸಾಮನ್ಯವೇ. ಅದರಲ್ಲೂ ಮಳೆಗಾಲದಲ್ಲಂತು ಕೀಟಗಳು ಆಶ್ರಯ ಅರಸಿ ಮನೆಯೊಳಗೆ ಬಂದು ಬಿಡುತ್ತವೆ. ಹಾಗೆ ಹಿಂದೂ ಧರ್ಮದಲ್ಲಿ ಹಾಗೂ ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ಪ್ರಾಣಿ, ಪಕ್ಷಗಳು, ಮನೆಯೊಳಗೆ ಬಂದರೆ ಅಪಶಕುನ ಎನ್ನಲಾಗಿದೆ.
ಪ್ರಾಣಿ, ಪಕ್ಷಿಗಳು ಮನೆಯೊಳಗೆ ಬರುವುದು ಈ ಶಾಸ್ತ್ರಗಳ ಪ್ರಕಾರ ಅಪಶಕುನಕ್ಕೆ ದಾರಿಯಾಗುತ್ತದೆ. ಅದರಲ್ಲೂ ಕೆಲವೊಮ್ಮೆ ಪ್ರಾಣಿ ಅಥವಾ ಪಕ್ಷಿ ಮನೆಯಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ವಿವರಿಸಲಾಗಿದೆ. ಶಕುನಗಳು ಎಂದರೆ ಅಲ್ಲಿ ಕೆಟ್ಟ ಶಕುನ ಹಾಗೂ ಶುಭ ಶಕುನ ಎಂಬುದಿದೆ. ಕೆಲವೊಮ್ಮೆ ನಾವು ಎಲ್ಲಿಯಾದರು ಹೋಗುವಾಗ ಕೆಲವೊಂದು ಪ್ರಾಣಿ, ಪಕ್ಷಿ ಎದುರಾದರೆ ಆ ಕೆಲಸ ಶುಭವಾಗಲೂ ಬಹುದು ಹಾಗೆ ಅಶುಭವೂ ಆಗಬಹುದು.

ಹಾಗಾದ್ರೆ ನಾವಿಂದು ಯಾವ ಪಕ್ಷ ಅಥವಾ ಪ್ರಾಣಿ ಮನೆಯೊಳಗೆ ಬರಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಕಾಗೆ
ಕಾಗೆಯನ್ನು ಶನಿದೇವರ ವಾಹನ ಎಂದು ನಾವು ಪರಿಗಣಿಸಿದ್ದೇವೆ. ಕಾಗೆ ಶುಭ ಹಾಗೂ ಅಶುಭ ಸೂಚಕವೂ ಹೌದು. ಪಿಂಡ ಪ್ರಧಾನ ಕಾರ್ಯದಲ್ಲಿ ಕಾಗೆ ಶುಭ ಸೂಚಕವಾಗಿಯೂ ಶುಭ ಕಾರ್ಯಗಳಲ್ಲಿ ಅದು ಅಶುಭವಾಗಿಯೂ ಕಾಣಿಸಿಕೊಳ್ಳಲಿದೆ. ಆದರೆ ಮನೆಯ ಮುಂದೆ ಕಾಗೆ ಪದೇ ಪದೇ ಕೂಗುತ್ತಿದ್ದರೆ ಮನೆಗೆ ಯಾರಾದರು ಅತಿಥಿಗಳು ಬರುತ್ತಾರೆ ಎಂದು ನಂಬಲಾಗುತ್ತದೆ.
ಆದರೆ ಕಾಗೆ ಮನೆಯೊಳಗೆ ಬಂದು ಬಿಟ್ಟರೆ ಅದು ಅಶುಭದ ಸಂಕೇತವಂತೆ. ಅಲ್ಲದೆ ಆರ್ಥಿಕ ಸಂಕಷ್ಟ ಕಾದಿದೆ ಎಂಬ ಸೂಚಕವಂತೆ. ಇನ್ನು ನಿಮ್ಮ ವಾಹನದ ಮೇಲೆ ಪದೇ ಪದೇ ಕಾಗೆ ಕೂರುತ್ತಿದ್ದರೆ ಅದೇ ವಾಹನ ನಿಮಗೆ ಕಂಟಕವಾಗಬಹುದು. ಅದರಿಂದ ಹಾನಿ ಇರಬಹುದು ಎಂದು ಅಂದಾಜಿಸಲಾಗಿದೆ.
