Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಸುಂದರ ಕೈ ತೋಟಕ್ಕೆ ನೈಸರ್ಗಿಕ ಕ್ರಿಮಿನಾಶಕ

ಈ ಕ್ರಿಮಿನಾಶಕಗಳನ್ನು ಹೇಗೆ ತಯಾರಿಸಬಹುದು ಎಂದು ತಿಳಿಯೋಣ:
1. ಮೊಟ್ಟೆ ಸಿಪ್ಪೆ ಮತ್ತು ಉಪ್ಪು: ಮೊಟ್ಟೆಯ ಸಿಪ್ಪೆ ಮತ್ತು ಸ್ವಲ್ಪ ಉಪ್ಪನ್ನು ಗಿಡದ ಬುಡಕ್ಕೆ ಹಾಕಬೇಕು. ಇದು ಸಸ್ಯಗಳನ್ನು ಹಾಳು ಮಾಡುವ ಬಸವನ ಹುಳು, ಗೊಂಡೆ ಹುಳುಗಳನ್ನು ನಾಶಪಡಿಸುತ್ತದೆ.
2. ಈರುಳ್ಳಿ : ಬೆಳ್ಳುಳ್ಳಿ, ಈರುಳ್ಳಿಯ ಎಸಳುಗಳನ್ನು ನೀರಿನೊಂದಿಗೆ ಬೆರೆಸಿ, ಹಿಂಡಿ ಮಣ್ಣಿನ ಮೇಲೆ ಹಾಕಿದರೆ ಹುಳುಗಳನ್ನು ನಾಶ ಪಡಿಸುತ್ತದೆ ಮತ್ತು ಹಾರುವ ಚಿಟ್ಟೆಗಳನ್ನು ನಿಯಂತ್ರಣ ಮಾಡುತ್ತದೆ. ಇದನ್ನು ತರಕಾರಿ ಎಣ್ಣೆಯೊಂದಿಗೆ ಬೆರೆಸಿ ಹಾಕಿದರೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ.
3. ಬೆಳ್ಳುಳ್ಳಿ: ಬೆಳ್ಳುಳ್ಳಿ ಸಿಪ್ಪೆ ಸಮೇತ ಎಸಳುಗಳನ್ನು ಎರಡು ಮೆಣಸಿನ ಕಾಯಿಯೊಂದಿಗೆ ಬ್ಲೀಚ್ ಸೇರಿಸಿ ನೀರಿನೊಂದಿಗೆ ಬೆರೆಸಿ ಸಿಂಪಡಿಸಿದರೆ ಎಂತಹ ಹುಳುವಿದ್ದರೂ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ಎಲೆಯ ಕೆಳಗೆಯೂ ಸಿಂಪಡಿಸಬೇಕು.
4. ಸೋಪು: ಪಾತ್ರೆ ತೊಳೆಯುವ ಸೋಪುಗಳನ್ನು ಸಹ ಕ್ರಿಮಿನಾಶಕದಂತೆ ಬಳಸಬಹುದು. ನೀರಿನೊಂದಿಗೆ ದ್ರವರೂಪದಲ್ಲಿ ಸೋಪನ್ನು ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಹಣ್ಣು, ತರಕಾರಿಗಳ ಮೇಲೆ ಸಿಂಪಡಿಸಬಾರದು. ಇದನ್ನು ಆಗಾಗ್ಗೆ ಮಾತ್ರ ಉಪಯೋಗಿಸಬೇಕು.
5. ಟೊಮೊಟೊ: ಟೊಮೊಟೊಗಳ ಎಲೆಯಲ್ಲಿ ಕ್ರಿಮಿಗಳನ್ನು ನಾಶ ಮಾಡುವಂತ ಸತ್ವವಿರುವುದರಿಂದ ಇವುಗಳ ಎಲೆಯನ್ನು ಬಳಸಬಹುದು. ಎಲೆಯನ್ನು ಚಿಕ್ಕದಾಗಿ ಕತ್ತರಿಸಿ ಒಂದು ಕಪ್ ಎಲೆಗೆ ಒಂದು ಕಪ್ ನೀರು ಬೆರೆಸಿ 24 ಗಂಟೆ ನೆನೆಯಿಸಿ ಸೋಸಿದ ನೀರನ್ನು ಗಿಡಕ್ಕೆ ಸಿಂಪಡಿಸಬೇಕು. ಇದು ಗಿಡಗಳ ಬೆಳವಣಿಗೆಗೆ ಮಾರಕವಾಗಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ.
6. ಬೇವಿನ ಎಣ್ಣೆ: ಬೇವಿನ ಎಣ್ಣೆಯ ಸಿಂಪಡಿಸುವುದರಿಂದ ಕ್ರಿಮಿಗಳೂ ನಾಶವಾಗುವುದು ಮಾತ್ರವಲ್ಲ, ಮತ್ತೆ ಕ್ರಿಮಿಗಳು ಮರುಕಳಿಸದಂತೆ ಮಾಡುತ್ತದೆ. ಇದು ಇನ್ನೂ ಅನೇಕ ಸಸ್ಯ ಸಂಬಂಧಿ ರೋಗಗಳನ್ನು ತಡೆಗಟ್ಟುತ್ತದೆ.
7. ಕಾಫಿ ಪುಡಿ ಉಳಿಕೆ: ಕಾಫಿ ಪುಡಿಯ ಉಳಿಕೆಯನ್ನು ಗಿಡಗಳ ಸುತ್ತ ಹಾಕಿದರೆ ಗಿಡಗಳು ಚೈತನ್ಯ ಪಡೆದುಕೊಳ್ಳುತ್ತವೆ.
8. ಎರೆಹುಳ: ಎರೆಹುಳುವನ್ನು ಮಣ್ಣಿನಲ್ಲಿ ಹಾಕುವುದರಿಂದ ಫಲವತ್ತತೆ ಹೆಚ್ಚಾಗಿ ಗಿಡಗಳಿಗೆ ಸೂಕ್ತ ಪೋಷಕಾಂಶ ದೊರೆಯುತ್ತದೆ.



Click it and Unblock the Notifications