Latest Updates
-
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು?
ಪದೇ ಪದೇ ಕಾಡುವ ಸುಸ್ತು-ದಯವಿಟ್ಟು ನಿರ್ಲಕ್ಷಿಸಬೇಡಿ!
ಶಾರೀರಿಕ ಸಾಮರ್ಥ ಉಡುಗಿದಂತೆ ಸುಸ್ತು ಆವರಿಸುತ್ತದೆ. ಕೊಂಚ ವಿರಾಮ ಹಾಗೂ ಆಹಾರ ಸೇವನೆಯ ಬಳಿಕ ಸುಸ್ತು ಇಲ್ಲವಾಗುತ್ತದೆ. ಆದರೆ ಒಂದು ವೇಳೆ ಸೂಕ್ತ ವಿಶ್ರಾಂತಿ ಹಾಗೂ ಆಹಾರಸೇವನೆಯ ಬಳಿಕವೂ ಸುಸ್ತು ಆವರಿಸಿದ್ದು ಇಡಿಯ ದಿನ ಕಡಿಮೆಯಾಗದೇ ಇದ್ದರೆ ಇದಕ್ಕೆ ಬೇರೆಯೇ ಕಾರಣಗಳಿರಬಹುದು. ಒಂದು ವೇಳೆ ನಿಮಗೂ ಇದೇ ತೊಂದರೆ ಇದ್ದರೆ ಈ ಲೇಖನ ಓದುವುದು ನಿಮಗೆ ಅಗತ್ಯ ಹಾಗೂ ಅನಿವಾರ್ಯ.....

ರಕ್ತಹೀನತೆ
ಸದಾ ಸುಸ್ತು ಆವರಿಸಿರಲು ಪ್ರಮುಖ ಕಾರಣ ರಕ್ತಹೀನತೆ ಅಥವಾ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಂಪುರಕ್ತಕಣಗಳಿಲ್ಲದೇ ಇರುವುದು. ಕೆಂಪು ಕಣಗಳ ಕೊರತೆಯಿಂದ ಇವು ಹೊತ್ತು ತರಬೇಕಾಗಿದ್ದ ಆಮ್ಲಜನಕವೂ ಕಡಿಮೆಯಾಗುವ ಕಾರಣ ದೇಹದ ಜೀವಕೋಶಗಳು ಶಕ್ತಿಯ ಕೊರತೆಯಿಂದ ಬಳಲುತ್ತವೆ.ರಕ್ತ ಹೀನತೆಯ ಲಕ್ಷಣಗಳು- ನಿರ್ಲಕ್ಷಿಸಿದರೆ ಅಪಾಯ ತಪ್ಪದು!

ರಕ್ತಹೀನತೆ
ಇದರೊಂದಿಗೆ ತಲೆನೋವು, ಏಕಾಗ್ರತೆಯಲ್ಲಿ ಕೊರತೆ, ಹೃದಯ ಬಡಿತದಲ್ಲಿ ಏರಿಕೆ, ನಿದ್ದಿಸಲು ಸಾಧ್ಯವಾಗದಿರುವುದು ಮೊದಲಾದವು ಎದುರಾಗುತ್ತವೆ. ತಕ್ಷಣ ರಕ್ತಪರೀಕ್ಷೆಯ ಅಗತ್ಯ ನಿಮಗಿದೆ.

