Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಮನೆಯಲ್ಲಿ ಈ ವಸ್ತು ಖಾಲಿಯಾಗಲು ಬಿಡಬೇಡಿ..! ಖಾಲಿಯಾದರೆ ಇಡೀ ಮನೆಗೆ ದರಿದ್ರವಂತೆ!
ಮನೆಯಲ್ಲಿ ಕೆಲವೊಂದು ವಸ್ತುಗಳು ಖಾಲಿಯಾಗಲು ಬಿಡಬಾರದು. ಏಕೆಂದರೆ ಕೆಲವೊಂದು ವಸ್ತು ಖಾಲಿಯಾದರೆ ಅದರು ಮನೆಗೆ ಶ್ರೇಯಸ್ಸು ತರುವುದಿಲ್ಲ ಎನ್ನಲಾಗುತ್ತದೆ. ಅದರಲ್ಲೂ ಕೆಲವೊಂದು ವಸ್ತುಗಳೂ ಯಾವುದೇ ಕಾರಣಕ್ಕೂ ಖಾಲಿ ಆಗಲೇ ಬಾರದಂತೆ. ಆ ವಸ್ತುಗಳು ಖಾಲಿಯಾದರೆ ವಾಸ್ತು ಪ್ರಕಾರ ನಿಮ್ಮ ಮನೆಗೆ ಒಳಿತು ತರುವುದಿಲ್ಲವಂತೆ. ಅಲ್ಲದೆ ಇದು ಮನೆಯ ಋಣಾತ್ಮಕ ಶಕ್ತಿ ಹೆಚ್ಚಿಸಲಿದೆ ಎನ್ನಲಾಗಿದೆ.
ವಾಸ್ತು ಸಲಹೆಗಳು ನಾವು ಆರ್ಥಿಕವಾಗಿ ಸದೃಢರಾಗಬೇಕಾದರೆ ವಾಸ್ತುವಿನ ವಿಷಯದಲ್ಲಿ ಕೆಲವು ವಿಷಯಗಳನ್ನು ಸರಿಯಾಗಿ ಪಡೆಯುವುದು ಬಹಳ ಮುಖ್ಯ.ಅದರಲ್ಲೂ ಮನೆ ಹೇಗಿರಬೇಕು ಎಂಬುದಕ್ಕೆ ವಾಸ್ತು ಕೇಳಲಾಗುತ್ತದೆ. ವಾಸ್ತು ಪ್ರಕಾರವಾಗಿ ಮೂಲೆಗಳು, ದಿಕ್ಕು, ಕೋಣೆಗಳ ನಿರ್ಮಿಸಲಾಗುತ್ತದೆ. ಆದರೆ ಇಷ್ಟೆಲ್ಲಾ ಹಣ ಖರ್ಚು ಮಾಡಿದ ಬಳಿಕವೂ ಮನೆಯಲ್ಲಿ ವಾಸ್ತು ದೋಷ ಕಂಡುಬರುವುದನ್ನು ನಾವು ನೋಡಬಹುದು.

ವಾಸ್ತು ನಿಮ್ಮ ಮನೆಗೆ ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಶಕ್ತಿ ಮತ್ತು ಸಂತೋಷವನ್ನು ತರುತ್ತದೆ. ಮನೆಯ ಸದಸ್ಯರ ಸುಖ ಸಂತೋಷಕ್ಕೂ ಮನೆಯ ವಾಸ್ತವಿಗೂ ಸಂಬಂಧವಿರುತ್ತದೆ. ನಿಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ, ಕೆಲವು ನಕಾರಾತ್ಮಕ ಅಂಶಗಳಿವೆ. ಅವುಗಳ ಬಗ್ಗೆ ನಾವು ಹಲವಾರು ನಿಯಮಗಳನ್ನು ಪಾಲಿಸಬೇಕು. ಮುಖ್ಯವಾಗಿ ನಾವು ಕೆಲವು ವಿಷಯಗಳನ್ನು ಖಾಲಿ ಬಿಡಬಾರದು. ಯಾವ ವಸ್ತುಗಳನ್ನು ನೀವು ಮನೆಯಲ್ಲಿ ಖಾಲಿ ಇಡಬಾರದು ಎಂದು ನಿಮಗೆ ತಿಳಿದಿದೆಯೇ?
