Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಪಾರಿವಾಳದಿಂದ ಅಸ್ತಮಾ ರೋಗಿಗಳಿಗೆ ಅಪಾಯ ಹೆಚ್ಚು, ನಿರ್ಲಕ್ಷ್ಯ ಮಾಡಿದರೆ ಸಾವು ಕೂಡ ಸಂಭವಿಸುವುದು!
ನೀವು ಬೆಂಗಳೂರು ನಿವಾಸಿಯಾಗಿದ್ದರೆ ನೀವು ಪಾರಿವಾಳವನ್ನು ಸಾಕ ಬೇಕಾಗಿಲ್ಲ, ಸಾಕಷ್ಟು ಪಾರಿವಾಳಗಳು ನಿಮ್ಮ ಮನೆಯ ಟೆರೇಸ್ ಹಾಗೂ ಕಿಟಕಿ ಬಳಿ ಬಂದು ಕುಳಿತಿರುತ್ತವೆ. ಆ ಪಾರಿವಾಳಗಳನ್ನು ನೋಡುವಾಗ ತುಂಬಾನೇ ಮುದ್ದು ಮುದ್ದಾಗಿ ಇರುವುದರಿಂದ ಅವುಗಳನ್ನು ನೋಡಿ ಖುಷಿ ಪಡುತ್ತೇವೆ ಅಲ್ವಾ? ಆದರೆ ನಿಮಗೆ ಗೊತ್ತಿಲ್ಲದ ಒಂದು ಸಂಗತಿ ಗೊತ್ತಾ? ಈ ಮುದ್ದು ಮುದ್ದಾಗಿ ಕಾಣುವ ಪಾರಿವಾಳಗಳಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆಯಂತೆ, ಹೇಗೆ ಎಂದು ನೋಡೋಣ ಬನ್ನಿ:

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಪಾರಿವಾಳ ಸಂಖ್ಯೆ
ಬೆಂಗಳೂರಿನಲ್ಲಿ ಪಾರಿವಾಳ ಹೆಚ್ಚಾದರೆ ಏನು ತೊಂದರೆ ಅಂತ ಕೇಳುತ್ತಿದ್ದೀರಾ? ಬೆಂಗಳೂರು ಅಸ್ತಮಾ ನಗರವಾಗಿ ಗುರುತಿಸಿಕೊಂಡಿದೆ. ಹಿಂದೆ ಇದ್ದಂಥ ಪ್ರಕೃತಿ ಸೌಂದರ್ಯ ಈಗ ಇಲ್ಲ, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ಅಸ್ತಮಾ ಕಾಯಿಲೆ ಹೆಚ್ಚಾಗುತ್ತಿದೆ. ಅದರ ಜೊತೆಗೆ ಪಾರಿವಾಳ ಸಂಖ್ಯೆ ಹೆಚ್ಚಾದರೆ ಅಸ್ತಮಾ ಕಾಯಿಲೆ, ನ್ಯೂಮೋನಿಯಾ ಈ ಬಗೆಯ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಪಾರಿವಾಳದ ಹಿಕ್ಕೆಯಿಂದ ಅಸ್ತಮಾ ಸಮಸ್ಯೆ ಹೆಚ್ಚಾಗುವುದು
ಪಾರಿವಾಳ ಅಲ್ಲಲ್ಲಿ ಹಿಕ್ಕೆ (ಮಲ ವಿಸರ್ಜನೆ)ಯಿಂದ ಅಸ್ತಮಾ ರೋಗಿಗಳ ಸಮಸ್ಯೆ ಮತ್ತಷ್ಟು ಅಧಿಕವಾಗುವುದು. ಕೆಲವರಲ್ಲಿ Hypersensitive Pneumonitis (HP) ಕೂಡ ಉಂಟಾಗುವುದು. ಆದ್ದರಿಂದ ಪಾರಿವಾಳ ಅಸ್ತಮಾ ರೋಗಿಗಳಿಗೆ ಅಪಾಯಕಾರಿಯಾಗಿದೆ.
ಅಸ್ತಮಾ ರೋಗಿಗಳು ಪಾರಿವಾಳದ ಬಗ್ಗೆ ಎಚ್ಚರವಹಿಸಬೇಕಾಗಿದೆ
ಮನೆಯಲ್ಲಿ ಯಾರಿಗಾದರೂ ಅಸ್ತಮಾ ಸಮಸ್ಯೆಯಿದ್ದರೆ ಅವರಿಗೆ ಅಸ್ತಮಾ ಸಮಸ್ಯೆ ಅಧಿಕವಾಗುವುದು pulmonologist(ಶ್ವಾಸಕೋಶ ತಜ್ಞರು) ಹೇಳುತ್ತಾರೆ.
ಕಳೆದ ವರ್ಷ ಖ್ಯಾತ ಬಹುಭಾಷೆ ನಟಿ ಅವರ ಪತಿ ಹೈಪರ್ಸೆನ್ಸಿಟಿವ್ ನ್ಯೂಮೋನಿಯಾದಿಂದಾಗಿ ಸಾವನ್ನಪ್ಪಿದರು, ಅವರ ಸಾವಿಗೆ ಕಾರಣ ಪಾರಿವಾಳ ಹಿಕ್ಕೆ ಎಂದು ಹೇಳಲಾಗಿತ್ತು.
ಪಾರಿವಾಳ ಹಿಕ್ಕೆಯಲ್ಲಿರುವ ಬ್ಯಾಕ್ಟಿರಿಯಾದಿಂದ ಶ್ವಾಸಕೋಶದ ಉರಿಯೂತ ಉಂಟಾಗುವುದು. ಇದಕ್ಕೆ ಚಿಕಿತ್ಸೆ ಸಿಗದಿದ್ದರೆ ವ್ಯಕ್ತಿ ಸಾವನ್ನಪ್ಪುವುದು.

