Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉಷ್ಣ, ಕಣ್ಣುಉರಿ, ಉರಿಶೀತ ಎಲ್ಲದಕ್ಕೂ ಒಂದೇ ಪರಿಹಾರ: ಮನೆಯಲ್ಲೇ ಮಾಡಿ ಈ ಮದ್ದು!!
ಚಳಿಗಾಲದ ಸಮಯದಲ್ಲಿ ಚರ್ಮ ಒಣಗುವುದು ಸಾಮಾನ್ಯ. ಅದೆ ರೀತಿ ಹಗಲಿನಲ್ಲಿ ಬಿಸಿಲು ಹಾಗೆ ರಾತ್ರಿ ಸಮಯದಲ್ಲಿನ ಚಳಿಗಾಳಿಯ ಕಾರಣಕ್ಕೆ ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದು ನೋಡಬಹುದು. ಅದ್ರಲ್ಲಿ ಹೆಚ್ಚಾಗಿ ಶೀತ, ಕೆಮ್ಮು, ಗಂಟಲು ನೋವು ಅಥವಾ ತಲೆನೋವು, ಕಣ್ಣು ಉರಿಯಂತಹ ಸಮಸ್ಯೆಗಳಿಗೆ ತುತ್ತಾಗುವುದು ನೋಡಬಹುದು. ಅದ್ರಲ್ಲೂ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿಯೇ ಕಂಡುಬರಲಿದೆ.
ಹಗಲಿನ ಬಿಸಿಲು ಹಾಗೆ ಸಂಜೆ ಸಮಯದಲ್ಲಿ ಚಳಿಯಿಂದ ಈ ಸಮಸ್ಯೆ ಉಂಟಾಗಬಹುದು. ದೇಹವು ಈ ವಾತಾವರದಲ್ಲಿನ ಕ್ಷಿಪ್ರ ಬದಲಾವಣೆಗೆ ಹೊಂದಿಕೊಳ್ಳಲು ಆಗದೆ ಇದ್ದಾಗ ಕಾಲೋಚಿತ ಸಮಸ್ಯೆಯನ್ನು ಅನುಭವಿಸುತ್ತೀರಿ. ಇದು ನಿಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಹಾಗೆ ಹಲವು ರೀತಿಯಲ್ಲಿ ನಿಮ್ಮ ಆರೋಗ್ಯದ ವಿಚಾರದಲ್ಲಿ ಹಾನಿ ಉಂಟಾಗಲಿದೆ. ನೀವು ಮೆಡಿಕಲ್ ಮಾತ್ರೆಗಳು, ಔಷಧಿಗಳ ತೆಗೆದುಕೊಂಡರೂ ಕೂಡ ಈ ಕಿರಿಕಿರಿಯಿಂದ ಪಾರಾಗುವುದು ಕಷ್ಟವಾಗುತ್ತೆ.

ಹಾಗೆ ಚಳಿಗಾಲದ ಈ ಸಮಸ್ಯೆಗಳಿಗೆ ಮನೆಯಲ್ಲೇ ನೀವು ಮದ್ದು ಮಾಡಿ ಈ ಕಿರಿಕಿರಿಯಿಂದ ಹೊರಬರಬಹುದು. ಹಾಗಾದ್ರೆ ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗೆ ಮನೆಯಲ್ಲಿ ಹೇಗೆ ಮದ್ದು ಮಾಡಬೇಕು? ಮಾಡುವ ವಿಧಾನವೇನು? ಎಂಬ ಕುರಿತು ತಿಳಿಯೋಣ.
ಶೀತ, ಕೆಮ್ಮು, ನೆಗಡಿಗೆ ಆರ್ಯುವೇದದಲ್ಲಿ ಹತ್ತಾರು ಪರಿಹಾರ ಹೇಳಲಾಗಿದೆ. ಆದ್ರೆ ನಾವಿಂದು ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಸುಲಭವಾಗಿ ಮಾಡಿಕೊಳ್ಳಬಹುದಾದ ಔಷಧಿ ಕುರಿತಾಗಿ ತಿಳಿದುಕೊಳ್ಳೋಣ.
ಉಷ್ಣ, ಕಣ್ಣುಉರಿ, ಉರಿಶೀತಕ್ಕೆ ಮದ್ದು ಮಾಡಲು ಬೇಕಾಗುವ ವಸ್ತುಗಳು
ಕೊತ್ತಂಬರಿ ಕಾಳು
ಜೀರಿಗೆ
ನೀರು
ಉಷ್ಣ, ಕಣ್ಣುಉರಿ, ಉರಿಶೀತಕ್ಕೆ ಮದ್ದು ಮಾಡುವುದು ಹೇಗೆ?
ಮೊದಲು ಒಂದು ಕುಟ್ಟಾಣಿ ತೆಗೆದುಕೊಂಡು ಅದಕ್ಕೆ 1 ಸ್ಪೂನ್ ಕೊತ್ತಂಬರಿ ಕಾಳು, ಅರ್ಧ ಸ್ಪೂನ್ ಜೀರಿಗೆ ಹಾಕಿ ಜಜ್ಜಿಕೊಳ್ಳಬೇಕು. ಕುಟಾಣಿ ಇಲ್ಲದಿದ್ದರೆ ಸಣ್ಣ ಮಿಕ್ಸಿ ಜಾರ್ನಲ್ಲಿ 1 ಸುತ್ತು ರುಬ್ಬಿದರೆ ಸಾಕು. ಇದು ತರಿತರಿಯಾಗಿ ಪುಡಿಯಾಗಬೇಕು.
ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಗ್ಲಾಸ್ ನೀರು ಹಾಕಿ ಕುದಿಬರಲು ಬಿಡಿ. ನೀರು ಸ್ವಲ್ಪ ಬಿಸಿಯಾದ ಬಳಿಕ ಪುಡಿ ಮಾಡಿಕೊಂಡಿದ್ದ ಜೀರಿಗೆ ಕೊತ್ತಂಬರಿ ಕಾಳಿನ ಪುಡಿ ಹಾಕಿ ಕುದಿಬರಲು ಬಿಡಬೇಕು. ಸಣ್ಣ ಉರಿಯಲ್ಲಿ 4ರಿಂದ 5 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಬೇಕು.
ಇದು ಕುದಿಬಂದ ಬಳಿಕ ಜರಡಿಯಲ್ಲಿ ಇದನ್ನು ಸೋಸಿಕೊಳ್ಳಬೇಕು. ಹಾಗೆ ಬಿಸಿಯಾಗಿದ್ದರೆ ಸ್ವಲ್ಪ ತಣ್ಣಗಾಗಲು ಬಿಡಿ. ಅನಂತರ ಇದನ್ನು ಹಾಗೆಯೇ ಕುಡಿಯಬಹುದು; ಸಿಹಿ ಬೇಕಿದ್ದರೆ ಬೆಲ್ಲ ಹಾಕಿಕೊಳ್ಳಬಹುದು. ಇದನ್ನು ವಾರದಲ್ಲಿ 2 ದಿನ ಸೇವಿಸಿದರೆ ನೆಗಡಿ, ಶೀತ, ಉರಿಶೀತ, ಕಣ್ಣು ಉರಿ ಸೇರಿ ಹಲವು ಅನಾರೋಗ್ಯ ಸಮಸ್ಯೆಗಳಿಂದ ನಿವಾರಣೆ ಪಡೆಯಬಹುದು. ಮಾಡೋದು ಕೂಡ ಬಹಳ ಸುಲಭ. ಹಾಗೆ ಇದರ ಪುಡಿಯನ್ನು ಹೆಚ್ಚು ಪ್ರಮಾಣದಲ್ಲಿ ಮಾಡಿ ಇಟ್ಟುಕೊಂಡಿದ್ದರೆ ನಿಮಗೆ ಯಾವಾಗ ಬೇಕೋ ಆಗ ಮಾಡಿಕೊಳ್ಳಬಹುದು.
ಇದನ್ನು ಮಕ್ಕಳಿಗೆ ಕೂಡ ಮಾಡಿ ಕುಡಿಯಲು ನೀಡಬಹುದು. ಕಹಿ ಎನಿಸಿದರೆ ಬೆಲ್ಲ ಮತ್ತು ಹಾಲು ಹಾಕಿ ನೀಡಬಹುದು. ರಾತ್ರಿ ಮಲಗುವ ಮುನ್ನ ಇದನ್ನು ಕುಡಿದು ಮಲಗಿದರೆ ಗಾಢ ನಿದ್ರೆ ಅನುಭವಿಸಬಹುದು. ಹಾಗೆ ತಲೆನೋವು, ಕಣ್ಣುಉರಿಯಂತಹ ಸಮಸ್ಯೆಗಳಿಗೂ ಪರಿಹಾರ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ಕುಡಿದು ಅದರಿಂದ ಪರಿಹಾರ ಪಡೆದು ನೋಡಿ.



Click it and Unblock the Notifications