Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅರಿಶಿನ ಬೆರೆಸಿದ ನೀರು: ತಯಾರಿಸುವ ವಿಧಾನ ಹಾಗೂ ಆರೋಗ್ಯ ಪ್ರಯೋಜನಗಳು
ಪ್ರತಿಯೊಂದು ಅಡುಗೆ ಮನೆಗಳಲ್ಲಿ ಸಿಗುವ, ಹಲವಾರು ಔಷಧೀಯ ಗುಣಗಳನ್ನು ಹೊಂದಿರುವಂತಹ ಅರಿಶಿನ ವನ್ನು ಹಿಂದಿನಿಂದಲೂ ಭಾರತೀಯರು ಆಯುರ್ವೇದದಲ್ಲಿ ಚಿಕಿತ್ಸೆಗೆ ಬಳಸಿಕೊಂಡು ಬರಲಾಗುತ್ತಿದೆ. ಅರಿಶಿನ ದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಮತ್ತು ಇದು ನೈಸರ್ಗಿಕವಾಗಿ ಕೆಲವು ಕಾಯಿಲೆಗಳನ್ನು ನಿವಾರಣೆ ಮಾಡುವುದು. ಅರಿಶಿನ ಹಾಲಿನಲ್ಲಿ ಹಲವಾರು ಆರೋಗ್ಯ ಲಾಭಗಳು ಇವೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಅರಿಶಿನ ನೀರಿನಲ್ಲೂ ಔಷಧೀಯ ಗುಣಗಳು ಇವೆ.
ಅರಿಶಿನ ನೀರನ್ನು ಕೂಡ ಸೇವಿಸಬಹುದು. ಇದು ರಕ್ತವನ್ನು ಶುದ್ಧೀಕರಿಸುವುದು. ಬೆಳಗ್ಗೆ ನೀವು ಅರಿಶಿನ ನೀರನ್ನು ಕುಡಿದರೆ ಅದರಿಂದ ಮೆದುಳಿನ ಶಕ್ತಿಯು ಹೆಚ್ಚಾಗುವುದು. ಅರಿಶಿನ ದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಗಂಟು ನೋವು ಮತ್ತು ಉರಿಯೂತ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅರಿಶಿನದ ಲಾಭಗಳ ಬಗ್ಗೆ ಈಗಾಗಲೇ ತಿಳಿದಿರುವ ನಾವು ಅರಿಶಿನ ನೀರನ್ನು ಕುಡಿಯಲು ಹಲವಾರು ಕಾರಣಗಳಿವೆ.

ಅರಿಶಿನ ನೀರನ್ನು ತಯಾರಿಸುವುದು ಹೇಗೆ
*ಬೇಕಾಗುವ ಸಾಮಗ್ರಿಗಳು
*ಅರ್ಧ ಲಿಂಬೆ
*¼ ಚಮಚ ಅರಿಶಿನ ಹುಡಿ
*1 ಲೋಟ ಬಿಸಿ ನೀರು
*ರುಚಿಗೆ ಬೇಕಾದಷ್ಟು ಜೇನುತುಪ್ಪ

ವಿಧಾನ
*ಅರ್ಧ ಲಿಂಬೆ ರಸವನ್ನು ಒಂದು ಲೋಟಕ್ಕೆ ಹಿಂಡಿಕೊಳ್ಳಿ.
ಇದಕ್ಕೆ ಈಗ ಅರಿಶಿನ ಹಾಕಿ.
*ಎರಡನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಬಿಸಿ ನೀರು ಹಾಕಿಕೊಂಡು ಲೋಟ ಪೂರ್ತಿ ತುಂಬಿ.
*ರುಚಿಗೆ ಬೇಕಾದಷ್ಟು ಜೇನುತುಪ್ಪ ಹಾಕಿಕೊಳ್ಳಿ.
ಈಗ ಸರಿಯಾಗಿ ಮಿಶ್ರಣ ಮಾಡಿ.
*ಅರಿಶಿನ ಹುಡಿಗೆ ಲೋಟದ ಅಡಿಭಾಗದಲ್ಲಿ ನಿಲ್ಲುವ ಕಾರಣದಿಂದಾಗಿ ನೀವು ಸರಿಯಾಗಿ ಅಲುಗಾಡಿಸಿ ನೀರು ಕುಡಿಯಿರಿ.

ಅರಿಶಿನ ನೀರಿನ ಲಾಭಗಳು
ಕ್ಯಾನ್ಸರ್ ಅಪಾಯ ತಗ್ಗಿಸುವುದು-ಹಲವಾರು ಸಂಶೋಧನೆಗಳಿಂದ ಕಂಡುಕೊಂಡಿರುವಂತಹ ವಿಚಾರವೆಂದರೆ ಅರಿಶಿನ ದಲ್ಲಿ ಇರುವಂತಹ ಕರ್ಕ್ಯುಮಿನ್ ಎನ್ನುವ ಅಂಶವು ಕ್ಯಾನ್ಸರ್ ಕಾರಕ ಕೋಶಗಳು ಬೆಳೆಯುವುದನ್ನು ತಡೆಯುವುದು. ಇದರಿಂದಾಗಿ ಮೇಧೋಜೀರಕ ಗ್ರಂಥಿ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಇತರ ಕೆಲವು ಕ್ಯಾನ್ಸರ್ ನ ಅಪಾಯವನ್ನು ತಗ್ಗಿಸುವುದು ಎಂದು ಅಧ್ಯಯನಗಳು ಹೇಳಿವೆ.

