Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ತಪ್ಪುಗಳ ಮಾಡಿದ್ರೆ ದರಿದ್ರ ಮನೆಗೆ ಹುಡುಕಿ ಬರುತ್ತಂತೆ..! ಯಾವ ತಪ್ಪುಗಳು ಗೊತ್ತಾ?
ನಿಮ್ಮ ಮನೆಯಲ್ಲಿ ಸುಖ ಸಂತೋಷ, ನೆಮ್ಮದಿ ಇರಬೇಕು ಅಂದ್ರೆ ಮನೆಯಲ್ಲಿ ವಾಸ್ತು ಪ್ರಕಾರ ಎಲ್ಲವೂ ಸರಿಯಾಗಿರಬೇಕು. ವಾಸ್ತು ಸಲಹೆಯ ಪ್ರಕಾರ ಮನೆಯಲ್ಲಿ ಕೆಲವೊಂದು ವಿಚಾರಗಳ ಮೇಲೆ ಗಮನವಿಡಬೇಕು. ವಾಸ್ತು ಶಾಸ್ತ್ರವು ನಮ್ಮ ಜೀವನ ಸಂತೋಷವಾಗಿಡಲು, ಮನೆಯಲ್ಲಿ ಸಮೃದ್ಧಿ ಹೆಚ್ಚಿಸಲು ವಾಸ್ತು ಶಾಸ್ತ್ರವೂ ಸಲಹೆ ನೀಡುತ್ತದೆ. ಈ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ.
ಅಲ್ಲದೆ ಮನೆಯಲ್ಲಿ ಆರ್ಥಿಕ ಸಮಸ್ಯೆ, ಬಡತನ, ಸಂಕಷ್ಟ, ಅನಾರೋಗ್ಯ ಕಾಡಲು ನಮ್ಮ ನಿತ್ಯದ ಬದುಕಿನಲ್ಲಿ ಇರುವ ವಸ್ತುಗಳೇ, ನಮ್ಮ ನಡುವಳಿಕೆಯೇ ಕಾರಣ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಾವು ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುವುದರ ಮೇಲೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ.

ಹಾಗಾದ್ರೆ ಮನೆಯಲ್ಲಿ ಯಾವ ಕೆಲಸ ಮಾಡೋದ್ರಿಂದ ದರಿದ್ರತನ ಬರುತ್ತದೆ ಎಂಬುದನ್ನು ವಾಸ್ತುವಿನಲ್ಲಿ ವಿವರಿಸಲಾಗಿದೆ. ಹಾಗಾದ್ರೆ ಮನೆಯಲ್ಲಿ ಎಂದಿಗೂ ಈ ಕೆಲಸಗಳನ್ನು ನೀವು ಮಾಡಬೇಡಿ. ಯಾವ ತಪ್ಪು ಕೆಲಸ ಮಾಡಿದರೆ ದರಿದ್ರ ಬರುತ್ತದೆ ಎಂಬುದನ್ನು ನೋಡಿ.
ಊಟ ಮಾಡುವಾಗ ಕಣ್ಣೀರು ಹಾಕುವುದು
ಅನ್ನವನ್ನ ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಊಟ ಮಾಡುವಾಗ ಯಾವುದೇ ಕಾರಣಕ್ಕೂ ಕಣ್ಣೀರು ಹಾಕರಬಾರದು. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ದರಿದ್ರತನ ಬರಲಿದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಿರಿಧಾನ್ಯಗಳ ಕೊರತೆಯಾಗುತ್ತೆ ಎನ್ನುವುದು ವಾಸ್ತುವಿನ ಪ್ರಕಾರ ಮಾಡಬಾರದಂತೆ. ಇದಲ್ಲದೆ ಊಟದ ತಟ್ಟೆಯನ್ನ ತೊಡೆಯ ಮೇಲೆ ಇಟ್ಟುಕೊಂಡು ಊಟ ಮಾಡಬಾರದಂತೆ. ಅದ್ರಲ್ಲೂ ಹೆಣ್ಣು ಮಕ್ಕಳು ತಟ್ಟೆಯನ್ನ ತೊಡೆ ಮೇಲೆ ಇಟ್ಟುಕೊಳ್ಳಬಾರದಂತೆ. ಇದು ಅನಾರೋಗ್ಯದ ಲಕ್ಷಣವಂತೆ.
