Just In
Don't Miss
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Movies ಪುಟ್ಟಕ್ಕನ ಮನೆಗೆ ಕುಡಿದು ಬಂದ ಮುರಳಿಗೆ ಶಾಕ್; ಅಮ್ಮ ಅರೆಸ್ಟ್.. ಸಹನಾ ಮೇಲೆ ಗೂಬೆ ಕೂರಿಸಿದ ಪತಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳಗ್ಗೆ ಟೀ-ಕಾಫಿ ಕುಡಿಯುವ ಬದಲು, ಒಂದು ಲೋಟ ಮಜ್ಜಿಗೆ ಕುಡಿಯಿರಿ
ಹಾಲು ಹಾಗೂ ಹಾಲಿನ ಉತ್ಪನ್ನಗಳು ದೇಹಕ್ಕೆ ತುಂಬಾ ಒಳ್ಳೆಯದು ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇದರಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುವುದು ಮತ್ತು ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದರಿಂದ ಹಾಲಿನ ಉತ್ಪನ್ನಗಳಿಗೆ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಬೇಸಿಗೆಯಲ್ಲಿ ಹಾಲು, ಮೊಸರು ಮತ್ತು ಮಜ್ಜಿಗೆ ತುಂಬಾ ಮಾರಾಟವಾಗುವುದು. ಮಜ್ಜಿಗೆಯು ನಮ್ಮ ದಾಹ ತಣಿಸುವುದು. ಇದು ದಾಹ ತಣಿಸುವುದು ಮಾತ್ರವಲ್ಲದೆ, ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ದೇಹದಲ್ಲಿ ಇದು ನಿರ್ಜಲೀಕರಣವಾಗದಂತೆ ತಡೆಯುತ್ತದೆ ಎಂದು ಹೇಳಲಾಗಿದೆ. ಅದರಲ್ಲೂ ರಾಜ್ಯದ ಕೆಲವೊಂದು ಬಿಸಿಲಿನ ಪ್ರದೇಶಗಳಲ್ಲಿ ಮಜ್ಜಿಗೆಯನ್ನು ಅಧಿಕವಾಗಿ ಬಳಸುವರು.
ಆಹಾ ಮಜ್ಜಿಗೆ ಸಾಂಬಾರ್, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
ಹೌದು, ಬೇಸಿಗೆಯಲ್ಲಿ ಮಜ್ಜಿಗೆಯು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದು ಉಷ್ಣತೆಯನ್ನು ಕಡಿಮೆ ಮಾಡುವುದು. ಮೊಸರು, ನೀರು, ಕರಿಬೇವಿನ ಎಲೆ, ಜೀರಿಗೆ, ಉಪ್ಪು ಮತ್ತು ಶುಂಠಿಯಂತಹ ಮಸಾಲೆ ಹಾಕಿಕೊಂಡು ಮಜ್ಜಿಗೆಯನ್ನು ವಿವಿಧ ರೀತಿಯಿಂದ ತಯಾರಿಸಲಾಗುವುದು. ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವಿದೆ.
ಮಜ್ಜಿಗೆ ಮತ್ತು ಲಸ್ಸಿ: ಇವೆರಡರಲ್ಲಿ ಆರೋಗ್ಯಕ್ಕೆ ಯಾರು ಹಿತವರು?
ಅದೇ ರೀತಿ ಮಜ್ಜಿಗೆಯು ಜೀರ್ಣಕ್ರಿಯೆ ನೆರವಾಗುವುದು ಮತ್ತು ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆಯಿದೆ. ಮಲಬದ್ಧತೆಯಿಂದ ಬಳಲುತ್ತಾ ಇರುವವರು ಬೆಳಿಗ್ಗೆ ಒಂದು ಲೋಟ ಮಜ್ಜಿಗೆ ಸೇವಿಸಬೇಕು. ಮಜ್ಜಿಗೆಯ ಇನ್ನಷ್ಟು ಲಾಭಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....
ಉರಿಯ ಅನುಭವ ಕಡಿಮೆ ಮಾಡುವುದು
ಅಸಿಡಿಟಿಯಿಂದ ಬಳಲುತ್ತಾ ಇರುವಾಗ ಹೊಟ್ಟೆಯಲ್ಲಿ ಉರಿಯ ಅನುಭವವಾಗುವುದು. ಇಂತಹ ಸಮಯದಲ್ಲಿ ಒಂದು ಲೋಟ ಮಜ್ಜಿಗೆ ಕುಡಿದರೆ ತುಂಬಾ ಒಳ್ಳೆಯದು. ಆಮ್ಲದ ಹಿಮ್ಮುಖ ಹರಿವನ್ನು ಇದು ಕಡಿಮೆಗೊಳಿಸುವುದು.
ಹೊಟ್ಟೆಯಲ್ಲಿ ಕಿರಿಕಿರಿ ಕಡಿಮೆಯಾಗುವುದು
ಒಂದು ಲೋಟ ಮಜ್ಜಿಗೆ ಕುಡಿದರೆ ನಿಮ್ಮ ಹೊಟ್ಟೆಯು ತುಂಬಾ ಶಾಂತವಾಗುವುದು. ಯಾಕೆಂದರೆ ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡುವ ಕೆಲವೊಂದು ವಸ್ತುಗಳನ್ನು ಇದು ಹೊರಹಾಕುವುದು. ಕರಿಬೇವು, ಜೀರಿಗೆ ಮತ್ತು ಕರಿಮೆಣಸಿನ ಹುಡಿಯನ್ನು ಮಜ್ಜಿಗೆಗೆ ಸೇರಿಸಿದಾಗ ಅದಕ್ಕೆ ಮತ್ತಷ್ಟು ಔಷಧೀಯ ಗುಣಗಳು ಸಿಗುವುದು.
ಜೀರ್ಣಕ್ರಿಯೆ ಉತ್ತಮಗೊಳಿಸುವುದು
ಅತಿಯಾಗಿ ತಿಂದ ಬಳಿಕ ಹೊಟ್ಟೆ ತುಂಬಾ ಭಾರವೆನಿಸುತ್ತಾ ಇದ್ದರೆ ನೀವು ತಕ್ಷಣ ಶುಂಠಿ ಹುಡಿ ಹಾಕಿದ ಒಂದು ಲೋಟ ಮಜ್ಜಿಗೆ ಕುಡಿಯಬೇಕು. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುವುದು.
ನಿರ್ಜಲೀಕರಣಕ್ಕೆ ಮದ್ದು
ನೀವು ನಿರ್ಜಲೀಕರಣದಿಂದ ಬಳಲುತ್ತಾ ಇದ್ದರೆ ಒಂದು ಲೋಟ ಮಜ್ಜಿಗೆ ಕುಡಿಯಿರಿ. ಈ ಮಜ್ಜಿಗೆಗೆ ಸ್ವಲ್ಪ ಮಸಾಲೆ ಮತ್ತು ಉಪ್ಪು ಹಾಕಿಕೊಳ್ಳಿ. ಬೇಸಿಗೆಯಲ್ಲೂ ದೇಹದಲ್ಲಿ ನೀರಿನಾಂಶವನ್ನು ಉಳಿಸಿಕೊಳ್ಳಲು ಇದು ಒಳ್ಳೆಯ ಔಷಧಿ.
ಪೋಷಕಾಂಶಗಳು
ಔಷಧೀಯ ಗುಣಗಳನ್ನು ಹೊಂದಿರುವಂತಹ ಮಜ್ಜಿಗೆಯಲ್ಲಿ ಪೊಟಾಶಿಯಂ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿಯಂತಹ ಪೋಷಕಾಂಶಗಳು ಇವೆ.
ಅತಿಸಾರಗೆ ಒಳ್ಳೆಯ ಔಷಧಿ
ಅತಿಸಾರದಿಂದ ಬಳಲುತ್ತಾ ಇದ್ದರೆ ಒಂದು ಲೋಟ ಮಜ್ಜಿಗೆಗೆ ಅರ್ಧ ಚಮಚದಷ್ಟು ಶುಂಠಿ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಮೂರು ಸಲ ಇದನ್ನು ಸೇವಿಸಿದರೆ ಕೆಲವೇ ದಿನಗಳಲ್ಲಿ ಅತಿಸಾರವು ಕಡಿಮೆಯಾಗುವುದು.
ಕೊಲೆಸ್ಟ್ರಾಲ್ ನಿಯಂತ್ರಿಸುವುದು
ದಿನನಿತ್ಯ ಒಂದು ಲೋಟ ಮಜ್ಜಿಗೆ ಸೇವನೆ ಮಾಡಿದರೆ ಅದರಿಂದ ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿ ಇರುವುದು. ಮಜ್ಜಿಗೆಯಲ್ಲಿ ಇರುವಂತಹ ಜೈವಿಕ ಸಕ್ರಿಯ ಪ್ರೋಟೀನ್ ಕ್ಯಾನ್ಸರ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ಮಜ್ಜಿಗೆ ಸೇವನೆ ಮಾಡಿದರೆ ರಕ್ತದೊತ್ತಡವು ನಿಯಂತ್ರಣದಲ್ಲಿರುವುದು.