Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಕ್ಕಳಿಕೆ ಬಂದಾಗ ಏನು ಮಾಡಬೇಕು? ಯಾವ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರಿಗೆ ತೋರಿಸಬೇಕು?
ಯಾರಿಗೆ ಯಾವಾಗ ಬೇಕಾದರೂ ಬಿಕ್ಕಳಿಕೆ ಬರಬಹುದು, ಈ ಬಿಕ್ಕಳಿಕೆ ಒಂದೆರಡು ಬಂದರೆ ಓಕೆ, ಆದರೆ ಆಗಾಗ ಬಿಕ್ಕಳಿಕೆ ಬರುತ್ತಿದ್ದರೆ ತುಂಬಾನೇ ಕಿರಿಕಿರಿಯಾಗುವುದು, ತುಂಬಾ ಬಿಕ್ಕಳಿಕೆಯಾದರೆ ಸುಸ್ತಾಗುತ್ತೇವೆ. ಈ ರೀತಿ ಬಿಕ್ಕಳಿಕೆ ಬಂದಾಗ ಒಬ್ಬೊಬ್ಬರು ಒಂದೊಂದು ಟಿಪ್ಸ್ ಹೇಳುತ್ತಾರೆ. ಕೆಲವರು ಕಿವಿ ಎಳೆಯಿರಿ ಎಂದರೆ ಇನ್ನು ಕೆಲವರು ಅವರನ್ನು ಭಯಪಡಿಸಿ ಹೀಗೆ ಅನೇಕ ಐಡಿಯಾಗಳನ್ನು ಕೊಡುತ್ತಾರೆ.

ಬಿಕ್ಕಳಿಕೆ ಬಂದಾಗ ಏನು ಮಾಡಬೇಕು ಎಂಬುವುದಕ್ಕೆ ಕೆಲ ವೈಜ್ಞಾನಿಕ ಟಿಪ್ಸ್ ನೀಡಲಾಗಿದೆ ನೋಡಿ:
ಬಿಕ್ಕಳಿಕೆ ಬಂದಾಗ ಏನು ಮಾಡಬೇಕು?
ಪೇಪರ್ ಬ್ಯಾಗ್ ಇದ್ದರೆ ಅದರಲ್ಲಿ ಮುಖ ಹಿಡಿದು ಉಸಿರಾಡಿ, ಆದರೆ ಬ್ಯಾಗ್ ಅನ್ನು ತಲೆ ಮೇಲೆ ಹಾಕಬೇಡಿ.
ನಿಮ್ಮ ಮಂಡಿಯನ್ನು ಮಡಚಿ, ಎದೆ ಭಾಗಕ್ಕೆ ತನ್ನಿ, ನಂತರ ಮುಂದೆಕ್ಕೆ ಬಾಗಿ, ಈ ರೀತಿ ಮಾಡಿದರೆ ಬಿಕ್ಕಳಿಕೆ ನಿಲ್ಲುವುದು
ಐಸ್ ಕೋಲ್ಡ್ ನೀರು ಕುಡಿಯಿರಿ
ಸ್ವಲ್ಪ ಸಕ್ಕರೆ ಬಾಯಿಗೆ ಹಾಕಿ
ನಿಂಬೆಹಣ್ಣು ಕಚ್ಚಿ ಅಥವಾ ವಿನೆಗೆರ್ ಟೆಸ್ಟ್ ಮಾಡಿ
ಉಸಿರನ್ನು ಸ್ವಲ್ಪ ಹೊತ್ತು ಹಿಡಿದು ನಂತರ ಬಿಡಿ
ಏನು ಮಾಡಬಾರದು?
ಬಿಕ್ಕಳಿಕೆ ಬಂದಾಗ ಮದ್ಯ ಸೇವಿಸಬಾರದು, ಫಿಜ್ಜಿ ಅಥವಾ ಹಾಟ್ ಡ್ರಿಂಕ್ಸ್ ಸೇವಿಸಬಾರದು.
ಚ್ಯುಯಿಂಗ್ಗಮ್ ಜಗಿಯಬೇಡಿ, ಧೂಮಪಾನ ಮಾಡಬೇಡಿ
ಖಾರದ ಪದಾರ್ಥ ಸೇವಿಸಬೇಡಿ
ಆಹಾರವನ್ನು ಬೇಗನೆ ತಿನ್ನಬೇಡಿ
ಬಿಸಿ ಪಾನೀಯ ಕುಡಿದ ತಕ್ಷಣ ತಣ್ಣನೆಯ ಆಹಾರ ಸೇವಿಸಬೇಡಿ.
ಬಿಕ್ಕಳಿಕೆ ಏಕೆ ಬರುತ್ತದೆ?
ಬಿಕ್ಕಳಿಕೆ ಏಕೆ ಬರುತ್ತದೆ ಎಂಬುವುದಕ್ಕೆ ನಿಖರ ಕಾರಣವಿಲ್ಲ, ಆದರೆ ಈ ಪ್ರಮುಖ ಕಾರಣಗಳಿಂದಲೂ ಬರುತ್ತದೆ
ಮಾನಸಿಕ ಒತ್ತಡ
ಎಮೋಷನ್ : ಯಾವುದೋ ಕಾರಣಕ್ಕೆ ಮನಸ್ಸಿನಲ್ಲಿ ತುಂಬಾನೇ ಬೇಸರ
ವೇಗವಾಗಿ ತಿನ್ನುವುದು, ಕುಡಿಯುವುದು ಮಾಡಿದಾಗತ
ಅತ್ಯಧಿಕ ಕೊಬ್ಬಿನಂಶವಿರುವ ಆಹಾರ ಸೇವಿಸುವುದರಿಂದ
ಅತಿಯಾಗಿ ಹೆಚ್ಚಾಗಿ ನೀರು ಕುಡಿಯುವುದರಿಂದ
ನರಕ್ಕೆ ಹಾನಿ ಮಾಡುವ ಯಾವುದೇ ಕಾಯಿಲೆ, ಲಿವರ್ ಕಾಯಿಲೆ, ನ್ಯೂಮೋನಿಯಾ, ಶ್ವಾಸಕೋಶದ ಸಮಸ್ಯೆಯಿದ್ದರೆ
ಕಿಬ್ಬೊಟ್ಟೆ ಸರ್ಜರಿಯಿಂದ ನರಕ್ಕೆ ಹಾನಿಯಾಗಿದ್ದರೆ ಈ ರೀತಿ ಬಿಕ್ಕಳಿಕೆ ಬರುವುದು
ಮೈ ಉಷ್ಣತೆಯಲ್ಲಿ ಬದಲಾವಣೆಯಾದಾಗ ಕೂಡ ಬಿಕ್ಕಳಿಕೆ ಬರುವುದು.
ಅಪರೂಪದ ಪ್ರಕರಣದಲ್ಲಿ ಈ ರೀತಿ ಬಿಕ್ಕಳಿಕೆ ಬಂದರ 49 ಗಂಟೆಗಳಿಗಿಂತ ಅಧಿಕ ಹೊತ್ತು ಬಿಕ್ಕಳಿಕೆ ಇದ್ದರೆ ಯಾವುದಾದರೂ ಕಾಯಿಲೆ ಅಥವಾ ಔಷಧೀಯ ಪರಿಣಾಮದಿಂದ ಇರಬಹುದು.
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
ಬಿಕ್ಕಳಿಕೆ ಕಾಯಿಲೆಯಲ್ಲ ಹಾಗಾಗಿ ಬಿಕ್ಕಳಿಕೆ ಬಂದ ತಕ್ಷಣ ವೈದ್ಯರಿಗೆ ತೋರಿಸಬೇಕಾಗಿಲ್ಲ, ಆದರೆ ಬಿಕ್ಕಳಿಕೆ ಜೊತೆಗೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು.
