Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಳಸಿ ಗಿಡ ಇದ್ದರೆ ಈ ತಪ್ಪು ಮಾಡಬೇಡಿ: ಬಡತನ ಬೆನ್ನಟ್ಟುತ್ತೆ..!
ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ತುಳಸಿ ಕಟ್ಟೆ ಇದ್ದೇ ಇರುತ್ತೆ. ಈ ತುಳಸಿ ಗಿಡಕ್ಕೆ ಪೂಜೆ ಮಾಡಿ ನಂತರ ನಿತ್ಯದ ಕೆಲಸಗಳು ನಡೆಯುತ್ತವೆ. ತುಳಸಿ ಪೂಜೆ ಕೂಡ ಹಿಂದೂ ಧರ್ಮದಲ್ಲಿ ಅತ್ಯುತ್ತಮ ಮಹತ್ವ ಪಡೆದುಕೊಂಡಿದೆ. ದೀಪಾವಳಿಯಲ್ಲಿ ತುಳಸಿ ಪೂಜೆಗೆ ಮಹತ್ವವಿದೆ. ಹಾಗೆ ಮನೆಯ ಮುಂದೆ ನೇರವಾಗಿ ತುಳಸಿ ಗಿಡ ನೆಡುತ್ತಾರೆ.
ಈ ತುಳಸಿ ಗಿಡಗಳು ಪಂಚಲೋಹಗಳಿಂದ ಸುತ್ತವರೆದ ಕಟ್ಟೆಯನ್ನು ಹೊಂದಿರುತ್ತದೆ. ತುಳಸಿ ಗಿಡ ಮಾಡುವಾಗಲೂ ವಾಸ್ತುವಿನ ಪ್ರಕಾರಣವಾಗಿ ಮಾಡಲಾಗುತ್ತದೆ. ಅಂದರೆ ತುಳಸಿ ಗಿಡಕ್ಕೆ ದೇವಾಲಯದಷ್ಟು ಶ್ರೇಷ್ಟತೆಯನ್ನು ನೀಡಲಾಗಿದೆ. ತುಳಸಿ ಗಿಡ ಸುತ್ತು ಬರುವುದು ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಉತ್ತಮ ಎಂದು ಹೇಳಲಾಗಿದೆ.

ಹಾಗೆ ತುಳಸಿ ಗಿಡಕ್ಕೆ ನಾವು ಪೂಜೆ ಸಲ್ಲಿಸುವುದು ವಿಶೇಷ ಧನಾತ್ಮಕ ಶಕ್ತಿಯ ಆಗಮನಕ್ಕೆ ಕಾರಣವಾಗಲಿದೆ. ಹೀಗಾಗಿ ಎಲ್ಲರ ಮನೆಯ ಮುಂದೆ ನಾವು ತುಳಸಿ ಗಿಡ ನೋಡುತ್ತೇವೆ. ಹಾಗೆ ತುಳಸಿ ಗಿಡವನ್ನು ಹೇಗೆ ನೆಡಬೇಕು ಎಂಬ ನಿಯಮಗಳಿವೆ. ಯಾವ ದಿನ ನೆಡಬೇಕು, ಹೇಗೆ ನೆಡಬೇಕು ಎಂಬುದನ್ನು ವಾಸ್ತು ಪ್ರಕಾರವಾಗಿ ಹೇಳಲಾಗಿದೆ.
ಹಾಗೆ ತುಳಸಿ ಪೂಜೆಯ ವೇಳೆ ಈ ರೀತಿ ತಪ್ಪುಗಳ ಮಾಡುವುದು ಅಕ್ಷಮ್ಯ ಎಂದು ಪರಿಗಣಿಸಲಾಗಿದೆ. ಇಂತಹ ತಪ್ಪುಗಳ ಮಾಡುವುದು ನಿಮಗೆ ದುರಾದೃಷ್ಟ ತರಲಿದೆ. ಹಾಗೆ ಮನೆಗೆ ಬಡತನ ಬಂದೊದಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ತುಳಸಿ ಪೂಜೆಯಲ್ಲಿ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು? ಯಾವ ತಪ್ಪುಗಳ ಮಾಡಿದರೆ ಸಮಸ್ಯೆ ಎದುರಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಳಸಿ ನೆಡುವ ಸ್ಥಳ
ತುಳಸಿ ಗಿಡವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇರಬೇಕು ಎಂಬ ನಿಯಮವಿದೆ. ಅಥವಾ ನಾವು ಪೂರ್ವಕ್ಕೆ ಮುಖ ಮಾಡಿ ನಿಂತು ಪೂಜೆ ಸಲ್ಲಿಸುವಂತೆ ರಚನೆ ಇರಬೇಕು. ಆದ್ರೆ ಕೆಲವರು ತುಳಸಿಯನ್ನು ಉತ್ತರ ದಿಕ್ಕಿನತ್ತ ಮುಖ ಮಾಡಿ ನಿರ್ಮಿಸಿರುತ್ತಾರೆ. ಈ ರೀತಿಯ ರಚನೆಯಿಂದ ಮನೆಗೆ ಕೆಟ್ಟ ಅನುಭವವಾಗಲಿದೆ. ಹಾಗೆ ಬಡತನ ನಿಮ್ಮನ್ನು ಕಾಡಲಿದೆ ಎಂದು ಹೇಳಲಾಗುತ್ತದೆ.
