Latest Updates
-
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ತುಳಸಿ ಗಿಡ ಇದ್ದರೆ ಈ ತಪ್ಪು ಮಾಡಬೇಡಿ: ಬಡತನ ಬೆನ್ನಟ್ಟುತ್ತೆ..!
ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ತುಳಸಿ ಕಟ್ಟೆ ಇದ್ದೇ ಇರುತ್ತೆ. ಈ ತುಳಸಿ ಗಿಡಕ್ಕೆ ಪೂಜೆ ಮಾಡಿ ನಂತರ ನಿತ್ಯದ ಕೆಲಸಗಳು ನಡೆಯುತ್ತವೆ. ತುಳಸಿ ಪೂಜೆ ಕೂಡ ಹಿಂದೂ ಧರ್ಮದಲ್ಲಿ ಅತ್ಯುತ್ತಮ ಮಹತ್ವ ಪಡೆದುಕೊಂಡಿದೆ. ದೀಪಾವಳಿಯಲ್ಲಿ ತುಳಸಿ ಪೂಜೆಗೆ ಮಹತ್ವವಿದೆ. ಹಾಗೆ ಮನೆಯ ಮುಂದೆ ನೇರವಾಗಿ ತುಳಸಿ ಗಿಡ ನೆಡುತ್ತಾರೆ.
ಈ ತುಳಸಿ ಗಿಡಗಳು ಪಂಚಲೋಹಗಳಿಂದ ಸುತ್ತವರೆದ ಕಟ್ಟೆಯನ್ನು ಹೊಂದಿರುತ್ತದೆ. ತುಳಸಿ ಗಿಡ ಮಾಡುವಾಗಲೂ ವಾಸ್ತುವಿನ ಪ್ರಕಾರಣವಾಗಿ ಮಾಡಲಾಗುತ್ತದೆ. ಅಂದರೆ ತುಳಸಿ ಗಿಡಕ್ಕೆ ದೇವಾಲಯದಷ್ಟು ಶ್ರೇಷ್ಟತೆಯನ್ನು ನೀಡಲಾಗಿದೆ. ತುಳಸಿ ಗಿಡ ಸುತ್ತು ಬರುವುದು ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಉತ್ತಮ ಎಂದು ಹೇಳಲಾಗಿದೆ.

ಹಾಗೆ ತುಳಸಿ ಗಿಡಕ್ಕೆ ನಾವು ಪೂಜೆ ಸಲ್ಲಿಸುವುದು ವಿಶೇಷ ಧನಾತ್ಮಕ ಶಕ್ತಿಯ ಆಗಮನಕ್ಕೆ ಕಾರಣವಾಗಲಿದೆ. ಹೀಗಾಗಿ ಎಲ್ಲರ ಮನೆಯ ಮುಂದೆ ನಾವು ತುಳಸಿ ಗಿಡ ನೋಡುತ್ತೇವೆ. ಹಾಗೆ ತುಳಸಿ ಗಿಡವನ್ನು ಹೇಗೆ ನೆಡಬೇಕು ಎಂಬ ನಿಯಮಗಳಿವೆ. ಯಾವ ದಿನ ನೆಡಬೇಕು, ಹೇಗೆ ನೆಡಬೇಕು ಎಂಬುದನ್ನು ವಾಸ್ತು ಪ್ರಕಾರವಾಗಿ ಹೇಳಲಾಗಿದೆ.
ಹಾಗೆ ತುಳಸಿ ಪೂಜೆಯ ವೇಳೆ ಈ ರೀತಿ ತಪ್ಪುಗಳ ಮಾಡುವುದು ಅಕ್ಷಮ್ಯ ಎಂದು ಪರಿಗಣಿಸಲಾಗಿದೆ. ಇಂತಹ ತಪ್ಪುಗಳ ಮಾಡುವುದು ನಿಮಗೆ ದುರಾದೃಷ್ಟ ತರಲಿದೆ. ಹಾಗೆ ಮನೆಗೆ ಬಡತನ ಬಂದೊದಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ತುಳಸಿ ಪೂಜೆಯಲ್ಲಿ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು? ಯಾವ ತಪ್ಪುಗಳ ಮಾಡಿದರೆ ಸಮಸ್ಯೆ ಎದುರಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಳಸಿ ನೆಡುವ ಸ್ಥಳ
ತುಳಸಿ ಗಿಡವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇರಬೇಕು ಎಂಬ ನಿಯಮವಿದೆ. ಅಥವಾ ನಾವು ಪೂರ್ವಕ್ಕೆ ಮುಖ ಮಾಡಿ ನಿಂತು ಪೂಜೆ ಸಲ್ಲಿಸುವಂತೆ ರಚನೆ ಇರಬೇಕು. ಆದ್ರೆ ಕೆಲವರು ತುಳಸಿಯನ್ನು ಉತ್ತರ ದಿಕ್ಕಿನತ್ತ ಮುಖ ಮಾಡಿ ನಿರ್ಮಿಸಿರುತ್ತಾರೆ. ಈ ರೀತಿಯ ರಚನೆಯಿಂದ ಮನೆಗೆ ಕೆಟ್ಟ ಅನುಭವವಾಗಲಿದೆ. ಹಾಗೆ ಬಡತನ ನಿಮ್ಮನ್ನು ಕಾಡಲಿದೆ ಎಂದು ಹೇಳಲಾಗುತ್ತದೆ.
