Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ದೀಪಾವಳಿಯಲ್ಲಿ ಮನೆಗೆ ಈ ವಸ್ತು ತನ್ನಿ: ಲಕ್ಷ್ಮಿ ಆಶೀರ್ವಾದ ನಿಮ್ಮ ಮೇಲಿರಲಿದೆ!
ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿ ಅಂದ್ರೆ ಮನೆಯಲ್ಲಿ ಸಂಭ್ರಮ ಇರಲಿದೆ. ಹಾಗೆ ದೀಪಾವಳಿಯಲ್ಲಿ ನಾವು ಹಲವು ರೀತಿಯ ಸಂಪ್ರದಾಯಗಳ ಅನುಸರಿಸುತ್ತೇವೆ. ಹಾಗೆ ದೀಪಾವಳಿಯಲ್ಲಿ ನಾವು ಲಕ್ಷ್ಮಿ ಪೂಜೆ ಮಾಡುವುದು ಸಾಮಾನ್ಯ. ಮನೆಯಲ್ಲಿ ಸಂಪತ್ತು, ಐಶ್ವರ್ಯ ಹೆಚ್ಚಾಗಲಿ ಎಂಬ ಕಾರಣಕ್ಕೆ ನಾವು ಲಕ್ಷ್ಮಿ ದೇವಿಯ ಪೂಜಿಸುತ್ತೇವೆ.
ಈ ಬಾರಿ ಅಕ್ಟೋಬರ್ 20ರಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ಈ ದಿನ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಗಳ ಮಾಡುವುದು ನೋಡಬಹುದು. ದೀಪಾವಳಿಯ ಆರಂಭದ ಪೂಜೆ ಇಲ್ಲಿಂದಲೇ ಆರಂಭವಾಗುತ್ತದೆ. ದೀಪಾವಳಿಯಲ್ಲಿ ಲಕ್ಷ್ಮಿ ವಿಶೇಷ ಆಶೀರ್ವಾದ ಮಾಡುತ್ತಾಳೆ ಎಂದು ಹೇಳಲಾಗುತ್ತದೆ.

ಇನ್ನು ಈ ಸಮಯದಲ್ಲಿ ನಾವು ಕೆಲವೊಂದು ವಸ್ತುವನ್ನು ಮನೆಗೆ ತಂದರೆ ಶುಭವಾಗುತ್ತದೆ ಎಂದು ಪುರಾಣಗಳು, ಶಾಸ್ತ್ರಗಳು ಹೇಳಿವೆ. ಅದ್ರಲ್ಲೂ ದೀಪಾವಳಿಯಲ್ಲಿ ಈ ವಸ್ತುವನ್ನು ಮನೆಗೆ ತಂದರೆ ವಿಶೇಷವಾಗಿ ಲಕ್ಷ್ಮಿ ದೇವಿಯ ಕೃಪೆಗೆ ನಾವು ಪಾತ್ರರಾಗಬಹುದಂತೆ. ಹಾಗಾದ್ರೆ ಯಾವೆಲ್ಲಾ ವಸ್ತುಗಳಿಂದ ಲಕ್ಷ್ಮಿ ದೇವಿ ಸಂತೃಪ್ತಳಾಗುತ್ತಾಳೆ. ಯಾವ ವಸ್ತು ದೀಪಾವಳಿಯಲ್ಲಿ ಮನೆಗೆ ತಂದರೆ ಶುಭವಾಗುತ್ತೆ ಎಂಬುದನ್ನು ನೋಡೋಣ.
- ಹೊಸ ಲಕ್ಷ್ಮಿ ಫೋಟೋ, ಗಣೇಶ ಮತ್ತು ಕುಬೇರರ ಮೂರ್ತಿಗಳು
- ಹಸಿ ಅರಿಶಿನ
- ದಕ್ಷಿಣವರ್ತಿ ಶಂಖ
- ಪೊರಕೆ
- ಹಸು
- ಚಿನ್ನ ಅಥವಾ ಬೆಳ್ಳಿ ನಾಣ್ಯಗಳು
- ವಾಹನ
- ವೀಳ್ಯದೆಲೆ, ಬಿಲ್ವ ಮತ್ತು ತುಳಸಿ ಎಲೆಗಳು
- ಕಮಲ ಬೀಜ ಮತ್ತು ಕಮಲದ ಹೂವು
- ಐದು ದೊಡ್ಡ ಮಣ್ಣಿನ ದೀಪಗಳು ಮತ್ತು 25 ಸಣ್ಣ ಮಣ್ಣಿನ ದೀಪಗಳು
ದೀಪಾವಳಿಯ ಸಮಯದಲ್ಲಿ ಈ ಎಲ್ಲಾ ವಸ್ತುಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಶಾಸ್ತ್ರದ ಪ್ರಕಾರ, ಹಬ್ಬಗಳ ಮೊದಲು ಈ ವಸ್ತುಗಳ ಮನೆಗೆ ತರಬೇಕು ಎಂದು ಹೇಳಲಾಗಿದೆ. ಲಕ್ಷ್ಮಿ, ಗಣೇಶ ಮತ್ತು ಕುಬೇರರ ಹೊಸ ವಿಗ್ರಹಗಳು ದೀಪಾವಳಿ ಪೂಜೆಗಾಗಿ ಖರೀದಿಸುವುದು ಉತ್ತಮ ಶುಭ ತರಲಿದೆ. ನೀವು ಚಿನ್ನ ಅಥವಾ ಬೆಳ್ಳಿ ವಿಗ್ರಹಗಳನ್ನು ಸಹ ಖರೀದಿಸಬಹುದು. ಮಣ್ಣಿನ ಮೂರ್ತಿಗಳನ್ನು ಕೂಡ ಖರೀದಿಸಬಹುದು.