ಥೈರಾಯ್ಡ್ ಗ್ರಂಥಿಯ ತೊಂದರೆ
ಒಂದು ವೇಳೆ ಥೈರಾಯ್ಡ್ ಗ್ರಂಥಿಗಳು ಪೂರ್ಣ ಪ್ರಮಾಣದ ಕ್ಷಮತೆಯಲ್ಲಿ ಕೆಲಸ ಮಾಡದೇ ಇದ್ದರೂ ಇಡಿಯ ದಿನ ಸುಸ್ತು ಆವರಿಸುತ್ತದೆ. ಥೈರಾಯ್ಡ್ ತೊಂದರೆಯೇ ಆದರೆ ಸುಸ್ತಿನ ಜೊತೆ ಒಣಗಿದ ಕೂದಲು, ಒಣಗಿದ ಚರ್ಮ, ಸುಲಭವಾಗಿ ತುಂಡಾಗುವ ಉಗುರುಗಳು, ಕಣ್ಣುಗಳ ಕೆಳಗೆ ಚಿಕ್ಕ ಚೀಲದಂತೆ ತುಂಬಿಕೊಳ್ಳುವುದು, ಧ್ವನಿ ಗಡಸಾಗುವುದು, ಹೃದಯದ ಬಡಿತದಲ್ಲಿ ಏರಿಕೆ, ಭಾವಗಳಲ್ಲಿ ಭಾರೀ ಬದಲಾವಣೆ ಮೊದಲಾದ ತೊಂದರೆಗಳೂ ಕಂಡುಬರುತ್ತವೆ. ತಕ್ಷಣ ವೈದ್ಯರಲ್ಲಿ ತಪಾಸಣೆಗೊಳಪಡುವುದು ಅಗತ್ಯ. ಥೈರಾಯ್ಡ್ ಸಮಸ್ಯೆಗೆ ನೈಸರ್ಗಿಕ ಪರಿಹಾರ

ಮಧುಮೇಹ
ಒಂದು ವೇಳೆ ದಿನವಿಡೀ ಸುಸ್ತು ಆವರಿಸಿದ್ದರೆ ಇದಕ್ಕೆ ಮಧುಮೇಹವೂ ಕಾರಣವಿರಬಹುದು. ಇಡಿಯ ದಿನ ಯಾವುದೇ ಕೆಲಸ ಮಾಡಲು ಶಕ್ತಿಯ ಕೊರತೆ, ಸದಾ ಬಾಯಾರಿಕೆ ಆವರಿಸುವುದು, ಸತತ ಮೂತ್ರ ವಿಸರ್ಜನೆಗೆ ಅವಸರವಾಗುವುದು, ದೃಷ್ಟಿ ಮಂದವಾಗುವುದು, ತೂಕದಲ್ಲಿ ಥಟ್ಟನೇ ಇಳಿಕೆ, ಮೈಯೆಲ್ಲಾ ತುರಿಕೆ,ಬೇಗನೇ ಸಿಟ್ಟು ಬರುವುದು ಮೊದಲಾದವು ಮಧುಮೇಹದ ಲಕ್ಷಣಗಳಾಗಿವೆ. ತಕ್ಷಣ ರಕ್ತವನ್ನು ತಪಾಸಿಸಿಕೊಳ್ಳುವುದು ಅಗತ್ಯ. ಮಧುಮೇಹಿಗಳೇ, ಎಲೆಕೋಸಿನ ಬಗ್ಗೆ ಅಸಡ್ಡೆ ಮಾಡಬೇಡಿ

ಖಿನ್ನತೆ
ಒಂದು ವೇಳೆ ದೈಹಿಕ ಸಾಮರ್ಥ್ಯದಲ್ಲಿ ಕಡಿಮೆಯಾಗುವ ಜೊತೆಗೇ ನಿದ್ರಿಸಲು ಕಷ್ಟವಾಗುತ್ತಿದ್ದು, ಖಿನ್ನತೆ ಆವರಿಸಿ ಸದಾ ಋಣಾತ್ಮಕವಾಗಿ ಚಿಂತಿಸುತ್ತಿದ್ದರೆ, ಯಾರೊಂದಿಗೂ ಬೆರೆಯದೇ ಒಂಟಿಯಾಗಿರಬಯಸಿದರೆ ನಿಮಗೆ ಒಂಟಿತನ ಮತ್ತು ಮಾನಸಿಕ ಒತ್ತಡದ ತೊಂದರೆ ಇರಬಹುದು. ತಕ್ಷಣ ಮಾನಸಿಕ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.



Click it and Unblock the Notifications