Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ದಿನಕ್ಕೊಂದು ಗ್ಲಾಸ್ ಅರಿಶಿನ ಬೆರೆಸಿದ ನೀರು- ಆರೋಗ್ಯ ಗಟ್ಟಿ-ಮುಟ್ಟು
ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಏನಾದರೂ ಮಾಡುತ್ತಲೇ ಇರಬೇಕಾಗುತ್ತದೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾವು ತೆಗೆದುಕೊಳ್ಳುವಂತಹ ಕೆಲವೊಂದು ಆಹಾರಗಳು, ಪಾನೀಯ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದಕ್ಕಾಗಿಯೇ ನಾವು ಬೆಳಿಗ್ಗೆ ಎದ್ದು ಬಿಸಿ ನೀರಿಗೆ ಲಿಂಬೆ ರಸ ಹಾಕಿ ಕುಡಿಯುವುದು, ಯಾವುದಾದರೂ ಹಣ್ಣುಗಳು ಜ್ಯೂಸ್ ಕುಡಿಯುವುದು ನಮ್ಮ ದೇಹಕ್ಕೆ ಒಳ್ಳೆಯದೇ. ಆದರೆ ನಾವು ಅಡುಗೆಯಲ್ಲಿ ಬಳಸುವಂತಹ ಅರಿಶಿನವು ನಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಎಂದು ನಿಮಗೆ ತಿಳಿದಿದೆಯಾ?
ಹೌದು, ಇದರಲ್ಲಿರುವ ಊರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ಗಳು, ಆಗಾಧ ಪ್ರಮಾಣದಲ್ಲಿರುವುದರಿಂದ. ಅರಿಶಿನ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಕರ್ಕ್ಯೂಮಿನಂತಹ ಅಂಶವು ವೈಜ್ಞಾನಿಕ ವಲಯದಲ್ಲಿ ಅರಿಶಿನಕ್ಕೆ ಒಂದು ಉನ್ನತ ಸ್ಥಾನವನ್ನು ನೀಡಿದೆ. ಅರಿಶಿನಲ್ಲಿ ಶಮನಕಾರಿ ಗುಣಗಳು ಇವೆ ಎನ್ನುವುದು ಇತ್ತೀಚಿನ ಕೆಲವೊಂದು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಾದರೆ ಅರಿಶಿನದ ನೀರನ್ನು ಮಾಡುವುದು ಹೇಗೆ ಎನ್ನುವುದು ನೀವು ತಿಳಿದುಕೊಳ್ಳಿ.....
ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕ ಚಮಚ ಅರಿಶಿನ, ಕೊಂಚ ಲಿಂಬೆರಸ ಹಾಗೂ ಕೊಂಚ ಜೇನು ಬೆರೆಸಿದರೆ ಹಲವು ಕಾಯಿಲೆಗಳನ್ನು ಗುಣಪಡಿಸಬಲ್ಲ ಸಿದ್ಧೌಷದ ತಯಾರಾದಂತೆ. ಇದನ್ನು ಸರಿಯಾಗಿ ಕಳಸಿ, ಬೆಳಗ್ಗಿನ ವೇಳೆ ಬಿಸಿ ಇರುವಾಗಲೇ ಬರೀ ಹೊಟ್ಟೆಗೆ ಸೇವಿಸಿ....

ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ
ಅರಿಶಿನದ ನೀರು ಸೇವಿಸುವ ಮೂಲಕ ಇನ್ಸುಲಿನ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಹಾಗೂ ಈ ಮೂಲಕ ಟೈಪ್ 2 ಮಧುಮೇಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಉರಿಯೂತ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟ್ ಗುಣಗಳು
ಒಂದು ವೇಳೆ ಉರಿಯೂತ ತೀರಾ ಹೆಚ್ಚಾಗಿದ್ದರೆ ಪ್ರಾಣಾಪಾಯವೂ ಉಂಟಾಗಬಹುದು...ಅರಿಶಿನದಲ್ಲಿರುವ ಕುರ್ಕುಮಿನ್ ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು ಹಲವಾರು ಉರಿಯೂತಗಳಿಂದ ರಕ್ಷಿಸುತ್ತದೆ.

ಸಂಧಿವಾತದಿಂದ ಶಮನ ನೀಡುತ್ತದೆ...
ಅರಿಶಿನ ಬೆರೆಸಿದ ನೀರು ಕುಡಿಯುವ ಮೂಲಕ ದೇಹಕ್ಕೆ ಹಾನಿ ಮಾಡುವ ಫ್ರೀ ರ್ಯಾಡಿಕಲ್ ಎಂಬ ಕಣಗಳು ದೇಹದ ಜೀವಕೋಶಗಳನ್ನು ಇನ್ನಷ್ಟು ಘಾಸಿಗೊಳಿಸುವುದರಿಂದ ರಕ್ಷಿಸುತ್ತದೆ. ತನ್ಮೂಲಕ ಸಂಧಿವಾತ ಹಾಗೂ ಉರಿಯಿಂದ ಕೂಡಿದ್ದ ಗಂಟುಗಳ ಕಷ್ಟವನ್ನು ನಿವಾರಿಸುತ್ತದೆ.

ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ
ನರಗಳ ಒಳಗೆ ಅಂಟಿಕೊಳ್ಳುವ ಜಿಡ್ಡನ್ನು ತಡೆಯಲು ಕುರ್ಕುಮಿನ್ ನೆರವಾಗುತ್ತದೆ. ಈ ಮೂಲಕ ಹೃದಯದ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸಿ ಹಲವಾರು ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

ಕ್ಯಾನ್ಸರ್ ಆವರಿಸುವುದರಿಂದ ರಕ್ಷಣೆ ನೀಡುತ್ತದೆ
ಒಮ್ಮೆ ಕ್ಯಾನ್ಸರ್ಗೆ ಒಳಗಾದ ಜೀವಕೋಶಗಳು ಪ್ರಾರಂಭವಾದರೆ ಇದು ಬೆಳೆದು ಹರಡಲು ಹೆಚ್ಚು ಸಮಯ ಬೇಕಾಗಿಲ್ಲ. ಆದರೆ ಅರಿಶಿನ ಬೆರೆತ ನೀರನ್ನು ಕುಡಿಯುತ್ತಾ ಬರುವ ಮೂಲಕ ಈ ಜೀವಕೋಶಗಳು ಮುಂದಕ್ಕೆ ಬೆಳೆಯದಂತೆ ಹಾಗೂ ಉಳಿದ ಭಾಗಗಳಿಗೆ ಹರಡದಂತೆ ತಡೆಯುವ ಮೂಲಕ ಕೆಲವು ಬಗೆಯ ಕ್ಯಾನ್ಸರ್ಗಳಿಂದ ರಕ್ಷಣೆ ನೀಡುತ್ತದೆ.



Click it and Unblock the Notifications