ಪಾರಿವಾಳ ಸಾಕುತ್ತಿದ್ದರೆ ಅಥವಾ ಮನೆಗೆ ಬರುತ್ತಿದ್ದರೆ ಶುಚಿತ್ವದ ಕಡೆಗೆ ಗಮನ ಹರಿಸಿ
ನೀವು ಪಾರಿವಾಳವನ್ನು ಸಾಕುತ್ತಿದ್ದರೆ ಅದು ವಾಸಿಸುತ್ತಿರುವ ಸ್ಥಳವನ್ನು ತುಂಬಾ ಸ್ವಚ್ಛವಾಗಿಡಬೇಕು, ಇನ್ನು ಪಾರಿವಾಳ ಮನೆಯ ಕಿಟಿಕಿ ಬಳಿ ಅಥವಾ ಅವು ಕೂರಲು ಸ್ಥಳವಿರುವ ಕಡೆ ಗಲೀಜು ಮಾಡುತ್ತಿದ್ದರೆ ಅವುಗಳನ್ನು ತೆಗೆದು ಸ್ವಚ್ಛವಾಗಿಡಿ. ಅಸ್ತಮಾ ರೋಗಿಗಳು ಈ ಕೆಲಸ ಮಾಡಬಾರದು, ಮನೆಯಲ್ಲಿ ಇರುವ ಬೇರೆ ಸದಸ್ಯರು ಮನೆಯನ್ನು ಸ್ವಚ್ಛ ಮಾಡಬೇಕು.

ನಗರ ಬದುಕಿನ ಪ್ರಮುಖ ಅಂಗವಾಗಿದೆ ಪಾರಿವಾಳ
ಪರಿವಾಳದಿಂದ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದರೆ ಬಹುತೇಕರು ನಂಬಲು ಸಾಧ್ಯವಿಲ್ಲ. ಏಕೆಂದರೆ ಆ ಪಕ್ಷಿಗಳು ಅವರ ಬದುಕಿನ ಅಂಗವಾಗಿರುತ್ತದೆ. ಕೆಲವರು ಮನೆಯಲ್ಲಿ ಪಾರಿವಾಳವನ್ನು ಸಾಕುತ್ತಾರೆ, ಇನ್ನು ಕೆಲವರು ನೀರು, ಅಕ್ಕಿ, ಧಾನ್ಯಗಳನ್ನು ನೀಡುತ್ತಾರೆ.
ನಿಮಗೆ ಅಸ್ತಮಾವಿದ್ದರೆ ಜಾಗ್ರತೆ: ಪಾರಿವಾಳ ನೀವು ಸಾಕುವುದಾದರೆ ಅಸ್ತಮಾ ಇರುವವರು ಅದರ ಬಳಿ ಹೋದರೆ ಸಮಸ್ಯೆ ಹೆಚ್ಚಾಗಬಹುದು ಜಾಗ್ರತೆ. ಆದ್ದರಿಂದ ಅವುಗಳಿರುವ ಕಡೆ ಶುಚಿತ್ವದ ಕಡೆ ತುಂಬಾನೇ ಗಮನ ನೀಡಬೇಕು.



Click it and Unblock the Notifications