Just In
- 6 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 7 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 7 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 7 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯೋ! ಹೌದಾ? ಅಕ್ಕಿಯಿಂದಲೂ ಹಲವಾರು ಕಾಯಿಲೆ ಬರುತ್ತದೆಯಂತೆ!!
ದಿನವಿಡೀ ಎಷ್ಟೇ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ತಿಂದರೂ ಸರಿ. ಎರಡು ತುತ್ತು ಅನ್ನ ಊಟ ಮಾಡಿದಷ್ಟು ಸಮಾಧಾನ ಇರುವುದಿಲ್ಲ. ಯಾಕೆಂದರೆ ಅನ್ನದಲ್ಲಿ ಅಂತಹ ವಿಶೇಷ ಶಕ್ತಿಯಿದೆ. ಜೊತೆಗೆ ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಅದು ಎಂತಹದೇ ಕಾಯಿಲೆ ಇರಲಿ, ಪಥ್ಯವಿರಲಿ, ದಿನದಲ್ಲಿ ಒಂದು ಹೊತ್ತು ಅನ್ನ ಊಟ ಮಾಡಬೇಕು ಎನ್ನುವ ಬಯಕೆ ಇರುತ್ತದೆ. ಅನ್ನವನ್ನು ಇಷ್ಟ ಪಡುವವರಿಗೆಲ್ಲಾ ಒಂದು ಅಚ್ಚರಿಯ ವಿಷಯ ಇಲ್ಲಿದೆ. ಅದೇನೆಂದರೆ " ಅನ್ನ ತಿಂದರೆ ಕ್ಯಾನ್ಸರ್ ಬರುವುದು''!! ಎನ್ನುವುದು.
ಖತರ್ನಾಕ್
ಪ್ಲಾಸ್ಟಿಕ್
ಅಕ್ಕಿ
ಬಂದೇ
ಬಿಟ್ಟಿದೆ!-ಆದರೆ
ಗುರುತಿಸುವುದು
ಹೇಗೆ?
ಅಯ್ಯೋ! ಹೌದಾ? ಎನ್ನುವ ಪ್ರಶ್ನೆ ಮನಸ್ಸಿಗೆ ಕಾಡಿದರೆ ಅದು ನಿಜ. ಬೆಳೆಯ ಉತ್ತಮ ಫಸಲಿಗಾಗಿ, ಕೀಟಗಳ ಕಾಟ ತಪ್ಪಿಸಲು ಹಾಗೂ ಕಲುಷಿತ ನೀರಿನ ನೀರಾವರಿಗಳಿಂದ ಬೆಳೆಯು ವಿಷದಿಂದ ಕೂಡಿರುತ್ತದೆ. ಇದರ ಪರಿಣಾಮವಾಗಿ ಕ್ಯಾನ್ಸರ್ ಎನ್ನುವ ಮಾರಿಗೆ ಬಲಿಯಾಗಬೇಕಾಗುವುದು. ಈ ರೀತಿಯಲ್ಲಿ ಬೆಳೆದ ಅಕ್ಕಿಯನ್ನು ನಿತ್ಯವೂ ಸೇವಿಸುತ್ತಿದ್ದರೆ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಹೆಚ್ಚುತ್ತದೆ ಎನ್ನಲಾಗುತ್ತಿದೆ. ಈ ವಿಷಯದ ಇನ್ನಷ್ಟು ಮಾಹಿತಿಗೆ ಮುಂದೆ ಓದೋಣ ಬನ್ನಿ....
ವಿಶೇಷ ಅಧ್ಯಯನ
ಇಂಗ್ಲೆಂಡ್ನ ಕ್ವೀನ್ಸ್ ವಿಶ್ವವಿದ್ಯಾಲಯ ಬೆಲ್ಫಾಸ್ಟ್ ನಡೆಸಿದ ಅಧ್ಯಯನದ ಪ್ರಕಾರ, ಮಣ್ಣಿನಲ್ಲಿ ಇರುವ ವಿಷಕಾರಿ ಮತ್ತು ಕೀಟನಾಶಕಗಳ ರಾಸಾಯನಿಕವು ಲಕ್ಷಾಂತರ ಜನರ ಆರೋಗ್ಯ ಕೆಡಿಸುವ ಸಾಧ್ಯತೆ ಇದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ವಿವಿಧ ರೋಗಗಳಿಗೆ ಆಹ್ವಾನ
ಕ್ರಿಮಿನಾಶಕಗಳ ಹಾನಿಕಾರಕ ಅಂಶವು ವ್ಯಕ್ತಿಯ ದೇಹದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ. ಇದನ್ನು ರೈಸ್ ಆರ್ಸೆನಿಕ್ ವಿಷ ಎಂದು ಕರೆಯಲಾಗುವುದು.
ಆರ್ಸೆನಿಕ್ ಎಂದರೇನು?
