Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಮಲೇರಿಯಾ ದಿನ 2023: ಮಲೇರಿಯಾ ತಡೆಗಟ್ಟಲು ಸೊಳ್ಳೆ ಕಚ್ಚದಂತೆ ತಡೆಗಟ್ಟುವುದು ಹೇಗೆ?
ಏಪ್ರಿಲ್ 25ನ್ನು ಮಲೇರಿಯಾ ದಿನವನ್ನಾಗಿ ಆಚರಿಸಲಾಗುವುದು. ಈ ವರ್ಷ "Time to deliver zero malaria: invest, innovate, implement" ಥೀಮ್ನಲ್ಲಿ ಈ ದಿನವನ್ನು ಆಚರಿಸಲಾಗುವುದು. 2018ರ ವರದಿ ಪ್ರಕಾರ ಭಾರತದ ಶೇ. 98ರಷ್ಟು ಜನಸಂಖ್ಯೆಗೆ ಮಲೇರಿಯಾದ ಅಪಾಯವಿದೆ. 2030ಕ್ಕೆ ಮಲೇರಿಯಾ ಮುಕ್ತ ಭಾರತವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಆದರೆ ಜನರು ಕೂಡ ಇದಕ್ಕೆ ಕೈ ಜೋಡಿಸಬೇಕಾಗಿದೆ.

ಮಲೇರಿಯಾ ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯ
ಮಲೇರಿಯಾ ಎಂಬುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ನಿರ್ಲಕ್ಷ್ಯ ಮಾಡಿದರೆ ಇದರಿಂದ ಮನುಷ್ಯರ ಪ್ರಾಣಕ್ಕೆ ಅಪಾಯ ಉಂಟಾಗುವುದು. ಮಲೇರಿಯಾವನ್ನು ನಿಯಂತ್ರಿಸುವುದು ಮುನ್ಸಿಪಾಲಿಟಿಯವರ ಕರ್ತವ್ಯವೆಂದು ಸುಮ್ಮನಿರದೆ ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು, ಆಗ ಮಾತ್ರ ಈ ಮಲೇರಿಯಾವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯ.
ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ಮಾಡಕೊಡಬೇಡಿ:
ಮಲೇರಿಯಾ ಕಾಯಿಲೆಯು ಸೊಳ್ಳೆಗಳಿಂದಾಗಿ ಉಂಟಾಗುವುದು. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಡಿತದಿಂದಾಗಿ ಮಲೇರಿಯಾ ರೋಗ ಹರಡುವುದು. ಮನೆಯ ಸುತ್ತ ಮುತ್ತ ನಿಂತ ನೀರು ಇದ್ದರೆ ಅದರಲ್ಲಿ ಸೊಳ್ಳೆಗಳು ಕುಳಿತು ಮೊಟ್ಟೆ ಇಡುತ್ತದೆ, ಇದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುವುದು.ಮಲೇರಿಯಾ ಸಮಸ್ಯೆ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವುದು. ಬೇಸಿಗೆಯಲ್ಲೂ ಮನೆಯ ಸುತ್ತ ಮುತ್ತ ಪಾತ್ರೆ, ಬಕೆಟ್ನಲ್ಲಿ ನೀರು ತುಂಬಿಟ್ಟರೆ ಅದರಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದರಿಂದ ಈ ರೋಗ ಹರಡಬಹುದು. ಆದ್ದರಿಂದ ಬೇಸಿಗೆ ಇರಲಿ, ಮಳೆಗಾಲವಿರಲಿ ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ.
ಮಲೇರಿಯಾ ತಡೆಗಟ್ಟಲು ನೀವೇನು ಮಾಡಬೇಕು?
* ನಿಂತ ನೀರಿನಿಂದ ಸೊಳ್ಳೆಗಳ ಹೆಚ್ಚುವುದರಿಂದ ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಡಬ್ಬಿ,ಬಕಟ್, ಟಯರ್ ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
* ಮಳೆಗಾಲಕ್ಕೆ ಇನ್ನೂ ಒಂದು ತಿಂಗಳು ಇದೆಯಾದರೂ ಈಗಲೇ ರೋಡ್ಗಳಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಗ್ರಾಮ ಪಂಚಾಯಿತಿ, ನಗರಸಭೆಗೆ ಅರ್ಜಿ ಸಲ್ಲಿಸಿ.
* ಕಸ ಸೂಕ್ತ ರೀತಿಯಲ್ಲಿ ವಿಲೇವಾರಿವಾಗುತ್ತಿದೆಯೇ ನೋಡಿಕೊಳ್ಳಿ. ನೀವು ಕೂಡ ಅಷ್ಟೇ ಒಣಕಸ-ಹಸಿ ಕಸ ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡಿ.
* ನೀರು ತುಂಬಿಡುವ ಪಾತ್ರೆಗಳಲ್ಲಿ ಮುಚ್ಚಳವಿರಬೇಕು
* ಮನೆಗೆ ಎಸಿ ಹಾಕಿಸಿದ್ದರೆ ನೀರನ್ನು ಸಂಗ್ರಹಿಸಲು ಒಂದು ಬಕೆಟ್ ಇಟ್ಟು ಆ ನೀರನ್ನು ನಿಯಮಿತವಾಗಿ ಬಿಸಾಡಿ.
ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದು ಹೇಗೆ?
* ಸೊಳ್ಳೆ ಕಚ್ಚದಿರಲು ಕಿಟಕಿಗೆ ಸೊಳ್ಳೆ ಪರದೆ ಹಾಕಿಸಿ, ಬೆಡ್ಗೆ ಸೊಳ್ಳೆ ಪರದೆ ಹಾಕಿಸಿ.
* ಬೆಳಗ್ಗೆ ಹಾಗೂ ಸಂಜೆ ಹೊತ್ತು ಕಿಟಿಕಿ, ಬಾಗಿಲುಗಳನ್ನು ತೆರೆಯಬೇಡಿ
* ಉದ್ದ ತೋಳಿನ ಉಡುಪು ಧರಿಸಬೇಕು
* ಸೊಳ್ಳೆ ಕಚ್ಚದಂತೆ ಸ್ಪ್ರೇ ಬಳಸಿ.
* ಮಕ್ಕಳಿಗೂ ಸೊಳ್ಳೆ ಕಚ್ಚದಂತೆ ಸೂಕ್ತ ಮುನ್ನೆಚ್ಚರಿಕೆವಹಿಸಿ.
* ಸೊಳ್ಳೆ ಕಚ್ಚದಿರಲು ಕ್ರೀಮ್ ಅಥವಾ repellent ಬಳಸಿ.
ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದರಿಂದ ಮಲೇರಿಯಾ ಮಾತ್ರವಲ್ಲ ಡೆಂಗ್ಯೂ ಕೂಡ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications