Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಒಣ ಬೀಜಗಳ ಈ ಸಮಯದಲ್ಲಿ ಸೇವನೆ ಮಾಡಿದರೆ ಲಾಭ ಖಚಿತ
ಸಮಯನೇ ಸಿಗಲ್ಲ, ಇನ್ನು ಸರಿಯಾದ ಆಹಾರ ಕ್ರಮ ಪಾಲಿಸುವಂತಹ ವಿಚಾರ ಎಲ್ಲಿಂದ ಬಂತು ಎನ್ನುವ ಮಾತು ಪ್ರತಿಯೊಬ್ಬರಿಂದಲೂ ಕೇಳಿಬರುವುದು. ಇದು ನಿಜ ಕೂಡ. ವ್ಯಸ್ತ ಜೀವನದಲ್ಲಿ ಸ್ವಲ್ಪ ಹೊಟ್ಟೆಗೆ ಹಾಕಿಕೊಂಡರೆ ಸಾಕು ಎನ್ನುವ ಭಾವನೆ ನಮ್ಮದಾಗಿದೆ. ಇದರಿಂದ ರಾತ್ರಿ 12 ಗಂಟೆಗೆ ಊಟ ಮಾಡುವಂತಹ ಪರಿಸ್ಥಿತಿ. ಇದು ಸರಿಯಾದ ಕ್ರಮವಲ್ಲ. ಪ್ರತಿಯೊಂದು ಆಹಾರ ಸೇವಿಸಲು ಒಂದೊಂದು ಸಮಯವಿದೆ. ಅದನ್ನು ಪಾಲಿಸಿದರೆ ದೇಹಕ್ಕೆ ಹೆಚ್ಚಿನ ಲಾಭ ಸಿಗುವುದು. ಅದರಲ್ಲೂ ಬೀಜಗಳು ಮತ್ತು ಕಾಳುಗಳನ್ನು ಸರಿಯಾದ ಸಮಯದಲ್ಲಿ ಸೇವನೆ ಮಾಡಿದರೆ ಹೆಚ್ಚಿನ ಲಾಭ ನಿಮ್ಮದಾಗಲಿದೆ.
ಕೊಬ್ಬು, ಸಕ್ಕರೆಯಂಶ ಮತ್ತು ಕ್ಯಾಲರಿ ಹೆಚ್ಚು ಎಂದು ಇದನ್ನು ಕಡೆಗಣಿಸಲಾಗುತ್ತಿತ್ತು. ಆದರೆ ಇದು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಬೀಜಗಳಲ್ಲಿ ಹೆಚ್ಚು ಕೊಬ್ಬು ಇದೆ. ಆದರೆ ಇದು ತುಂಬಾ ಆರೋಗ್ಯಕಾರಿ ಕೊಬ್ಬು. ಇದರಲ್ಲಿರುವ ಕ್ಯಾಲರಿಗಳನ್ನು ದೇಹವು ಶಕ್ತಿಯಾಗಿ ಪರಿವರ್ತಿಸುವುದು ಮತ್ತು ದೇಹದಲ್ಲಿ ಕೊಬ್ಬಾಗಿ ಉಳಿಸಿಕೊಳ್ಳುವುದು. ಕೃತಕ ಸಕ್ಕರೆ ಹಾಕದೆ ಇದ್ದರೆ ಇದರಲ್ಲಿರುವಂತಹ ಸಕ್ಕರೆಯು ದೇಹಕ್ಕೆ ಯಾವುದೇ ಕೆಟ್ಟ ಪರಿಣಾಮ ಬೀರದು. ಬೀಜಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ಪೊಟಾಶಿಯಂನಂತಹ ಅಂಶಗಳಿವೆ. ವಿಟಮಿನ್, ನಾರಿನಾಂಶ ಮತ್ತು ಒಮೆಗಾ 3 ಕೊಬ್ಬಿನಾಮ್ಲವು ಹಾಗೂ ಅಪರ್ಯಾಪ್ತ ಕೊಬ್ಬುಗಳು ಇದರಲ್ಲಿದೆ.

