Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಾರಿವಾಳದಿಂದ ಅಸ್ತಮಾ ರೋಗಿಗಳಿಗೆ ಅಪಾಯ ಹೆಚ್ಚು, ನಿರ್ಲಕ್ಷ್ಯ ಮಾಡಿದರೆ ಸಾವು ಕೂಡ ಸಂಭವಿಸುವುದು!
ನೀವು ಬೆಂಗಳೂರು ನಿವಾಸಿಯಾಗಿದ್ದರೆ ನೀವು ಪಾರಿವಾಳವನ್ನು ಸಾಕ ಬೇಕಾಗಿಲ್ಲ, ಸಾಕಷ್ಟು ಪಾರಿವಾಳಗಳು ನಿಮ್ಮ ಮನೆಯ ಟೆರೇಸ್ ಹಾಗೂ ಕಿಟಕಿ ಬಳಿ ಬಂದು ಕುಳಿತಿರುತ್ತವೆ. ಆ ಪಾರಿವಾಳಗಳನ್ನು ನೋಡುವಾಗ ತುಂಬಾನೇ ಮುದ್ದು ಮುದ್ದಾಗಿ ಇರುವುದರಿಂದ ಅವುಗಳನ್ನು ನೋಡಿ ಖುಷಿ ಪಡುತ್ತೇವೆ ಅಲ್ವಾ? ಆದರೆ ನಿಮಗೆ ಗೊತ್ತಿಲ್ಲದ ಒಂದು ಸಂಗತಿ ಗೊತ್ತಾ? ಈ ಮುದ್ದು ಮುದ್ದಾಗಿ ಕಾಣುವ ಪಾರಿವಾಳಗಳಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆಯಂತೆ, ಹೇಗೆ ಎಂದು ನೋಡೋಣ ಬನ್ನಿ:

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಪಾರಿವಾಳ ಸಂಖ್ಯೆ
ಬೆಂಗಳೂರಿನಲ್ಲಿ ಪಾರಿವಾಳ ಹೆಚ್ಚಾದರೆ ಏನು ತೊಂದರೆ ಅಂತ ಕೇಳುತ್ತಿದ್ದೀರಾ? ಬೆಂಗಳೂರು ಅಸ್ತಮಾ ನಗರವಾಗಿ ಗುರುತಿಸಿಕೊಂಡಿದೆ. ಹಿಂದೆ ಇದ್ದಂಥ ಪ್ರಕೃತಿ ಸೌಂದರ್ಯ ಈಗ ಇಲ್ಲ, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ಅಸ್ತಮಾ ಕಾಯಿಲೆ ಹೆಚ್ಚಾಗುತ್ತಿದೆ. ಅದರ ಜೊತೆಗೆ ಪಾರಿವಾಳ ಸಂಖ್ಯೆ ಹೆಚ್ಚಾದರೆ ಅಸ್ತಮಾ ಕಾಯಿಲೆ, ನ್ಯೂಮೋನಿಯಾ ಈ ಬಗೆಯ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಪಾರಿವಾಳದ ಹಿಕ್ಕೆಯಿಂದ ಅಸ್ತಮಾ ಸಮಸ್ಯೆ ಹೆಚ್ಚಾಗುವುದು
ಪಾರಿವಾಳ ಅಲ್ಲಲ್ಲಿ ಹಿಕ್ಕೆ (ಮಲ ವಿಸರ್ಜನೆ)ಯಿಂದ ಅಸ್ತಮಾ ರೋಗಿಗಳ ಸಮಸ್ಯೆ ಮತ್ತಷ್ಟು ಅಧಿಕವಾಗುವುದು. ಕೆಲವರಲ್ಲಿ Hypersensitive Pneumonitis (HP) ಕೂಡ ಉಂಟಾಗುವುದು. ಆದ್ದರಿಂದ ಪಾರಿವಾಳ ಅಸ್ತಮಾ ರೋಗಿಗಳಿಗೆ ಅಪಾಯಕಾರಿಯಾಗಿದೆ.
ಅಸ್ತಮಾ ರೋಗಿಗಳು ಪಾರಿವಾಳದ ಬಗ್ಗೆ ಎಚ್ಚರವಹಿಸಬೇಕಾಗಿದೆ
ಮನೆಯಲ್ಲಿ ಯಾರಿಗಾದರೂ ಅಸ್ತಮಾ ಸಮಸ್ಯೆಯಿದ್ದರೆ ಅವರಿಗೆ ಅಸ್ತಮಾ ಸಮಸ್ಯೆ ಅಧಿಕವಾಗುವುದು pulmonologist(ಶ್ವಾಸಕೋಶ ತಜ್ಞರು) ಹೇಳುತ್ತಾರೆ.
ಕಳೆದ ವರ್ಷ ಖ್ಯಾತ ಬಹುಭಾಷೆ ನಟಿ ಅವರ ಪತಿ ಹೈಪರ್ಸೆನ್ಸಿಟಿವ್ ನ್ಯೂಮೋನಿಯಾದಿಂದಾಗಿ ಸಾವನ್ನಪ್ಪಿದರು, ಅವರ ಸಾವಿಗೆ ಕಾರಣ ಪಾರಿವಾಳ ಹಿಕ್ಕೆ ಎಂದು ಹೇಳಲಾಗಿತ್ತು.
ಪಾರಿವಾಳ ಹಿಕ್ಕೆಯಲ್ಲಿರುವ ಬ್ಯಾಕ್ಟಿರಿಯಾದಿಂದ ಶ್ವಾಸಕೋಶದ ಉರಿಯೂತ ಉಂಟಾಗುವುದು. ಇದಕ್ಕೆ ಚಿಕಿತ್ಸೆ ಸಿಗದಿದ್ದರೆ ವ್ಯಕ್ತಿ ಸಾವನ್ನಪ್ಪುವುದು.