ಉರಿಯೂತ ಶಮನಕಾರಿ ಗುಣಗಳು
ಅರಿಶಿನದಲ್ಲಿ ಕರ್ಕ್ಯುಮಿನ್ ಎನ್ನುವುದು ಒಂದು ಅದ್ಭುತ ಅಂಶವಾಗಿದೆ ಮತ್ತು ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು. ಕರ್ಕ್ಯುಮಿನ್ ನಿಂದಾಗಿ ಅರಿಶಿನ ವು ಒಳ್ಳೆಯ ಉರಿಯೂತ ಶಮನಕಾರಿ ಆಗಿದೆ. ಇದು ಸಂಧಿವಾತ ರೋಗಿಗಳಿಗೆ ಕೂಡ ತುಂಬಾ ಒಳ್ಳೆಯದು. ಸಂಧಿವಾತದ ರೋಗಿಗಳಿಗೆ ಉರಿಯೂತವನ್ನು ನೈಸರ್ಗಿಕವಾಗಿ ತಗ್ಗಿಸಲು ಇದು ನೆರವಾಗುವುದು.ಉರಿಯೂತ ನಿವಾರಣೆ ಮಾಡಲು ಹಸಿ ಅರಿಶಿನ ವು ತುಂಬಾ ಪರಿಣಾಮಕಾರಿ. ಸಂಧಿವಾತ ಇರುವವರು ಹಸಿ ಅರಿಶಿನ ಬಳಸಿಕೊಂಡು ಚಾ ತಯಾರಿಸಿ, ಅದರಿಂದ ಅತ್ಯಧಿಕ ಲಾಭ ಪಡೆಯಬಹುದು ಅಥವಾ ನೇರವಾಗಿ ಅರಿಶಿನ ನೀರನ್ನು ಕುಡಿಯಬಹುದು.

ಮೆದುಳಿನ ಕಾರ್ಯಕ್ಷಮತೆ ಅಧಿಕಗೊಳಿಸುವುದು
ಅರಿಶಿನವು ವಯಸ್ಸಾಗುವ ವೇಳೆ ಬರುವಂತಹ ಅಲ್ಝೈಮರ್ ಮತ್ತು ಖಿನ್ನತೆ ಅಪಾಯ ಕಡಿಮೆ ಮಾಡುವುದು. ಕರ್ಕ್ಯುಮಿನ್ ಅಂಶವು ಮೆದುಳಿನ ಕಾರ್ಯವನ್ನು ಉತ್ತೇಜಿಸುವುದು ಮತ್ತು ಜ್ಞಾಪಕ ಶಕ್ತಿ ಸುಧಾರಿಸುವುದು. ಅಧ್ಯಯನಗಳ ಪ್ರಕಾರ ಅರಿಶಿನ ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದು. ಇದು ತಾರ್ಕಿಕವಾಗಿ ಆಲೋಚಿಸುವುದನ್ನು ಉತ್ತೇಜಿಸುವುದು.

ಹೊಟ್ಟೆಯ ಆರೋಗ್ಯ ಸುಧಾರಿಸುವುದು
ಅರಿಶಿನ ವು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಹೊಟ್ಟೆಗೆ ಸಂಬಂಧಿಸಿರುವ ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಅರಿಶಿನ ವು ಒಳ್ಳೆಯ ಸುವಾಸನೆ ಹಾಗೂ ರುಚಿ ಹೊಂದಿರುವ ಕಾರಣದಿಂದಾಗಿ ಅದು ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುವುದು. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಅರಿಶಿನ ವನ್ನು ನಿಮ್ಮ ಆಹಾರದಲ್ಲಿ ಬಳಕೆ ಮಾಡುವ ಕಾರಣದಿಂದ ಜೀರ್ಣಕ್ರಿಯೆಯು ಸುಧಾರಣೆ ಆಗುವುದು. ಇದು ಆಹಾರದ ರುಚಿ ಹೆಚ್ಚು ಮಾಡುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಹೊಟ್ಟೆಯ ಉರಿಯೂತ ಕಡಿಮೆ ಮಾಡುವುದು. ಪಿತ್ತರಸದ ಉತ್ಪತ್ತಿಯನ್ನು ಇದು ಉತ್ತೇಜಿಸುವುದು ಮತ್ತು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ತಡೆಯುವುದು.

ನೋವಿನ ವಿರುದ್ಧ ಹೋರಾಡಲು ನೆರವಾಗುವುದು
ದೇಹದಲ್ಲಿ ನೋವು ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ. ಅರಿಶಿನ ವು ದೇಹದ ನೋವನ್ನು ನಿವಾರಣೆ ಮಾಡುವುದು. ಇದು ಸಂಧಿವಾತದ ನೋವನ್ನು ಕಡಿಮೆ ಮಾಡುವುದು. ನೈಸರ್ಗಿಕ ನೋವು ನಿವಾರಕವಾಗಿ ನೀವು ಅರಿಶಿನ ನೀರನ್ನು ಕುಡಿಯ ಬಹುದು. ಅರಿಶಿನ ಹಾಲು ಅಥವಾ ಅರಿಶಿನ ನೀರು ನೋವು ನಿವಾರಣೆ ಮಾಡಲು ನೆರವು ನೀಡುವುದು. ಸಂಧಿವಾತ ಇರುವಂತಹವರು ವೈದ್ಯರಿಂದ ಸಲಹೆ ಪಡೆದುಕೊಂಡು ಅರಿಶಿನ ದ ಕ್ಯಾಪ್ಸೂಲ್ ಗಳನ್ನು ಸೇವಿಸಬಹುದು ಅಥವಾ ಅರಿಶಿನ ನೀರನ್ನು ಕುಡಿಯಬಹುದು.



Click it and Unblock the Notifications