ಒಣಗಿದ ತುಳಸಿ ಗಿಡ
ತುಳಸಿ ಗಿಡಗಳು ಒಣಗಿದರೆ ಅದನ್ನು ಕತ್ತರಿಸಿ ಎಸೆಯಬೇಕು. ಒಣಗಿದ ಗಿಡಕ್ಕೆ ಪೂಜೆ ಸಲ್ಲಿಸುವುದು ದರಿದ್ರದ ಸಂಕೇತವಾಗಿದೆ. ತುಳಸಿ ಒಣಗಿದಾಗ ಅದು ಯಾವುದೇ ಶಕ್ತಿಯನ್ನು ಹೊಂದಿರುವುದಿಲ್ಲ. ಈ ತುಳಸಿ ಗಿಡಕ್ಕೆ ಪೂಜೆ ಮಾಡುವುದು ಬಡತನಕ್ಕೆ ದಾರಿಯಾಗಲಿದೆ.
ತುಳಸಿಗಿಡ ಯಾವಾಗ ನೆಡಬೇಕು?
ತುಳಸಿ ಗಿಡ ನೆಡಲು ಕೂಡ ದಿನವನ್ನು ಗೊತ್ತು ಮಾಡಲಾಗಿದೆ. ಗುರುವಾರದಂದು ತುಳಸಿ ನೆಟ್ಟರೆ ಒಳ್ಳೆಯದು. ಅದರಲ್ಲೂ ಕಾರ್ತಿಕ ಮಾಸದ ಗುರುವಾರದಲ್ಲಿ ತುಳಸಿ ನೆಡುವುದು ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ.
ಕಲಶದಿಂದ ನೀರು ನೀಡಿ
ತುಳಸಿ ಗಿಡಕ್ಕೆ ನೀರು ಹಾಕುವುದು ಕೂಡ ಶ್ರೇಷ್ಠ ಕೆಲಸವಾಗಿದೆ, ಅದರಲ್ಲೂ ತುಳಸಿಗೆ ಕಲಶದಿಂದಲೇ ನೀರು ಹಾಕಬೇಕು. ನೀವು ಪ್ಲಾಸ್ಟಿಕ್ ಪಾತ್ರೆ, ಡಬ್ಬಿ, ಬಾಟಲಿಯಲ್ಲಿ ಎಂದಿಗೂ ನೀರು ಹಾಕಬೇಡಿ ಇದು ತುಳಸಿ ಗಿಡದ ಬೆಳವಣಿಗೆ ಕುಂಠಿತಗೊಳಸುತ್ತದೆ. ಹಾಗೆ ಮನೆಗೂ ಇದು ಉತ್ತಮವಲ್ಲ.
ತುಳಸಿ ಇಡುವ ಜಾಗ
ಕೆಲವರ ಮನೆಯಲ್ಲಿ ಅಂಗಳಲ್ಲಿ ತುಳಸಿ ಗಿಡ ಇರುತ್ತದೆ. ಹಾಗೆ ಜಾಗವಿಲ್ಲದವರು ಮನೆಯ ಒಳಗೆ ಪಾಟ್ನಲ್ಲಿ ತುಳಸಿ ಬೆಳೆಸುತ್ತಾರೆ. ಎಂದಿಗೂ ಅಡುಗೆ ಮನೆಯ ಪಕ್ಕ, ಬಾತ್ರೂಮ್ ಪಕ್ಕ ಹಾಗೂ ಮಲಗುವ ಕೋಣೆಯ ಹತ್ತಿರ ಈ ತುಳಸಿ ಗಿಡವನ್ನು ಇಡಬಾರದು. ದೇವರ ಕೋಣೆಯ ಸಮೀಪದಲ್ಲಿ ಮಾತ್ರವೇ ತುಳಸಿ ಗಿಡ ಇಡಬೇಕು ಎಂದು ಹೇಳಲಾಗಿದೆ. ಏಕೆಂದರೆ ತುಳಸಿ ಗಿಡದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ.



Click it and Unblock the Notifications