ಆರ್ಸೆನಿಕ್ ಎಂದರೆ ಖನಿಜಗಳಲ್ಲಿ ನೈಸರ್ಗಿಕವಾಗಿ ಇರುವ ಒಂದು ರಾಸಾಯನಿಕ ಅಂಶ. ಇದು ಗಂಧಕ ಮತ್ತು ಲೋಹಗಳ ಸಂಯೋಜನೆಯಿಂದ ಉಂಟಾಗುವ ಪದಾರ್ಥ(ರಾಸಾಯನಿಕ ಅಂಶ). ಇದನ್ನು ಕೀಟನಾಶಕ ಉತ್ಪಾದನಾ ಘಟಕ ತನ್ನ ಉತ್ಪನ್ನದಲ್ಲಿ ಬಳಸುತ್ತದೆ.
ಇದು ಹಲವೆಡೆಯಿದೆ
ಎಲ್ಲೆಲ್ಲಿ ಕಲುಷಿತ ನೀರು ಮತ್ತು ಅತಿಯಾದ ಕೀಟನಾಶಕ ಬಳಕೆಯಿಂದ ಬೆಳೆಯನ್ನು ಬೆಳೆಯುತ್ತಾರೋ ಅಲ್ಲಿಯ ಬೆಳೆಗಳಲ್ಲಿ ವಿಷಕಾರಿ ಅಂಶ ಇರುತ್ತದೆ. ವಿಶ್ವದೆಲ್ಲೆಡೆಯ ದೇಶದಲ್ಲೂ ಹರಡಿರುವ ಇದು ಭಾರತದ ಪಶ್ಚಿಮ ಬಂಗಾಳದಲ್ಲೂ ಇದೆ. ಇಲ್ಲಿ ಕಲುಷಿತ ನೀರಿನಿಂದಲೇ ಬೆಳೆಗಳನ್ನು ಬೆಳೆಯುತ್ತಾರಂತೆ!
ಇದರಿಂದ ಬರುವ ಕಾಯಿಲೆಗಳು
ಈ ರೀತಿಯ ರಾಸಾಯನಿಕಯುಕ್ತ ಅಕ್ಕಿಯನ್ನು ಸೇವಿಸುವುದರಿಂದ ವಾಂತಿ, ಹೊಟ್ಟೆನೋವು, ಅತಿಸಾರ, ಕ್ಯಾನ್ಸರ್, ನರರೋಗ, ಮಧುಮೇಹ ಮತ್ತು ಹೃದಯದ ರಕ್ತನಾಳ ಕಾಯಿಲೆಗಳು ಪರಿಣಾಮಕಾರಿಯಾಗಿ ಕಾಣಿಸಿಕೊಳ್ಳುತ್ತವೆ.
ಸೂಕ್ತ ರೀತಿಯ ಬಳಕೆ
ಅಕ್ಕಿಯನ್ನು ಸೂಕ್ತ ರೀತಿಯಲ್ಲಿ ಬೆಳೆಯದಿದ್ದರೆ ಹಾಗೂ ಬಳಕೆ ಮಾಡುವ ವಿಧಾನ ಅರಿಯದಿದ್ದರೆ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಮರೆಯಬಾರದು.
ಅಕ್ಕಿ ನೀರಿನ ಪ್ರಯೋಜನಗಳನ್ನು ಕೇಳಿದರೆ, ಅಚ್ಚರಿ ಪಡುವಿರಿ!
ವಿಷ ತೆಗೆಯುವುದು ಹೇಗೇ?
ವಿವಿಧ ಅಧ್ಯಯನ ಹಾಗೂ ಪ್ರಯೋಗದ ಮೂಲಕ ಅಕ್ಕಿಯಲ್ಲಿರುವ ಟಾಕ್ಸಿನ್ ವಿಷವನ್ನು ತೆಗೆಯುವುದು ಹೇಗೆ? ಎನ್ನುವುದಕ್ಕೆ ಪರಿಹಾರ ಕಂಡು ಹಿಡಿಯಲಾಗಿದೆ. ಬಳಕೆ ಮಾಡಬೇಕೆಂದುಕೊಂಡ ಅಕ್ಕಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆಯಿಡಬೇಕು. ಆಗ ಅಕ್ಕಿಯಲ್ಲಿರುವ ವಿಷದ ಮಟ್ಟ ಶೇ. 80 ರಷ್ಟು ಕಡಿಮೆಯಾಗುತ್ತದೆ ಎನ್ನಲಾಗಿದೆ.
ಬೇಯಿಸುವ ವಿಧಾನ
ಅಕ್ಕಿಯನ್ನು ಬಳಸುವಾಗ ಅದರ ಸ್ವಚ್ಛತೆ ಹಾಗೂ ಬೇಯಿಸುವ ವಿಧಾನ ತಿಳಿದಿರಬೇಕು. ಇಲ್ಲವಾದರೆ ಅಕ್ಕಿಯಲ್ಲಿ ರಾಸಾಯನಿಕ ಅಂಶ ಕಡಿಮೆಯಾಗದು. ಸೂಕ್ತ ರೀತಿಯ ಸ್ವಚ್ಛತೆಯು ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಲು ಸಹಾಯ ಮಾಡುವುದು.
ಕುಚ್ಚಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು ?