Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಪಾದಗಳಲ್ಲಿ ಊತ? ನಿರ್ಲಕ್ಷ್ಯ ಬೇಡ ಈ ಕಾಯಿಲೆಯ ಲಕ್ಷಣವಿರಬಹುದು
ನಮ್ಮ ಕಾಲು ನಮ್ಮ ಆರೋಗ್ಯದ ಬಗ್ಗೆ ಹೇಳುತ್ತದೆ. ಕೆಲವೊಮ್ಮೆ ಕಾಲಿನಲ್ಲಿ ಕೆಲವೊಂದು ಬದಲಾವಣೆ ಗೋಚರಿಸಿದರೆ ಸಾಕಷ್ಟು ಜನ ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಕಾಲಿನಲ್ಲಿ ಗೋಚರಿಸುವ ಬದಲಾವಣೆ ನಮ್ಮ ದೇಹದಲ್ಲಿ ಏನೋ ದೊಡ್ಡ ಸಮಸ್ಯೆ ಇದೆ ಎಂಬುವುದರ ಲಕ್ಷಣವೂ ಆಗಿರುತ್ತದೆ ಆದ್ದರಿಂದ ನಿರ್ಲಕ್ಷ್ಯ ಮಾಡಲೇಬಾರದು.

ಅದರಲ್ಲೂ ನಿಮ್ಮ ಕಾಲಿನಲ್ಲಿ ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ:
1.ಕಾಲಿನಲ್ಲಿ ಸೆಳೆತ:
ಮಸಲ್ ಕ್ಯಾಚ್ ಅಥವಾ ಕಾಲುಗಳಲ್ಲಿ ಸೆಳೆತ ಹಲವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಪೋಷಕಾಂಶದ ಕೊರತೆ ಉಂಟಾದಾಗ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ ರೀತಿಯಾಗುವುದು. ನೀವು ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ಸೇವಿಸಿದರೆ ಸರಿಯಾಗುವುದು. ಅಲ್ಲದೆ ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ. ಇಷ್ಟೆಲ್ಲಾ ಮಾಡಿಯೂ ಸ್ನಾಯು ಸೆಳೆತ ಕಂಡು ಬರುತ್ತಿದ್ದರೆ ವೈದ್ಯರಿಗೆ ತೋರಿಸಿ.
2. ಕಾಲುಗಳು ಕೆಂಪಾಗುವುದು,
ಊತ ಹಾಗೂ ಪಾದಗಳಲ್ಲಿ ನೋವು
ಯೂರಿಕ್ ಆಮ್ಲದ ಸಮಸ್ಯೆಯಿದ್ದಾಗ ಈ ರೀತಿ ಉಂಟಾಗುತ್ತದೆ. ಯೂರಿಕ್ ಆಮ್ಲದ ಕಲ್ಲುಗಳು ಪಾದಗಳಲ್ಲಿ ಸಂಗ್ರಹವಾಗಿ ಊತ, ಕೆಂಪಾಗುವುದು, ಪಾದಗಳಲ್ಲಿ ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು. ಇನ್ನು ಸಂಧಿವಾತದ ಸಮಸ್ಯೆಯಿದ್ದರೂ ಈ ರೀತಿ ಉಂಟಾಗುವುದು.
3. ಪಾದದ ಗಾಯ ಬೇಗನೆ ಒಣಗದೇ ಇದ್ದರೆ
ನಿಮ್ಮ ಕಾಲುಗಳಿಗೆ ಚಿಕ್ಕ ಗಾಯವಾಗಿ ಅದು ಬೇಗನೇ ಒಣಗದೇ ಇದ್ದರೆ ಮಧುಮೇಹದ ಬಗ್ಗೆ ತಿಳಿಯಲು ರಕ್ತ ಪರೀಕ್ಷೆ ಮಾಡಿಸಿ. ಏಕೆಂದರೆ ಮಧುಮೇಹಿಗಳಿಗೆ ಚಿಕ್ಕ ಗಾಯವಾದರೂ ಬೇಗನೆ ಒಣಗುವುದಿಲ್ಲ. ನೀವು ಇತ್ತೀಚೆಗೆ ಮಧುಮೇಹ ಪರೀಕ್ಷೆ ಮಾಡಿಸದೆ ಇದ್ದರೆ ರಕ್ತ ಪರೀಕ್ಷೆ ಮಾಡಿಸಿ.
4. ಹೆಬ್ಬರಳಿನ ಕೂದಲು ಉದುರುತ್ತಿದ್ದರೆ
ನಿಮ್ಮ ಪಾದದ ಹೆಬ್ಬರಳಿನಲ್ಲಿ ಕೂದಲು ಉದುರುತ್ತಿದ್ದರೆ ನಿಮ್ಮಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತಿಲ್ಲವೆಂದರ್ಥ. ಅತ್ಯಧಿಕ ಕೊಲೆಸ್ಟ್ರಾಲ್ ಇದ್ದಾಗ ನರಗಳಿಗೆ ತೊಂದರೆಯಾಗುವುದು, ಇದರಿಂದ ರಕ್ತನಾಳಗಳಲ್ಲಿ ಸರಿಯಾಗಿ ರಕ್ತಸಂಚಾರವಾಗುವುದಿಲ್ಲ. ಕೂದಲು ಉದುರುವುದು, ಹೆಬ್ಬರಳಿನಲ್ಲಿ ಪಲ್ಸ್ ತೋರಿಸದೇ ಇರುವುದು ಈ ರೀತಿಯಾದರೆ ವೈದ್ಯರಿಗೆ ತೋರಿಸಿ.
5. ಪಾದಗಳು ತುಂಬಾ ತಣ್ಣಗೆ ಇರುವುದು
ಹೈಪೋಥೈರಾಯ್ಡ್ ಸಮಸ್ಯೆ ಇರುವವರಿಗೆ ಈ ಬಗೆಯ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ಇತ್ತೀಚೆಗೆ ತುಂಬಾ ದಪ್ಪಗಾಗುತ್ತಿದ್ದೀರಾ? ಮಲಬದ್ಧತೆ ಸಮಸ್ಯೆ ಈ ರೀತಿಯೆಲ್ಲಾ ಕಂಡು ಬಂದರೆ ಥೈರಾಯ್ಡ್ ಪರೀಕ್ಷೆ ಮಾಡಿಸಿ.
6. ಬೆರಳುಗಳು ಹಳದಿ ಬಣ್ಣಕ್ಕೆ ತಿರುಗುವುದು
ಬೆರಳುಗಳಿಗೆ ಸೋಂಕು ತಗುಲಿದಾಗ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಅಲ್ಲದೆ ಉಗುರುಗಳಿಂದ ಕೆಟ್ಟ ವಾಸನೆ ಬೀರುತ್ತದೆ.
7. ಪಾದಗಳಲ್ಲಿ ಊತ
ಪಾದಗಳಲ್ಲಿ ಊತವಿದ್ದರೆ ಕಿಡ್ನಿ ಸಮಸ್ಯೆಯ ಲಕ್ಷಣವಾಗಿದೆ, ಇನ್ನು ಕೆಲವರಿಗೆ ಹೃದಯಾಘತದ ಮುನ್ಸೂಚನೆಯಾಗಿಯೂ ಪಾದಗಳಲ್ಲಿ ಊತ ಕಂಡು ಬರುವುದು. ಆದ್ದರಿಂದ ಪಾದಗಳಲ್ಲಿ ಊತ ನಿರ್ಲಕ್ಷ್ಯ ಮಾಡಲೇಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

