Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಅಚ್ಚರಿ! ವೈದ್ಯಕೀಯ ಲೋಕವನ್ನೇ ತಲ್ಲಣಗೊಳಿಸುವ ಚಿಕಿತ್ಸೆ!
ಏಷ್ಯಾ ಅದರಲ್ಲೂ ಭಾರತ ಹಾಗೂ ಚೀನಾದಲ್ಲಿ ಹಿಂದಿನಿಂದಲೂ ಆಯುರ್ವೇದ ಹಾಗೂ ಕೆಲವೊಂದು ಚಿಕಿತ್ಸಾ ಪದ್ಧತಿಗಳು ಸಾವಿರಾರು
ವರ್ಷಗಳಿಂದ ಜಾರಿಯಲ್ಲಿದ್ದವು. ಈ ಪದ್ಧತಿಯು ಇಂದಿನ ವೈದ್ಯಕೀಯ ಲೋಕವನ್ನು ಅಚ್ಚರಿಗೊಳಿಸುವಂತಹ ಚಿಕಿತ್ಸೆಯನ್ನು ಹೊಂದಿದೆ. ಪ್ರಮುಖ ಔಷಧೀಯ ಕ್ರಮದಲ್ಲಿ ನಿವಾರಣೆಯಾಗದ ಕೆಲವೊಂದು ರೋಗಗಳು ಕೂಡ ಇಂತಹ ಚಿಕಿತ್ಸೆಗಳಿಂದ ಗುಣವಾಗುತ್ತಿವೆ.
ಇಂತಹ ಒಂದು ಚಿಕಿತ್ಸಾ ಕ್ರಮದಲ್ಲಿ ಜಿನ್ ಶಿನ್ ಜಯುತ್ಸು ಚಿಕಿತ್ಸೆಯು ಪ್ರಮುಖವಾಗಿದೆ. ಅಲ್ಲದೆ ಇದನ್ನು ಶಕ್ತಿ ಶಮನಕಾರಿ ಚಿಕಿತ್ಸಾ ಕ್ರಮವೆಂದು ಹೇಳಲಾಗುತ್ತದೆ. ಇದು ಜೀವನದ ಶಕ್ತಿ ಮತ್ತು ಅದರ ಹರಿವನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ. ಲವಲವಿಕೆಯ ಜೀವನ ಶೈಲಿಗೆ, 'ಆಕ್ಯುಪ್ರೆಷರ್ ಚಿಕಿತ್ಸೆ'
ಖಿನ್ನತೆ, ಆತಂಕ, ಬೆನ್ನುನೋವು, ಕುತ್ತಿಗೆ ನೋವಿನಂತಹ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೆರಳುಗಳನ್ನು ಒತ್ತುವುದು ಅಥವಾ ಜತೆಯಾಗಿ ಹಿಡಿದುಕೊಳ್ಳುವುದು ಈ ಚಿಕಿತ್ಸಾ ಕ್ರಮವಾಗಿದೆ. ಈ ಚಿಕಿತ್ಸಾ ಕ್ರಮದಿಂದ ಯಾವೆಲ್ಲಾ ಲಾಭಗಳು ಇವೆ ಎಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ.

1#
ಕೈಯಲ್ಲಿರುವ ಪ್ರತಿಯೊಂದು ಬೆರಳು ಕೂಡ ದೇಹದ ಯಾವುದಾದರೊಂದು ಅಂಗಕ್ಕೆ ಸಂಪರ್ಕ ಹೊಂದಿರುತ್ತದೆ. ಹೆಬ್ಬೆರಳು-ಹೊಟ್ಟೆ, ತೋರು ಬೆರಳು-ಕಿಡ್ನಿ, ಮಧ್ಯದ ಬೆರಳು-ಮೂತ್ರನಾಳ, ಯಕೃತ್, ಉಂಗುರ ಬೆರಳು-ಕರುಳು, ಶ್ವಾಸಕೋಶ, ಕಿರಿ ಬೆರಳು-ಸಣ್ಣ ಕರುಳು, ಹೃದಯ, ಅಂಗೈಯ ಮಧ್ಯಭಾಗ-ಹೊಕ್ಕಳು.

2#
ಪ್ರತಿಯೊಂದು ಬೆರಳು ಕೂಡ ಕೆಲವೊಂದು ಭಾವನಾತ್ಮಕ ಸಂಬಂಧವನ್ನು ಹೊಂದಿದೆ. ಹೆಬ್ಬೆರಳು-ಚಿಂತೆ, ತೋರು ಬೆರಳು-ಭಯ, ಖಿನ್ನತೆ, ಮಧ್ಯದ ಬೆರಳು-ಕೋಪ, ಹತಾಶೆ, ಉಂಗುರ ಬೆರಳು-ಬೇಸರ, ಪಶ್ವಾತ್ತಾಪ, ಕಿರುಬೆರಳು-ಅಂಜಿಕೆ, ಕಡಿಮೆ ಸ್ವಾಭಿಮಾನ, ಅಂಗೈಯ ಮಧ್ಯಭಾಗ-ಸಂಪೂರ್ಣ ಸಂತೋಷ

1ನೇ ವಿಧಾನ
ಯಾವುದೇ ಭಾವನೆ ನಿಮ್ಮ ಅನುಭವಕ್ಕೆ ಬರುತ್ತಾ ಇದ್ದರೆ ಇದನ್ನು ಮೊದಲು ಗುರುತಿಸಿಕೊಳ್ಳಿ. 2 ನಿಮಿಷ ಕಾಲ ಮೌನವಾಗಿ ಕುಳಿತುಕೊಳ್ಳಿ ಮತ್ತು ದೀರ್ಘವಾಗಿ ಉಸಿರಾಡಿ. ನಿಮಗೆ ಒತ್ತಡ ನೀಡುವಂತಹ ಯಾವುದೇ ಪರಿಸ್ಥಿತಿಯಾಗಿದ್ದರೂ ಹೀಗೆ ಮಾಡಿ.

2ನೇ ವಿಧಾನ
ನಿಮ್ಮ ಭಾವನೆಗೆ ಸಂಬಂಧಿಸಿದ ಕೈಯ ಬೆರಳನ್ನು ಗುರುತಿಸಿ ಅದನ್ನು ಇನ್ನೊಂದು ಕೈಯಿಂದ ಹಿಡಿದುಕೊಳ್ಳಿ. ತುಂಬಾ ಬಲವಾಗಿ ಅಥವಾ ತುಂಬಾ ಲಘುವಾಗಿ ಹಿಡಿಯಬೇಡಿ. ನಿಮಗೆ ತುಂಬಾ ಭಯವಾಗಿ ಖಿನ್ನತೆಯಿಂದ ಬಳಲುತ್ತಾ ಇದ್ದರೆ ತೋರು ಬೆರಳನ್ನು ಹಿಡಿದುಕೊಳ್ಳಿ. ಯಾವುದೇ ಕೆಲಸದ ಸಂದರ್ಶನ ವೇಳೆ ತುಂಬಾ ಅಂಜಿಕೆಯಾಗಿದ್ದರೆ ಕಿರು ಬೆರಳನ್ನು ಹಿಡಿದುಕೊಳ್ಳಿ.

3ನೇ ವಿಧಾನ
ಬೆರಳನ್ನು 3-5 ನಿಮಿಷ ಕಾಲ ಹಿಡಿದುಕೊಂಡು ದೀರ್ಘವಾಗಿ ಉಸಿರಾಡಿ. ನಿಮಗೆ ಮಿಡಿಯುವ ಸಂವೇದನೆಯಾದಾಗ ಹಿಡಿತ ಬಿಟ್ಟುಬಿಡಿ. ಇನ್ನೊಂದು ಕೈಯ ಬೆರಳಿಗೂ ಇದೇ ರೀತಿ ಮಾಡಿ.

4ನೇ ವಿಧಾನ
ಹೀಗೆ ಮಾಡಿದ ಬಳಿಕ ಒತ್ತಡವು ಕಡಿಮೆಯಾಗುತ್ತದೆ. ಈ ವಿಧಾನವನ್ನು ಯಾವುದೇ ಸಮಯ ಮತ್ತು ಯಾವ ಜಾಗದಲ್ಲೂ ಮಾಡಬಹುದು.

5ನೇ ವಿಧಾನ
ದೇಹದಲ್ಲಿ ರಕ್ತ ಪರಿಚಲನೆಯಾಗುವಂತೆ ಶಕ್ತಿ ಕೂಡ ಪರಿಚಲನೆಯಾಗುತ್ತಾ ಇರುತ್ತದೆ. ಯೋಗದ ಪ್ರಕಾರ ಪ್ರಾಣ ಅಥವಾ ಜೀವನದ ಶಕ್ತಿಯು ನಾಡಿಗಳ ಮೂಲಕ ದೇಹದೆಲ್ಲೆಡೆ ಸಂಚಾರವಾಗುತ್ತದೆ. ಜೀವನ ಶಕ್ತಿಯು ನಾವು ಬದುಕಲು, ಉಸಿರಾಡಲು ಮತ್ತು ನಡೆದಾಡಲು ನೆರವಾಗುತ್ತದೆ. ಈ ಚಿಕಿತ್ಸೆಯು ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಶಕ್ತಿಯು ಹರಿಯುವಂತೆ ಮಾಡುತ್ತದೆ.



Click it and Unblock the Notifications