Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಇಂತಹ ತರಕಾರಿಗಳು ಕಿಡ್ನಿಗೆ ಒಳ್ಳೆಯದು-ಮಿಸ್ ಮಾಡದೇ ತಿನ್ನಿ
ರಕ್ತದಲ್ಲಿರುವಂತಹ ಕಲ್ಮಶವನ್ನು ಹೊರಹಾಕಿ ದೇಹವು ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವಂತಹ ಕೆಲಸ ಮಾಡುವ ಅಂಗವೇ ಕಿಡ್ನಿ. ನಮ್ಮ ಕಣ್ಣಿಗೆ ಕಾಣುವಂತಹ ಅಂಗಗಳ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸಿದರೂ ದೇಹದ ಒಳಗೆ ಇರುವಂತಹ ಕೆಲವು ಅಂಗಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ನಮ್ಮ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದ ಕಿಡ್ನಿ ಮೇಲೆ ಒತ್ತಡ ಬೀಳುವುದು.
ಇದಕ್ಕಾಗಿ ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ತರಕಾರಿಗಳನ್ನು ಸೇರಿಸಿಕೊಂಡರೆ ಅದರಿಂದ ಕಿಡ್ನಿಯು ಆರೋಗ್ಯವಾಗಿರುವುದು. ಕೊಬ್ಬು, ಹೆಚ್ಚು ಸೋಡಿಯಂ ಇರುವಂತಹ ಅತಿಯಾಗಿ ಸಂಸ್ಕರಿತ ಆಹಾರ, ಪರಿಷ್ಕರಿಸಿದ ಕೊಬ್ಬು ಇತ್ಯಾದಿಗಳನ್ನು ತ್ಯಜಿಸಬೇಕು. ಕೆಲವೊಂದು ತರಕಾರಿಗಳು ಕಿಡ್ನಿಯು ತುಂಬಾ ಆರೋಗ್ಯಕರವಾಗಿ ಶುದ್ಧೀಕರಿಸಲು, ರಕ್ಷಿಸಲು ಮತ್ತು ಕಾರ್ಯನಿರ್ವಹಿಸಲು ನೆರವಾಗುವುದು. ಈ ತರಕಾರಿಗಳು ಯಾವುದು ಎಂದು ತಿಳಿಯಲು ನೀವು ಈ ಲೇಖನ ಓದುತ್ತಾ ಸಾಗಿ...

ಕೆಂಪು ದೊಣ್ಣೆ ಮೆಣಸು
ಇದರಲ್ಲಿ ಕಡಿಮೆ ಪೊಟಾಶಿಯಂನಿಂದಾಗಿ ಇದು ಕಿಡ್ನಿ ಸ್ನೇಹಿ ತರಕಾರಿಯೆಂದು ಪರಿಗಣಿಸಲಾಗಿದೆ. ಅಧಿಕ ಮಟ್ಟ ಪೊಟಾಶಿಯಂ ಇದ್ದರೆ ಅದರಿಂದ ಕಿಡ್ನಿಗೆ ಅದನ್ನು ಹೊರಹಾಕಲು ತುಂಬಾ ಕಷ್ಟವಾಗುವುದು. ಇದರಿಂದ ಕಿಡ್ನಿ ಸಮಸ್ಯೆ ಬರಬಹುದು. ಕೆಂಪು ದೊಣ್ಣೆ ಮೆಣಸಿನಲ್ಲಿ ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳಾದ ವಿಟಮಿನ್ ಸಿ, ಇ ಮತ್ತು ಬಿ6 ಮತ್ತು ಇತರ ಕೆಲವು ಪೋಷಕಾಂಶಗಳಾದ ಫಾಲಿಕ್ ಆಮ್ಲ ಮತ್ತು ನಾರಿನಾಂಶವಿದೆ. ಇದನ್ನು ಸಲಾಡ್ ಗೆ ಹಾಕಿ. ಅಥವಾ ಹಸಿಯಾಗಿಯೇ ತಿನ್ನಬಹುದು. ಅಲ್ಲದೆ ಕೆಂಪು ದೊಣ್ಣೆ ಮೆಣಸನ್ನು ಅಡುಗೆಯನ್ನು ಬಳಸಿ ಕಿಡ್ನಿ ಸಮಸ್ಯೆ ನಿವಾರಿಸಿ.

ಎಲೆಕೋಸು
ಸಾಮಾನ್ಯವಾಗಿ ಹೋಟೆಲುಗಳಲ್ಲಿ ಸಾಂಬಾರ್ ಮತ್ತು ಪಲ್ಯ ಮಾಡಲು ಅಗ್ಗದ ತರಕಾರಿಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳುವ ಕಾರಣ ಹೆಚ್ಚಿನ ದಿನಗಳಲ್ಲಿ ಮೂಲಂಗಿ ಸಾಂಬಾರ್ ಮತ್ತು ಎಲೆಕೋಸು ಪಲ್ಯ ತಯಾರಾಗಿರುತ್ತದೆ. ಆದರೆ ಅಗ್ಗವಾದ ಮಾತ್ರಕ್ಕೆ ಇದರ ಆರೋಗ್ಯಕರ ಗುಣಗಳೇನೂ ಕಡಿಮೆಯಲ್ಲ. ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ವಿಟಮಿನ್ ಕೆ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಅದರಲ್ಲಿಯೂ ಕಿಡ್ನಿಯ ಆರೋಗ್ಯಕ್ಕೆ ಇದು ಹೇಳಿ ಮಾಡಿಸಿದ ತರಕಾರಿಯಾಗಿದೆ, ಇನ್ನು ಎಲೆಕೋಸಿನಲ್ಲಿ ಪೊಟಾಶಿಯಂ ಅಂಶವಿಲ್ಲ. ಇದು ನಿಮ್ಮ ಯಕೃತ್ ಮತ್ತು ಕಿಡ್ನಿಗೆ ತುಂಬಾ ಪರಿಣಾಮಕಾರಿ. ಇದರಲ್ಲಿ ಉನ್ನತ ಮಟ್ಟದ ಫೈಥೋಕೆಮಿಕಲ್ ಇದ್ದು, ಇದು ಕ್ಯಾನ್ಸರ್ ಉಂಟು ಮಾಡುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಎಲೆಕೋಸಿನಲ್ಲಿ ಕೆಲವು ಪ್ರಮುಖ ಪೋಷಕಾಂಶಗಳಾದ ನಾರಿನಾಂಶ, ವಿಟಮಿನ್ ಬಿ6, ಕೆ, ಸಿ ಮತ್ತು ಫಾಲಿಕ್ ಆಮ್ಲವಿದೆ. ಇದು ಕಿಡ್ನಿಸ್ನೇಹಿ ಆಹಾರದಲ್ಲಿ ತುಂಬಾ ಅಗ್ಗವಾಗಿ ಸಿಗುವ ತರಕಾರಿ.

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನ ಖಾದ್ಯಗಳಲ್ಲಿ ಬಳಸಿ ಅಥವಾ ಹಸಿಯಾಗಿಯೇ ತಿನ್ನಬಹುದು. ಇದರಲ್ಲಿರುವಂತಹ ಮೂತ್ರವರ್ಧಕ ಗುಣದಿಂದಾಗಿ ಇದು ಕಿಡ್ನಿಯ ಸಂಪೂರ್ಣ ಆರೋಗ್ಯ ಕಾಪಾಡುವುದು. ಮೂತ್ರವರ್ಧಕದಿಂದಾಗಿ ಹೆಚ್ಚುವರಿ ಸೋಡಿಯಂ ಮತ್ತು ನೀರು ದೇಹದಿಂದ ಹೊರಹಾಕಲು ಕಿಡ್ನಿಗೆ ನೆರವಾಗುವುದು ಮತ್ತು ಮೂತ್ರದ ಮೂಲಕ ಸೋಡಿಯಂ ಹೊರಹೋಗುವುದು. ಲೆಡ್ ನಂತಹ ಹಾನಿಕಾರಕ ಖನಿಜದಿಂದ ಕಿಡ್ನಿಯನ್ನು ರಕ್ಷಿಸುವ ಕಾರ್ಯವು ಬೆಳ್ಳುಳ್ಳಿಯು ಮಾಡುವುದು. ಇದು ಉರಿಯೂತ, ಸೋಂಕು ನಿವಾರಣೆ ಮಾಡುವುದು ಮತ್ತು ದೇಹವನ್ನು ಶುದ್ಧೀಕರಿಸುವುದು. ಕೊಲೆಸ್ಟ್ರಾಲ್ ತಗ್ಗಿಸಿ, ನೈಸರ್ಗಿಕ ಆ್ಯಂಟಿಬಯೋಟಿಕ್ ರೀತಿ ಕೆಲಸ ಮಾಡುವುದು.

ಹೂಕೋಸು
ಹೂಕೋಸು, ಕ್ಯಾಬೇಜ್ನ೦ತಹ ತರಕಾರಿಗಳ ಕುಟು೦ಬ ವರ್ಗಕ್ಕೆ ಸೇರಿದುದಾಗಿದ್ದು, ಇದು ತನ್ನಲ್ಲಿ ವಿಟಮಿನ್, ಪೋಷಕಾ೦ಶಗಳು, ಆ೦ಟಿ ಆಕ್ಸಿಡೆ೦ಟ್ಗಳು, ಫೈಟೋನ್ಯೂಟ್ರಿಯೆ೦ಟ್ಸ್ಗಳು ಹಾಗೂ ಇನ್ನೂ ಅನೇಕ ಉಪಯುಕ್ತ ಘಟಕಗಳನ್ನು ಮೆಚ್ಚತಕ್ಕ ಪ್ರಮಾಣಗಳಲ್ಲಿ ಒಳಗೊ೦ಡಿದೆ. ಹೀಗಾಗಿ, ಹೂಕೋಸಿನ ಸಲಾಡ್ಗಳನ್ನು ತಯಾರಿಸಲಾರ೦ಭಿಸಿರಿ, ಅಡುಗೆಯ ತಯಾರಿಕೆಯಲ್ಲಿ ಹೂಕೋಸನ್ನು ಬಳಸಲಾರ೦ಭಿಸಿರಿ ಅಥವಾ ಅದನ್ನು ಹಸಿಯಾಗಿ ಹಾಗೆಯೇ ಸೇವಿಸಲೂ ಬಹುದು. ಇನ್ನು ಹೂಕೋಸು ಮತ್ತೊಂದು ಕಿಡ್ನಿ ಸ್ನೇಹಿಯಾಗಿರುವಂತಹ ತರಕಾರಿಯಾಗಿದೆ. ಈ ತರಕಾರಿಯಲ್ಲಿ ಫಾಲಿಕ್ ಆಮ್ಲ ಮತ್ತು ನಾರಿನಾಂಶವು ಸಮೃದ್ಧವಾಗಿದೆ. ಇದು ಕಿಡ್ನಿಯನ್ನು ಶುದ್ಧೀಕರಿಸಿ, ಅದನ್ನು ಬಲಗೊಳಿಸುವುದು. ಪೊಟಾಶಿಯಂ ಪ್ರಮಾಣ ಕಡಿಮೆ ಇರುವಂತಹ ತರಕಾರಿಯನ್ನು ದೀರ್ಘಕಾಲದ ಕಿಡ್ನಿ ಸಮಸ್ಯೆ ಇರುವಂತಹವರು ಬಳಸಬಹುದು.

