Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮನೆಯಲ್ಲಿ ಈ ವಸ್ತು ಖಾಲಿಯಾಗಲು ಬಿಡಬೇಡಿ..! ಖಾಲಿಯಾದರೆ ಇಡೀ ಮನೆಗೆ ದರಿದ್ರವಂತೆ!
ಮನೆಯಲ್ಲಿ ಕೆಲವೊಂದು ವಸ್ತುಗಳು ಖಾಲಿಯಾಗಲು ಬಿಡಬಾರದು. ಏಕೆಂದರೆ ಕೆಲವೊಂದು ವಸ್ತು ಖಾಲಿಯಾದರೆ ಅದರು ಮನೆಗೆ ಶ್ರೇಯಸ್ಸು ತರುವುದಿಲ್ಲ ಎನ್ನಲಾಗುತ್ತದೆ. ಅದರಲ್ಲೂ ಕೆಲವೊಂದು ವಸ್ತುಗಳೂ ಯಾವುದೇ ಕಾರಣಕ್ಕೂ ಖಾಲಿ ಆಗಲೇ ಬಾರದಂತೆ. ಆ ವಸ್ತುಗಳು ಖಾಲಿಯಾದರೆ ವಾಸ್ತು ಪ್ರಕಾರ ನಿಮ್ಮ ಮನೆಗೆ ಒಳಿತು ತರುವುದಿಲ್ಲವಂತೆ. ಅಲ್ಲದೆ ಇದು ಮನೆಯ ಋಣಾತ್ಮಕ ಶಕ್ತಿ ಹೆಚ್ಚಿಸಲಿದೆ ಎನ್ನಲಾಗಿದೆ.
ವಾಸ್ತು ಸಲಹೆಗಳು ನಾವು ಆರ್ಥಿಕವಾಗಿ ಸದೃಢರಾಗಬೇಕಾದರೆ ವಾಸ್ತುವಿನ ವಿಷಯದಲ್ಲಿ ಕೆಲವು ವಿಷಯಗಳನ್ನು ಸರಿಯಾಗಿ ಪಡೆಯುವುದು ಬಹಳ ಮುಖ್ಯ.ಅದರಲ್ಲೂ ಮನೆ ಹೇಗಿರಬೇಕು ಎಂಬುದಕ್ಕೆ ವಾಸ್ತು ಕೇಳಲಾಗುತ್ತದೆ. ವಾಸ್ತು ಪ್ರಕಾರವಾಗಿ ಮೂಲೆಗಳು, ದಿಕ್ಕು, ಕೋಣೆಗಳ ನಿರ್ಮಿಸಲಾಗುತ್ತದೆ. ಆದರೆ ಇಷ್ಟೆಲ್ಲಾ ಹಣ ಖರ್ಚು ಮಾಡಿದ ಬಳಿಕವೂ ಮನೆಯಲ್ಲಿ ವಾಸ್ತು ದೋಷ ಕಂಡುಬರುವುದನ್ನು ನಾವು ನೋಡಬಹುದು.

ವಾಸ್ತು ನಿಮ್ಮ ಮನೆಗೆ ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಶಕ್ತಿ ಮತ್ತು ಸಂತೋಷವನ್ನು ತರುತ್ತದೆ. ಮನೆಯ ಸದಸ್ಯರ ಸುಖ ಸಂತೋಷಕ್ಕೂ ಮನೆಯ ವಾಸ್ತವಿಗೂ ಸಂಬಂಧವಿರುತ್ತದೆ. ನಿಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ, ಕೆಲವು ನಕಾರಾತ್ಮಕ ಅಂಶಗಳಿವೆ. ಅವುಗಳ ಬಗ್ಗೆ ನಾವು ಹಲವಾರು ನಿಯಮಗಳನ್ನು ಪಾಲಿಸಬೇಕು. ಮುಖ್ಯವಾಗಿ ನಾವು ಕೆಲವು ವಿಷಯಗಳನ್ನು ಖಾಲಿ ಬಿಡಬಾರದು. ಯಾವ ವಸ್ತುಗಳನ್ನು ನೀವು ಮನೆಯಲ್ಲಿ ಖಾಲಿ ಇಡಬಾರದು ಎಂದು ನಿಮಗೆ ತಿಳಿದಿದೆಯೇ?
