Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ತಪ್ಪುಗಳ ಮಾಡಿದ್ರೆ ದರಿದ್ರ ಮನೆಗೆ ಹುಡುಕಿ ಬರುತ್ತಂತೆ..! ಯಾವ ತಪ್ಪುಗಳು ಗೊತ್ತಾ?
ನಿಮ್ಮ ಮನೆಯಲ್ಲಿ ಸುಖ ಸಂತೋಷ, ನೆಮ್ಮದಿ ಇರಬೇಕು ಅಂದ್ರೆ ಮನೆಯಲ್ಲಿ ವಾಸ್ತು ಪ್ರಕಾರ ಎಲ್ಲವೂ ಸರಿಯಾಗಿರಬೇಕು. ವಾಸ್ತು ಸಲಹೆಯ ಪ್ರಕಾರ ಮನೆಯಲ್ಲಿ ಕೆಲವೊಂದು ವಿಚಾರಗಳ ಮೇಲೆ ಗಮನವಿಡಬೇಕು. ವಾಸ್ತು ಶಾಸ್ತ್ರವು ನಮ್ಮ ಜೀವನ ಸಂತೋಷವಾಗಿಡಲು, ಮನೆಯಲ್ಲಿ ಸಮೃದ್ಧಿ ಹೆಚ್ಚಿಸಲು ವಾಸ್ತು ಶಾಸ್ತ್ರವೂ ಸಲಹೆ ನೀಡುತ್ತದೆ. ಈ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ.
ಅಲ್ಲದೆ ಮನೆಯಲ್ಲಿ ಆರ್ಥಿಕ ಸಮಸ್ಯೆ, ಬಡತನ, ಸಂಕಷ್ಟ, ಅನಾರೋಗ್ಯ ಕಾಡಲು ನಮ್ಮ ನಿತ್ಯದ ಬದುಕಿನಲ್ಲಿ ಇರುವ ವಸ್ತುಗಳೇ, ನಮ್ಮ ನಡುವಳಿಕೆಯೇ ಕಾರಣ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಾವು ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುವುದರ ಮೇಲೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ.

ಹಾಗಾದ್ರೆ ಮನೆಯಲ್ಲಿ ಯಾವ ಕೆಲಸ ಮಾಡೋದ್ರಿಂದ ದರಿದ್ರತನ ಬರುತ್ತದೆ ಎಂಬುದನ್ನು ವಾಸ್ತುವಿನಲ್ಲಿ ವಿವರಿಸಲಾಗಿದೆ. ಹಾಗಾದ್ರೆ ಮನೆಯಲ್ಲಿ ಎಂದಿಗೂ ಈ ಕೆಲಸಗಳನ್ನು ನೀವು ಮಾಡಬೇಡಿ. ಯಾವ ತಪ್ಪು ಕೆಲಸ ಮಾಡಿದರೆ ದರಿದ್ರ ಬರುತ್ತದೆ ಎಂಬುದನ್ನು ನೋಡಿ.
ಊಟ ಮಾಡುವಾಗ ಕಣ್ಣೀರು ಹಾಕುವುದು
ಅನ್ನವನ್ನ ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಊಟ ಮಾಡುವಾಗ ಯಾವುದೇ ಕಾರಣಕ್ಕೂ ಕಣ್ಣೀರು ಹಾಕರಬಾರದು. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ದರಿದ್ರತನ ಬರಲಿದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಿರಿಧಾನ್ಯಗಳ ಕೊರತೆಯಾಗುತ್ತೆ ಎನ್ನುವುದು ವಾಸ್ತುವಿನ ಪ್ರಕಾರ ಮಾಡಬಾರದಂತೆ. ಇದಲ್ಲದೆ ಊಟದ ತಟ್ಟೆಯನ್ನ ತೊಡೆಯ ಮೇಲೆ ಇಟ್ಟುಕೊಂಡು ಊಟ ಮಾಡಬಾರದಂತೆ. ಅದ್ರಲ್ಲೂ ಹೆಣ್ಣು ಮಕ್ಕಳು ತಟ್ಟೆಯನ್ನ ತೊಡೆ ಮೇಲೆ ಇಟ್ಟುಕೊಳ್ಳಬಾರದಂತೆ. ಇದು ಅನಾರೋಗ್ಯದ ಲಕ್ಷಣವಂತೆ.
