Just In
- 6 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 6 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 7 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 8 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಳಿಗ್ಗೆ ಎದ್ದ ಕೂಡಲೇ ಮೊದಲು ಒಂದೆರಡು ಲೋಟ ನೀರು ಕುಡಿಯಿರಿ
ಜಪಾನಿಯರು ತುಂಬಾ ಚುರುಕಾಗಿರುತ್ತಾರೆ ಮತ್ತು ಅವರು ಹೆಚ್ಚು ಕಾಲ ಬದುಕುತ್ತಾರೆ ಎನ್ನುವ ವಿಚಾರವನ್ನು ನಾವು ಕೇಳಿದ್ದೇವೆ. ಇದಕ್ಕೆಲ್ಲದಕ್ಕೂ ಅವರು ಪಾಲಿಸಿಕೊಂಡು ಹೋಗುವಂತಹ ಆಹಾರ ಕ್ರಮವೇ ಪ್ರಮುಖ ಕಾರಣವಾಗಿದೆ. ಜಪಾನಿಯರು ಎದ್ದ ಬಳಿಕ ಉಗುರು ಬೆಚ್ಚಗಿನ ನೀರು ಕುಡಿಯುತ್ತಾರೆ. ಇದರಿಂದ ಅವರು ದಿನವಿಡಿ ಚುರುಕಾಗಿರುತ್ತಾರೆ ಎನ್ನಲಾಗುತ್ತದೆ. ಎದ್ದ ಕೂಡಲೇ ಒಂದೆರಡು ಲೋಟ ನೀರು ಕುಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ನಮ್ಮ ದೇಹಕ್ಕೆ ಆಗುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ನೆನಪಿಟ್ಟುಕೊಳ್ಳಿ- ಇನ್ನೆಂದಿಗೂ 'ನಿಂತು ನೀರು' ಕುಡಿಯಬೇಡಿ!
ರಾತ್ರಿ ನಾವು ಮಲಗಿದ ಬಳಿಕ ನೀರಿನಾಂಶವು ದೇಹಕ್ಕೆ ಸಿಗದೆ ಇರುವ ಕಾರಣದಿಂದ ದೇಹವು ಸಂಪೂರ್ಣವಾಗಿ ಒಣಗಿರುತ್ತದೆ. ಇದರಿಂದ ಎದ್ದ ತಕ್ಷಣ ನೀರು ಕುಡಿದು ದೇಹಕ್ಕೆ ತೇವಾಂಶವನ್ನು ನೀಡಬೇಕು. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದ ಸಂಪೂರ್ಣ ವ್ಯವಸ್ಥೆ ಸಂಚಲನಗೊಳ್ಳುತ್ತದೆ... ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ಲಾಭಗಳು ಸಿಗಲಿದೆ ಎಂದು ಈ ಲೇಖನದ ಮೂಲಕ ನೀವು ತಿಳಿದುಕೊಳ್ಳಬಹುದು. ಅದರಲ್ಲೂ ಎದ್ದ ಒಂದೇ ನಿಮಿಷದಲ್ಲಿ ನೀರು ಕುಡಿದರೆ ಅದು ದೇಹಕ್ಕೆ ತುಂಬಾ ಒಳ್ಳೆಯದು. ಅದು ಹೇಗೆಂದು ಮುಂದಕ್ಕೆ ಓದುತ್ತಾ ತಿಳಿಯಿರಿ....
ಜೀರ್ಣಕ್ರಿಯೆಯನ್ನು ಆರಂಭಿಸುವುದು
ಒಂದು ದೊಡ್ಡ ಲೋಟದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು 1.5 ಗಂಟೆಗಳ ಕಾಲ ಶೇ.24ರಷ್ಟು ಹೆಚ್ಚಿಸುವುದು.
ದೇಹದ ಕಲ್ಮಶಗಲನ್ನು ಹೊರಹಾಕುವುದು
ರಕ್ತದಲ್ಲಿ ಇರುವಂತಹ ವಿಷಕಾರಿ ಅಂಶ ಹಾಗೂ ಕಲ್ಮಶಗಳನ್ನು ಕಿಡ್ನಿಯು ಹೊರಹಾಕುವುದು. ಅಲ್ಲದೆ ಕಿಡ್ನಿಗೆ ತನ್ನ ಕಾರ್ಯವನ್ನು ಮಾಡಲು ಹೆಚ್ಚಿನ ನೀರಿನಾಂಶದ ಅಗತ್ಯವಿರುತ್ತದೆ.
ತಿನ್ನುವುದು ಕಡಿಮೆಯಾಗುವುದು
ಹಸಿವಾದಾಗ ಒಂದು ಲೋಟ ನೀರನ್ನು ಕುಡಿದರೆ ಅದರಿಂದ ಹಸಿವು ಕಡಿಮೆಯಾಗುವುದು. ಬಾಯಾರಿಕೆಯನ್ನು ಹಸಿವು ಎಂದು ತಿಳಿದು ತಿನ್ನುವುದು ಕೂಡ ಕಡಿಮೆಯಾಗುತ್ತದೆ. ಎದ್ದ ಒಂದು ನಿಮಿಷದಲ್ಲಿ ಒಂದು ದೊಡ್ಡ ಲೋಟದಲ್ಲಿ ನೀರು ಕುಡಿಯಿರಿ.
ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು
ದೇಹವನ್ನು ತೇವಾಂಶದಿಂದ ಇಡುವುದರಿಂದ ದೇಹದ ಪ್ರತಿಯೊಂದು ಅಂಗವು ಸರಿಯಾಗಿ ಕಾರ್ಯನಿರ್ವಹಿಸುವುದು. ಇದರಿಂದ ದೇಹದ ಪ್ರತಿರೋಧಕ ಶಕ್ತಿ ಕೂಡ ಹೆಚ್ಚಿ ಹಲವಾರು ರೋಗಗಳ ವಿರುದ್ಧ ಹೋರಾಡುವಂತೆ ಮಾಡುವುದು.
ಚರ್ಮಕ್ಕೆ ಕಾಂತಿ ನೀಡುವುದು
ದೇಹವು ತೇವಾಂಶದಿಂದ ಇದ್ದರೆ ಚರ್ಮವು ಕಾಂತಿಯುತವಾಗಿ ಕಾಣುವುದು. ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿದರೆ ಚರ್ಮದ ಸೌಂದರ್ಯವು ಹೆಚ್ಚಾಗುವುದು.
ಕರುಳಿನ ಆರೈಕೆ
ಕರುಳಿನ ಕೆಲಸ ಮಾಡಬೇಕಾದರೆ ನೀರು ಅಗತ್ಯವಾಗಿರುತ್ತದೆ. ನೀರು ಸರಿಯಾಗಿ ಕುಡಿಯದೆ ಇದ್ದರೆ ಕರುಳು ಕಲ್ಮಷದಿಂದ ನೀರನ್ನು ಹೀರಿಕೊಳ್ಳುವುದು. ಇದರಿಂದ ತೊಂದರೆಯುಂಟಾಗುತ್ತದೆ. ದೇಹದಲ್ಲಿ ನೀರಿನಾಂಶವು ಸರಿಯಾಗಿದ್ದರೆ ಕರುಳು ಕೂಡ ತನ್ನ ಕಾರ್ಯವನ್ನು ಸರಿಯಾಗಿ ಮಾಡುತ್ತದೆ.