ಪಾರಿವಾಳ ಸಾಕುತ್ತಿದ್ದರೆ ಅಥವಾ ಮನೆಗೆ ಬರುತ್ತಿದ್ದರೆ ಶುಚಿತ್ವದ ಕಡೆಗೆ ಗಮನ ಹರಿಸಿ
ನೀವು ಪಾರಿವಾಳವನ್ನು ಸಾಕುತ್ತಿದ್ದರೆ ಅದು ವಾಸಿಸುತ್ತಿರುವ ಸ್ಥಳವನ್ನು ತುಂಬಾ ಸ್ವಚ್ಛವಾಗಿಡಬೇಕು, ಇನ್ನು ಪಾರಿವಾಳ ಮನೆಯ ಕಿಟಿಕಿ ಬಳಿ ಅಥವಾ ಅವು ಕೂರಲು ಸ್ಥಳವಿರುವ ಕಡೆ ಗಲೀಜು ಮಾಡುತ್ತಿದ್ದರೆ ಅವುಗಳನ್ನು ತೆಗೆದು ಸ್ವಚ್ಛವಾಗಿಡಿ. ಅಸ್ತಮಾ ರೋಗಿಗಳು ಈ ಕೆಲಸ ಮಾಡಬಾರದು, ಮನೆಯಲ್ಲಿ ಇರುವ ಬೇರೆ ಸದಸ್ಯರು ಮನೆಯನ್ನು ಸ್ವಚ್ಛ ಮಾಡಬೇಕು.

ನಗರ ಬದುಕಿನ ಪ್ರಮುಖ ಅಂಗವಾಗಿದೆ ಪಾರಿವಾಳ
ಪರಿವಾಳದಿಂದ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದರೆ ಬಹುತೇಕರು ನಂಬಲು ಸಾಧ್ಯವಿಲ್ಲ. ಏಕೆಂದರೆ ಆ ಪಕ್ಷಿಗಳು ಅವರ ಬದುಕಿನ ಅಂಗವಾಗಿರುತ್ತದೆ. ಕೆಲವರು ಮನೆಯಲ್ಲಿ ಪಾರಿವಾಳವನ್ನು ಸಾಕುತ್ತಾರೆ, ಇನ್ನು ಕೆಲವರು ನೀರು, ಅಕ್ಕಿ, ಧಾನ್ಯಗಳನ್ನು ನೀಡುತ್ತಾರೆ.
ನಿಮಗೆ ಅಸ್ತಮಾವಿದ್ದರೆ ಜಾಗ್ರತೆ: ಪಾರಿವಾಳ ನೀವು ಸಾಕುವುದಾದರೆ ಅಸ್ತಮಾ ಇರುವವರು ಅದರ ಬಳಿ ಹೋದರೆ ಸಮಸ್ಯೆ ಹೆಚ್ಚಾಗಬಹುದು ಜಾಗ್ರತೆ. ಆದ್ದರಿಂದ ಅವುಗಳಿರುವ ಕಡೆ ಶುಚಿತ್ವದ ಕಡೆ ತುಂಬಾನೇ ಗಮನ ನೀಡಬೇಕು.



Click it and Unblock the Notifications