ಜೇನು ಗೂಡು
ಸಾಮಾನ್ಯವಾಗಿ ಜನರಿಂದ ದೂರವೇ ಉಳಿಯುವ ಜೇನುಗಳು ಕೆಲವೊಮ್ಮೆ ಮನೆಯೊಳಗೆ ಇಲ್ಲವೆ ಮನೆಗೆ ಅಂಟಿಕೊಂಡಂತೆ ಗೂಡು ಕಟ್ಟುತ್ತವೆ. ಅದರಲ್ಲೂ ಜೇನು ಹುಳುಗಳು ಈಶಾನ್ಯ ದಿಕ್ಕಿನಲ್ಲಿ ಕಟ್ಟಿದ್ದರೆ ಒಳ್ಖೆಯ ಸೂಚಕ, ಆದರೆ ಆಗ್ನೇಯ ದಿಕ್ಕಿನಲ್ಲಿ ಜೇನು ಕಟ್ಟಿದರೆ ಕಲಹಕ್ಕೆ ಕಾರಣವಾಗುತ್ತದೆ. ಹಾಗೆ ಜೇನು ಮನೆಯೊಳಗೆ ಸಾಯುತ್ತಿದ್ದರೆ ಅದು ಮನೆ ಯಜಮಾನನ ಆರೋಗ್ಯಕ್ಕೆ ಹಾಣಿಯಾಗುವ ಮುನ್ಸೂಚನೆಯಂತೆ.
ಹಾವು
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಾವುಗಳು ಮನೆಯೊಳಗೆ ಬರುವುದು ನೋಡಬಹುದು. ಪದೇ ಪದೇ ಮನೆಯೊಳಗೆ ಹಾವುಗಳು ಬರುತ್ತಿದ್ದರೆ ಸರ್ಪದೋಷ ಇದೆ ಎಂಬ ಮುನ್ಸೂಚನೆ. ಹಾವುಗಳು ಬೆಚ್ಚಗಿರುವ ಜಾಗ ಹುಡುಕುವುದರಿಂದ ಮನೆಯೊಳಗೆ ಬರುವುದು ಕಾಮನ್, ಆದರೆ ನಾಗರಹಾವುಗಳು ಪದೇ ಪದೇ ಮನೆಯೊಳಗೆ ಬರಬಾರದು. ಇದು ಕಾಲ ಸರ್ಪ ದೋಷದ ಮುನ್ಸೂಚನೆಯಾಗಿರುತ್ತದೆ.
ಬಾವಲಿ
ಬಾವಲಿಗಳು ರಾತ್ರಿ ಸಂಚಾರಿಗಳು, ಆದರೆ ಅವು ನಿಮ್ಮ ಮನೆಯೊಳಗೆ ಬಂದು ಸೇರಿಕೊಳ್ಳುವುದು ಮನೆಗೆ ಶ್ರೇಯಸ್ಸಲ್ಲ. ಮನೆಯ ಮೇಲೆ ಕೆಟ್ಟ ರೀತಿಯ ಪ್ರಯೋಗ ನಡೆದಿದ್ದರೆ ಮಾತ್ರವೆ ಈ ಬಾವಲಿಗಳು ಮನೆಯೊಳಗೆ ಉಳಿಯುತ್ತವೆ. ಹಾಗೆ ಕೆಲವೊಮ್ಮೆ ಸತ್ತು ಬೀಳಬಹುದು. ಇದು ಕೆಟ್ಟದರ ಮುನ್ಸೂಚನೆಯಾಗಿರಲಿದೆ.



Click it and Unblock the Notifications
