Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ಕೆಟ್ಟ ಅಹಾರ ಅಭ್ಯಾಸಗಳು ರಕ್ತದ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಚ್ಚರ..!
ಬೆಳಗಿನ ಆಹಾರ ಇಡೀ ದಿನದ ಎಲ್ಲಾ ಹೊತ್ತಿನ ಅಹಾರಕ್ಕಿಂತ ನಿಮ್ಮ ಆರೋಗ್ಯದ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಇದರ ಬಗ್ಗೆ ವಿಶೇಷ ಕಾಳಜಿ ವಹಿಸುವುದ ಅತ್ಯಂತ ಮುಖ್ಯ. ಬೆಳಗಿನ ಉಪಾಹಾರ ಬಿಟ್ಟರೆ ನಿಮ್ಮ ರಕ್ತದ ಸಕ್ಕರೆಯ ಮಟ್ಟ ಕಡಿಮೆ ಅಗುತ್ತದೆ ಎಚ್ಚರ.
ಅದರಲ್ಲೂ ಮಧುಮೇಹ ರೋಗಿಗಳಂತೂ ಬೆಳಗಿನ ಆಹಾರ ಮತ್ತು ಅದರ ಪೌಷ್ಟಿಕಾಂಶಗಳ ಬಗ್ಗೆ ಸಾಕಷ್ಟು ಕಾಳಜಿವಹಿಸಲೇಬೇಕು.

ಅಧಿಕ ಕೊಬ್ಬಿನಾಂಶ, ಪ್ರೋಟೀನ್ ಇದ್ದರೂ ಆರೋಗ್ಯಕರವಲ್ಲ, ಉಪಾಹಾರ ಬಿಟ್ಟರೂ, ಪೈಬರ್ ಅಂಶ ಕಡಿಮೆ ಆದರೂ ಆರೋಗ್ಯಕರವಲ್ಲ.
ಈ 4 ಅನಾರೋಗ್ಯಕರ ಉಪಹಾರ ಅಭ್ಯಾಸಗಳು ದೇಹದಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಉಂಟುಮಾಡಬಹುದು.

1. ಉಪಹಾರ ತಪ್ಪಿಸುವುದು
ಬೆಳಗಿನ ಊಟವನ್ನು ತಪ್ಪಿಸಿಕೊಂಡರೆ ಅದು ಆರೋಗ್ಯಕ್ಕೆ ಹಾನಿಕರ. ಸಂಶೋಧನೆಯ ಪ್ರಕಾರ, ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರು ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ ರಕ್ತದ ಸಕ್ಕರೆಯ ತೀವ್ರ ಕಡಿಮೆ ಮಟ್ಟಕ್ಕರ ತಲುಪಬಹುದು ಎನ್ನಲಾಗಿದೆ.

2. ಪ್ರೋಟೀನ್ ಕೊರತೆ
ಸಂಶೋಧನೆಯ ಪ್ರಕಾರ, ಪ್ರೋಟೀನ್ ಸೇವನೆಯು ದೀರ್ಘಕಾಲದವರೆಗೆ ಹಸಿವನ್ನು ತಡೆಯುತ್ತದೆ. ಆದರೆ, ಹೆಚ್ಚಿನ ಪ್ರೋಟೀನ್ ಆಹಾರವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಲ್ಪಾವಧಿಯ ಅಧ್ಯಯನಗಳು ಸೂಚಿಸಿವೆ. ಆದರೆ, ಹೆಚ್ಚಿನ ಪ್ರಮಾಣದ ಪ್ರಾಣಿ ಪ್ರೋಟೀನ್ ಅನ್ನು ತಪ್ಪಿಸಲೇಬೇಕು. ಇದು ಟೈಪ್ 2 ಡಯಾಬಿಟಿಸ್ ಅಪಾಯವನ್ನು ಹೆಚ್ಚಿಸಬಹುದು. ಬೀನ್ಸ್, ಮಸೂರ, ಬೀಜಗಳು, ಮೀನು ಇತ್ಯಾದಿಗಳಲ್ಲಿ ಅಧಿಕ ಪ್ರೋಟೀನ್ಗಳಿದ್ದು, ನಿಮ್ಮ ಉಪಹಾರವು ಇಂಥಾ ಪ್ರೋಟೀನ್ನಿಂದ ಸಮೃದ್ಧವಾಗಿರಬೇಕು.

3. ಕೊಬ್ಬಿನಂಶ
ಅಧಿಕ ಕೊಬ್ಬಿನಂಶದ ಉಪಹಾರವು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರ ಕ್ರಮವಲ್ಲ. ಕೊಬ್ಬುಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದು ಅಂತಿಮವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಏರಿಕೆಯನ್ನು ನಿಧಾನಗೊಳಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಸೇವಿಸಿದಾಗ ಕೊಬ್ಬುಗಳು ಹಾನಿಕಾರಕವಲ್ಲ. ಕೊಬ್ಬಿನ ಅತಿಯಾದ ಸೇವನೆಯು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು. ಇನ್ಸುಲಿನ್ ಪ್ರತಿರೋಧವು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಸ್ಪೈಕ್ ಇರುವ ಸ್ಥಿತಿಯಾಗಿದೆ.

4. ಉಪಹಾರದಲ್ಲಿ ಫೈಬರ್ ಅನ್ನು ತಪ್ಪಿಸುವುದು
ಬೆಳಗಿನ ಉಪಾಹಾರದಲ್ಲಿ ಫೈಬರ್ ಭರಿತ ಆಹಾರವನ್ನು ಎಂದಿಗೂ ತಪ್ಪಿಸಬಾರದು. ಫೈಬರ್ ಭರಿತ ಆಹಾರದ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಗತ್ಯ ಪ್ರಮಾಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.



Click it and Unblock the Notifications