ಕೊಬ್ಬು ದೇಹಕ್ಕೆ ಶಕ್ತಿ ಒದಗಿಸಿದರೆ ಖನಿಜಾಂಶ ಮತ್ತು ವಿಟಮಿನ್ ಗಳು ದೇಹದ ವಿವಿಧ ಕಾರ್ಯಚಟುವಟಿಕೆಗಳಿಗೆ ನೆರವಾಗುವುದು. ಬೀಜಗಳ ಸೇವನೆಯಿಂದ ಸಿಗುವಂತಹ ಲಾಭಗಳು ಅಪಾರ. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಇದರ ಸೇವನೆ ಮಾಡಬಾರದು. ಅತಿಯಾಗಿ ಸೇವನೆ ಮಾಡಿದರೆ ಅದು ದೇಹಕ್ಕೆ ಹಾನಿಕರ. ಬೀಜಗಳು ತುಂಬಾ ಆರೋಗ್ಯಕಾರಿ ಎಂದು ತಿಳಿದು ಅದನ್ನು ಅತಿಯಾಗಿ ಸೇವನೆ ಮಾಡಬಾರದು. ಇದರಲ್ಲಿ ಕೊಬ್ಬಿನಾಂಶವಿರುವ ಕಾರಣದಿಂದ ಅತಿಯಾಗಿ ತಿಂದರೆ ಅದರಿಂದ ದೇಹದ ತೂಕ ಹೆಚ್ಚಳವಾಗುವುದು ಖಚಿತ. ಅತಿಯಾದ ಕೊಬ್ಬು ದೇಹದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು ಮತ್ತು ರಕ್ತದೊತ್ತಡವು ಹೆಚ್ಚಾಗುವುದು. ಅತಿಯಾದ ನಾರಿನಾಂಶವು ಗ್ಯಾಸ್ ಮತ್ತು ಭೇದಿ ಉಂಟುಮಾಡಬಹುದು.
ಬೀಜಗಳ ಲಾಭ ನಿಮ್ಮ ದೇಹಕ್ಕೆ ಆಗಬೇಕು ಎಂದಾದರೆ ನೀವು ದಿನದ ನಿಗದಿತ ಸಮಯದಲ್ಲಿ ಇದರ ಸೇವನೆ ಮಾಡಬೇಕು. ಖನಿಜಾಂಶ ಮತ್ತು ವಿಟಮಿನ್ ಗಳು ಹೆಚ್ಚಾಗಿರುವ ಬೀಜಗಳನ್ನು ಬೆಳಗ್ಗೆ ಸೇವಿಸಬೇಕು. ಜೀರ್ಣಕ್ರಿಯೆಗೆ ನೆರವಾಗುವ ಬೀಜಗಳನ್ನು ರಾತ್ರಿ ವೇಳೆ ಸೇವಿಸಬೇಕು. ಈ ರೀತಿ ಸೇವನೆ ಮಾಡಿದರೆ ಬೀಜಗಳಲ್ಲಿರುವ ಆರೋಗ್ಯ ಲಾಭಗಳು ದೇಹಕ್ಕೆ ಲಭ್ಯವಾಗುವುದು. ಒಣಬೀಜಗಳನ್ನು ಯಾವ ಸಮಯದಲ್ಲಿ ಸೇವಿಸಬಹುದು ಎನ್ನುವ ಬಗ್ಗೆ ನಿಮಗೆ ಇಲ್ಲಿ ತಿಳಿಸಿಕೊಡಲಾಗಿದೆ. ಸಮಯದೊಂದಿಗೆ ತಿನ್ನುವ ಪ್ರಮಾಣ ಕೂಡ ಅತೀ ಅಗತ್ಯವಾಗಿರುವುದು. ನಿಮ್ಮ ದೇಹಕ್ಕೆ ಬೇಕಾಗುವ ಪ್ರಮಾಣ ಮತ್ತು ಅದನ್ನು ಸೇವಿಸಬೇಕಾದ ಸಮಯದ ಬಗ್ಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ. ಮುಂದಕ್ಕೆ ಓದಿಕೊಳ್ಳಿ.
ಬೆಳಗ್ಗೆ
ಬಾದಾಮಿ
ಬೆಳಗ್ಗೆ ಎದ್ದ ಬಳಿಕ ನಾವು ತುಂಬಾ ಕಾರ್ಯಗಳನ್ನು ಮಾಡಬೇಕಾಗಿರುವ ಕಾರಣ ತುಂಬಾ ವ್ಯಸ್ತರಾಗಿರುತ್ತೇವೆ. ಕೆಲವರು ಬಾದಾಮಿಯನ್ನು ಬೆಳಗ್ಗೆ ಸೇವನೆ ಮಾಡುತ್ತಾರೆ. ಇದು ಸರಿಯಾದ ಕ್ರಮ ಕೂಡ. ಬಾದಾಮಿಯಲ್ಲಿ ವಿಟಮಿನ್ ಇ, ರಿಬೊಫ್ಲಾವಿನ್ ಮತ್ತು ಮ್ಯಾಂಗನೀಶ್ ಇದೆ. ಇದು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹವು ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಇದು ನಮ್ಮ ದೇಹವನ್ನು ಸುಸ್ಥಿತಿಯಲ್ಲಿಡುವುದು. ಇದರಿಂದ ಬಾದಾಮಿಯನ್ನು ಬೆಳಗ್ಗೆ ಸೇವನೆ ಮಾಡಿ.
ರಾತ್ರಿ ವೇಳೆ ಬಾದಾಮಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ಸೇವಿಸಿ. ಸಿಪ್ಪೆಯಿದ್ದರೆ ಅದು ದೇಹವು ಹೀರಿಕೊಳ್ಳುವ ಪೋಷಕಾಂಶಗಳನ್ನು ಕಡಿಮೆಗೊಳಿಸುವುದು. ಇದರಿಂದ ಸಿಪ್ಪೆ ತೆಗೆದು ಸೇವನೆ ಮಾಡಿ. 10 ಬಾದಾಮಿ ತಿಂದರೆ ತುಂಬಾ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಜೆ
ಗೋಡಂಬಿ ಮತ್ತು ಪಿಸ್ತಾ
ಗೋಡಂಬಿಯು ಕೊಬ್ಬಿನಿಂದ ಸಮೃದ್ಧವಾಗಿರುವ ಕಾರಣ ಇದು ದೇಹಕ್ಕೆ ತಕ್ಷಣ ಶಕ್ತಿ ಒದಗಿಸುವುದು. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ನಾಶ ಮಾಡಿ ಹಲ್ಲು ಕೆಡದಂತೆ ತಡೆಯುವುದು. ಇದರಲ್ಲಿ ಇರುವಂತಹ ಮೆಗ್ನಿಶಿಯಂ ರಕ್ತದೊತ್ತಡ ಮತ್ತು ಸ್ನಾಯುಗಳ ನಿಶ್ಯಕ್ತಿ ತಡೆಯುವುದು. ಪಿಸ್ತಾವು ಹೃದಯಕ್ಕೆ ತುಂಬಾ ಒಳ್ಳೆಯದು.
ಮನೆ ಔಷಧಿ: ಬಿಪಿ ಸಮಸ್ಯೆ ಇದ್ದರೆ, ದಿನಕ್ಕೆ ಒಂದೆರಡು 'ಪಿಸ್ತಾ' ತಿನ್ನಿ
ಈ ಎರಡು ರೀತಿಯ ಬೀಜಗಳನ್ನು ಸಂಜೆ ವೇಳೆ ಸೇವಿಸಬೇಕು. ಇದರಲ್ಲಿರುವ ಕೊಬ್ಬು ದೇಹಕ್ಕೆ ತಕ್ಷಣ ಶಕ್ತಿ ನೀಡುವುದು ಮತ್ತು ತ್ರಾಣ ಒದಗಿಸುವುದು. ದಿನದ ಬಳಲಿಕೆ ಬಳಿಕ ದೇಹಕ್ಕೆ ಶಕ್ತಿಯು ಅಗತ್ಯವಾಗಿರುವುದು. ಮೂರು ಗೋಂಡಬಿ ಮತ್ತು ಪಿಸ್ತಾ ಸಂಜೆ ವೇಳೆ ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ.
ರಾತ್ರಿ
ಆಕ್ರೋಟ್, ಒಣದ್ರಾಕ್ಷಿ ಮತ್ತು ಖರ್ಜೂರ
ಆಕ್ರೋಟ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಅಧಿಕವಾಗಿದೆ. ಅದೇ ಒಣದ್ರಾಕ್ಷಿಯಲ್ಲಿ ನಾರಿನಾಂಶವಿದೆ. ಒಮೆಗಾ3 ಕೊಬ್ಬಿನಾಮ್ಲವು ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುವುದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದು. ಹೆಚ್ಚಿನ ಜನರಿಗೆ ಆಕ್ರೋಟ್ ಯಾವಾಗ ಸೇವನೆ ಮಾಡಬೇಕೆಂದು ತಿಳಿದಿರುವುದಿಲ್ಲ. ಆಕ್ರೋಟ ಸೇವಿಸಲು ಸರಿಯಾದ ಸಮಯ ರಾತ್ರಿ. ಇದನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು. ಇದರಲ್ಲಿ ಇರುವಂತಹ ವಿಟಮಿನ್ ಮತ್ತು ಖನಿಜಾಂಶವು ರಾತ್ರಿ ವೇಳೆ ದೇಹ ಮತ್ತು ಚರ್ಮದ ಕೋಶಗಳನ್ನು ಸರಿಪಡಿಸಲು ನೆರವಾಗುವುದು. ಈ ಒಣ ಬೀಜಗಳನ್ನು ರಾತ್ರಿ ವೇಳೆ ಸೇವಿಸುವುದು ತುಂಬಾ ಒಳ್ಳೆಯದು. ಎರಡು ಒಣದ್ರಾಕ್ಷಿ ಜತೆಗೆ ಒಂದು ಖರ್ಜೂರ ಮತ್ತು 3-4 ಆಕ್ರೋಟ್ ನ್ನು ಪ್ರತಿನಿತ್ಯ ರಾತ್ರಿ ಸೇವಿಸಿದರೆ ದೇಹಕ್ಕೆ ಪರಿಣಾಮಕಾರಿ ಲಾಭ ಸಿಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


