Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪದೇ ಪದೇ ಕಾಡುವ ಸುಸ್ತು-ದಯವಿಟ್ಟು ನಿರ್ಲಕ್ಷಿಸಬೇಡಿ!
ಶಾರೀರಿಕ ಸಾಮರ್ಥ ಉಡುಗಿದಂತೆ ಸುಸ್ತು ಆವರಿಸುತ್ತದೆ. ಕೊಂಚ ವಿರಾಮ ಹಾಗೂ ಆಹಾರ ಸೇವನೆಯ ಬಳಿಕ ಸುಸ್ತು ಇಲ್ಲವಾಗುತ್ತದೆ. ಆದರೆ ಒಂದು ವೇಳೆ ಸೂಕ್ತ ವಿಶ್ರಾಂತಿ ಹಾಗೂ ಆಹಾರಸೇವನೆಯ ಬಳಿಕವೂ ಸುಸ್ತು ಆವರಿಸಿದ್ದು ಇಡಿಯ ದಿನ ಕಡಿಮೆಯಾಗದೇ ಇದ್ದರೆ ಇದಕ್ಕೆ ಬೇರೆಯೇ ಕಾರಣಗಳಿರಬಹುದು. ಒಂದು ವೇಳೆ ನಿಮಗೂ ಇದೇ ತೊಂದರೆ ಇದ್ದರೆ ಈ ಲೇಖನ ಓದುವುದು ನಿಮಗೆ ಅಗತ್ಯ ಹಾಗೂ ಅನಿವಾರ್ಯ.....

ರಕ್ತಹೀನತೆ
ಸದಾ ಸುಸ್ತು ಆವರಿಸಿರಲು ಪ್ರಮುಖ ಕಾರಣ ರಕ್ತಹೀನತೆ ಅಥವಾ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಂಪುರಕ್ತಕಣಗಳಿಲ್ಲದೇ ಇರುವುದು. ಕೆಂಪು ಕಣಗಳ ಕೊರತೆಯಿಂದ ಇವು ಹೊತ್ತು ತರಬೇಕಾಗಿದ್ದ ಆಮ್ಲಜನಕವೂ ಕಡಿಮೆಯಾಗುವ ಕಾರಣ ದೇಹದ ಜೀವಕೋಶಗಳು ಶಕ್ತಿಯ ಕೊರತೆಯಿಂದ ಬಳಲುತ್ತವೆ.ರಕ್ತ ಹೀನತೆಯ ಲಕ್ಷಣಗಳು- ನಿರ್ಲಕ್ಷಿಸಿದರೆ ಅಪಾಯ ತಪ್ಪದು!

ರಕ್ತಹೀನತೆ
ಇದರೊಂದಿಗೆ ತಲೆನೋವು, ಏಕಾಗ್ರತೆಯಲ್ಲಿ ಕೊರತೆ, ಹೃದಯ ಬಡಿತದಲ್ಲಿ ಏರಿಕೆ, ನಿದ್ದಿಸಲು ಸಾಧ್ಯವಾಗದಿರುವುದು ಮೊದಲಾದವು ಎದುರಾಗುತ್ತವೆ. ತಕ್ಷಣ ರಕ್ತಪರೀಕ್ಷೆಯ ಅಗತ್ಯ ನಿಮಗಿದೆ.

