Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ನಿಂಬೆ-ಹಸಿ ಮೆಣಸು ಕಟ್ಟುವಾಗ ನೀವು ಮಾಡುತ್ತಿರುವ ತಪ್ಪುಗಳಿವು..! ಇನ್ನೆಂದು ಮಾಡಬೇಡಿ..!
ಹಿಂದೂ ಧರ್ಮದಲ್ಲಿ ಹಲವು ಸಂಪ್ರದಾಯಗಳು, ಆಚರಣೆಗಳಿವೆ. ಅದರಲ್ಲಿ ಕೆಲವೊಂದನ್ನು ನಾವು ಚಾಚು ತಪ್ಪದೆ ಮಾಡುತ್ತಿರುತ್ತೇವೆ. ದೇವರ ಪೂಜೆಯಿಂದ ಹಿಡಿದು ಕೆಲವೊಂದು ಸಣ್ಣಪುಟ್ಟ ಆಧ್ಯಾತ್ಮಿಕ ನಂಬಿಕೆಗಳನ್ನ ನಾವು ಶ್ರದ್ಧಾ ಭಕ್ತಿಯಿಂದ ಮಾಡುತ್ತಿರುತ್ತೇವೆ. ಅಂತಹ ನಂಬಿಕೆಯಲ್ಲಿ ಈ ನಿಂಬೆ ಹಣ್ಣು ಮೆಣಸಿನ ಕಾಯಿ ಸುರಿದು ಬಾಗಿಲಿಗೆ ಕಟ್ಟುವುದಾಗಿದೆ.
ನಿಂಬೆ ಹಾಗೂ ಹಸಿ ಮೆಣಸಿನಕಾಯಿಯನ್ನು ಮನೆಯ ದ್ವಾರ ಬಾಗಿಲಿನ ಮೇಲೆ ಕಟ್ಟುತ್ತಾರೆ. ಇದಕ್ಕೆ ಹಲವು ರೀತಿಯ ನಂಬಿಕೆಗಳು ಸುತ್ತಿಕೊಂಡಿದೆ. ಹಾಗೆ ವೈಜ್ಞಾನಿಕ ಕಾರಣವೂ ಕೂಡ ಇದೆ. ಬಹುತೇಕ ಎಲ್ಲರ ಮನೆಯಲ್ಲಿ ಶುಕ್ರವಾರದಂದು ಬೆಳಗ್ಗೆ ಪೂಜೆ ಸಲ್ಲಿಸಿದ ಬಳಿಕ ಅಥವಾ ಸಂಜೆ ಪೂಜೆ ಮಾಡಿದ ಬಳಿಕ ಆರತಿಯಲ್ಲಿ ಈ ನಿಂಬೆಯನ್ನು ಕಪ್ಪಾಗಿಸಿ ಬಳಿಕ ಬಾಗಿಲಿಗೆ ಕಟ್ಟುತ್ತಾರೆ.

ಒಂದು ವಾರಗಳ ಕಾಲ ಈ ನಿಂಬೆ ಬಾಗಿಲಿನ ಮೇಲೆ ಇರುತ್ತೆ. ಇದರ ಜೊತೆಗೆ ಹಸಿ ಮೆಣಸು ಸಹ ಸುರಿದಿರುತ್ತಾರೆ. ಹಾಗಾದ್ರೆ ಇದನ್ನು ಕಟ್ಟುವುದೇಕೆ? ಮನೆಯ ಮುಂದೆ ಅಥವಾ ಅಂಗಡಿ, ದ್ವಾರ ಬಾಗಿಲಿಗೆ ಇದನ್ನು ನೇತು ಹಾಕುವುದರಿಂದ ಯಾರ ಕೆಟ್ಟ ಕಣ್ಣು ಬೀಳುವುದಿಲ್ಲ. ಇದು ಸಂಪತ್ತನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಅಂಗಡಿಯ ಮೇಲೆ ದುಷ್ಟ ಜನರ ಕಣ್ಣು ಬೀಳುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ದೇವಿಗೆ ಮಾಡಿದ ಆರತಿಯಲ್ಲಿ ಈ ನಿಂಬೆಯನ್ನು ಸುಟ್ಟು ಬಳಿಕ ಕಟ್ಟಲಾಗುತ್ತದೆ. ಹಳೆಯ ನಿಂಬೆಯನ್ನು ಕಿತ್ತೆಸೆಯಲಾಗುತ್ತದೆ. ಆದ್ರೆ ಈ ರೀತಿ ನಿಂಬೆ ಹಾಗೂ ಮೆಣಸು ಕಟ್ಟುವಾಗ ನಾವು ಕೆಲವು ತಪ್ಪುಗಳ ಮಾಡುತ್ತಿರುತ್ತೇವೆ. ನಮ್ಮ ಅರಿವಿಲ್ಲದೆ ಮಾಡಿದ ತಪ್ಪುಗಳು ನಮ್ಮ ಪೂಜೆ ಫಲಿಸದಂತೆ ಮಾಡಬಹುದು.
ಹಾಗಾದ್ರೆ ಈ ನಿಂಬೆ ಮೆಣಸಿನ ಹಾರ ಕಟ್ಟುವಾಗ ನಾವು ಮಾಡುತ್ತಿರುವ ತಪ್ಪುಗಳಾದರೂ ಏನು? ಯಾವ ತಪ್ಪನ್ನು ಮಾಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಬೆಸ ಸಂಖ್ಯೆಯಲ್ಲಿ ಇರಬೇಕು
ಈ ನಿಂಬೆ ಹಾಗೂ ಹಸಿ ಮೆಣಸಿನ ದಾರವನ್ನು ಕೆಲವರು ಮನೆಯಲ್ಲೇ ರೆಡಿ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಅಂಗಡಿಗಳಿಂದ ತಂದು ಒಮ್ಮೆ ತೊಳೆದು ಅದನ್ನು ಪೂಜೆಗೆ ಬಳಸುತ್ತಾರೆ. ಆದ್ರೆ ನೆನಪಿನಲ್ಲಿಡಿ, ಈ ನಿಂಬೆ, ಹಸಿಮೆಣಸಿನ ಹಾರವು ಬೆಸ ಸಂಖ್ಯೆಯಲ್ಲಿರಬೇಕು. ಅಂದರೆ 1 ನಿಂಬೆ ಹಣ್ಣು ಹಾಗೂ 4 ಹಸಿ ಮೆಣಸು ಇದ್ದರೆ ಒಟ್ಟು ಸಂಖ್ಯೆ 5 ಎಂದಾಗುತ್ತದೆ. ಈ ರೀತಿ ಎಲ್ಲಾ ಒಟ್ಟುಗೂಡಿಸಿದರೆ ಬೆಸ ಸಂಖ್ಯೆ ಬರುವಂತಿರಬೇಕು. ಒಂದು ವೇಳೆ ಸಮ ಸಂಖ್ಯೆ ಬಂದರೆ ಒಂದು ಹಸಿ ಮೆಣಸನ್ನು ಅದರಿಂದ ತೆಗೆದು ನಂತರ ಪೂಜೆ ಸಲ್ಲಿಸಿ ಕಟ್ಟುವುದು ಉತ್ತಮ.
ನಿಂಬೆ-ಹಸಿಮೆಣಸು ಇರಬೇಕಾದ ಸ್ಥಾನ
ನಿಂಬೆ ಹಾಗೂ ಹಸಿ ಮೆಣಸನ್ನು ಹೇಗೆ ಬೇಕಾದರೂ ಹಾಗೆ ಕಟ್ಟಿ ನೇತು ಹಾಕಬಾರದಂತೆ. ಮೊದಲಿಗೆ 2 ಹಸಿ ಮೆಣಸು ಸುರಿದು ನಂತರ ನಿಂಬೆ ಹಣ್ಣು ಮಧ್ಯದಲ್ಲಿರುವಂತೆ ಹಾಕಿ ಮೇಲೆ ಮತ್ತೆ 2 ಹಸಿ ಮೆಣಸನ್ನು ಸುರಿದುಕೊಳ್ಳಬೇಕು. ಹಾಗೆ ಬೆಸ ಸಂಖ್ಯೆಯೂ ಬರುವಂತೆ ನೋಡಿಕೊಳ್ಳಬೇಕು.
ಕೆಂಪು ಬಣ್ಣದ ಹೂವು ಬಳಸಬೇಡಿ
ಈ ನಿಂಬೆ-ಹಸಿ ಮೆಣಸಿನ ಹಾರವನ್ನು ಪೂಜೆ ಸಲ್ಲಿಸಿ ಕಟ್ಟಿದ ಬಳಿಕ ಅದಕ್ಕೊಂದು ಹೂವನ್ನು ಇಡುತ್ತಾರೆ. ಆದ್ರೆ ಕೆಂಪು ಬಣ್ಣದಿಂದ ಕೂಡಿರುವ ಹೂವನ್ನು ಇಡಬಾರದು ಎನ್ನಲಾಗುತ್ತದೆ. ಅಲ್ಲಿ ಹಳದಿ, ಬಿಳಿ ಬಣ್ಣದ ಹೂವು ಇಟ್ಟರೆ ಒಳಿತಂತೆ. ಹಾಗೆ ಹಸಿ ಮೆಣಸಿನ ಕಾಯಿಯ ತೊಟ್ಟು ತೆಗೆದಿರಬಾರದು. ಕೆಲವರು ತೊಟ್ಟು ತೆಗೆದು ಈ ಹಾರ ಮಾಡುತ್ತಾರೆ. ಹಾಗೆ ಮಾಡಬಾರದು ಎನ್ನಲಾಗುತ್ತದೆ.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಹಾಗೂ ಅಂತರ್ಜಾಲದಲ್ಲಿ ನೀಡಲಾಗಿರುವ ಮಾಹಿತಿಯನ್ನು ಆಧರಿಸಿದೆ. ಬೋಲ್ಡ್ ಸ್ಕೈ ಕನ್ನಡ ಹಾಗೂ ಲೇಖಕರಿಗೂ ಈ ಮಾಹಿತಿಗೂ ಸಂಬಂಧವಿಲ್ಲ. ನೀವು ಇದನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ)



Click it and Unblock the Notifications
