Latest Updates
-
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್
ಸಿಸ್ಟರ್.. ಮನೆಯಲ್ಲಿ ಸದಾ ಜಗಳ ಆಗ್ತಿದ್ಯಾ? ಈ 5 ವಸ್ತು ತಕ್ಷಣ ಬಿಸಾಕಿ.. ನೆಮ್ಮದಿ ತಾನಾಗಿಯೇ ಬರುತ್ತೆ!
ಮನೆಯಲ್ಲಿ ಸದಾ ಕಲಹ, ಜಗಳ ಆಗುತ್ತಿದೆಯೇ? ಈ 5 ವಸ್ತುಗಳನ್ನು ತಕ್ಷಣ ಹೊರಹಾಕಿ.. ನೆಮ್ಮದಿ ತಾನಾಗಿಯೇ ಬರುತ್ತೆ! ಹೌದು, ಮನೆಯಲ್ಲಿ ನೆಮ್ಮದಿ ಮತ್ತು ಸಕಾರಾತ್ಮಕ ವಾತಾವರಣ ನೆಲೆಸಲು ವಾಸ್ತು ಶಾಸ್ತ್ರದ (Home Vastu) ಪಾತ್ರ ದೊಡ್ಡದು. ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ನಾವು ಆರಿಸಿಕೊಳ್ಳುವ ವಸ್ತುಗಳು ಜೀವನದ ಮೇಲೆ ನೇರ ಪ್ರಭಾವ ಬೀರುತ್ತವೆ.
ಹಲವು ಬಾರಿ ಅರಿವಿಲ್ಲದೆ ಇರಿಸಿದ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ಮನೆಗಳಲ್ಲಿ ಅಶಾಂತಿ, ಕಲಹ ಮತ್ತು ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗುತ್ತವೆ. ಸುಖ, ಶಾಂತಿ ನೆಲೆಸಬೇಕಾದರೆ, ಕೇವಲ ಕಠಿಣ ಪರಿಶ್ರಮವಿದ್ದರೆ ಸಾಲದು, ವಾಸ್ತು ಕೂಡ ಸರಿಯಾಗಿರಬೇಕು.

ನಿಮ್ಮ ಮನೆಯಲ್ಲೂ ನಿರಂತರ ಜಗಳಗಳು, ಅಶಾಂತಿ ಇವೆಯೇ? ಹಾಗಿದ್ದರೆ, ವಾಸ್ತು ತಜ್ಞರ ಪ್ರಕಾರ, ಮನೆಯ ನೆಮ್ಮದಿಯನ್ನು (Vastu for home peace) ಹಾಳುಮಾಡುವ ಈ ಐದು ಅಶುಭ ವಸ್ತುಗಳನ್ನು (Negative Energy Removal) ಗುರುತಿಸಿ, ಅವನ್ನು ಈ ಕೂಡಲೇ ಹೊರಹಾಕಿ.
ಗ್ಲಾಸ್ / ಕನ್ನಡಿ
ಮನೆಯಲ್ಲಿ ಒಡೆದ ಕನ್ನಡಿ ಅಥವಾ ಬಿರುಕು ಬಿಟ್ಟ ಗಾಜಿನ ವಸ್ತುಗಳಿರುವುದು ಗಂಭೀರ ದೋಷ. ಇಂತಹ ವಸ್ತುಗಳು ಮನೆಯ ಸದಸ್ಯರ ನಡುವೆ ಮಾನಸಿಕ ಒತ್ತಡವನ್ನು ಹೆಚ್ಚಿಸಿ, ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತವೆ. ಕಿಟಕಿ, ಬೀರು ಅಥವಾ ಅಲಂಕಾರಿಕ ವಸ್ತುಗಳ ಗಾಜು ಒಡೆದಿದ್ದರೆ, ಕೂಡಲೇ ಅವುಗಳನ್ನು ಬದಲಾಯಿಸುವುದು ಸೂಕ್ತ.
ಗಡಿಯಾರಗಳು
ಗಡಿಯಾರವು ಸಮಯ ಮತ್ತು ಪ್ರಗತಿಯ ಸಂಕೇತ. ನಿಂತ ಗಡಿಯಾರಗಳು ಜೀವನದಲ್ಲಿ ಉನ್ನತಿ ಕುಂಠಿತವಾಗುವುದನ್ನು ಸೂಚಿಸುತ್ತವೆ. ಇವು ಮನೆಯಲ್ಲಿ ನಕಾರಾತ್ಮಕ ಕಂಪನಗಳನ್ನು ಸೃಷ್ಟಿಸಿ, ವಿಶೇಷವಾಗಿ ದಂಪತಿಗಳು ಹಾಗೂ ಮಕ್ಕಳ ನಡುವೆ ಅನಗತ್ಯ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ನಿಂತ ಗಡಿಯಾರಕ್ಕೆ ಕೂಡಲೇ ಬ್ಯಾಟರಿ ಬದಲಿಸಿ ಅಥವಾ ದುರಸ್ತಿಯಾಗದಿದ್ದರೆ ಅದನ್ನು ಮನೆಯಿಂದ ಹೊರಹಾಕಿ.
ಒಣಗಿದ / ಮುಳ್ಳಿನ ಗಿಡಗಳು
ಮನೆಗೆ ಹಸಿರು ಸೌಂದರ್ಯ ನೀಡುತ್ತದೆ ನಿಜ. ಆದರೆ, ಒಣಗಿದ ಅಥವಾ ಕಳ್ಳಿ ಗಿಡಗಳಂತಹ ಮುಳ್ಳಿನ ಸಸ್ಯಗಳನ್ನು ಮನೆಯೊಳಗೆ ಇಡಬಾರದು. ಒಣಗಿದ ಗಿಡಗಳು ಅದೃಷ್ಟ ಕುಂಠಿತವಾಗುವುದರ ಸಂಕೇತವಾದರೆ, ಮುಳ್ಳಿನ ಗಿಡಗಳು ಸಂಬಂಧಗಳಲ್ಲಿ ಕಹಿ ಮತ್ತು ಚುಚ್ಚುಮಾತುಗಳನ್ನು ಹೆಚ್ಚಿಸುತ್ತವೆ. ಸದಾ ಹಸಿರಾಗಿರುವ ತುಳಸಿ, ಮನಿ ಪ್ಲಾಂಟ್ನಂತಹ ಶುಭ ಗಿಡಗಳನ್ನು ಬೆಳೆಸುವುದು ಆರೋಗ್ಯಕರ ವಾತಾವರಣಕ್ಕೆ ಪೂರಕ.
ಪಾತ್ರೆಗಳು ಮತ್ತು ಕಬಾಡ್
ಅಡುಗೆಮನೆಯಲ್ಲಿ ಒಡೆದ ಅಥವಾ ಬಿರುಕು ಬಿಟ್ಟ ಪಾತ್ರೆಗಳನ್ನು ಬಳಸುವುದು ದಾರಿದ್ರ್ಯಕ್ಕೆ ದಾರಿ. ಇಂತಹ ಪಾತ್ರೆಗಳಲ್ಲಿ ಊಟ ಮಾಡುವುದು ಅಥವಾ ಅವುಗಳನ್ನು ಸಂಗ್ರಹಿಸಿಡುವುದು ಮನೆಯ ಶಾಂತಿಗೆ ಭಂಗ ತರಬಹುದು. ಮತ್ತೊಂದೆಡೆ, ಮಹಡಿ (Terrace) ಅಥವಾ ಮೆಟ್ಟಿಲುಗಳ ಕೆಳಗೆ ಕಸ ಮತ್ತು ಹಳೆಯ ಸಾಮಾನುಗಳನ್ನು ರಾಶಿ ಹಾಕುವುದರಿಂದ ಹಣದ ಹರಿವು ಕುಂಠಿತವಾಗುತ್ತದೆ. ಉಪಯೋಗಕ್ಕೆ ಬಾರದ ಈ ವಸ್ತುಗಳನ್ನು ತಕ್ಷಣವೇ ವಿಲೇವಾರಿ ಮಾಡಿ.
ವಿಗ್ರಹಗಳು ಮತ್ತು ಚಿತ್ರಗಳು
ದೇವರಿಗಾಗಲಿ ಅಥವಾ ಇತರ ಜೀವಿಗಳಿಗಾಗಲಿ, ಒಡೆದ ವಿಗ್ರಹಗಳನ್ನು ಪೂಜಾ ಕೋಣೆಯಲ್ಲಿ ಅಥವಾ ಮನೆಯಲ್ಲಿ ಇಡಬಾರದು. ಯುದ್ಧದ ದೃಶ್ಯಗಳು, ಅಳುತ್ತಿರುವ ಜನರ, ಮುಳುಗುತ್ತಿರುವ ಹಡಗು ಅಥವಾ ಮೌನವಾಗಿರುವ ಕಾಡು ಪ್ರಾಣಿಗಳ ಚಿತ್ರಗಳು ಮನಸ್ಸನ್ನು ಸದಾ ಉದ್ವಿಗ್ನ ಸ್ಥಿತಿಯಲ್ಲಿಡುತ್ತವೆ. ಇವು ಮನೆಯಲ್ಲಿ ಜಗಳಗಳಿಗೆ ಪ್ರಚೋದನೆ ನೀಡಬಹುದು. ಆದ್ದರಿಂದ, ಮನೆಯ ಗೋಡೆಗಳಿಗೆ ನಗುಮುಖದ ಚಿತ್ರಗಳು ಅಥವಾ ಶಾಂತಿಯುತ ಸುಂದರ ಪ್ರಕೃತಿಯ ಚಿತ್ರಗಳನ್ನು ಮಾತ್ರ ಆರಿಸಿಕೊಳ್ಳಿ.
ಸಿಂಪಲ್ ವಾಸ್ತು ಟಿಪ್ಸ್ಗಳು
ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಲು ಕೆಲವು ಸರಳ ವಾಸ್ತು ಸಲಹೆಗಳನ್ನು ಇಂದಿನಿಂದಲೇ ಪಾಲಿ.
- ಪ್ರತಿದಿನ ಸಂಜೆ ಸಾಂಬ್ರಾಣಿ ಧೂಪ ಅಥವಾ ಅಗರಬತ್ತಿಯನ್ನು ಹಚ್ಚಿ.
- ಉಪ್ಪಿನ ನೀರು ಸೇರಿಸಿ ನೆಲವನ್ನು ಒರೆಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸುಖ, ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ.
- ಸ್ವಚ್ಛ ಮತ್ತು ವ್ಯವಸ್ಥಿತವಾದ ಮನೆಯಲ್ಲಿ ಮಾತ್ರ ಲಕ್ಷ್ಮೀದೇವಿ ನೆಲೆಸುತ್ತಾಳೆ.
ಒಟ್ಟಾರೆ, ನಿಮ್ಮ ಮನೆಯನ್ನು ಪರೀಕ್ಷಿಸಿ, ಈ ಅಶುಭ ವಸ್ತುಗಳನ್ನು ಹೊರಹಾಕಿ ಮತ್ತು ಆನಂದಮಯ ಜೀವನವನ್ನು ಆಹ್ವಾನಿಸಿ. ವಾಸ್ತು ಸಲಹೆಗಳನ್ನು (Vastu Tips for Home) ಪಾಲಿಸುವ ಮೂಲಕ ಸುಖಮಯ ಬದುಕನ್ನು ಕಂಡುಕೊಳ್ಳಬಹುದು.



Click it and Unblock the Notifications