ಕಿಬ್ಬೊಟ್ಟೆ ನೋವು
ಜ್ವರ
ಉಸಿರಾಟಕ್ಕೆ ತೊಂದರೆ
ವಾಂತಿ
ಕೆಮ್ಮುವಾಗ ರಕ್ತ ಬರುವುದು
ಗಂಟಲು ಕಟ್ಟಿದಂತಾಗುವುದು (ಕತ್ತು ಹಿಸುಕಿದ ಅನುಭವ)
ಅಪರೂಪದ ಪ್ರಕರಣದಲ್ಲಿ ಈ ರೀತಿ ಬಿಕ್ಕಳಿಕೆ ಬಂದರ 49 ಗಂಟೆಗಳಿಗಿಂತ ಅಧಿಕ ಹೊತ್ತು ಬಿಕ್ಕಳಿಕೆ ಇದ್ದರೆ ಯಾವುದಾದರೂ ಕಾಯಿಲೆ ಅಥವಾ ಔಷಧೀಯ ಪರಿಣಾಮದಿಂದ ಇರಬಹುದು.
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
ಬಿಕ್ಕಳಿಕೆ ಕಾಯಿಲೆಯಲ್ಲ ಹಾಗಾಗಿ ಬಿಕ್ಕಳಿಕೆ ಬಂದ ತಕ್ಷಣ ವೈದ್ಯರಿಗೆ ತೋರಿಸಬೇಕಾಗಿಲ್ಲ, ಆದರೆ ಬಿಕ್ಕಳಿಕೆ ಜೊತೆಗೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು.
ಕಿಬ್ಬೊಟ್ಟೆ ನೋವು
ಜ್ವರ
ಉಸಿರಾಟಕ್ಕೆ ತೊಂದರೆ
ವಾಂತಿ
ಕೆಮ್ಮುವಾಗ ರಕ್ತ ಬರುವುದು
ಗಂಟಲು ಕಟ್ಟಿದಂತಾಗುವುದು (ಕತ್ತು ಹಿಸುಕಿದ ಅನುಭವ)
ಬಿಕ್ಕಳಿಕೆಯಿಂದ ಏನಾದರೂ ತೊಂದರಯಿದೆಯೇ?
ಆಗಾಗ ಬಿಕ್ಕಳಿಕೆ ಸಮಸ್ಯೆ ಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಆದರೆ ನೀವು ನಿಮ್ಮ ಸಮಸ್ಯೆಗೆ ತಕ್ಕ ಸಲಹೆ ನೀಡುವ ವೈದ್ಯರನ್ನು ಕಾಣಬೇಕು.
ಆಗಾಗ ಬಿಕ್ಕಳಿಕೆ ಬರುತ್ತಿದ್ದರೆ ನಿದ್ದೆಯಲ್ಲಿ ತೊಂದರೆಯಾಗುವುದು, ತೂಕ ಇಳಿಕೆಯಾಗುವುದು
ಬಿಕ್ಕಳಿಕೆಯಿಂದ ಹೃದಯಾಘಾತ ಉಂಟಾಗಿದ್ದೂ ಇದೆ.
ದಿನಾ ಬಿಕ್ಕಳಿಕೆ ಉಂಟಾದರೆ
ನಿದ್ದೆ ಸರಿಯಾಗಿ ಬರಲ್ಲ
ತಿನ್ನಲು, ನೀರು ಕುಡಿಯಲು ಕಷ್ಟವಾಗುವುದು
ನೋವು' ತಲೆಸುತ್ತು
ಒತ್ತಡ
ಈ ಬಗೆಯ ಸಮ್ಯೆ ಕಂಡು ಬರುವುದು.
ನಿಮಗೆ ಯಾವ ಮಸಸ್ಯೆ ಕಾಡುವುದೋ ಆ ರೋಗದ ತಜ್ಞರನ್ನು ಭೇಟಿ ಮಾಡಿದರೆ ನಿಮಗೆ ಸೂಕ್ತ ಸಲಹೆ ಸಿಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications