Just In
Don't Miss
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆ ಔಷಧಿ: ಬಿಪಿ ಸಮಸ್ಯೆ ಇದ್ದರೆ, ದಿನಕ್ಕೆ ಒಂದೆರಡು 'ಪಿಸ್ತಾ' ತಿನ್ನಿ
ನೀವು ಡ್ರೈ ಫ್ರೂಟ್ಸ್ ತಿನ್ನಲು ಇಷ್ಟ ಪಡುತ್ತೀರಿ ಎಂದಾದರೆ ನಿಮಗೊಂದು ಒಳ್ಳೆಯ ಸಂದೇಶ ಇಲ್ಲಿದೆ. ಕೆಲವು ನ್ಯೂಟ್ರೀಷಿಯನ್ಸ್ ಮತ್ತು ವೈದ್ಯರು ಹೇಳುವ ಪ್ರಕಾರ ಪಿಸ್ತಾದಂತಹ ಒಣ ಹಣ್ಣುಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿ ಇರುತ್ತದೆ ಎಂದು. ಕೆಲವು ತಿಂಡಿಗಳಿಗೆ, ಅಡುಗೆಗಳಿಗೆ ಪಿಸ್ತಾ, ಗೋಡಂಬಿ, ಬಾದಾಮಿಗಳನ್ನು ಇಟ್ಟು ಅಲಂಕರಿಸುತ್ತಾರೆ. ಈ ಅಲಂಕಾರದಲ್ಲಿರುವ ಒಣ ಹಣ್ಣುಗಳು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಅಲಂಕರಿಸುತ್ತದೆ ಎನ್ನುವ ಸಂದೇಶವನ್ನು ನೀಡಿದ್ದಾರೆ.
ಒತ್ತಡದ ಜೀವನ ಮತ್ತು ಕಲುಷಿತ ಆಹಾರದ ನಡುವೆ ರಕ್ತದೊತ್ತಡ ಎನ್ನುವುದು ಸಾಮಾನ್ಯ ಕಾಯಿಲೆ ಎನಿಸಿಕೊಂಡಿದೆ. 45 ವರ್ಷ ಮೇಲ್ಪಟ್ಟವರಲ್ಲಿ ಅಧಿಕ ರಕ್ತದೊತ್ತಡ ಸಾಮಾನ್ಯವಾಗಿದೆ. ಇದಕ್ಕೆ ಪದೇ ಪದೇ ಕಾಡುವ ಅನಾರೋಗ್ಯ, ಸ್ಥೂಲಕಾಯ, ವ್ಯಾಯಾಮದ ಕೊರತೆ, ಹೆಚ್ಚಿನ ಕೊಲೆಸ್ಟ್ರಾಲ್, ಅಸಹಜವಾದ ಚಯಾಪಚಯ ಕ್ರಿಯೆಯೇ ಕಾರಣ ಎಂದು ಹೇಳಲಾಗುತ್ತದೆ.
ಕೇಸರಿ
ಪಿಸ್ತಾ
ಮಿಲ್ಕ್
ಶೇಕ್-
ಸೂಪರ್
ಕಾಂಬಿನೇಷನ್!
ಈ ಅಧಿಕ ರಕ್ತದೊತ್ತಡ ಸಮಸ್ಯೆಗೆ ಆರೈಕೆ ಮಾಡದಿದ್ದರೆ ತಲೆನೋವು, ಆಯಾಸ ಮತ್ತು ಕೆಲವು ಹೃದಯ ಸಂಬಂಧಿ ಕಾಯಿಲೆಗಳು ಬರುವುದು. ಈ ಕಾರಣಕ್ಕೆ ನೀವೇನಾದರೂ ಮನೆ ಔಷಧಿಯನ್ನು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸುಲಭವಾದ ಪಿಸ್ತಾ ಔಷಧಿಯ ಪರಿಹಾರ...
ಬೇಕಾದ ಪದಾರ್ಥಗಳು
* ಒಣಗಿದ ಪಿಸ್ತಾ 3-4
* ಒಂದು ಗ್ಲಾಸ್ ನೀರು
ತಯಾರಿಸುವ ವಿಧಾನ
* ಮೇಲೆ ಹೇಳಿದ ಪಿಸ್ತಾವನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿ ಇಡೀ ನೆನೆಸಿಡಬೇಕು
* ಬೆಳಗ್ಗೆ ನೀರನ್ನು ತೆಗೆದು, ನೆನೆದ ಪಿಸ್ತಾವನ್ನು ತಿನ್ನಬೇಕು
* ಈ ರೀತಿ ಕಡಿಮೆ ಎಂದರೂ 3 ತಿಂಗಳು ಸೇವಿಸಬೇಕು
ಪಿಸ್ತಾ ವಿಶೇಷತೆ
*ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಪಿಸ್ತಾದಲ್ಲಿ ವಿಟಮಿನ್ ಬಿ6, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಇತರ ಅಗತ್ಯ ಪೋಷಕಾಂಶಗಳ ಜೊತೆಗೆ ಪೌಷ್ಟಿಕಾಂಶಗಳು ಸೇರಿಕೊಂಡಿವೆ.
ಇದನ್ನು ಸೇವಿಸಿದಾಗ ಅಪಧಮನಿಗಳು ಕುಗ್ಗುವಂತೆ ಮಾಡುತ್ತದೆ. ಆಗ ರಕ್ತದ ಹರಿವು ಸಾಮಾನ್ಯ ಪ್ರಮಾಣದಲ್ಲಿರುತ್ತದೆ.
ನೆನಪಿಡಬೇಕು
ಈ ಮನೆ ಔಷಧಿಯನ್ನು ಸೇವಿಸುತ್ತಿರುವಾಗ ವೈದ್ಯರು ಸೂಚಿಸಿದ ಔಷಧಿಯನ್ನು ಸೇವಿಸುತ್ತಿರಬೇಕು. ರೋಗ ಲಕ್ಷಣ ಕಡಿಮೆಯಾದ ನಂತರ ಔಷಧಿಯನ್ನು ಬಿಟ್ಟು, ಪಿಸ್ತಾ ಸೇವನೆ ಮುಂದುವರಿಸಬೇಕು.