ಮನೆಯಲ್ಲಿ ವಾಸ್ತು ಗಿಡ ಒಣಗಿಸಬೇಡಿ
ಮನೆಯಲ್ಲಿ ನೀವು ವಾಸ್ತು ಗಿಡಗಳ ಬೆಳೆಸಿರಬಹುದು, ಆದರೆ ಈ ಗಿಡಗಳು ಒಣಗಲು ಬಿಡಬಾರದಂತೆ. ಒಮ್ಮೆ ಈ ಗಿಡಗಳು ಒಣಗಿದರೆ ಅದರಿಂದ ಮನೆಗೆ ದರಿದ್ರ ಬಂದಂತೆ. ಹೀಗಾಗಿ ಈ ಗಿಡಗಳಿಗೆ ನೀರು ಹಾಕಿ ಬೆಳೆಸಿ. ಒಂದು ವೇಳೆ ಒಣಗಿದರೆ ಆ ಗಿಡವನ್ನು ತೆಗೆದು ಹಾಕಬೇಕಂತೆ. ಒಂದು ವೇಳೆ ಈ ಗಿಡಗಳು ಒಣಗಿದರೆ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲವಂತೆ. ಜೊತೆಗೆ ಖಿನ್ನತೆ, ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗುತ್ತಾರೆ ಎನ್ನಲಾಗುತ್ತದೆ.
ನಿಂತ ಗಡಿಯಾರ ಬಿರುಕು ಬಂದ ಕನ್ನಡಿ
ಮನೆಯಲ್ಲಿ ಗಡಿಯಾರ ನಿಂತಿದ್ದರೆ ದರಿದ್ರವಂತೆ, ಜೊತೆಗೆ ಕನ್ನಡಿ ಬಿರುಕು ಬಿಟ್ಟಿದ್ದರೆ ಅದು ಸಹ ದರಿದ್ರವಂತೆ. ಹೀಗಾಗಿ ಮನೆಯಲ್ಲಿ ಈ ರೀತಿಯ ವಸ್ತುಗಳ ಇಡಬಾರದು. ಇದರಿಂದ ಧನ ನಷ್ಟವಾಗುತ್ತದೆ.
ಒಂಟಿ ದೀಪ ಹಚ್ಚಬಾರದು
ದೇವರ ಕೋಣೆಯಲ್ಲಿ ಒಂಟಿ ದೀಪ ಹಚ್ಚಬಾರದಂತೆ. ಬೆಸ ಸಂಖ್ಯೆಯ ದೀಪ ಹಚ್ಚಬಾರದು, ಎರಡು ದೀಪ ಹಚ್ಚುವುದು ಉತ್ತಮವಂತೆ. ಏಕೆಂದರೆ ಬೆಸ ಸಂಖ್ಯೆಯ ದೀಪ ಹಚ್ಚುವುದು ದರಿದ್ರವಂತೆ.
ಕಸ ಗುಡಿಸುವುದು
ಸಂಜೆ 6 ಗಂಟೆಯ ನಂತರ ಮನೆಯಲ್ಲಿ ಕಸ ಗುಡಿಸಬಾರದಂತೆ. ಒಂದು ವೇಳೆ ಗುಡಿಸಿದರು ಕಸ ಹೊರಗೆ ಹಾಕಬಾರದಂತೆ. ಇನ್ನು ಬೆಳಗ್ಗೆ ಎಲ್ಲರೂ ಎದ್ದ ಮೇಲೆಯೇ ಕಸ ಗುಡಿಸಬೇಕಂತೆ. ಮನೆಯಲ್ಲಿ ಸದಸ್ಯರು ಮಲಗಿದ್ದಾಗಲೆ ಗುಡಿಸುವುದು ದರಿದ್ರತನ ತರಲಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಜೇಡರ ಬಲೆ, ಪಾರಿವಾಳ
ಮನೆಯಲ್ಲಿ ಜೆಡರ ಬಲೆ ಕಟ್ಟಿದ್ದರೆ ಅದನ್ನು ಆದಷ್ಟು ಬೇಗ ತೆರವು ಮಾಡಬೇಕಂತೆ. ಜೊತೆಗೆ ಮನೆಯಲ್ಲಿ ಪಾರಿವಾಳ ಗೂಡು ಕಟ್ಟಬಾರದು ಎನ್ನಲಾಗುತ್ತದೆ. ಪಾರಿವಾಳ ಗೂಡು ಕಟ್ಟಿದರೆ ಅಶುಭವಂತೆ. ಇನ್ನು ಜೇಡರ ಬಲೆ ಕಟ್ಟಿದರೆ ಆರ್ಥಿಕ ನಷ್ಟದ ದಾರಿ ಎಂದು ಹೇಳಲಾಗುತ್ತದೆ.



Click it and Unblock the Notifications