ಮನೆಯಲ್ಲಿ ವಾಸ್ತು ಗಿಡ ಒಣಗಿಸಬೇಡಿ
ಮನೆಯಲ್ಲಿ ನೀವು ವಾಸ್ತು ಗಿಡಗಳ ಬೆಳೆಸಿರಬಹುದು, ಆದರೆ ಈ ಗಿಡಗಳು ಒಣಗಲು ಬಿಡಬಾರದಂತೆ. ಒಮ್ಮೆ ಈ ಗಿಡಗಳು ಒಣಗಿದರೆ ಅದರಿಂದ ಮನೆಗೆ ದರಿದ್ರ ಬಂದಂತೆ. ಹೀಗಾಗಿ ಈ ಗಿಡಗಳಿಗೆ ನೀರು ಹಾಕಿ ಬೆಳೆಸಿ. ಒಂದು ವೇಳೆ ಒಣಗಿದರೆ ಆ ಗಿಡವನ್ನು ತೆಗೆದು ಹಾಕಬೇಕಂತೆ. ಒಂದು ವೇಳೆ ಈ ಗಿಡಗಳು ಒಣಗಿದರೆ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲವಂತೆ. ಜೊತೆಗೆ ಖಿನ್ನತೆ, ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗುತ್ತಾರೆ ಎನ್ನಲಾಗುತ್ತದೆ.
ನಿಂತ ಗಡಿಯಾರ ಬಿರುಕು ಬಂದ ಕನ್ನಡಿ
ಮನೆಯಲ್ಲಿ ಗಡಿಯಾರ ನಿಂತಿದ್ದರೆ ದರಿದ್ರವಂತೆ, ಜೊತೆಗೆ ಕನ್ನಡಿ ಬಿರುಕು ಬಿಟ್ಟಿದ್ದರೆ ಅದು ಸಹ ದರಿದ್ರವಂತೆ. ಹೀಗಾಗಿ ಮನೆಯಲ್ಲಿ ಈ ರೀತಿಯ ವಸ್ತುಗಳ ಇಡಬಾರದು. ಇದರಿಂದ ಧನ ನಷ್ಟವಾಗುತ್ತದೆ.
ಒಂಟಿ ದೀಪ ಹಚ್ಚಬಾರದು
ದೇವರ ಕೋಣೆಯಲ್ಲಿ ಒಂಟಿ ದೀಪ ಹಚ್ಚಬಾರದಂತೆ. ಬೆಸ ಸಂಖ್ಯೆಯ ದೀಪ ಹಚ್ಚಬಾರದು, ಎರಡು ದೀಪ ಹಚ್ಚುವುದು ಉತ್ತಮವಂತೆ. ಏಕೆಂದರೆ ಬೆಸ ಸಂಖ್ಯೆಯ ದೀಪ ಹಚ್ಚುವುದು ದರಿದ್ರವಂತೆ.
ಕಸ ಗುಡಿಸುವುದು
ಸಂಜೆ 6 ಗಂಟೆಯ ನಂತರ ಮನೆಯಲ್ಲಿ ಕಸ ಗುಡಿಸಬಾರದಂತೆ. ಒಂದು ವೇಳೆ ಗುಡಿಸಿದರು ಕಸ ಹೊರಗೆ ಹಾಕಬಾರದಂತೆ. ಇನ್ನು ಬೆಳಗ್ಗೆ ಎಲ್ಲರೂ ಎದ್ದ ಮೇಲೆಯೇ ಕಸ ಗುಡಿಸಬೇಕಂತೆ. ಮನೆಯಲ್ಲಿ ಸದಸ್ಯರು ಮಲಗಿದ್ದಾಗಲೆ ಗುಡಿಸುವುದು ದರಿದ್ರತನ ತರಲಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಜೇಡರ ಬಲೆ, ಪಾರಿವಾಳ
ಮನೆಯಲ್ಲಿ ಜೆಡರ ಬಲೆ ಕಟ್ಟಿದ್ದರೆ ಅದನ್ನು ಆದಷ್ಟು ಬೇಗ ತೆರವು ಮಾಡಬೇಕಂತೆ. ಜೊತೆಗೆ ಮನೆಯಲ್ಲಿ ಪಾರಿವಾಳ ಗೂಡು ಕಟ್ಟಬಾರದು ಎನ್ನಲಾಗುತ್ತದೆ. ಪಾರಿವಾಳ ಗೂಡು ಕಟ್ಟಿದರೆ ಅಶುಭವಂತೆ. ಇನ್ನು ಜೇಡರ ಬಲೆ ಕಟ್ಟಿದರೆ ಆರ್ಥಿಕ ನಷ್ಟದ ದಾರಿ ಎಂದು ಹೇಳಲಾಗುತ್ತದೆ.



Click it and Unblock the Notifications