ಹಾಗೆ ದೀಪಾವಳಿಯ ಸಮಯದಲ್ಲಿ ಹಸಿ ಅರಿಶಿನವನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಂದು ಲಕ್ಷ್ಮಿ ಪೂಜೆಯ ಸಮಯದಲ್ಲಿ ಈ ಅರಶಿಣವನ್ನು ಬಳಸುವುದು ಅದೃಷ್ಟಕರ ಎಂದು ಹೇಳಲಾಗುತ್ತದೆ. ಹಾಗೆ ಪೂಜೆಯ ಸಮಯದಲ್ಲಿ ದಕ್ಷಿಣವರ್ತಿ ಶಂಖ ಖರೀದಿಸುವುದು ಕೂಡ ಅದೃಷ್ಟಕರ ಎಂದು ಹೇಳಲಾಗಿದೆ. ಇದನ್ನು ಪೂಜಾ ಕೋಣೆಯಲ್ಲಿ ಇರಿಸಿ ಪೂಜೆ ಮಾಡುವುದು ಶುಭ ಎಂದು ಹೇಳಲಾಗುತ್ತದೆ. ಹಾಗೆ ಈ ದಿನದಂದು ಹೊಸ ಪೊರಕೆಯನ್ನು ಮನೆಗೆ ತರುವುದರಿಂದ ಲಕ್ಷ್ಮಿ ದೇವಿ ಮನೆಗರ ಬರುವಳು ಎಂದು ನಂಬಲಾಗಿದೆ. ಹಾಗೆ ಹಸುಗಳನ್ನು ಈ ದಿನ ಖರೀದಿಸಿ ತರುತ್ತಾರೆ, ಇದು ಮನೆಗೆ ಐಶ್ವರ್ಯ ತರಲಿದೆ ಎನ್ನಲಾಗಿದೆ. ಇದು ಲಕ್ಷ್ಮಿ ದೇವಿಯ ಪ್ರತೀಕ ಹಾಗೆ ಮುಕ್ಕೋಟಿ ದೇವರ ಆವಾಸ ಸ್ಥಾನ ಎಂಬ ನಂಬಿಕೆಯ ಹಿನ್ನೆಲೆ ಈ ದಿನ ಖರೀದಿಸಲಾಗುತ್ತದೆ.
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ದೀಪಾವಳಿಯಂದು ಪಫ್ಡ್ ರೈಸ್ ಮತ್ತು ಬಾತಾಶವನ್ನು ಖರೀದಿಸಬೇಕು ಎಂದು ನಂಬಲಾಗಿದೆ. ಚಿನ್ನ ಅಥವಾ ಬೆಳ್ಳಿ ನಾಣ್ಯಗಳ ಖರೀದಿಸುವುದು ಕೂಡ ನಿಮ್ಮ ಸಂಪತ್ತು ಹೆಚ್ಚಾಗಲು ಕಾರಣವಾಗಲಿದೆ. ಇದಲ್ಲದೆ ವೀಳ್ಯದೆಲೆ, ಬಿಲ್ವ ಮತ್ತು ತುಳಸಿ ಎಲೆಗಳು ಕೂಡ ಈ ದಿನ ಮನೆಗೆ ತರುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.
ಹಾಗೆ ದೀಪಾವಳಿಯ ಸಮಯದಲ್ಲಿ 5 ದೊಡ್ಡ ಕಣ್ಣಿನ ದೀಪಗಳು, ಹಾಗೆ 25 ಮಣ್ಣಿನ ದೀಪಗಳ ಖರೀದಿಸಿ, ಅಲಂಕರಿಸುವುದು ಮನೆಯ ಸಂಪತ್ತು ವೃದ್ಧಿಯಾಗಲಿದೆ ಎಂದು ಹೇಳಲಾಗಿದೆ. ಹಾಗೆ ಲಕ್ಷ್ಮಿ ಪೂಜೆಯ ದಿನ ಅಥವಾ ದೀಪಾವಳಿಯ ಸಮಯದಲ್ಲಿ ಶುಭವಾಗಲಿದೆ.



Click it and Unblock the Notifications