ಒಣಗಿದ ತುಳಸಿ ಗಿಡ
ತುಳಸಿ ಗಿಡಗಳು ಒಣಗಿದರೆ ಅದನ್ನು ಕತ್ತರಿಸಿ ಎಸೆಯಬೇಕು. ಒಣಗಿದ ಗಿಡಕ್ಕೆ ಪೂಜೆ ಸಲ್ಲಿಸುವುದು ದರಿದ್ರದ ಸಂಕೇತವಾಗಿದೆ. ತುಳಸಿ ಒಣಗಿದಾಗ ಅದು ಯಾವುದೇ ಶಕ್ತಿಯನ್ನು ಹೊಂದಿರುವುದಿಲ್ಲ. ಈ ತುಳಸಿ ಗಿಡಕ್ಕೆ ಪೂಜೆ ಮಾಡುವುದು ಬಡತನಕ್ಕೆ ದಾರಿಯಾಗಲಿದೆ.
ತುಳಸಿಗಿಡ ಯಾವಾಗ ನೆಡಬೇಕು?
ತುಳಸಿ ಗಿಡ ನೆಡಲು ಕೂಡ ದಿನವನ್ನು ಗೊತ್ತು ಮಾಡಲಾಗಿದೆ. ಗುರುವಾರದಂದು ತುಳಸಿ ನೆಟ್ಟರೆ ಒಳ್ಳೆಯದು. ಅದರಲ್ಲೂ ಕಾರ್ತಿಕ ಮಾಸದ ಗುರುವಾರದಲ್ಲಿ ತುಳಸಿ ನೆಡುವುದು ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ.
ಕಲಶದಿಂದ ನೀರು ನೀಡಿ
ತುಳಸಿ ಗಿಡಕ್ಕೆ ನೀರು ಹಾಕುವುದು ಕೂಡ ಶ್ರೇಷ್ಠ ಕೆಲಸವಾಗಿದೆ, ಅದರಲ್ಲೂ ತುಳಸಿಗೆ ಕಲಶದಿಂದಲೇ ನೀರು ಹಾಕಬೇಕು. ನೀವು ಪ್ಲಾಸ್ಟಿಕ್ ಪಾತ್ರೆ, ಡಬ್ಬಿ, ಬಾಟಲಿಯಲ್ಲಿ ಎಂದಿಗೂ ನೀರು ಹಾಕಬೇಡಿ ಇದು ತುಳಸಿ ಗಿಡದ ಬೆಳವಣಿಗೆ ಕುಂಠಿತಗೊಳಸುತ್ತದೆ. ಹಾಗೆ ಮನೆಗೂ ಇದು ಉತ್ತಮವಲ್ಲ.
ತುಳಸಿ ಇಡುವ ಜಾಗ
ಕೆಲವರ ಮನೆಯಲ್ಲಿ ಅಂಗಳಲ್ಲಿ ತುಳಸಿ ಗಿಡ ಇರುತ್ತದೆ. ಹಾಗೆ ಜಾಗವಿಲ್ಲದವರು ಮನೆಯ ಒಳಗೆ ಪಾಟ್ನಲ್ಲಿ ತುಳಸಿ ಬೆಳೆಸುತ್ತಾರೆ. ಎಂದಿಗೂ ಅಡುಗೆ ಮನೆಯ ಪಕ್ಕ, ಬಾತ್ರೂಮ್ ಪಕ್ಕ ಹಾಗೂ ಮಲಗುವ ಕೋಣೆಯ ಹತ್ತಿರ ಈ ತುಳಸಿ ಗಿಡವನ್ನು ಇಡಬಾರದು. ದೇವರ ಕೋಣೆಯ ಸಮೀಪದಲ್ಲಿ ಮಾತ್ರವೇ ತುಳಸಿ ಗಿಡ ಇಡಬೇಕು ಎಂದು ಹೇಳಲಾಗಿದೆ. ಏಕೆಂದರೆ ತುಳಸಿ ಗಿಡದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ.



Click it and Unblock the Notifications