ಆಸ್ಪ್ಯಾರಗಸ್
ಆಸ್ಪ್ಯಾರಗಸ್ ನಲ್ಲಿ ಇರುವಂತಹ ಆಸ್ಪ್ಯಾರಜಿನ್ ಎನ್ನುವ ಅಂಶವು ಕಿಡ್ನಿಯ ಶುದ್ಧೀಕರಿಸುವ ಕಾರ್ಯಕ್ಕೆ ನೆರವಾಗುವುದು. ಇದು ಕಿಡ್ನಿಯ ಕಲ್ಲನ್ನು ತಡೆಯುವುದು ಮತ್ತು ಕಿಡ್ನಿಯು ಸುಸೂತ್ರವಾಗಿ ಕೆಲಸ ಮಾಡುವಂತೆ ಮಾಡುವುದು. ಇದು ಕಿಡ್ನಿಯು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಲು ನೆರವಾಗುವುದು. ಆಸ್ಪ್ಯಾರಗಸ್ ನಲ್ಲಿ ಒಳ್ಳೆಯ ಪ್ರಮಾಣದ ನಾರಿನಾಂಶ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಇದೆ.

ಪಾಲಕ್
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ ಇದ್ದು, ಇದು ಮೂತ್ರಪಿಂಡ ಮತ್ತು ಮೂತ್ರದೊಳಗಿನ ಸಣ್ಣ ಶೋಧಕ ಕೊಳವೆಗಳನ್ನು ರೇಖಿಸುವ ಆರೋಗ್ಯಪೂರ್ಣ ಎಪಿಥೇಲಿಯಲ್ ಅಂಗಾಂಶಗಳ ಉತ್ಪಾದನೆಗೆ ಬೇಕಾಗುವುದು. ಬಸಲೆಯಲ್ಲಿ ಇರುವಂತಹ ಬೆಟಾ ಕ್ಯಾರೋಟಿನ್ ಅಂಶವು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕಣ್ಣುಗಳನ್ನು ರಕ್ಷಿಸುವುದು.

ಹಸಿ ಬಟಾಣಿ ಮತ್ತು ಹಸಿರು ಬೀನ್ಸ್
ಪೊಟಾಶಿಯಂ ಕಡಿಮೆ ಇರುವಂತಹ ಈ ಎರಡು ಹಸಿರು ತರಕಾರಿಗಳಲ್ಲಿ ನಾರಿನಾಂಶವು ಅಧಿಕವಾಗಿದೆ. ನಾರಿನಾಂಶವು ನಿಮ್ಮ ದೇಹದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಅತೀ ಅಗತ್ಯವಾಗಿ ಬೇಕು ಮತ್ತು ಅಧಿಕ ತೂಕ ಮತ್ತು ಮಧುಮೇಹ ನಿಯಂತ್ರಿಸುವುದು. ಇವೆರಡು ಕಿಡ್ನಿ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.ಈ ಆಹಾರಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಮಡರೆ ಅದರಿಂದ ನಿಮ್ಮ ಕಿಡ್ನಿಯು ಆರೋಗ್ಯವಾಗಿರುವುದು.

ಕೊತ್ತಂಬರಿ ಸೊಪ್ಪು
ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ಬಿಟ್ಟು ಬಹುತೇಕ ಎಲ್ಲಾ ಪದಾರ್ಥಗಳ ಕೊನೆಯಲ್ಲಿ ಸೇರಿಸುವುದು ಕೊತ್ತಂಬರಿ ಸೊಪ್ಪನ್ನು. ಇದು ಕೇವಲ ರುಚಿಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಕೊತ್ತಂಬರಿ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಮುಖ್ಯವಾಗಿ ಚರ್ಮದ ತುರಿಕೆ, ರಕ್ತದಲ್ಲಿ ಹೆಚ್ಚಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಅತಿಸಾರ, ಬಾಯಿಯ ಹುಣ್ಣು, ರಕ್ತಹೀನತೆ, ಅಜೀರ್ಣ, ಋತುಚಕ್ರದಲ್ಲಿ ಏರುಪೇರು, ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರುಪೇರು ಹಾಗೂ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಕೊತ್ತಂಬರಿ ಉಪಯುಕ್ತವಾಗಿದೆ. ಅದರಲ್ಲಿಯೂ ಕಿಡ್ನಿಯ ಆರೋಗ್ಯಕ್ಕೆ ಇದು ಹೇಳಿ ಮಾಡಿಸಿದ ಸೊಪ್ಪಾಗಿದೆ. ಒಂದು ಹಿಡಿ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ ಅದನ್ನು ಕುದಿಯುವ ನೀರಲ್ಲಿ ಹಾಕಿ 10 ನಿಮಿಷ ಬೇಯಿಸಿಬೇಕು. ನಂತರ ಸೋಸಿಕೊಂಡು ತಂಪಾದ ಸ್ಥಳ ಅಥವಾ ಪ್ರಿಜ್ ನಲ್ಲಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ದಿನವು ಒಂದು ಗ್ಲಾಸ್ ಈ ನೀರನ್ನು ಕುಡಿಯುತ್ತಿರಿ ಕಿಡ್ನಿ ಸ್ವಚ್ಛವಾಗುತ್ತದೆ.

