Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ದೀಪಾವಳಿಯಲ್ಲಿ ಮನೆಗೆ ಈ ವಸ್ತು ತನ್ನಿ: ಲಕ್ಷ್ಮಿ ಆಶೀರ್ವಾದ ನಿಮ್ಮ ಮೇಲಿರಲಿದೆ!
ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿ ಅಂದ್ರೆ ಮನೆಯಲ್ಲಿ ಸಂಭ್ರಮ ಇರಲಿದೆ. ಹಾಗೆ ದೀಪಾವಳಿಯಲ್ಲಿ ನಾವು ಹಲವು ರೀತಿಯ ಸಂಪ್ರದಾಯಗಳ ಅನುಸರಿಸುತ್ತೇವೆ. ಹಾಗೆ ದೀಪಾವಳಿಯಲ್ಲಿ ನಾವು ಲಕ್ಷ್ಮಿ ಪೂಜೆ ಮಾಡುವುದು ಸಾಮಾನ್ಯ. ಮನೆಯಲ್ಲಿ ಸಂಪತ್ತು, ಐಶ್ವರ್ಯ ಹೆಚ್ಚಾಗಲಿ ಎಂಬ ಕಾರಣಕ್ಕೆ ನಾವು ಲಕ್ಷ್ಮಿ ದೇವಿಯ ಪೂಜಿಸುತ್ತೇವೆ.
ಈ ಬಾರಿ ಅಕ್ಟೋಬರ್ 20ರಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ಈ ದಿನ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಗಳ ಮಾಡುವುದು ನೋಡಬಹುದು. ದೀಪಾವಳಿಯ ಆರಂಭದ ಪೂಜೆ ಇಲ್ಲಿಂದಲೇ ಆರಂಭವಾಗುತ್ತದೆ. ದೀಪಾವಳಿಯಲ್ಲಿ ಲಕ್ಷ್ಮಿ ವಿಶೇಷ ಆಶೀರ್ವಾದ ಮಾಡುತ್ತಾಳೆ ಎಂದು ಹೇಳಲಾಗುತ್ತದೆ.

ಇನ್ನು ಈ ಸಮಯದಲ್ಲಿ ನಾವು ಕೆಲವೊಂದು ವಸ್ತುವನ್ನು ಮನೆಗೆ ತಂದರೆ ಶುಭವಾಗುತ್ತದೆ ಎಂದು ಪುರಾಣಗಳು, ಶಾಸ್ತ್ರಗಳು ಹೇಳಿವೆ. ಅದ್ರಲ್ಲೂ ದೀಪಾವಳಿಯಲ್ಲಿ ಈ ವಸ್ತುವನ್ನು ಮನೆಗೆ ತಂದರೆ ವಿಶೇಷವಾಗಿ ಲಕ್ಷ್ಮಿ ದೇವಿಯ ಕೃಪೆಗೆ ನಾವು ಪಾತ್ರರಾಗಬಹುದಂತೆ. ಹಾಗಾದ್ರೆ ಯಾವೆಲ್ಲಾ ವಸ್ತುಗಳಿಂದ ಲಕ್ಷ್ಮಿ ದೇವಿ ಸಂತೃಪ್ತಳಾಗುತ್ತಾಳೆ. ಯಾವ ವಸ್ತು ದೀಪಾವಳಿಯಲ್ಲಿ ಮನೆಗೆ ತಂದರೆ ಶುಭವಾಗುತ್ತೆ ಎಂಬುದನ್ನು ನೋಡೋಣ.
- ಹೊಸ ಲಕ್ಷ್ಮಿ ಫೋಟೋ, ಗಣೇಶ ಮತ್ತು ಕುಬೇರರ ಮೂರ್ತಿಗಳು
- ಹಸಿ ಅರಿಶಿನ
- ದಕ್ಷಿಣವರ್ತಿ ಶಂಖ
- ಪೊರಕೆ
- ಹಸು
- ಚಿನ್ನ ಅಥವಾ ಬೆಳ್ಳಿ ನಾಣ್ಯಗಳು
- ವಾಹನ
- ವೀಳ್ಯದೆಲೆ, ಬಿಲ್ವ ಮತ್ತು ತುಳಸಿ ಎಲೆಗಳು
- ಕಮಲ ಬೀಜ ಮತ್ತು ಕಮಲದ ಹೂವು
- ಐದು ದೊಡ್ಡ ಮಣ್ಣಿನ ದೀಪಗಳು ಮತ್ತು 25 ಸಣ್ಣ ಮಣ್ಣಿನ ದೀಪಗಳು
ದೀಪಾವಳಿಯ ಸಮಯದಲ್ಲಿ ಈ ಎಲ್ಲಾ ವಸ್ತುಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಶಾಸ್ತ್ರದ ಪ್ರಕಾರ, ಹಬ್ಬಗಳ ಮೊದಲು ಈ ವಸ್ತುಗಳ ಮನೆಗೆ ತರಬೇಕು ಎಂದು ಹೇಳಲಾಗಿದೆ. ಲಕ್ಷ್ಮಿ, ಗಣೇಶ ಮತ್ತು ಕುಬೇರರ ಹೊಸ ವಿಗ್ರಹಗಳು ದೀಪಾವಳಿ ಪೂಜೆಗಾಗಿ ಖರೀದಿಸುವುದು ಉತ್ತಮ ಶುಭ ತರಲಿದೆ. ನೀವು ಚಿನ್ನ ಅಥವಾ ಬೆಳ್ಳಿ ವಿಗ್ರಹಗಳನ್ನು ಸಹ ಖರೀದಿಸಬಹುದು. ಮಣ್ಣಿನ ಮೂರ್ತಿಗಳನ್ನು ಕೂಡ ಖರೀದಿಸಬಹುದು.