ಥೈರಾಯ್ಡ್ ಗ್ರಂಥಿಯ ತೊಂದರೆ
ಒಂದು ವೇಳೆ ಥೈರಾಯ್ಡ್ ಗ್ರಂಥಿಗಳು ಪೂರ್ಣ ಪ್ರಮಾಣದ ಕ್ಷಮತೆಯಲ್ಲಿ ಕೆಲಸ ಮಾಡದೇ ಇದ್ದರೂ ಇಡಿಯ ದಿನ ಸುಸ್ತು ಆವರಿಸುತ್ತದೆ. ಥೈರಾಯ್ಡ್ ತೊಂದರೆಯೇ ಆದರೆ ಸುಸ್ತಿನ ಜೊತೆ ಒಣಗಿದ ಕೂದಲು, ಒಣಗಿದ ಚರ್ಮ, ಸುಲಭವಾಗಿ ತುಂಡಾಗುವ ಉಗುರುಗಳು, ಕಣ್ಣುಗಳ ಕೆಳಗೆ ಚಿಕ್ಕ ಚೀಲದಂತೆ ತುಂಬಿಕೊಳ್ಳುವುದು, ಧ್ವನಿ ಗಡಸಾಗುವುದು, ಹೃದಯದ ಬಡಿತದಲ್ಲಿ ಏರಿಕೆ, ಭಾವಗಳಲ್ಲಿ ಭಾರೀ ಬದಲಾವಣೆ ಮೊದಲಾದ ತೊಂದರೆಗಳೂ ಕಂಡುಬರುತ್ತವೆ. ತಕ್ಷಣ ವೈದ್ಯರಲ್ಲಿ ತಪಾಸಣೆಗೊಳಪಡುವುದು ಅಗತ್ಯ. ಥೈರಾಯ್ಡ್ ಸಮಸ್ಯೆಗೆ ನೈಸರ್ಗಿಕ ಪರಿಹಾರ

ಮಧುಮೇಹ
ಒಂದು ವೇಳೆ ದಿನವಿಡೀ ಸುಸ್ತು ಆವರಿಸಿದ್ದರೆ ಇದಕ್ಕೆ ಮಧುಮೇಹವೂ ಕಾರಣವಿರಬಹುದು. ಇಡಿಯ ದಿನ ಯಾವುದೇ ಕೆಲಸ ಮಾಡಲು ಶಕ್ತಿಯ ಕೊರತೆ, ಸದಾ ಬಾಯಾರಿಕೆ ಆವರಿಸುವುದು, ಸತತ ಮೂತ್ರ ವಿಸರ್ಜನೆಗೆ ಅವಸರವಾಗುವುದು, ದೃಷ್ಟಿ ಮಂದವಾಗುವುದು, ತೂಕದಲ್ಲಿ ಥಟ್ಟನೇ ಇಳಿಕೆ, ಮೈಯೆಲ್ಲಾ ತುರಿಕೆ,ಬೇಗನೇ ಸಿಟ್ಟು ಬರುವುದು ಮೊದಲಾದವು ಮಧುಮೇಹದ ಲಕ್ಷಣಗಳಾಗಿವೆ. ತಕ್ಷಣ ರಕ್ತವನ್ನು ತಪಾಸಿಸಿಕೊಳ್ಳುವುದು ಅಗತ್ಯ. ಮಧುಮೇಹಿಗಳೇ, ಎಲೆಕೋಸಿನ ಬಗ್ಗೆ ಅಸಡ್ಡೆ ಮಾಡಬೇಡಿ

ಖಿನ್ನತೆ
ಒಂದು ವೇಳೆ ದೈಹಿಕ ಸಾಮರ್ಥ್ಯದಲ್ಲಿ ಕಡಿಮೆಯಾಗುವ ಜೊತೆಗೇ ನಿದ್ರಿಸಲು ಕಷ್ಟವಾಗುತ್ತಿದ್ದು, ಖಿನ್ನತೆ ಆವರಿಸಿ ಸದಾ ಋಣಾತ್ಮಕವಾಗಿ ಚಿಂತಿಸುತ್ತಿದ್ದರೆ, ಯಾರೊಂದಿಗೂ ಬೆರೆಯದೇ ಒಂಟಿಯಾಗಿರಬಯಸಿದರೆ ನಿಮಗೆ ಒಂಟಿತನ ಮತ್ತು ಮಾನಸಿಕ ಒತ್ತಡದ ತೊಂದರೆ ಇರಬಹುದು. ತಕ್ಷಣ ಮಾನಸಿಕ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.



Click it and Unblock the Notifications








