Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಅಯ್ಯೋ! ಹೌದಾ? ಅಕ್ಕಿಯಿಂದಲೂ ಹಲವಾರು ಕಾಯಿಲೆ ಬರುತ್ತದೆಯಂತೆ!!
ದಿನವಿಡೀ ಎಷ್ಟೇ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ತಿಂದರೂ ಸರಿ. ಎರಡು ತುತ್ತು ಅನ್ನ ಊಟ ಮಾಡಿದಷ್ಟು ಸಮಾಧಾನ ಇರುವುದಿಲ್ಲ. ಯಾಕೆಂದರೆ ಅನ್ನದಲ್ಲಿ ಅಂತಹ ವಿಶೇಷ ಶಕ್ತಿಯಿದೆ. ಜೊತೆಗೆ ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಅದು ಎಂತಹದೇ ಕಾಯಿಲೆ ಇರಲಿ, ಪಥ್ಯವಿರಲಿ, ದಿನದಲ್ಲಿ ಒಂದು ಹೊತ್ತು ಅನ್ನ ಊಟ ಮಾಡಬೇಕು ಎನ್ನುವ ಬಯಕೆ ಇರುತ್ತದೆ. ಅನ್ನವನ್ನು ಇಷ್ಟ ಪಡುವವರಿಗೆಲ್ಲಾ ಒಂದು ಅಚ್ಚರಿಯ ವಿಷಯ ಇಲ್ಲಿದೆ. ಅದೇನೆಂದರೆ " ಅನ್ನ ತಿಂದರೆ ಕ್ಯಾನ್ಸರ್ ಬರುವುದು''!! ಎನ್ನುವುದು.
ಅಯ್ಯೋ! ಹೌದಾ? ಎನ್ನುವ ಪ್ರಶ್ನೆ ಮನಸ್ಸಿಗೆ ಕಾಡಿದರೆ ಅದು ನಿಜ. ಬೆಳೆಯ ಉತ್ತಮ ಫಸಲಿಗಾಗಿ, ಕೀಟಗಳ ಕಾಟ ತಪ್ಪಿಸಲು ಹಾಗೂ ಕಲುಷಿತ ನೀರಿನ ನೀರಾವರಿಗಳಿಂದ ಬೆಳೆಯು ವಿಷದಿಂದ ಕೂಡಿರುತ್ತದೆ. ಇದರ ಪರಿಣಾಮವಾಗಿ ಕ್ಯಾನ್ಸರ್ ಎನ್ನುವ ಮಾರಿಗೆ ಬಲಿಯಾಗಬೇಕಾಗುವುದು. ಈ ರೀತಿಯಲ್ಲಿ ಬೆಳೆದ ಅಕ್ಕಿಯನ್ನು ನಿತ್ಯವೂ ಸೇವಿಸುತ್ತಿದ್ದರೆ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಹೆಚ್ಚುತ್ತದೆ ಎನ್ನಲಾಗುತ್ತಿದೆ. ಈ ವಿಷಯದ ಇನ್ನಷ್ಟು ಮಾಹಿತಿಗೆ ಮುಂದೆ ಓದೋಣ ಬನ್ನಿ....

ವಿಶೇಷ ಅಧ್ಯಯನ
ಇಂಗ್ಲೆಂಡ್ನ ಕ್ವೀನ್ಸ್ ವಿಶ್ವವಿದ್ಯಾಲಯ ಬೆಲ್ಫಾಸ್ಟ್ ನಡೆಸಿದ ಅಧ್ಯಯನದ ಪ್ರಕಾರ, ಮಣ್ಣಿನಲ್ಲಿ ಇರುವ ವಿಷಕಾರಿ ಮತ್ತು ಕೀಟನಾಶಕಗಳ ರಾಸಾಯನಿಕವು ಲಕ್ಷಾಂತರ ಜನರ ಆರೋಗ್ಯ ಕೆಡಿಸುವ ಸಾಧ್ಯತೆ ಇದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.

ವಿವಿಧ ರೋಗಗಳಿಗೆ ಆಹ್ವಾನ
ಕ್ರಿಮಿನಾಶಕಗಳ ಹಾನಿಕಾರಕ ಅಂಶವು ವ್ಯಕ್ತಿಯ ದೇಹದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ. ಇದನ್ನು ರೈಸ್ ಆರ್ಸೆನಿಕ್ ವಿಷ ಎಂದು ಕರೆಯಲಾಗುವುದು.