ಕೆಲವೊಂದು ವಸ್ತುಗಳು ಖಾಲಿಯಾದರೆ ಮನೆಯ ಲಕ್ಷ್ಮಿ ಹೊರಟು ಹೋದಂತೆ. ಜೊತೆಗೆ ಮನೆಯ ಸಂಪತ್ತು ಖಾಲಿಯಾಗಿದಂತೆಯೇ. ಮನೆಯಲ್ಲಿ ಆಹಾರ ಸಂಗ್ರಹಣೆ ಪಾತ್ರೆಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಎಂದಿಗೂ ಖಾಲಿ ಇಡಬಾರದು. ಹಾಗೆ ಇಡುವುದರಿಂದ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಅದರಲ್ಲೂ ಮನೆಯಲ್ಲಿ ನೀರು ತುಂಬುವ ಪಾತ್ರೆಗಳು ಖಾಲಿಯಾಗಬಾರದಂತೆ. ನೀರು ಖಾಲಿಯಾದಾಗ ಅದಕ್ಕೆ ತುಂಬಿಸಿ ಇಡಬೇಕಂತೆ. ಖಾಲಿಯಾಗಿ ಬಿಡಬಾರದು ಅದರಲ್ಲೂ ಖಾಲಿ ಪಾತ್ರೆಯನ್ನು ಅಡುಗೆ ಮನೆಯಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.
ಮನೆಯಲ್ಲಿರುವ ಇತರ ಪಾತ್ರೆಗಳಂತೆ, ನೀರಿನ ಪಾತ್ರೆಗಳು ಬಹಳ ಮುಖ್ಯ. ಅಕ್ಕಿ ತುಂಬಿಡುವ ಪಾತ್ರೆ ಸಹ ಖಾಲಿಯಾಗಬಾರದಂತೆ. ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಒಂದಲ್ಲಾ ಒಂದು ಪಾತ್ರೆಯಲ್ಲಿ ಹಾಕಿಡುತ್ತಾರೆ. ಈ ಅಕ್ಕಿ ಹಾಕಿರುವ ಪಾತ್ರೆ ಖಾಲಿಯಾದರೆ ಅನಿಷ್ಟವಂತೆ. ಅಕ್ಕಿ ಪಾತ್ರೆಯಲ್ಲಿ ಒಂದು ಕಾಳು ಬಿಡದಂತೆ ಖಾಲಿ ಮಾಡದಂತೆ ಶಾಸ್ತ್ರಕ್ಕಾದರು ಅದರಲ್ಲಿ ಎರಡು ಕಾಳು ಅಕ್ಕಿ ಉಳಿಸಬೇಕಂತೆ ಒಂದು ವೇಳೆ ಅಕ್ಕಿ ಖಾಲಿಯಾದರೆ ಅದು ದರಿದ್ರವಂತೆ. ಜೊತೆಗೆ ಮನೆಯೆ ಒಳಿತಾಗುವುದಿಲ್ಲದಿಲ್ಲವಂತೆ.
ದೇವರ ಕೋಣೆಯಲ್ಲಿ ಹುಂಡಿ ಖಾಲಿ ಮಾಡುವುದು ಸಹ ಮನೆಗೆ ಒಳ್ಳೆಯ ಲಕ್ಷಣವಲ್ಲವಂತೆ. ಎಲ್ಲರ ಮನೆಯಲ್ಲೂ ದೇವರ ಕೋಣೆಯಲ್ಲಿ ನಾಣ್ಯ. ಹಣ ಇಡುತ್ತಾರೆ. ಆದರೆ ಇದನ್ನು ದೇವಸ್ಥಾನದ ಹುಂಡಿಗೆ ಹಾಕುತ್ತಾರೆ. ಹೀಗೆ ಹಾಕುವಾಗ ಮನೆಯಲ್ಲಿರುವ ದೇವರ ಕೋಣೆಯಲ್ಲಿ ನಾಣ್ಯ ಸಂಪೂರ್ಣ ಖಾಲಿ ಮಾಡಬಾರದಂತೆ.
ಮನೆಯಲ್ಲಿ ಅರಶಿನ ಹಾಗೂ ಕುಂಕುಮ ಎಂದಿಗೂ ಖಾಲಿಯಾಗಬಾರದಂತೆ. ನಿತ್ಯ ಪೂಜೆ ಮಾಡುವಾಗ ಅರಶಿಣ ಹಾಗೂ ಕುಂಕುಮ ಬಳಸುತ್ತೇವೆ, ಹೀಗಿರುವಾಗ ಒಂದು ದಿನವೂ ಸಂಪೂರ್ಣವಾಗಿ ಅರಶಿನ ಕುಂಕುಮ ಖಾಲಿಯಾಗಬಾರದಂತೆ. ಹೀಗೆ ಖಾಲಿ ಮಾಡುವುದು ಅನಿಷ್ಟದ ಸಂಕೇತ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.



Click it and Unblock the Notifications
