Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸುಂದರ ಕೈ ತೋಟಕ್ಕೆ ನೈಸರ್ಗಿಕ ಕ್ರಿಮಿನಾಶಕ

ಈ ಕ್ರಿಮಿನಾಶಕಗಳನ್ನು ಹೇಗೆ ತಯಾರಿಸಬಹುದು ಎಂದು ತಿಳಿಯೋಣ:
1. ಮೊಟ್ಟೆ ಸಿಪ್ಪೆ ಮತ್ತು ಉಪ್ಪು: ಮೊಟ್ಟೆಯ ಸಿಪ್ಪೆ ಮತ್ತು ಸ್ವಲ್ಪ ಉಪ್ಪನ್ನು ಗಿಡದ ಬುಡಕ್ಕೆ ಹಾಕಬೇಕು. ಇದು ಸಸ್ಯಗಳನ್ನು ಹಾಳು ಮಾಡುವ ಬಸವನ ಹುಳು, ಗೊಂಡೆ ಹುಳುಗಳನ್ನು ನಾಶಪಡಿಸುತ್ತದೆ.
2. ಈರುಳ್ಳಿ : ಬೆಳ್ಳುಳ್ಳಿ, ಈರುಳ್ಳಿಯ ಎಸಳುಗಳನ್ನು ನೀರಿನೊಂದಿಗೆ ಬೆರೆಸಿ, ಹಿಂಡಿ ಮಣ್ಣಿನ ಮೇಲೆ ಹಾಕಿದರೆ ಹುಳುಗಳನ್ನು ನಾಶ ಪಡಿಸುತ್ತದೆ ಮತ್ತು ಹಾರುವ ಚಿಟ್ಟೆಗಳನ್ನು ನಿಯಂತ್ರಣ ಮಾಡುತ್ತದೆ. ಇದನ್ನು ತರಕಾರಿ ಎಣ್ಣೆಯೊಂದಿಗೆ ಬೆರೆಸಿ ಹಾಕಿದರೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ.
3. ಬೆಳ್ಳುಳ್ಳಿ: ಬೆಳ್ಳುಳ್ಳಿ ಸಿಪ್ಪೆ ಸಮೇತ ಎಸಳುಗಳನ್ನು ಎರಡು ಮೆಣಸಿನ ಕಾಯಿಯೊಂದಿಗೆ ಬ್ಲೀಚ್ ಸೇರಿಸಿ ನೀರಿನೊಂದಿಗೆ ಬೆರೆಸಿ ಸಿಂಪಡಿಸಿದರೆ ಎಂತಹ ಹುಳುವಿದ್ದರೂ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ಎಲೆಯ ಕೆಳಗೆಯೂ ಸಿಂಪಡಿಸಬೇಕು.
4. ಸೋಪು: ಪಾತ್ರೆ ತೊಳೆಯುವ ಸೋಪುಗಳನ್ನು ಸಹ ಕ್ರಿಮಿನಾಶಕದಂತೆ ಬಳಸಬಹುದು. ನೀರಿನೊಂದಿಗೆ ದ್ರವರೂಪದಲ್ಲಿ ಸೋಪನ್ನು ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಹಣ್ಣು, ತರಕಾರಿಗಳ ಮೇಲೆ ಸಿಂಪಡಿಸಬಾರದು. ಇದನ್ನು ಆಗಾಗ್ಗೆ ಮಾತ್ರ ಉಪಯೋಗಿಸಬೇಕು.
5. ಟೊಮೊಟೊ: ಟೊಮೊಟೊಗಳ ಎಲೆಯಲ್ಲಿ ಕ್ರಿಮಿಗಳನ್ನು ನಾಶ ಮಾಡುವಂತ ಸತ್ವವಿರುವುದರಿಂದ ಇವುಗಳ ಎಲೆಯನ್ನು ಬಳಸಬಹುದು. ಎಲೆಯನ್ನು ಚಿಕ್ಕದಾಗಿ ಕತ್ತರಿಸಿ ಒಂದು ಕಪ್ ಎಲೆಗೆ ಒಂದು ಕಪ್ ನೀರು ಬೆರೆಸಿ 24 ಗಂಟೆ ನೆನೆಯಿಸಿ ಸೋಸಿದ ನೀರನ್ನು ಗಿಡಕ್ಕೆ ಸಿಂಪಡಿಸಬೇಕು. ಇದು ಗಿಡಗಳ ಬೆಳವಣಿಗೆಗೆ ಮಾರಕವಾಗಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ.
6. ಬೇವಿನ ಎಣ್ಣೆ: ಬೇವಿನ ಎಣ್ಣೆಯ ಸಿಂಪಡಿಸುವುದರಿಂದ ಕ್ರಿಮಿಗಳೂ ನಾಶವಾಗುವುದು ಮಾತ್ರವಲ್ಲ, ಮತ್ತೆ ಕ್ರಿಮಿಗಳು ಮರುಕಳಿಸದಂತೆ ಮಾಡುತ್ತದೆ. ಇದು ಇನ್ನೂ ಅನೇಕ ಸಸ್ಯ ಸಂಬಂಧಿ ರೋಗಗಳನ್ನು ತಡೆಗಟ್ಟುತ್ತದೆ.
7. ಕಾಫಿ ಪುಡಿ ಉಳಿಕೆ: ಕಾಫಿ ಪುಡಿಯ ಉಳಿಕೆಯನ್ನು ಗಿಡಗಳ ಸುತ್ತ ಹಾಕಿದರೆ ಗಿಡಗಳು ಚೈತನ್ಯ ಪಡೆದುಕೊಳ್ಳುತ್ತವೆ.
8. ಎರೆಹುಳ: ಎರೆಹುಳುವನ್ನು ಮಣ್ಣಿನಲ್ಲಿ ಹಾಕುವುದರಿಂದ ಫಲವತ್ತತೆ ಹೆಚ್ಚಾಗಿ ಗಿಡಗಳಿಗೆ ಸೂಕ್ತ ಪೋಷಕಾಂಶ ದೊರೆಯುತ್ತದೆ.



Click it and Unblock the Notifications