ಆರ್ಸೆನಿಕ್ ಎಂದರೇನು?
ಆರ್ಸೆನಿಕ್ ಎಂದರೆ ಖನಿಜಗಳಲ್ಲಿ ನೈಸರ್ಗಿಕವಾಗಿ ಇರುವ ಒಂದು ರಾಸಾಯನಿಕ ಅಂಶ. ಇದು ಗಂಧಕ ಮತ್ತು ಲೋಹಗಳ ಸಂಯೋಜನೆಯಿಂದ ಉಂಟಾಗುವ ಪದಾರ್ಥ(ರಾಸಾಯನಿಕ ಅಂಶ). ಇದನ್ನು ಕೀಟನಾಶಕ ಉತ್ಪಾದನಾ ಘಟಕ ತನ್ನ ಉತ್ಪನ್ನದಲ್ಲಿ ಬಳಸುತ್ತದೆ.

ಇದು ಹಲವೆಡೆಯಿದೆ
ಎಲ್ಲೆಲ್ಲಿ ಕಲುಷಿತ ನೀರು ಮತ್ತು ಅತಿಯಾದ ಕೀಟನಾಶಕ ಬಳಕೆಯಿಂದ ಬೆಳೆಯನ್ನು ಬೆಳೆಯುತ್ತಾರೋ ಅಲ್ಲಿಯ ಬೆಳೆಗಳಲ್ಲಿ ವಿಷಕಾರಿ ಅಂಶ ಇರುತ್ತದೆ. ವಿಶ್ವದೆಲ್ಲೆಡೆಯ ದೇಶದಲ್ಲೂ ಹರಡಿರುವ ಇದು ಭಾರತದ ಪಶ್ಚಿಮ ಬಂಗಾಳದಲ್ಲೂ ಇದೆ. ಇಲ್ಲಿ ಕಲುಷಿತ ನೀರಿನಿಂದಲೇ ಬೆಳೆಗಳನ್ನು ಬೆಳೆಯುತ್ತಾರಂತೆ!

ಇದರಿಂದ ಬರುವ ಕಾಯಿಲೆಗಳು
ಈ ರೀತಿಯ ರಾಸಾಯನಿಕಯುಕ್ತ ಅಕ್ಕಿಯನ್ನು ಸೇವಿಸುವುದರಿಂದ ವಾಂತಿ, ಹೊಟ್ಟೆನೋವು, ಅತಿಸಾರ, ಕ್ಯಾನ್ಸರ್, ನರರೋಗ, ಮಧುಮೇಹ ಮತ್ತು ಹೃದಯದ ರಕ್ತನಾಳ ಕಾಯಿಲೆಗಳು ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳುತ್ತವೆ.

ಸೂಕ್ತ ರೀತಿಯ ಬಳಕೆ
ಅಕ್ಕಿಯನ್ನು ಸೂಕ್ತ ರೀತಿಯಲ್ಲಿ ಬೆಳೆಯದಿದ್ದರೆ ಹಾಗೂ ಬಳಕೆ ಮಾಡುವ ವಿಧಾನ ಅರಿಯದಿದ್ದರೆ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಮರೆಯಬಾರದು.

ವಿಷ ತೆಗೆಯುವುದು ಹೇಗೇ?
ವಿವಿಧ ಅಧ್ಯಯನ ಹಾಗೂ ಪ್ರಯೋಗದ ಮೂಲಕ ಅಕ್ಕಿಯಲ್ಲಿರುವ ಟಾಕ್ಸಿನ್ ವಿಷವನ್ನು ತೆಗೆಯುವುದು ಹೇಗೆ? ಎನ್ನುವುದಕ್ಕೆ ಪರಿಹಾರ ಕಂಡು ಹಿಡಿಯಲಾಗಿದೆ. ಬಳಕೆ ಮಾಡಬೇಕೆಂದುಕೊಂಡ ಅಕ್ಕಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆಯಿಡಬೇಕು. ಆಗ ಅಕ್ಕಿಯಲ್ಲಿರುವ ವಿಷದ ಮಟ್ಟ ಶೇ. 80 ರಷ್ಟು ಕಡಿಮೆಯಾಗುತ್ತದೆ ಎನ್ನಲಾಗಿದೆ.

ಬೇಯಿಸುವ ವಿಧಾನ
ಅಕ್ಕಿಯನ್ನು ಬಳಸುವಾಗ ಅದರ ಸ್ವಚ್ಛತೆ ಹಾಗೂ ಬೇಯಿಸುವ ವಿಧಾನ ತಿಳಿದಿರಬೇಕು. ಇಲ್ಲವಾದರೆ ಅಕ್ಕಿಯಲ್ಲಿ ರಾಸಾಯನಿಕ ಅಂಶ ಕಡಿಮೆಯಾಗದು. ಸೂಕ್ತ ರೀತಿಯ ಸ್ವಚ್ಛತೆಯು ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಲು ಸಹಾಯ ಮಾಡುವುದು.
ಕುಚ್ಚಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು ?


Click it and Unblock the Notifications