ಮೂಲಂಗಿ
ಹೋಟೆಲುಗಳಲ್ಲಿ ಮಾಡುವ ಸಾಂಬಾರ್ನಲ್ಲಿ ಅತ್ಯಂತ ಸಾಮಾನ್ಯವಾದ ತರಕಾರಿ ಎಂದರೆ ಮೂಲಂಗಿ. ಏಕೆಂದರೆ ಮೂಲಂಗಿ ಅಗ್ಗವೂ, ಸ್ವಚ್ಛಗೊಳಿಸಲು ಹೆಚ್ಚು ಶ್ರಮ ತೆಗೆದುಕೊಳ್ಳದಂತಹದ್ದೂ, ತುಂಡುಮಾಡಲು ಸುಲಭವೂ, ಬೇಗನೇ ಬೇಯುವಂತಹದ್ದೂ, ಸಾಂಬಾರಿನ ರುಚಿ ಹೆಚ್ಚಿಸುವಂತಹದ್ದೂ ಆಗಿದ್ದು ಈ ಕಾರಣಗಳಿಂದಾಗಿ ಹೋಟೆಲಿನವರಿಗೆ ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಮನೆಗಳಲ್ಲಿಯೂ ಮೂಲಂಗಿಯನ್ನು ಸಾಂಬಾರ್, ಪಲ್ಯಗಳನ್ನು ಮಾಡಲು ಉಪಯೋಗಿಸುತ್ತಾರೆ. ಇದು ಬಿಳಿ, ಕೆಂಪು ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿರುವ ಕಾರಣ ಖಾದ್ಯದಲ್ಲಿ ಕೊಂಚ ವೈವಿಧ್ಯತೆಯನ್ನೂ ಪಡೆಯಬಹುದು. ಇದು ಕೊಂಚ ಖಾರವಾಗಿದ್ದರೂ ಹಸಿಯಾಗಿ ತಿನ್ನಬಹುದಾದ ತರಕಾರಿಯಾಗಿದ್ದು ನಿತ್ಯವೂ ಸಾಲಾಡ್ ನಲ್ಲಿ ಸೇರಿಸಿಕೊಳ್ಳಬಹುದು. ಇನ್ನು ಗರಿಮುರಿಯಾದ ಈ ತರಕಾರಿಯಲ್ಲಿ ಆಂಟಿ ಆಕ್ಸಿಡೆಂಟುಗಳು ಹಾಗೂ ಪೋಷಕಾಂಶಗಳು ಹೆಚ್ಚಾಗಿರುತ್ತವೆ ಹಾಗೂ ಪೊಟ್ಯಾಶಿಯಂ, ಗಂಧಕ ಅತಿ ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣಕ್ಕೆ ಈ ಆಹಾರ ಮೂತ್ರಪಿಂಡಗಳಿಗೆ ಸೂಕ್ತವಾಆಹಾರವಾಗಿದೆ. ಮೂಲಂಗಿ ಹಸಿಯಾಗಿ ಸೇವಿಸಲು ನವಿರು ಖಾರವಾಗಿದ್ದು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡುವ ಉಪ್ಪಿಲ್ಲದ ಆಹಾರದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾಗಿದೆ.



Click it and Unblock the Notifications