ಕೆಲವೊಂದು ವಸ್ತುಗಳು ಖಾಲಿಯಾದರೆ ಮನೆಯ ಲಕ್ಷ್ಮಿ ಹೊರಟು ಹೋದಂತೆ. ಜೊತೆಗೆ ಮನೆಯ ಸಂಪತ್ತು ಖಾಲಿಯಾಗಿದಂತೆಯೇ. ಮನೆಯಲ್ಲಿ ಆಹಾರ ಸಂಗ್ರಹಣೆ ಪಾತ್ರೆಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಎಂದಿಗೂ ಖಾಲಿ ಇಡಬಾರದು. ಹಾಗೆ ಇಡುವುದರಿಂದ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಅದರಲ್ಲೂ ಮನೆಯಲ್ಲಿ ನೀರು ತುಂಬುವ ಪಾತ್ರೆಗಳು ಖಾಲಿಯಾಗಬಾರದಂತೆ. ನೀರು ಖಾಲಿಯಾದಾಗ ಅದಕ್ಕೆ ತುಂಬಿಸಿ ಇಡಬೇಕಂತೆ. ಖಾಲಿಯಾಗಿ ಬಿಡಬಾರದು ಅದರಲ್ಲೂ ಖಾಲಿ ಪಾತ್ರೆಯನ್ನು ಅಡುಗೆ ಮನೆಯಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.
ಮನೆಯಲ್ಲಿರುವ ಇತರ ಪಾತ್ರೆಗಳಂತೆ, ನೀರಿನ ಪಾತ್ರೆಗಳು ಬಹಳ ಮುಖ್ಯ. ಅಕ್ಕಿ ತುಂಬಿಡುವ ಪಾತ್ರೆ ಸಹ ಖಾಲಿಯಾಗಬಾರದಂತೆ. ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಒಂದಲ್ಲಾ ಒಂದು ಪಾತ್ರೆಯಲ್ಲಿ ಹಾಕಿಡುತ್ತಾರೆ. ಈ ಅಕ್ಕಿ ಹಾಕಿರುವ ಪಾತ್ರೆ ಖಾಲಿಯಾದರೆ ಅನಿಷ್ಟವಂತೆ. ಅಕ್ಕಿ ಪಾತ್ರೆಯಲ್ಲಿ ಒಂದು ಕಾಳು ಬಿಡದಂತೆ ಖಾಲಿ ಮಾಡದಂತೆ ಶಾಸ್ತ್ರಕ್ಕಾದರು ಅದರಲ್ಲಿ ಎರಡು ಕಾಳು ಅಕ್ಕಿ ಉಳಿಸಬೇಕಂತೆ ಒಂದು ವೇಳೆ ಅಕ್ಕಿ ಖಾಲಿಯಾದರೆ ಅದು ದರಿದ್ರವಂತೆ. ಜೊತೆಗೆ ಮನೆಯೆ ಒಳಿತಾಗುವುದಿಲ್ಲದಿಲ್ಲವಂತೆ.
ದೇವರ ಕೋಣೆಯಲ್ಲಿ ಹುಂಡಿ ಖಾಲಿ ಮಾಡುವುದು ಸಹ ಮನೆಗೆ ಒಳ್ಳೆಯ ಲಕ್ಷಣವಲ್ಲವಂತೆ. ಎಲ್ಲರ ಮನೆಯಲ್ಲೂ ದೇವರ ಕೋಣೆಯಲ್ಲಿ ನಾಣ್ಯ. ಹಣ ಇಡುತ್ತಾರೆ. ಆದರೆ ಇದನ್ನು ದೇವಸ್ಥಾನದ ಹುಂಡಿಗೆ ಹಾಕುತ್ತಾರೆ. ಹೀಗೆ ಹಾಕುವಾಗ ಮನೆಯಲ್ಲಿರುವ ದೇವರ ಕೋಣೆಯಲ್ಲಿ ನಾಣ್ಯ ಸಂಪೂರ್ಣ ಖಾಲಿ ಮಾಡಬಾರದಂತೆ.
ಮನೆಯಲ್ಲಿ ಅರಶಿನ ಹಾಗೂ ಕುಂಕುಮ ಎಂದಿಗೂ ಖಾಲಿಯಾಗಬಾರದಂತೆ. ನಿತ್ಯ ಪೂಜೆ ಮಾಡುವಾಗ ಅರಶಿಣ ಹಾಗೂ ಕುಂಕುಮ ಬಳಸುತ್ತೇವೆ, ಹೀಗಿರುವಾಗ ಒಂದು ದಿನವೂ ಸಂಪೂರ್ಣವಾಗಿ ಅರಶಿನ ಕುಂಕುಮ ಖಾಲಿಯಾಗಬಾರದಂತೆ. ಹೀಗೆ ಖಾಲಿ ಮಾಡುವುದು ಅನಿಷ್ಟದ ಸಂಕೇತ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.



Click it and Unblock the Notifications
