Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನಿಂಬೆ-ಹಸಿ ಮೆಣಸು ಕಟ್ಟುವಾಗ ನೀವು ಮಾಡುತ್ತಿರುವ ತಪ್ಪುಗಳಿವು..! ಇನ್ನೆಂದು ಮಾಡಬೇಡಿ..!
ಹಿಂದೂ ಧರ್ಮದಲ್ಲಿ ಹಲವು ಸಂಪ್ರದಾಯಗಳು, ಆಚರಣೆಗಳಿವೆ. ಅದರಲ್ಲಿ ಕೆಲವೊಂದನ್ನು ನಾವು ಚಾಚು ತಪ್ಪದೆ ಮಾಡುತ್ತಿರುತ್ತೇವೆ. ದೇವರ ಪೂಜೆಯಿಂದ ಹಿಡಿದು ಕೆಲವೊಂದು ಸಣ್ಣಪುಟ್ಟ ಆಧ್ಯಾತ್ಮಿಕ ನಂಬಿಕೆಗಳನ್ನ ನಾವು ಶ್ರದ್ಧಾ ಭಕ್ತಿಯಿಂದ ಮಾಡುತ್ತಿರುತ್ತೇವೆ. ಅಂತಹ ನಂಬಿಕೆಯಲ್ಲಿ ಈ ನಿಂಬೆ ಹಣ್ಣು ಮೆಣಸಿನ ಕಾಯಿ ಸುರಿದು ಬಾಗಿಲಿಗೆ ಕಟ್ಟುವುದಾಗಿದೆ.
ನಿಂಬೆ ಹಾಗೂ ಹಸಿ ಮೆಣಸಿನಕಾಯಿಯನ್ನು ಮನೆಯ ದ್ವಾರ ಬಾಗಿಲಿನ ಮೇಲೆ ಕಟ್ಟುತ್ತಾರೆ. ಇದಕ್ಕೆ ಹಲವು ರೀತಿಯ ನಂಬಿಕೆಗಳು ಸುತ್ತಿಕೊಂಡಿದೆ. ಹಾಗೆ ವೈಜ್ಞಾನಿಕ ಕಾರಣವೂ ಕೂಡ ಇದೆ. ಬಹುತೇಕ ಎಲ್ಲರ ಮನೆಯಲ್ಲಿ ಶುಕ್ರವಾರದಂದು ಬೆಳಗ್ಗೆ ಪೂಜೆ ಸಲ್ಲಿಸಿದ ಬಳಿಕ ಅಥವಾ ಸಂಜೆ ಪೂಜೆ ಮಾಡಿದ ಬಳಿಕ ಆರತಿಯಲ್ಲಿ ಈ ನಿಂಬೆಯನ್ನು ಕಪ್ಪಾಗಿಸಿ ಬಳಿಕ ಬಾಗಿಲಿಗೆ ಕಟ್ಟುತ್ತಾರೆ.

ಒಂದು ವಾರಗಳ ಕಾಲ ಈ ನಿಂಬೆ ಬಾಗಿಲಿನ ಮೇಲೆ ಇರುತ್ತೆ. ಇದರ ಜೊತೆಗೆ ಹಸಿ ಮೆಣಸು ಸಹ ಸುರಿದಿರುತ್ತಾರೆ. ಹಾಗಾದ್ರೆ ಇದನ್ನು ಕಟ್ಟುವುದೇಕೆ? ಮನೆಯ ಮುಂದೆ ಅಥವಾ ಅಂಗಡಿ, ದ್ವಾರ ಬಾಗಿಲಿಗೆ ಇದನ್ನು ನೇತು ಹಾಕುವುದರಿಂದ ಯಾರ ಕೆಟ್ಟ ಕಣ್ಣು ಬೀಳುವುದಿಲ್ಲ. ಇದು ಸಂಪತ್ತನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಅಂಗಡಿಯ ಮೇಲೆ ದುಷ್ಟ ಜನರ ಕಣ್ಣು ಬೀಳುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ದೇವಿಗೆ ಮಾಡಿದ ಆರತಿಯಲ್ಲಿ ಈ ನಿಂಬೆಯನ್ನು ಸುಟ್ಟು ಬಳಿಕ ಕಟ್ಟಲಾಗುತ್ತದೆ. ಹಳೆಯ ನಿಂಬೆಯನ್ನು ಕಿತ್ತೆಸೆಯಲಾಗುತ್ತದೆ. ಆದ್ರೆ ಈ ರೀತಿ ನಿಂಬೆ ಹಾಗೂ ಮೆಣಸು ಕಟ್ಟುವಾಗ ನಾವು ಕೆಲವು ತಪ್ಪುಗಳ ಮಾಡುತ್ತಿರುತ್ತೇವೆ. ನಮ್ಮ ಅರಿವಿಲ್ಲದೆ ಮಾಡಿದ ತಪ್ಪುಗಳು ನಮ್ಮ ಪೂಜೆ ಫಲಿಸದಂತೆ ಮಾಡಬಹುದು.
ಹಾಗಾದ್ರೆ ಈ ನಿಂಬೆ ಮೆಣಸಿನ ಹಾರ ಕಟ್ಟುವಾಗ ನಾವು ಮಾಡುತ್ತಿರುವ ತಪ್ಪುಗಳಾದರೂ ಏನು? ಯಾವ ತಪ್ಪನ್ನು ಮಾಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಬೆಸ ಸಂಖ್ಯೆಯಲ್ಲಿ ಇರಬೇಕು
ಈ ನಿಂಬೆ ಹಾಗೂ ಹಸಿ ಮೆಣಸಿನ ದಾರವನ್ನು ಕೆಲವರು ಮನೆಯಲ್ಲೇ ರೆಡಿ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಅಂಗಡಿಗಳಿಂದ ತಂದು ಒಮ್ಮೆ ತೊಳೆದು ಅದನ್ನು ಪೂಜೆಗೆ ಬಳಸುತ್ತಾರೆ. ಆದ್ರೆ ನೆನಪಿನಲ್ಲಿಡಿ, ಈ ನಿಂಬೆ, ಹಸಿಮೆಣಸಿನ ಹಾರವು ಬೆಸ ಸಂಖ್ಯೆಯಲ್ಲಿರಬೇಕು. ಅಂದರೆ 1 ನಿಂಬೆ ಹಣ್ಣು ಹಾಗೂ 4 ಹಸಿ ಮೆಣಸು ಇದ್ದರೆ ಒಟ್ಟು ಸಂಖ್ಯೆ 5 ಎಂದಾಗುತ್ತದೆ. ಈ ರೀತಿ ಎಲ್ಲಾ ಒಟ್ಟುಗೂಡಿಸಿದರೆ ಬೆಸ ಸಂಖ್ಯೆ ಬರುವಂತಿರಬೇಕು. ಒಂದು ವೇಳೆ ಸಮ ಸಂಖ್ಯೆ ಬಂದರೆ ಒಂದು ಹಸಿ ಮೆಣಸನ್ನು ಅದರಿಂದ ತೆಗೆದು ನಂತರ ಪೂಜೆ ಸಲ್ಲಿಸಿ ಕಟ್ಟುವುದು ಉತ್ತಮ.
ನಿಂಬೆ-ಹಸಿಮೆಣಸು ಇರಬೇಕಾದ ಸ್ಥಾನ
ನಿಂಬೆ ಹಾಗೂ ಹಸಿ ಮೆಣಸನ್ನು ಹೇಗೆ ಬೇಕಾದರೂ ಹಾಗೆ ಕಟ್ಟಿ ನೇತು ಹಾಕಬಾರದಂತೆ. ಮೊದಲಿಗೆ 2 ಹಸಿ ಮೆಣಸು ಸುರಿದು ನಂತರ ನಿಂಬೆ ಹಣ್ಣು ಮಧ್ಯದಲ್ಲಿರುವಂತೆ ಹಾಕಿ ಮೇಲೆ ಮತ್ತೆ 2 ಹಸಿ ಮೆಣಸನ್ನು ಸುರಿದುಕೊಳ್ಳಬೇಕು. ಹಾಗೆ ಬೆಸ ಸಂಖ್ಯೆಯೂ ಬರುವಂತೆ ನೋಡಿಕೊಳ್ಳಬೇಕು.
ಕೆಂಪು ಬಣ್ಣದ ಹೂವು ಬಳಸಬೇಡಿ
ಈ ನಿಂಬೆ-ಹಸಿ ಮೆಣಸಿನ ಹಾರವನ್ನು ಪೂಜೆ ಸಲ್ಲಿಸಿ ಕಟ್ಟಿದ ಬಳಿಕ ಅದಕ್ಕೊಂದು ಹೂವನ್ನು ಇಡುತ್ತಾರೆ. ಆದ್ರೆ ಕೆಂಪು ಬಣ್ಣದಿಂದ ಕೂಡಿರುವ ಹೂವನ್ನು ಇಡಬಾರದು ಎನ್ನಲಾಗುತ್ತದೆ. ಅಲ್ಲಿ ಹಳದಿ, ಬಿಳಿ ಬಣ್ಣದ ಹೂವು ಇಟ್ಟರೆ ಒಳಿತಂತೆ. ಹಾಗೆ ಹಸಿ ಮೆಣಸಿನ ಕಾಯಿಯ ತೊಟ್ಟು ತೆಗೆದಿರಬಾರದು. ಕೆಲವರು ತೊಟ್ಟು ತೆಗೆದು ಈ ಹಾರ ಮಾಡುತ್ತಾರೆ. ಹಾಗೆ ಮಾಡಬಾರದು ಎನ್ನಲಾಗುತ್ತದೆ.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಹಾಗೂ ಅಂತರ್ಜಾಲದಲ್ಲಿ ನೀಡಲಾಗಿರುವ ಮಾಹಿತಿಯನ್ನು ಆಧರಿಸಿದೆ. ಬೋಲ್ಡ್ ಸ್ಕೈ ಕನ್ನಡ ಹಾಗೂ ಲೇಖಕರಿಗೂ ಈ ಮಾಹಿತಿಗೂ ಸಂಬಂಧವಿಲ್ಲ. ನೀವು ಇದನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ)



Click it and Unblock the Notifications