Latest Updates
-
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ!
ಮನೆ ಔಷಧಿ: ಬಿಪಿ ಸಮಸ್ಯೆ ಇದ್ದರೆ, ದಿನಕ್ಕೆ ಒಂದೆರಡು 'ಪಿಸ್ತಾ' ತಿನ್ನಿ
ನೀವು ಡ್ರೈ ಫ್ರೂಟ್ಸ್ ತಿನ್ನಲು ಇಷ್ಟ ಪಡುತ್ತೀರಿ ಎಂದಾದರೆ ನಿಮಗೊಂದು ಒಳ್ಳೆಯ ಸಂದೇಶ ಇಲ್ಲಿದೆ. ಕೆಲವು ನ್ಯೂಟ್ರೀಷಿಯನ್ಸ್ ಮತ್ತು ವೈದ್ಯರು ಹೇಳುವ ಪ್ರಕಾರ ಪಿಸ್ತಾದಂತಹ ಒಣ ಹಣ್ಣುಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡವು ನಿಯಂತ್ರಣದಲ್ಲಿ ಇರುತ್ತದೆ ಎಂದು. ಕೆಲವು ತಿಂಡಿಗಳಿಗೆ, ಅಡುಗೆಗಳಿಗೆ ಪಿಸ್ತಾ, ಗೋಡಂಬಿ, ಬಾದಾಮಿಗಳನ್ನು ಇಟ್ಟು ಅಲಂಕರಿಸುತ್ತಾರೆ. ಈ ಅಲಂಕಾರದಲ್ಲಿರುವ ಒಣ ಹಣ್ಣುಗಳು ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಅಲಂಕರಿಸುತ್ತದೆ ಎನ್ನುವ ಸಂದೇಶವನ್ನು ನೀಡಿದ್ದಾರೆ.
ಒತ್ತಡದ ಜೀವನ ಮತ್ತು ಕಲುಷಿತ ಆಹಾರದ ನಡುವೆ ರಕ್ತದೊತ್ತಡ ಎನ್ನುವುದು ಸಾಮಾನ್ಯ ಕಾಯಿಲೆ ಎನಿಸಿಕೊಂಡಿದೆ. 45 ವರ್ಷ ಮೇಲ್ಪಟ್ಟವರಲ್ಲಿ ಅಧಿಕ ರಕ್ತದೊತ್ತಡ ಸಾಮಾನ್ಯವಾಗಿದೆ. ಇದಕ್ಕೆ ಪದೇ ಪದೇ ಕಾಡುವ ಅನಾರೋಗ್ಯ, ಸ್ಥೂಲಕಾಯ, ವ್ಯಾಯಾಮದ ಕೊರತೆ, ಹೆಚ್ಚಿನ ಕೊಲೆಸ್ಟ್ರಾಲ್, ಅಸಹಜವಾದ ಚಯಾಪಚಯ ಕ್ರಿಯೆಯೇ ಕಾರಣ ಎಂದು ಹೇಳಲಾಗುತ್ತದೆ.
ಈ ಅಧಿಕ ರಕ್ತದೊತ್ತಡ ಸಮಸ್ಯೆಗೆ ಆರೈಕೆ ಮಾಡದಿದ್ದರೆ ತಲೆನೋವು, ಆಯಾಸ ಮತ್ತು ಕೆಲವು ಹೃದಯ ಸಂಬಂಧಿ ಕಾಯಿಲೆಗಳು ಬರುವುದು. ಈ ಕಾರಣಕ್ಕೆ ನೀವೇನಾದರೂ ಮನೆ ಔಷಧಿಯನ್ನು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ಸುಲಭವಾದ ಪಿಸ್ತಾ ಔಷಧಿಯ ಪರಿಹಾರ...

ಬೇಕಾದ ಪದಾರ್ಥಗಳು
* ಒಣಗಿದ ಪಿಸ್ತಾ 3-4
* ಒಂದು ಗ್ಲಾಸ್ ನೀರು

ತಯಾರಿಸುವ ವಿಧಾನ
* ಮೇಲೆ ಹೇಳಿದ ಪಿಸ್ತಾವನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿ ಇಡೀ ನೆನೆಸಿಡಬೇಕು
* ಬೆಳಗ್ಗೆ ನೀರನ್ನು ತೆಗೆದು, ನೆನೆದ ಪಿಸ್ತಾವನ್ನು ತಿನ್ನಬೇಕು
* ಈ ರೀತಿ ಕಡಿಮೆ ಎಂದರೂ 3 ತಿಂಗಳು ಸೇವಿಸಬೇಕು

ಪಿಸ್ತಾ ವಿಶೇಷತೆ
*ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಪಿಸ್ತಾದಲ್ಲಿ ವಿಟಮಿನ್ ಬಿ6, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಇತರ ಅಗತ್ಯ ಪೋಷಕಾಂಶಗಳ ಜೊತೆಗೆ ಪೌಷ್ಟಿಕಾಂಶಗಳು ಸೇರಿಕೊಂಡಿವೆ.
ಇದನ್ನು ಸೇವಿಸಿದಾಗ ಅಪಧಮನಿಗಳು ಕುಗ್ಗುವಂತೆ ಮಾಡುತ್ತದೆ. ಆಗ ರಕ್ತದ ಹರಿವು ಸಾಮಾನ್ಯ ಪ್ರಮಾಣದಲ್ಲಿರುತ್ತದೆ.

ನೆನಪಿಡಬೇಕು
ಈ ಮನೆ ಔಷಧಿಯನ್ನು ಸೇವಿಸುತ್ತಿರುವಾಗ ವೈದ್ಯರು ಸೂಚಿಸಿದ ಔಷಧಿಯನ್ನು ಸೇವಿಸುತ್ತಿರಬೇಕು. ರೋಗ ಲಕ್ಷಣ ಕಡಿಮೆಯಾದ ನಂತರ ಔಷಧಿಯನ್ನು ಬಿಟ್ಟು, ಪಿಸ್ತಾ ಸೇವನೆ ಮುಂದುವರಿಸಬೇಕು.



Click it and Unblock the Notifications