ಹಾಗೆ ದೀಪಾವಳಿಯ ಸಮಯದಲ್ಲಿ ಹಸಿ ಅರಿಶಿನವನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಂದು ಲಕ್ಷ್ಮಿ ಪೂಜೆಯ ಸಮಯದಲ್ಲಿ ಈ ಅರಶಿಣವನ್ನು ಬಳಸುವುದು ಅದೃಷ್ಟಕರ ಎಂದು ಹೇಳಲಾಗುತ್ತದೆ. ಹಾಗೆ ಪೂಜೆಯ ಸಮಯದಲ್ಲಿ ದಕ್ಷಿಣವರ್ತಿ ಶಂಖ ಖರೀದಿಸುವುದು ಕೂಡ ಅದೃಷ್ಟಕರ ಎಂದು ಹೇಳಲಾಗಿದೆ. ಇದನ್ನು ಪೂಜಾ ಕೋಣೆಯಲ್ಲಿ ಇರಿಸಿ ಪೂಜೆ ಮಾಡುವುದು ಶುಭ ಎಂದು ಹೇಳಲಾಗುತ್ತದೆ. ಹಾಗೆ ಈ ದಿನದಂದು ಹೊಸ ಪೊರಕೆಯನ್ನು ಮನೆಗೆ ತರುವುದರಿಂದ ಲಕ್ಷ್ಮಿ ದೇವಿ ಮನೆಗರ ಬರುವಳು ಎಂದು ನಂಬಲಾಗಿದೆ. ಹಾಗೆ ಹಸುಗಳನ್ನು ಈ ದಿನ ಖರೀದಿಸಿ ತರುತ್ತಾರೆ, ಇದು ಮನೆಗೆ ಐಶ್ವರ್ಯ ತರಲಿದೆ ಎನ್ನಲಾಗಿದೆ. ಇದು ಲಕ್ಷ್ಮಿ ದೇವಿಯ ಪ್ರತೀಕ ಹಾಗೆ ಮುಕ್ಕೋಟಿ ದೇವರ ಆವಾಸ ಸ್ಥಾನ ಎಂಬ ನಂಬಿಕೆಯ ಹಿನ್ನೆಲೆ ಈ ದಿನ ಖರೀದಿಸಲಾಗುತ್ತದೆ.
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ದೀಪಾವಳಿಯಂದು ಪಫ್ಡ್ ರೈಸ್ ಮತ್ತು ಬಾತಾಶವನ್ನು ಖರೀದಿಸಬೇಕು ಎಂದು ನಂಬಲಾಗಿದೆ. ಚಿನ್ನ ಅಥವಾ ಬೆಳ್ಳಿ ನಾಣ್ಯಗಳ ಖರೀದಿಸುವುದು ಕೂಡ ನಿಮ್ಮ ಸಂಪತ್ತು ಹೆಚ್ಚಾಗಲು ಕಾರಣವಾಗಲಿದೆ. ಇದಲ್ಲದೆ ವೀಳ್ಯದೆಲೆ, ಬಿಲ್ವ ಮತ್ತು ತುಳಸಿ ಎಲೆಗಳು ಕೂಡ ಈ ದಿನ ಮನೆಗೆ ತರುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.
ಹಾಗೆ ದೀಪಾವಳಿಯ ಸಮಯದಲ್ಲಿ 5 ದೊಡ್ಡ ಕಣ್ಣಿನ ದೀಪಗಳು, ಹಾಗೆ 25 ಮಣ್ಣಿನ ದೀಪಗಳ ಖರೀದಿಸಿ, ಅಲಂಕರಿಸುವುದು ಮನೆಯ ಸಂಪತ್ತು ವೃದ್ಧಿಯಾಗಲಿದೆ ಎಂದು ಹೇಳಲಾಗಿದೆ. ಹಾಗೆ ಲಕ್ಷ್ಮಿ ಪೂಜೆಯ ದಿನ ಅಥವಾ ದೀಪಾವಳಿಯ ಸಮಯದಲ್ಲಿ ಶುಭವಾಗಲಿದೆ.



Click it and Unblock the Notifications