Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಸುಂದರ ಕೈ ತೋಟಕ್ಕೆ ನೈಸರ್ಗಿಕ ಕ್ರಿಮಿನಾಶಕ

ಈ ಕ್ರಿಮಿನಾಶಕಗಳನ್ನು ಹೇಗೆ ತಯಾರಿಸಬಹುದು ಎಂದು ತಿಳಿಯೋಣ:
1. ಮೊಟ್ಟೆ ಸಿಪ್ಪೆ ಮತ್ತು ಉಪ್ಪು: ಮೊಟ್ಟೆಯ ಸಿಪ್ಪೆ ಮತ್ತು ಸ್ವಲ್ಪ ಉಪ್ಪನ್ನು ಗಿಡದ ಬುಡಕ್ಕೆ ಹಾಕಬೇಕು. ಇದು ಸಸ್ಯಗಳನ್ನು ಹಾಳು ಮಾಡುವ ಬಸವನ ಹುಳು, ಗೊಂಡೆ ಹುಳುಗಳನ್ನು ನಾಶಪಡಿಸುತ್ತದೆ.
2. ಈರುಳ್ಳಿ : ಬೆಳ್ಳುಳ್ಳಿ, ಈರುಳ್ಳಿಯ ಎಸಳುಗಳನ್ನು ನೀರಿನೊಂದಿಗೆ ಬೆರೆಸಿ, ಹಿಂಡಿ ಮಣ್ಣಿನ ಮೇಲೆ ಹಾಕಿದರೆ ಹುಳುಗಳನ್ನು ನಾಶ ಪಡಿಸುತ್ತದೆ ಮತ್ತು ಹಾರುವ ಚಿಟ್ಟೆಗಳನ್ನು ನಿಯಂತ್ರಣ ಮಾಡುತ್ತದೆ. ಇದನ್ನು ತರಕಾರಿ ಎಣ್ಣೆಯೊಂದಿಗೆ ಬೆರೆಸಿ ಹಾಕಿದರೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ.
3. ಬೆಳ್ಳುಳ್ಳಿ: ಬೆಳ್ಳುಳ್ಳಿ ಸಿಪ್ಪೆ ಸಮೇತ ಎಸಳುಗಳನ್ನು ಎರಡು ಮೆಣಸಿನ ಕಾಯಿಯೊಂದಿಗೆ ಬ್ಲೀಚ್ ಸೇರಿಸಿ ನೀರಿನೊಂದಿಗೆ ಬೆರೆಸಿ ಸಿಂಪಡಿಸಿದರೆ ಎಂತಹ ಹುಳುವಿದ್ದರೂ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ಎಲೆಯ ಕೆಳಗೆಯೂ ಸಿಂಪಡಿಸಬೇಕು.
4. ಸೋಪು: ಪಾತ್ರೆ ತೊಳೆಯುವ ಸೋಪುಗಳನ್ನು ಸಹ ಕ್ರಿಮಿನಾಶಕದಂತೆ ಬಳಸಬಹುದು. ನೀರಿನೊಂದಿಗೆ ದ್ರವರೂಪದಲ್ಲಿ ಸೋಪನ್ನು ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಹಣ್ಣು, ತರಕಾರಿಗಳ ಮೇಲೆ ಸಿಂಪಡಿಸಬಾರದು. ಇದನ್ನು ಆಗಾಗ್ಗೆ ಮಾತ್ರ ಉಪಯೋಗಿಸಬೇಕು.
5. ಟೊಮೊಟೊ: ಟೊಮೊಟೊಗಳ ಎಲೆಯಲ್ಲಿ ಕ್ರಿಮಿಗಳನ್ನು ನಾಶ ಮಾಡುವಂತ ಸತ್ವವಿರುವುದರಿಂದ ಇವುಗಳ ಎಲೆಯನ್ನು ಬಳಸಬಹುದು. ಎಲೆಯನ್ನು ಚಿಕ್ಕದಾಗಿ ಕತ್ತರಿಸಿ ಒಂದು ಕಪ್ ಎಲೆಗೆ ಒಂದು ಕಪ್ ನೀರು ಬೆರೆಸಿ 24 ಗಂಟೆ ನೆನೆಯಿಸಿ ಸೋಸಿದ ನೀರನ್ನು ಗಿಡಕ್ಕೆ ಸಿಂಪಡಿಸಬೇಕು. ಇದು ಗಿಡಗಳ ಬೆಳವಣಿಗೆಗೆ ಮಾರಕವಾಗಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ.
6. ಬೇವಿನ ಎಣ್ಣೆ: ಬೇವಿನ ಎಣ್ಣೆಯ ಸಿಂಪಡಿಸುವುದರಿಂದ ಕ್ರಿಮಿಗಳೂ ನಾಶವಾಗುವುದು ಮಾತ್ರವಲ್ಲ, ಮತ್ತೆ ಕ್ರಿಮಿಗಳು ಮರುಕಳಿಸದಂತೆ ಮಾಡುತ್ತದೆ. ಇದು ಇನ್ನೂ ಅನೇಕ ಸಸ್ಯ ಸಂಬಂಧಿ ರೋಗಗಳನ್ನು ತಡೆಗಟ್ಟುತ್ತದೆ.
7. ಕಾಫಿ ಪುಡಿ ಉಳಿಕೆ: ಕಾಫಿ ಪುಡಿಯ ಉಳಿಕೆಯನ್ನು ಗಿಡಗಳ ಸುತ್ತ ಹಾಕಿದರೆ ಗಿಡಗಳು ಚೈತನ್ಯ ಪಡೆದುಕೊಳ್ಳುತ್ತವೆ.
8. ಎರೆಹುಳ: ಎರೆಹುಳುವನ್ನು ಮಣ್ಣಿನಲ್ಲಿ ಹಾಕುವುದರಿಂದ ಫಲವತ್ತತೆ ಹೆಚ್ಚಾಗಿ ಗಿಡಗಳಿಗೆ ಸೂಕ್ತ ಪೋಷಕಾಂಶ ದೊರೆಯುತ್ತದೆ.



Click it and Unblock the Notifications











