Just In
- 43 min ago ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- 1 hr ago ಮಂಗಳ ಗೋಚಾರ ಫಲ 2024: ಇನ್ನು 38 ದಿನಗಳ ಕಾಲ ನಿಮ್ಮ ರಾಶಿಯಲ್ಲಿ ಮಂಗಳದ ಪ್ರಭಾವ ಹೇಗಿರಲಿದೆ?
- 2 hrs ago ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- 3 hrs ago ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
Don't Miss
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Movies ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಟ್ಟೆಯೊಳಗಿನ ಕಲ್ಮಶ ಹೋಗಲಾಡಿಸಲು-ಉಪ್ಪು ನೀರಿನ ರೆಸಿಪಿ!
ನಮ್ಮ ಜೀರ್ಣಾಂಗಗಳು ಆಹಾರವನ್ನು ಜೀರ್ಣಿಸಿ ಕಲ್ಮಶಗಳನ್ನು ವಿಸರ್ಜಿಸಿದ ಬಳಿಕವೂ ನಮ್ಮ ಕರುಳುಗಳಲ್ಲಿ ಕೊಂಚಪ್ರಮಾಣದಲ್ಲಿ ಕಲ್ಮಶಗಳು ಉಳಿದೇ ಇರುತ್ತವೆ. ಈ ಕಲ್ಮಶಗಳನ್ನು ಆಗಾಗ ನಿವಾರಿಸುತ್ತಲೇ ಇರಬೇಕು. ಇದನ್ನೇ ಹೊಟ್ಟೆ ತೊಳೆಸುವುದು ಎನ್ನುತ್ತಾರ
ನಮ್ಮ ಜೀರ್ಣಾಂಗಗಳು ಆಹಾರವನ್ನು ಜೀರ್ಣಿಸಿ ಕಲ್ಮಶಗಳನ್ನು ವಿಸರ್ಜಿಸಿದ ಬಳಿಕವೂ ನಮ್ಮ ಕರುಳುಗಳಲ್ಲಿ ಕೊಂಚಪ್ರಮಾಣದಲ್ಲಿ ಕಲ್ಮಶಗಳು ಉಳಿದೇ ಇರುತ್ತವೆ. ಈ ಕಲ್ಮಶಗಳನ್ನು ಆಗಾಗ ನಿವಾರಿಸುತ್ತಲೇ ಇರಬೇಕು. ಇದನ್ನೇ ಹೊಟ್ಟೆ ತೊಳೆಸುವುದು ಎನ್ನುತ್ತಾರೆ. ಈ ಕಾರ್ಯವನ್ನು ನೆರವೇರಿಸುವ ಕೆಲವಾರು ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!
ಆದರೆ ಈ ಕೆಲಸವನ್ನು ಮನೆಯಲ್ಲಿಯೇ, ಕೇವಲ ಉಪ್ಪುನೀರನ್ನು ಕುಡಿದು ಪೂರೈಸಬಹುದು. ಇದರಿಂದ ಕರುಳುಗಳಲ್ಲಿ ಉಳಿದಿದ್ದ ಕಲ್ಮಶಗಳು ಹೊರಹೋಗಿ ಜೀರ್ಣಾಂಗಗಳು ಶುದ್ಧಗೊಳ್ಳುತ್ತವೆ. ಹಾಗೂ ಅನಿಯಮಿತವಾದ ವಿಸರ್ಜನಾ ಕ್ರಮಗಳು ಹಾಗೂ ದೊಡ್ಡ ಕರುಳಿನ ಒಳಗೋಡೆಗಳಿಗೆ ಘಾಸಿಯುಂಟುಮಾಡಬಹುದಾದಷ್ಟು ಕಲ್ಮಶಗಳು ಗಟ್ಟಿಯಾಗುವುದರಿಂದ ತಪ್ಪಿಸಿದಂತಾಗುತ್ತದೆ. ಕರುಳುಗಳಲ್ಲಿ ಸೇರಿರುವ ಕಲ್ಮಶ ಹೊರಹಾಕುವ ಮನೆಮದ್ದು
ಯಾವಾಗ
ಮಲಪದಾರ್ಥಗಳು
ಹೆಚ್ಚು
ಹೊತ್ತು
ದೊಡ್ಡಕರುಳಿನಲ್ಲಿ
ಸಂಗ್ರಹಗೊಳ್ಳಲು
ಪ್ರಾರಂಭವಾಗುತ್ತದೆಯೋ
ಆಗ
ಮೂಲವ್ಯಾಧಿ
ಹಾಗೂ
ಇತರ
ತೊಂದರೆಗಳು
ಎದುರಾಗುತ್ತವೆ.
ಆದ್ದರಿಂದ
ಆಗಾಗ
ಹೊಟ್ಟೆಯನ್ನು
ತೊಳೆಸುವುದು
ಆಗತ್ಯ
ಹಾಗೂ
ಅನಿವಾರ್ಯವಾಗಿದೆ....
ವಾಸ್ತವಾಂಶ #1
ಇಡಿಯ ದಿನ ಮನೆಯಲ್ಲಿಯೇ ಕಳೆಯುವ ರಜಾದಿನವೊಂದನ್ನು ಆಯ್ಕೆ ಮಾಡಿ ಆ ದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೀಟರ್ ನೀರಿಗೆ ಎರಡು ಚಿಕ್ಕಚಮಚ ಕಲ್ಲುಪ್ಪು ಸೇರಿಸಿ ಕಲಕಿ ಕುಡಿಯಿರಿ. ಈ ನೀರು ಉಗುರುಬೆಚ್ಚಗಿದ್ದರೆ ಸಾಕು. ಈ ವಿಧಾನದಿಂದ ಮುಂದಿನ ಸಮಯದಲ್ಲಿ ನಿಧಾನವಾಗಿ ಹೊಟ್ಟೆ ಮತ್ತು ಕರುಳುಗಳಲ್ಲಿ ಉಳಿದಿದ್ದ ಕಲ್ಮಶಗಳು ಸುಲಭವಾಗಿ ಹೊರಬೀಳುತ್ತವೆ.
ಎಚ್ಚರಿಕೆ
ಕೆಲವರಿಗೆ ಹೆಚ್ಚಿನ ಉಪ್ಪು ಅಲರ್ಜಿಯಾಗಿದ್ದು ಹೊಟ್ಟೆಗೆ ಹೋದ ತಕ್ಷಣವೇ ವಾಂತಿಯಾಗುತ್ತದೆ. ಒಂದು ವೇಳೆ ನಿಮಗೆ ಈ ಬಗೆಯ ಅಲರ್ಜಿಯಿದ್ದರೆ ತಕ್ಷಣ ಈ ವಿಧಾನದಿಂದ ಹೊರಬನ್ನಿ. ಒಂದು ವೇಳೆ ನಿಮಗೆ ಅತಿ ರಕ್ತದೊತ್ತಡದ ತೊಂದರೆ ಇದ್ದರೆ ಅಥವಾ ಸೋಡಿಯಂ ಲವಣ ಸೇವನೆಯ ಮಿತಿಯನ್ನು ವೈದ್ಯರು ವಿಧಿಸಿದ್ದರೆ ಈ ವಿಧಾನವನ್ನು ಅನುಸರಿಸಬೇಡಿ. ಅಷ್ಟೇ ಅಲ್ಲ, ಉಪ್ಪು ನೀರಿನ ಸೇವನೆಯ ಬಳಿಕವೂ ವಿಸರ್ಜನೆಯ ನಿಟ್ಟಿನಲ್ಲಿ ಯಾವುದೇ ಬದಲಾವಣೆ ಕಂಡುಬರದಿದ್ದಲ್ಲಿ ಸಹಾ ಈ ವಿಧಾನವನ್ನು ಮತ್ತೆ ಪ್ರಯತ್ನಿಸಬೇಡಿ.
ವಾಸ್ತವಾಂಶ #2
ಈ ವಿಧಾನವನ್ನು ಉಪವಾಸವಿರುವ ಸಮಯದಲ್ಲಿ ಪ್ರಯೋಗಿಸಬೇಕು. ಆಗ ಇದರ ಪರಿಣಾಮ ಗರಿಷ್ಟವಾಗಿರುತ್ತದೆ. ಒಂದು ವೇಳೆ ಉಪವಾಸವಿರುವುದು ಸಾಧ್ಯವಿಲ್ಲವೆಂದಾದರೆ ಮುಂಜಾನೆ ಬೇಗನೇ ಎದ್ದು ಖಾಲಿಹೊಟ್ಟೆಯಲ್ಲಿ ಈ ನೀರನ್ನು ಕುಡಿದು ಸಾಧ್ಯವಾದಷ್ಟು ಹೊತ್ತು ಹೊಟ್ಟೆಗೆ ಏನನ್ನೂ ತೆಗೆದುಕೊಳ್ಳಬಾರದು. ಮೊದಲ ಬಾರಿಯ ವಿಸರ್ಜನೆಯ ಬಳಿಕ ಲಘು ಮತ್ತು ದ್ರವಾಹಾರಗಳನ್ನು ಸೇವಿಸಬಹುದು.
ವಾಸ್ತವಾಂಶ#3
ಉಪ್ಪುನೀರಿನ ಸೇವನೆಯ ಬಳಿಕ ಬಾಯಿ, ಗಂಟಲು, ಹೊಟ್ಟೆ, ಕರುಳುಗಳೆಲ್ಲವೂ ಒಳಗಿನಿಂದ ಸ್ವಚ್ಛಗೊಳ್ಳುತ್ತದೆ. ಇದು ಕೊಂಚ ಅಸ್ವಾಭಾವಿಕವಾದುದರಿಂದ ಒಳಗಿನಿಂದ ಕಚಗುಳಿಯಾಗುವ ಅನುಭವವಾಗಬಹುದು. ಆದರೆ ಇದನ್ನು ಸಹಿಸಿಕೊಳ್ಳಬೇಕು.
ವಾಸ್ತವಾಂಶ #4
ಕೇವಲ ಕಲ್ಲುಪ್ಪು ಅಥವಾ ಹಿಮಾಯಲದ ಉಪ್ಪು ಈ ವಿಧಾನಕ್ಕೆ ಸೂಕ್ತ. ಪುಡಿಯುಪ್ಪು, ಅಯೋಡಿನ್ ಉಪ್ಪು ಎಲ್ಲವೂ ಈ ವಿಧಾನಕ್ಕೆ ಸೂಕ್ತವಲ್ಲ.
ವಾಸ್ತವಾಂಶ #5
ನೀರು ಕುಡಿದ ನಂತರ ಏನಾಗುತ್ತದೆ? ಸುಮಾರು ಹದಿನೈದು ಇಪ್ಪತ್ತು ನಿಮಿಷಗಳಲ್ಲಿಯೇ ನೀರು ಹರಿಯುವುದರ ಅನುಭವವನ್ನು ಕಂಡುಕೊಳ್ಳಬಹುದು. ಬಳಿಕ ಶೌಚಾಲಯಕ್ಕೆ ಹೋಗುವ ಅವಸರವಾಗುತ್ತದೆ. ಈ ಕ್ರಿಯೆಯನ್ನು ಮುಂದಿನ ಗಂಟೆಗಳಲ್ಲಿ ನಾಲ್ಕಾರು ಬಾರಿ ಪುನರಾವರ್ತಿಸಬೇಕಾಗಬಹುದು. ಆದ್ದರಿಂದ ರಜಾದಿನವಾಗಿದ್ದು ಮನೆಯಲ್ಲಿಯೇ ಇರುವ ಸಂದರ್ಭವನ್ನು ಈ ವಿಧಾನಕ್ಕೆ ಆಯ್ದುಕೊಳ್ಳುವುದು ಅಗತ್ಯ.
ವಾಸ್ತವಾಂಶ #6
ಕೆಲವರು ಈ ವಿಧಾನವನ್ನು ಸತತವಾಗಿ ಐದರಿಂದ ಏಳು ದಿನಗಳವರೆಗೆ ಅನುಸರಿಸುತ್ತಾರೆ. ಆದರೆ ಈ ವಿಧಾನವನ್ನು ಹೆಚ್ಚು ಕಾಲ ಅನುಸರಿಸುವುದು ಒಳ್ಳೆಯದಲ್ಲ. ಪ್ರತಿ ಆರು ತಿಂಗಳಿಗೆ ಒಂದು ಬಾರಿ ಅನುಸರಿಸಿದರೆ ಸಾಕಾಗುತ್ತದೆ. ಯಾವುದಕ್ಕೂ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ.