Just In
- 3 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 3 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 4 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 5 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಳೆಗಾಲದಲ್ಲಿ ಅಣಬೆ ತಿನ್ನಬಾರದೇ? ಏಕೆ?
ಮಳೆಗಾಲದಲ್ಲಿ ತೋಟದಲ್ಲಿ ಅಣಬೆಗಳು ಏಳುವುದು ಅಧಿಕ. ಏಕೆಂದರೆ ಮಣ್ಣು ಮಳೆಬಿದ್ದು ಮೆತ್ತಗಾಗಿರುತ್ತೆ, ಆಗ ಅಣಬೆಗಳು ಏಳಲಾರಂಭಿಸುತ್ತದೆ. ಬಗೆ-ಬಗೆಯ ಅಣಬೆಗಳು ಈ ಸಮಯದಲ್ಲಿ ಸಿಗುತ್ತವೆ, ಆದರೆ ಕೆಲವೊಂದು ಅಣಬೆಗಳು ತುಂಬಾ ವಿಷಕಾರಿಯೂ ಆಗಿರುವುದರಿಂದ ಮಳೆಗಾಲದಲ್ಲಿ ಅಣಬೆ ತಂದು ಸಾರು ಮಾಡುವಾಗ ತುಂಬಾನೇ ಹುಷಾರಾಗಿರಬೇಕು.
ಕೆಲ ಅಣಬೆಗಳನ್ನು ತಿಂದರೆ ಪ್ರಾಣಕ್ಕೆ ಕೂಡ ಅಪಾಯ ಉಂಟಾಗಬಹುದು, ಇನ್ನು ಬೆಳೆಸುವ ಅಣಬೆ ಯಾರೂ ಈ ಸಮಯದಲ್ಲಿ ಬ್ಯಾಕ್ಟಿರಿಯಾಗಳು , ವೈರಸ್ಗಳು ತಗುಲುವ ಸಾಧ್ಯತೆ ಇರುವುದರಿಂದ ಮಳೆಗಾಲದಲ್ಲಿ ಅಣಬೆಯನ್ನು ಬಳಸುವುದಾದರೆ ಎಚ್ಚರವಹಿಸಿ.
ಮಳೆಗಾಲದಲ್ಲಿ ಅಣಬೆಯನ್ನು ತಿನ್ನದಿದ್ದರೆ ಒಳ್ಳೆಯದು, ಏಕೆ?
ಮಳೆಗಾಲದಲ್ಲಿ ಅಣಬೆಗಳು ಹೆಚ್ಚಾಗಿ ಸಿಗುವುದಾದರೂ ಎಲ್ಲಾ ಬಗೆಯ ಅಣಬೆಗಳನ್ನು ತಿನ್ನಬೇಡಿ. ತಿನ್ನಲು ಸುರಕ್ಷಿತವಾಗಿದೆ ಎಂದಾಗಿದ್ದರೆ ಮಾತ್ರ ಅಡುಗೆ ಮಾಡಿ.
ಇಲ್ಲದಿದ್ದರೆ ಅಣಬೆಯನ್ನು ತಿಂದರೆ ವಾಂತಿ, ಬೇಧಿ ಈ ರೀತಿಯ ಸಮಸ್ಯೆ ಅಥವಾ ತ್ವಚೆ ಅಲರ್ಜಿ ಮುಂತಾದ ತೊಂದರೆಗಳು ಉಂಟಾಗಬಹುದು.
ಮಳೆಗಾಲದಲ್ಲೂ ಅಣಬೆ ಸೂಪರ್ ಫುಡ್ ಹೌದು
ಅಣಬೆ ಸೂಪರ್ ಫುಡ್ ಎನ್ನುವುದರಲ್ಲಿ ನೋ ಡೌಟ್. ಇದರಲ್ಲಿ ಪ್ರೊಟೀನ್, ವಿಟಮಿನ್ ಬಿ, ಕಾರ್ಬ್ಸ್, ಕ್ಯಾಲ್ಸಿಯಂ, ಕಬ್ಬಿಣದಂಶ, ಮೆಗ್ನಿಷ್ಯಿಯಂ,ಪೊಟಾಷ್ಯಿಯಂ, ಸೋಡಿಯಂ, ಸತು, ವಿಟಮಿನ್ ಸಿ, ವಿಟಮಿನ್, ಫೋಲೆಟ್, ಚೋಲೈನ್, ನಿಯಾಸಿನ್ ಹೀಗೆ ಅನೇಕ ವಿಟಮಿನ್ಸ್ ಇವೆ. ಇನ್ನು ಮಳೆಗಾಲದಲ್ಲಿ ಸೂರ್ಯನ ಬೆಳಕು ಮೈ ಮೇಲೆ ಬೀಳುವುದು ಕಡಿಮೆ, ಆಗ ವಿಟಮಿನ್ ಡಿ ಇರುವ ಆಹಾರ ಸೇವಿಸಬೇಕು, ಅಣಬೆಯಲ್ಲಿ ವಿಟಮಿನ್ ಡಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
* ಅಣಬೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತುಂಬಾ ಒಳ್ಳೆಯದು. ಇದನ್ನು ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮಧುಮೇಹಿಗಳಿಗೆ ಸೂಪರ್ ಆಹಾರವಾಗಿದೆ.
* ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಣಬೆ ಸೂಪ್ ಮಾಡಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಮಳೆಗಾಲದಲ್ಲಿ ಈ ಆಹಾರಗಳನ್ನು ಸೇವಿಸುವಾಗ ಜಾಗ್ರತೆ
* ರಸ್ತೆ ಬದಿಯ ಆಹಾರಗಳು, ಜ್ಯೂಸ್ಗಳು
ಏಕೆಂದರೆ ಕಲುಷಿತ ನೀರು ಮಿಶ್ರವಾಗುವ ಸಾಧ್ಯತೆ ಇದೆ. ಇದರಿಂದ ಆರೋಗ್ಯ ಸಂಬಂಧಿತ ಸಮಸ್ಯೆ ಉಂಟಾಗುವುದು.
* ಎಣ್ಣೆಯಲ್ಲಿ ಕರಿದ ಪದಾರ್ಥಗಳು
ಮಳೆಗಾಲದಲ್ಲಿ ಪಕೋಡ, ಬಜ್ಜಿ ಇವೆಲ್ಲಾ ಬಿಸಿಬಿಸಿ ಟೀ ಜೊತೆ ತಿನ್ನಲು ತುಂಬಾನೇ ಖುಷಿಯಾಗುವುದು, ಆದರೆ ಹೊರಗಡೆ ತಿಂದ್ರೆ ಅವರು ಬಳಸಿದ ಎಣ್ಣೆಯನ್ನೇ ಮತ್ತೆ ಬಳಸುವ ಸಾಧ್ಯತೆ ಇರುವುದರಿಂದ ಹೊಟ್ಟೆ ಸಮಸ್ಯೆ ಉಂಟಾಗುವುದು.
* ಹಸಿ ತರಕಾರಿ-ಹಣ್ಣುಗಳನ್ನು ಬಳಸಬೇಡಿ.
* ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ.
* ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಿ.